অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಕ್ಕಳದಿನಾಚರಣೆಯ ಮಹತ್ವ

ಮಕ್ಕಳದಿನಾಚರಣೆಯ ಮಹತ್ವ

ಮಕ್ಕಳದಿನಾಚರಣೆಯ   ವೈಭವ ಮತ್ತು ಪ್ರದರ್ಶನದ ನಡುವೆ  ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ  ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು. ಮತ್ತು ಮಕ್ಕಳಿಗೆ ಅವರ ಚಾಚಾ ನಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.

ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಅಲ್ಲದೆ ನೆಹರು ಅವರು ಕೂಡಾ ದೇಶದ ವಿಶೇಷ ಮಗುವೆಂದೆ ಪರಿಗಣಿಸಬಹುದು. ಸ್ವಾತಂತ್ರ ಹೋರಾಟದಲ್ಲಿ ಅಪಾರವಾಗಿ ಬಹುಕಾಲ  ಶ್ರಮಿಸಿದವರು. ಆದಕ್ಕೆ ಭಾರತದಲ್ಲಿ  14ನೆ ನವಂಬರ್ ಅನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವರು. ಆ ದಿನ ಭಾರತದ  ದಂತ ಕಥೆಯಾದ ಸ್ವಾತಂತ್ರ ಹೋರಾಟಗಾರ  ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ   ಜವಹರ ಲಾಲ ನೆಹುರು ಅವರ ಜನ್ಮದಿನ.

ಅವರಿಗೆ ಇರುವ  ಮಕ್ಕಳ ಬಗೆಗಿನ  ಅಪಾರ  ಪ್ರೇಮದ ಪ್ರತೀಕವಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.

ಈದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ  ಚಾಚಾ  ನೆಹರೂ ಅವರ ಕನಸಿನಂತೆ  ಮಕ್ಕಳು ಉತ್ತಮ ಗುಣಮಟ್ಟದ  ಜೀವನ ನಡೆಸಲು ಅನುವಾಗುವಂತೆ ಮಾಡಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate