ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸರಕಾರ ಜಾರಿಗೆ ತಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಸರ್ವಸಮಾನತೆ, ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವುದರ ಮೂಲಕ ಉತ್ತಮ ಕಲಿಕಾ ಶಾಲಾ ವಾತಾವರಣವನ್ನು ಮೂಡಿಸುವ ಒಂದು ಪ್ರಯತ್ನವಷ್ಟೇ. ಇಂದಿಗೆ ಸುಮಾರು ಆರೂವರೆ ದಶಕಗಳು ಕಳೆದರೂ ಅಲೆಮಾರಿಗಳು, ಕೂಲಿಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರು ಮತ್ತು ಅಲಕ್ಷಿತ ಸಮುದಾಯದವರ ಹೆಣ್ಣು ಮಕ್ಕಳು, ಶಿಕ್ಷಣದಿಂದ ವಂಚಿತರಾಗುತ್ತಿರುವುದು ಶೋಚನೀಯ. ಇಂಥವರ ನೆರವಿಗಾಗಿ 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009' ಜಾರಿಗೆ ಬಂದಿದೆ. 6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಆಶಯದೊಂದಿಗೆ ಏಪ್ರಿಲ್, ಒಂದು 2010 ರಿಂದ ದೇಶಾದ್ಯಂತ ಜಾರಿಯಾಗಿರುವುದು ಕೆಲವರಿಗೆ ನುಂಗಲಾರದ ತುಪ್ಪವಾದರೆ ಮತ್ತು ಕೆಲವರಿಗೆ ಹೋಳಿಗೆ ತುಪ್ಪವಾಗಿ ಪರಿಣಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಆರ್.ಟಿ.ಇ. ಮುಂದಿರುವ ಸವಾಲುಗಳು:
* ಕ್ರಿಯಾಯೋಜನೆ ಮತ್ತು ನೀಲನಕಾಶೆಯನ್ನು ರಚಿಸುವುದು.
* ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಖಾತರಿಯನ್ನು ಕಾಯ್ದುಕೊಂಡು ಬರುವುದು.
* ಶಾಲೆಗೆ ಬರಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿನಿಲಯ ಸ್ಥಾಪಿಸಿ ನಡೆಸುವುದು.
* ಎಂಟನೇ ತರಗತಿಯ ನಂತರ ಮುಂದೇನು ? ಎಂಬುದಕ್ಕೆ ಕಾಯ್ದೆ ಸ್ಪಷ್ಟ ಉತ್ತರ ನೀಡುವುದು.
* ಮಕ್ಕಳನ್ನು ವಯಸ್ಸಿಗೆ ತಕ್ಕ ತರಗತಿಗೆ ಸೇರಿಸುವಾಗ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಬಹುಮುಖ ಪ್ರತಿಭೆಗಳಿಗೆ ಆದ್ಯತೆ ನೀಡುವುದು.
* ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು.
* ಸರ್ಕಾರ ಸಾರ್ವಜನಿಕರು ಮತ್ತು ಖಾಸಗಿಯವರ ಸಹಭಾಗಿತ್ವದ ಶಾಲೆಗಳನ್ನು ನಡೆಸಬೇಕು ಎಂಬ ವಿಚಾರಕ್ಕೆ ಬೆಂಬಲ ನೀಡುವುದು.
* ಈಗ ಇರುವ ಸರ್ಕಾರಿ ಶಾಲೆಗಳನ್ನು ಆಕರ್ಷಿಸುವಂತೆ ಶಾಲಾ ವಾತಾವರಣವನ್ನು ನಿರ್ಮಿಸುವುದು.
* ಉಚಿತ ಶಿಕ್ಷಣವೆಂದು ಘೋಷಿಸಿದ ಮೇಲೆ, ಶುಲ್ಕ ವಿಧಿಸುವ ಸರ್ಕಾರೇತರ / ಖಾಸಗಿ ಶಾಲೆಗಳನ್ನು ನಡೆಸುವುದನ್ನು ಇಂತಿಷ್ಟು ವರ್ಷಗಳ ಕಾಲ ನಿಷೇಸುವುದು.
* ಎಲ್ಲಾ ಸಂಸ್ಥೆಗಳು, ಕಾರ್ಯ ನಿರ್ವಹಣೆಯ ಕೈಪಿಡಿ, ಗುರಿ, ಉದ್ದೇಶಗಳಂತೆ, ಲಾಭರಹಿತವಾಗಿ, ಜನಸೇವೆ ಮಾಡಲೆಂದೇ ಆರಂಭಿಸಿರುವುದನ್ನು ಗಮನಿಸುವುದು.
* ಬಹುತೇಕ ಸರ್ಕಾರೇತರ ಶಾಲೆಗಳ ನಿರ್ವಾಹಕರು ತಾವು ಯಾವುದೇ ಸಂಬಳ ತೆಗೆದುಕೊಳ್ಳದೇ ಸೇವಾ ಮನೋಭಾವನೆಯನ್ನು ತೋರುವುದು.
* ಅನುದಾನವಿರುವ ಶಾಲೆಗಳನ್ನು ನಡೆಸುತ್ತಿರುವವರು ಧಾರ್ಮಿಕ ಸಂಸ್ಥೆಗಳು, ಸರ್ಕಾರಿ ನೌಕರರು ಮಠಗಳು, ರಾಜಕಾರಣಿಗಳೇ ಹೆಚ್ಚಿರುವುದರಿಂದ ಬಡಮಕ್ಕಳ ಬಗ್ಗೆ ಕಾಳಜಿ ವಹಿಸುವುದು.
* ಅಂಗನವಾಡಿಗಳನ್ನು ಚಟುವಟಿಕೆಯ ಕೇಂದ್ರಗಳನ್ನಾಗಿಸಿ ಪ್ರಾಥಮಿಕ ಶಾಲೆಗಳತ್ತ ಬರುವುದನ್ನು ಖಾತರಿ ಪಡಿಸಿಕೊಳ್ಳವುದು ಹಾಗೂ ನೆರೆಹೊರೆ ಮಕ್ಕಳ ತಖ್ತೆಯನ್ನು ಇಟ್ಟುಕೊಳ್ಳುವುದು.
* ನತ್ಯ, ಸಂಗೀತ, ನಾಟಕ, ಭಾಷಣ ಮೊದಲಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದು.
* ಆರ್.ಟಿ.ಇ. ಕಾಯ್ದೆಯು ಯಾರಿಗೂ ಶ್ರೀರಕ್ಷೆ ಕೊಡದೆ, ಯಾರ ಮೇಲೂ ಗದಾಪ್ರಹಾರ ಮಾಡದೇ ಮಕ್ಕಳ ಕೇಂದ್ರ್ರಿತವಾಗಿರುವುದು.
* ಈ ಕಾಯಿದೆಯ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಸೀಮಿತವಲ್ಲ ಎಂದು ಶಿಕ್ಷಣ ಇಲಾಖೆಯ ಅಕಾರಿಗಳು ಮನವರಿಕೆ ಮಾಡಿಕೊಳ್ಳುವುದು.
* ಶಿಕ್ಷಣ ತರಬೇತಿ ಸಂಸ್ಥೆಗಳು ಮಕ್ಕಳ ದಷ್ಟಿಯಿಂದ ನವೀನ ರೀತಿಯಲ್ಲಿ ಬೋಸುವುದನ್ನು ಕಡ್ಡಾಯಗೊಳಿಸುವುದು.
* ಸಶಕ್ತ ಶಾಲಾಭಿವದ್ಧಿ ಮತ್ತು ಉಸ್ತುವಾರಿ ಸಮಿತಿ, ಶಾಲಾ ವಾತಾವರಣದಲ್ಲಾಗುತ್ತಿರುವ ಬೋಧನಾ ಕಲಿಕಾ ಚಟುವಟಿಕೆಗಳ ಬಗ್ಗೆ ಪರಿಪೂರ್ಣ ಪ್ರಜ್ಞೆಯನ್ನಿರಿಸಿಕೊಂಡು ಕಾಲಕಾಲಕ್ಕೆ ಸೂಕ್ತ ಸಲಹೆ ಮತ್ತ ಮಾರ್ಗದರ್ಶನ ನೀಡುವುದು.
* ಮಕ್ಕಳ ಶಿಕ್ಷಣ ಹಕ್ಕಿಗಾಗಿ, ಅಂಗವಿಕಲತೆ / ಬಾಲಕಾರ್ಮಿಕ ಪದ್ಧತಿ / ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಜವಾಬ್ದಾರಿಯು ಸವಲತ್ತುಗಳನ್ನು ಮಕ್ಕಳಿಗೆ ಪೂರೈಸುವ ಹೊಣೆ ಹೊರುವುದು.
* ಶಿಕ್ಷಣ ಹಕ್ಕು ಜಾರಿಗಾಗಿ, ಬಾಲಕಾರ್ಮಿಕ ಪದ್ಧತಿ ವಿರೋ ಆಂದೋಲನ, ಶಿಕ್ಷಣ ಹಕ್ಕು ಕಾರ್ಯಪಡೆ, ಶಿಕ್ಷಣ ಹಕ್ಕು ಸಮಿತಿ, ಮೊದಲಾದ ಹೆಸರುಗಳಲ್ಲಿ, ವಿವಿಧ ಜಿಲ್ಲೆಗಳಲ್ಲಿ ಸಂಘಟನೆಗಳು ನಿರ್ಮಾಣಗೊಂಡು ಶಿಕ್ಷಣ ಹಕ್ಕು ಜಾರಿಯಲ್ಲಿನ ತೊಂದರೆಗಳನ್ನು ಚಿಂತಿಸಲು, ಪರಿಹರಿಸಲು ಸಲಹೆ - ಸೂಚನೆಗಳನ್ನು ನೀಡುವುದು.
* ಖಾಸಗಿ ಪಾಠ ಮಾಡಬಾರದೆಂಬುದನ್ನು ಸರ್ಕಾರಿ ಶಿಕ್ಷಕರಿಗೆ ಮಾತ್ರವಲ್ಲದೆ, ಖಾಸಗಿಯವರಿಗೂ ಅನ್ವಯವಾಗುವಂತೆ ಕಾರ್ಯರೂಪಿಸುವುದು.
* ಮಗು 90 ದಿನದೊಳಗೆ ಬರದಿದ್ದರೆ, ಅದನ್ನು ಶಾಲೆ ಬಿಟ್ಟ ಮಗು ಎಂದು ಪರಿಗಣಿಸಬಹುದು. ಆದರೆ ಮಧ್ಯದಲ್ಲಿ ಯಾವಾಗಲಾದರು ಮಗು ಶಾಲೆಗೆ ಬಂದರೆ ಅಲ್ಲಿಂದ 90 ದಿನಗಳನ್ನು ಪರಿಗಣಿಸಬೇಕೆಂಬ ನಿರ್ಣಯದ ಬಗ್ಗೆ ಚಿಂತಿಸುವುದು.
* ಶಿಕ್ಷಕರ ಕೊರತೆ, ಅನುಪಸ್ಥಿತಿ ಉಂಟಾದರೆ, 90 ದಿನಗಳೊಳಗೆ ತುಂಬಬೇಕು ಎಂಬ ನಿಯಮವಿದೆ. ಶಿಕ್ಷಕರು ದೀರ್ಘಾವ ರಜೆ ಹೋಗಿ, ತದನಂತರ ವರ್ಗಾವಣೆ, ರಾಜೀನಾಮೆ ಕೊಡುವುದು, ಮಾಡಿದರೆ ಆಮೇಲೆ 90 ದಿನವೆಂದೂ ಎಣಿಸಬೇಕೋ ಹೇಗೆ ಎನ್ನುವ ಗೊಂದಲವನ್ನು ನಿವಾರಿಸುವುದು.
* ಶಿಕ್ಷಕರ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡ್ತಿ ಇತ್ಯಾದಿ ನಿರ್ಧರಿಸುವ ವ್ಯವಸ್ಥೆ ಮಾಡುವುದು.
* 2013ರ ಒಳಗೆ ಎಲ್ಲಾ ಖಾಸಗಿ ಶಾಲೆಗಳು ಈ ಕಾಯಿದೆಯ ನಿಯಮ ಹೇಳುವ ಕನಿಷ್ಠ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದಲ್ಲಿ ಅವುಗಳ ಮಾನ್ಯತೆ ರದ್ದು ಮಾಡುವುದು. ಮೂಲ ಸೌಕರ್ಯಗಳಿಲ್ಲದ ಸರ್ಕಾರಿ ಶಾಲೆಗಳ ಮಾನ್ಯತೆಯನ್ನು ಸಹ ರದ್ದುಗೊಳಿಸುವುದು.
* ಶಾಲಾ ನಿರ್ವಹಣಾ ಸಮಿತಿಗಳಿಗೆ ಹೆಚ್ಚಿನ ಸ್ಥಾನಮಾನ ನೀಡುವುದು.
* ಶಾಲಾಭಿವದ್ಧಿ / ಉಸ್ತುವಾರಿ ಸಮಿತಿ ಎಲ್ಲಾ ಶಾಲೆಗಳಲ್ಲಿಯೂ ಕಡ್ಡಾಯಗೊಳಿಸುವುದು.
* ಪ್ರತಿ ಒಬ್ಬ ಶಿಕ್ಷಕನಿಗೆ 20 ವಿದ್ಯಾರ್ಥಿಗಳಿರಬೇಕೆಂಬ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಳ್ಳವುದು.
* ಆರ್.ಟಿ.ಇ. ಕಾಯ್ದೆಯು ಬಡಮಕ್ಕಳಿಗೆ ಅನುಕೂಲವಾದರೆ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಶಾಪವಾಗಬಹುದು.
* ಶಾಲಾ ಪ್ರವೇಶಾವಯನ್ನು ನಿಗದಿಪಡಿಸಿದ ದಿನಾಂಕದಂದೇ ಪ್ರಾರಂಭಿಸುವುದು.
* ಆರ್.ಟಿ.ಇ. ಜಾರಿಯಲ್ಲಿನ ಗೊಂದಲ ನಿವಾರಣೆಗೆ ಉನ್ನತ ಮಟ್ಟದ ಸಲಹಾ ಸಮಿತಿ ರಚಿಸುವುದು.
* ಆರ್.ಟಿ.ಇ. ನೀಡುತ್ತಿರುವ 25% ಮೀಸಲಾತಿಯನ್ನು ಬಿ.ಪಿ.ಎಲ್. ಕಾರ್ಡ್ನ ಕುಟುಂಬದ ಆದಾಯಕ್ಕೆ ತಗ್ಗಿಸುವುದು.
* ಪೋಷಕರೇ ಮಕ್ಕಳ ಯಾವ ಮಾಧ್ಯಮದಲ್ಲಿ ಓದಬೇಕೆಂಬುದನ್ನು ನಿರ್ಧರಿಸುವುದು.
* ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಮೀಸಲಿರುವ ಸೀಟುಗಳನ್ನು ಖಾಲಿ ಬಿಡದೆ ಶಾಲೆ ಸುತ್ತಲಿನ ಕೊಳೆಗೇರಿ, ಕಟ್ಟಡ ಕಾರ್ಮಿಕರ ಮಕ್ಕಳ, ಅನಾಥರಿಗೆ ಪ್ರವೇಶ ನೀಡುವುದು.
* ವಾಸಸ್ಥಳ ಗುರುತಿಗೆ 23 ದಾಖಲೆಗಳಲ್ಲಿ ಒಂದು ದಾಖಲೆಯ ಜೊತೆ ಪೂರಕವಾಗಿ ಬಾಡಿಗೆ ಕರಾರು ಪತ್ರವನ್ನು ಪರಿಗಣಿಸಬಹುದು.
* ದೇಶದೆಲ್ಲಡೆ ಸಾಮಾಜಿಕ - ನ್ಯಾಯದ ನೆಲೆಯಲ್ಲಿ ಸಮಾನ ಶಿಕ್ಷಕ ವ್ಯವಸ್ಥೆ ಜಾರಿಗೊಳಿಸಿವುದು.
* ಶಿಕ್ಷಣ ಕ್ಷೇತ್ರಕ್ಕೆ ಬೇಕಿರುವ ಗುರಿ, ತಾತ್ವಿಕ ಚೌಕಟ್ಟಿನಲ್ಲಿ ಪ್ರಾಥಮಿಕ ಶಾಲೆಗಳನ್ನು ಗಟ್ಟಿಗೊಳಿಸುವುದು.
ನಮ್ಮ ಮಕ್ಕಳ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಶಿಕ್ಷಣ ಹಕ್ಕಿಗಾಗಿ ಸರ್ಕಾರ, ನಮ್ಮ ಹಳ್ಳಿಗಳು, ಪಂಚಾಯಿತಿಗಳು, ರಾಜ್ಯಗಳು, ಪ್ರಾಮಾಣಿಕವಾಗಿ ದುಡಿದಾಗ 'ಸಮಾನ ಶಿಕ್ಷಣ'ವನ್ನು ದೇಶದೆಲ್ಲೇಡೆ, ಯಾವುದೇ ಜಾತಿ, ಮತ, ಲಿಂಗ, ಧರ್ಮ, ಮೇಲು, ಕೀಳು, ಭಾವನೆಗಳಿಲ್ಲದೆ ಎಲ್ಲರಿಗೂ ನೀಡಬಹುದು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರತಿಕ್ರಿಯೆ, ಪರಿಶೀಲನೆ ಮತ್ತು ಕಾರ್ಯೋನ್ಮುಖತೆಯ ಅಗತ್ಯತೆ ಸಾಕಷ್ಟಿದೆ.
- ವೆಂಕೋಬರಾವ್. ಎಂ.ಹೊಸಕೋಟೆ
ಮೂಲ : ವಿಜಯ ಕರ್ನಾಟಕ
ಕೊನೆಯ ಮಾರ್ಪಾಟು : 10/16/2019