অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸರ್ಕಾರದ ನೀತಿಗಳು

ಸರ್ಕಾರದ ನೀತಿಗಳು

ಸಾವಯವ ಕೃಷಿಯ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು ಅದರ ಬಗ್ಗೆ ಒಂದು ದೊಡ್ಡ ರೀತಿಯಲ್ಲಿ ಉತ್ತೇಜಿಸಲು ಭಾರತ ಸರ್ಕಾರ ಮತ್ತು ಅನೇಕ ರಾಜ್ಯ ಸರ್ಕಾರಗಳು ತೀರ್ಮಾನಿಸಿದವು. ಈ ದಿಕ್ಕಿನಲ್ಲಿ ಭಾರತ ಸರ್ಕಾರ 2000 ರಲ್ಲಿ ರಾಷ್ಟ್ರೀಯ ಸಾವಯವ ಉತ್ಪಾದನೆ ಮತ್ತು ಗುಣಮಟ್ಟ ಹಾಗೂ ಮಾನ್ಯತಾ ಕಾರ್ಯಕ್ರಮ ಆರಂಭಿಸಿತು.

ಕರ್ನಾಟಕ ಸರ್ಕಾರ ಕೂಡ ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜಿಸಲು ಕ್ರಿಯೆಯನ್ನು ಆರಂಭಿಸಿದೆ. ಮೊದಲ ಹಂತವಾಗಿ 2004 ರಲ್ಲಿ ಸಾವಯವ ಕೃಷಿ ಬಗ್ಗೆ ಕರ್ನಾಟಕ ರಾಜ್ಯ ನೀತಿ ರೂಪಿಸಿದ್ದು, ಅದನ್ನು ಸ್ವೀಕರಿಸಿ ಪ್ರಕಟಿಸಿದೆ

ಸಾವಯವ ಬೇಸಾಯದ ಸನ್ನಿವೇಶ ಮತ್ತು ತತ್ವಗಳ ಒಂದು ಅವಲೋಕನಗಳ ಜೊತೆಗೆ ಈ ದಾಖಲೆಗಳು ಕಾರ್ಯನೀತಿಯ ಉದ್ದೇಶಗಳನ್ನು ಮತ್ತು ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜನಕ್ಕಾಗಿ ಕಾರ್ಯತಂತ್ರಗಳನ್ನು ವಿಸ್ತೃತವಾದ ಗುಂಪನ್ನು ನಿಗದಿ ಮಾಡಿದೆ. ಇತರರ ಈ ಕಾರ್ಯವಿಧಾನಗಳು ನಿಭಾಯಿಸಲು: ಸಾಂಸ್ಥಿಕ ನೀತಿ ಸೂತ್ರೀಕರಣ ಸ್ಥಾಪಿಸುವ ಬಗ್ಗೆ ಮತ್ತು ಸಮನ್ವಯ, ಪ್ರಚಾರ, ಬೆಂಬಲ, ನಿರ್ಮಾಣ ಮತ್ತು ವ್ಯಾಪಾರೀಕರಣ; ಪರಿವರ್ತನೆ; ಜೀವರಾಶಿ ಉತ್ಪಾದನೆಯ ಹೆಚ್ಚಳ, ಜೀವವೈವಿಧ್ಯ, ಮಿಶ್ರ ಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ ,ಭೂಮಿ ಪುನರುತ್ಥಾನ ಪ್ರದಾನ ಉತ್ಪಾದನೆ ಮತ್ತು ಪೂರೈಕೆ, ಮೌಲ್ಯದ ಸೇರ್ಪಡೆಯಿಂದ, ಸಂಸ್ಕರಣೆ, ಮಾರುಕಟ್ಟೆ, ಸಾಲದ ಸೌಲಭ್ಯ, ರಫ್ತು ಪ್ರಚಾರ, ಸಂಶೋಧನೆ, ಅಭಿವೃದ್ಧಿ, ತರಬೇತಿ ಮತ್ತು ಶಿಕ್ಷಣ ಮುಂತಾದವುಗಳನು ಗಮನದಲ್ಲಿಟ್ಟುಕೊಂಡಿದೇ. ಕೃಷಿ ಪ್ರಯೋಗ ಪರಿವಾರ ಈ ನೀತಿಯನ್ನು ರಚಿಸುವುದಕ್ಕೆ ಪ್ರಮುಖ ಪಾತ್ರ ವಹಿಸಿದೆ. ಈ ನೀತಿಯ ಕರಡು ಫೆಬ್ರವರಿ 1 , 2004 ರಂದು ಸರ್ಕಾರಕ್ಕೆ ಸಲ್ಲಿಸಲಾಯಿತು. ಜೊತೆಗೆ, ಕೃಷಿ ಪ್ರಯೋಗ ಪರಿವಾರ 2008 ರಲ್ಲಿ ಸಾವಯವ ಕೃಷಿ ಅಭಿಯಾನ ರೂಪಿಸಲು ಸರ್ಕಾರದ ಮೇಲೆ ಪ್ರಭಾವ ಬೀರಿದೆ. ಈ ಅಭಿಯಾನ ರಾಜ್ಯಾದ್ಯಂತ ಸುಮಾರು 90,000 ರೈತರನ್ನು 100% ಸಾವಯವ ಕೃಷಿ ಮತ್ತು ಜೀವನಶೈಲಿಗೆ ಪರಿವರ್ತಿಸಲು ಗುರಿಯಾಗಿಟ್ಟುಕೊಂಡಿದೇ.

ಮೂಲ : ಸಾವಯವ ಕೃಷಿ ಪರಿವರ್

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate