অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿರ್ಣಾಯಕ ಅವಧಿ

ಬೆಳೆ-ಕಳೆಗಳ ಪೈಪೋಟಿಯಲ್ಲಿ ನಿರ್ಣಾಯಕ ಅವಧಿ

ಕೊನೆ ಪಕ್ಷ ಬೆಳೆಗಳ ಬೆಳವಣಿಗೆಯ ಪ್ರಾರಂಭಿಕ ಹಂತದೊಲ್ಲಿ ಕಳೆಗಳ ಪೈಪೋಟಿಯನ್ನು ಕಮ್ಮಿ ಮಾಡಿದರೆ ನಂತರ ಬರುವ ಕಳೆಗಳನ್ನು ಆ ಬೆಳೆಯು ತಾನೆ ಹಿಮ್ಮೆಟ್ಟಿಸುತ್ತದೆ. ಈ ತತ್ವದ ಆಧಾರದ ಮೇಲೆ ವಿವಿಧ ಬೆಳೆಗಳಲ್ಲಿ ಯಾವ ಸಮಯದೊಳಗೆ ಕಳೆಗಳನ್ನು ನಿಯಂತ್ರಿಸಬೇಕು ಎಂಬುದನ್ನು ಕಂಡು ಹಿಡಿದಿದ್ದಾರೆ. ಈ ನಿರ್ಣಾಯಕ ಅವಧಿಯಲ್ಲಿ ಕಳೆ ನಿಯಂತ್ರಣ ಮಾಡದಿದ್ದರೆ ಇಳುವರಿಯಲ್ಲಿ ಗಣನೀಯವಾಗಿ ನಷ್ಟವಾಗುತ್ತದೆ. ಈ ಮಾಹಿತಿಯನ್ನು ಈ ಕೆಳಕಂಡ ಪಟ್ಟಿಯಲ್ಲಿ ಕೊಡಲಾಗಿದೆ. ಈ ಪಟ್ಟಿಯಲ್ಲಿ ತಿಳಿಸಿರುವಂತೆ ಕಳೆನಿಯಂತ್ರಣವನ್ನು ಬೆಳೆಗಳನ್ನು ಬಿತ್ತಿದ 15-40 ದಿವಸದೊಳಗೆ ನಿಯಂತ್ರಿಸುವುದು ಒಂದು ಒಳ್ಳೆಯ ಪದ್ಧತಿ. ಇಲ್ಲಾವಾದಲ್ಲಿ ಇಳುವರಿಯು ಕಮ್ಮಿಯಾಗುತ್ತದೆ.

 

ಕ್ರ.ಸಂ

ಬೆಳೆಗಳು

ನಿರ್ಣಾಯಕ ಅವಧಿ (ಬಿತ್ತಿದ ನಂತರ ದಿನಗಳಲ್ಲಿ)

1

ಪುಣಜಿ ಭತ್ತ

15-45

2

ನಾಟಿ ಭತ್ತ

30-45

3

ಮುಸುಕಿನ ಜೋಳ

15-45

4

ತೊಗರಿ

15-60

5

ನೆಲಗಡಲೆ

40-60

6

ಸೂರ್ಯಕಾಂತಿ

30-45

7

ಆಲೂಗಡ್ಡೆ

20-40

8

ಹತ್ತಿ

15-60

9

ಹೂ ಕೋಸು

30-45

10

ಎಲೆ ಕೋಸು

30-45

11

ಟೊಮ್ಯಾಟೊ

30-45

12

ಈರುಳ್ಳಿ

30-45

ಪಾರ್ಥೇನಿಯಂ ಕಳೆ ನಿಯಂತ್ರಣ

ಪಾರ್ಥೇನಿಯಂ ಕಳೆಯು ಅಚ್ಚುಕಟ್ಟು ಪ್ರದೇಶದಲ್ಲಿ ಬಹುಬೇಗ ಹರಡುವುದರಿಂದ ಅವುಗಳು ಕಂಡ ತಕ್ಷಣವೇ ನಾಶಮಾಡಲು ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯವನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ.

  • ಹೂ ಬಿಡುವುದಕ್ಕೆ ಮೊದಲು ಗಿಡಗಳನ್ನು ಕಿತ್ತುಹಾಕುವುದು
  • ಕ್ಯಾಸಿಯ ಸೆರೆಸಿಯಾ ಚೊಗಚೆಗಿಡದ ಬೀಜಗಳನ್ನುಪಾರ್ಥೇನಿಯಂ ಬರುವ ಪ್ರದೇಶದಲ್ಲಿ ಬಿತ್ತನೆ ಮಾಡುವುದು.
  • ಜೈಗೋಗ್ರಾಮ್ ಬೈಕೊಲಾರಾಟ ಕೀಟವನ್ನು ಪಾರ್ಥೇನಿಯಂ ಕಳೆ ತಿನ್ನಲು ಬಿಡುವುದು ಇತ್ಯಾದಿ
  • ಕಳೆ ನಾಶಕಗಳನ್ನು ಬಳಸಿ ನಾಶ ಮಾಡುವುದು.
  • ಈ ಎಲ್ಲಾ ಸಮಗ್ರ ಕ್ರಮಗಳನ್ನೂ ಅನುಸರಿಸಿ ಪಾರ್ಥೇನಿಯಂ ಕಳೆಯನ್ನು ನಿರ್ಮೂಲನೆ ಮಾಡಲು ಕೆಲವು ಪ್ರದೇಶಗಳಲ್ಲಿ ಪ್ರಯತ್ನಿಸಲಾಯಿತು.

ಮೂಲ :ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

 

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate