ಬೆಳೆ-ಕಳೆಗಳ ಪೈಪೋಟಿಯಲ್ಲಿ ನಿರ್ಣಾಯಕ ಅವಧಿ
ಕೊನೆ ಪಕ್ಷ ಬೆಳೆಗಳ ಬೆಳವಣಿಗೆಯ ಪ್ರಾರಂಭಿಕ ಹಂತದೊಲ್ಲಿ ಕಳೆಗಳ ಪೈಪೋಟಿಯನ್ನು ಕಮ್ಮಿ ಮಾಡಿದರೆ ನಂತರ ಬರುವ ಕಳೆಗಳನ್ನು ಆ ಬೆಳೆಯು ತಾನೆ ಹಿಮ್ಮೆಟ್ಟಿಸುತ್ತದೆ. ಈ ತತ್ವದ ಆಧಾರದ ಮೇಲೆ ವಿವಿಧ ಬೆಳೆಗಳಲ್ಲಿ ಯಾವ ಸಮಯದೊಳಗೆ ಕಳೆಗಳನ್ನು ನಿಯಂತ್ರಿಸಬೇಕು ಎಂಬುದನ್ನು ಕಂಡು ಹಿಡಿದಿದ್ದಾರೆ. ಈ ನಿರ್ಣಾಯಕ ಅವಧಿಯಲ್ಲಿ ಕಳೆ ನಿಯಂತ್ರಣ ಮಾಡದಿದ್ದರೆ ಇಳುವರಿಯಲ್ಲಿ ಗಣನೀಯವಾಗಿ ನಷ್ಟವಾಗುತ್ತದೆ. ಈ ಮಾಹಿತಿಯನ್ನು ಈ ಕೆಳಕಂಡ ಪಟ್ಟಿಯಲ್ಲಿ ಕೊಡಲಾಗಿದೆ. ಈ ಪಟ್ಟಿಯಲ್ಲಿ ತಿಳಿಸಿರುವಂತೆ ಕಳೆನಿಯಂತ್ರಣವನ್ನು ಬೆಳೆಗಳನ್ನು ಬಿತ್ತಿದ 15-40 ದಿವಸದೊಳಗೆ ನಿಯಂತ್ರಿಸುವುದು ಒಂದು ಒಳ್ಳೆಯ ಪದ್ಧತಿ. ಇಲ್ಲಾವಾದಲ್ಲಿ ಇಳುವರಿಯು ಕಮ್ಮಿಯಾಗುತ್ತದೆ.
ಕ್ರ.ಸಂ
|
ಬೆಳೆಗಳು
|
ನಿರ್ಣಾಯಕ ಅವಧಿ (ಬಿತ್ತಿದ ನಂತರ ದಿನಗಳಲ್ಲಿ)
|
1
|
ಪುಣಜಿ ಭತ್ತ
|
15-45
|
2
|
ನಾಟಿ ಭತ್ತ
|
30-45
|
3
|
ಮುಸುಕಿನ ಜೋಳ
|
15-45
|
4
|
ತೊಗರಿ
|
15-60
|
5
|
ನೆಲಗಡಲೆ
|
40-60
|
6
|
ಸೂರ್ಯಕಾಂತಿ
|
30-45
|
7
|
ಆಲೂಗಡ್ಡೆ
|
20-40
|
8
|
ಹತ್ತಿ
|
15-60
|
9
|
ಹೂ ಕೋಸು
|
30-45
|
10
|
ಎಲೆ ಕೋಸು
|
30-45
|
11
|
ಟೊಮ್ಯಾಟೊ
|
30-45
|
12
|
ಈರುಳ್ಳಿ
|
30-45
|
ಪಾರ್ಥೇನಿಯಂ ಕಳೆ ನಿಯಂತ್ರಣ
ಪಾರ್ಥೇನಿಯಂ ಕಳೆಯು ಅಚ್ಚುಕಟ್ಟು ಪ್ರದೇಶದಲ್ಲಿ ಬಹುಬೇಗ ಹರಡುವುದರಿಂದ ಅವುಗಳು ಕಂಡ ತಕ್ಷಣವೇ ನಾಶಮಾಡಲು ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯವನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ.
- ಹೂ ಬಿಡುವುದಕ್ಕೆ ಮೊದಲು ಗಿಡಗಳನ್ನು ಕಿತ್ತುಹಾಕುವುದು
- ಕ್ಯಾಸಿಯ ಸೆರೆಸಿಯಾ ಚೊಗಚೆಗಿಡದ ಬೀಜಗಳನ್ನುಪಾರ್ಥೇನಿಯಂ ಬರುವ ಪ್ರದೇಶದಲ್ಲಿ ಬಿತ್ತನೆ ಮಾಡುವುದು.
- ಜೈಗೋಗ್ರಾಮ್ ಬೈಕೊಲಾರಾಟ ಕೀಟವನ್ನು ಪಾರ್ಥೇನಿಯಂ ಕಳೆ ತಿನ್ನಲು ಬಿಡುವುದು ಇತ್ಯಾದಿ
- ಕಳೆ ನಾಶಕಗಳನ್ನು ಬಳಸಿ ನಾಶ ಮಾಡುವುದು.
- ಈ ಎಲ್ಲಾ ಸಮಗ್ರ ಕ್ರಮಗಳನ್ನೂ ಅನುಸರಿಸಿ ಪಾರ್ಥೇನಿಯಂ ಕಳೆಯನ್ನು ನಿರ್ಮೂಲನೆ ಮಾಡಲು ಕೆಲವು ಪ್ರದೇಶಗಳಲ್ಲಿ ಪ್ರಯತ್ನಿಸಲಾಯಿತು.
ಮೂಲ :ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು