ಮಣ್ಣಿನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ನಶಿಸಿಹೋಗದಂತೆ ಅವುಗಳನ್ನು ಅಭಿವೃದ್ಧಿಗೊಳ್ಳಲು ಅನುವು ಮಾಡಿಕೊಡುವ ಕೃಷಿ ಪದ್ಧತಿಗಳಿಗೆ ಸುಸ್ಥಿರ ಕೃಷಿ ಎನ್ನಬಹುದು. ಪ್ರಖ್ಯಾತ ಕೃಷಿ ವಿಜ್ಞಾನಿ ಡಾ : ಎಂ. ಎಸ್. ಸ್ವಾಮಿನಾಥನ್ ಹೇಳಿರುವಂತೆ ಸುಸ್ಥಿರ ಕೃಷಿಯೆಂದರೆ ಇಂದಿನ ಜನಾಂಗವೇ ಅಲ್ಲದೆ ಮುಂದಿನ ತಲೆಮಾರುಗಳ ಅವಶ್ಯಕತೆಯನ್ನು ಪೂರೈಸುವಂತೆ ಉತ್ಪಾದನಾ ಮಟ್ಟವನ್ನು ಕಾಯ್ದುಕೊಂಡು ಹೋಗುವ ಕೃಷಿ ಪದ್ಧತಿ.
ಸುಸ್ಥಿರ ಕೃಷಿಯ ಮುಖ್ಯ ತತ್ವಗಳೆಂದರೆ
- ಬೆಳೆಗಳಿಗೆ ಬೇಕಾಗುವ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳನ್ನು ಕಾಪಾಡಿಕೊಳ್ಳುವುದು.
- ಮಣ್ಣಿನಲ್ಲಿಯ ಸಾವಯವ ಅಂಶಗಳನ್ನು ಹೆಚ್ಚಿಸಿ ಜೈವಿಕ ಕ್ರಿಯೆಗಳು ನಡೆಯುವಂತೆ ಮಾಡುವುದು.
- ಮಣ್ಣಿನಲ್ಲಿ ಯಾವುದೇರೀತಿಯ ಅಹಿತಕಾರಿ ಪದಾರ್ಥಗಳ ಸಂಗ್ರಹವಾಗದಂತೆ ನೋಡಿಕೊಳ್ಳುವುದು.
- ಪರಿಸರ ಮಾಲಿನ್ಯವನ್ನು ತಡೆಗಟ್ಟಿ ನೈಸರ್ಗಿಕ ಸಮತೋಲನವನ್ನು ಕಾಯ್ದುಕೊಳ್ಳುವುದು.
ಮೂಲ :
ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.