1. ಕಣ್ಣಿನಲ್ಲಿ ಕಸ ಬಿದ್ದರೆ ಔಡಲ ಎಣ್ಣೆಯನ್ನು (ಹರಳೆಣ್ಣೆ) ತಲಾ 1 ಹನಿ ಬಿಡಬೇಕು.
2. ಕಣ್ಣು ಉರಿ ಬರುತ್ತಿದ್ದರೆ ಕಣ್ಣಿಗೆ ಎಳ್ಳೆಣ್ಣೆ ಅಥವಾ ಔಡಲ ಎಣ್ಣೆ ತಲಾ 1 ಹನಿ ಹಾಕಬೇಕು.
3. ದಿನಾಲು ತಲೆಗೆ ತಣ್ಣೀರು ಸ್ನಾನ ಮಾಡಬೇಕು.
4. ಕಣ್ಣು ಮಂದವಾಗಿದ್ದರೆ, ಕಣ್ಣಿಗೆ ಬೇವಿನ ಗಿಡದಲ್ಲಿ ಇಟ್ಟ ಜೇನನ್ನು ತಲಾ 1 ಹನಿ ಹಾಕಬೇಕು.
5. ಕಣ್ಣನ್ನು ಶುದ್ಧ ತಣ್ಣೀರಿನಲ್ಲಿ ದಿನಾಲು ಅದ್ದಿ ಕಣ್ಣಿನ ರೆಪ್ಪೆ ಬಡಿದರೆ ದೃಷ್ಟಿ ದೋಷವಾಗುವುದಿಲ್ಲ.
6. ಕಣ್ಣು ಕೆಂಪಾಗಿದ್ದರೆ ದಿನಾಲು ಎಳನೀರಿನ ತಲಾ 2 ಹನಿ ಹಾಕಬೇಕು.
7. ಕಣ್ಣಿನ ಬಹುತೇಕ ತೊಂದರೆಗಳಿಗೆ ದಿನಾಲು ಸರ್ವಾಂಗಾಸನ ಮಾಡುವುದು ಒಳ್ಳೆಯದು.
8. ಕಣ್ಣಿನ ದೃಷ್ಟಿ ದೋಷಕ್ಕೆ ಹಸಿರು ತರಕಾರಿ ವಿಶೇಷವಾಗಿ ಕಿರುಕಸಾಲಿ, ಹಕ್ಕರಕಿ, ಹೊನ್ನಗೊನೆ ಸೊಪ್ಪು ಅತ್ಯಂತ ಶ್ರೇಷ್ಠ ಔಷಧ.
ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವುದು.
- ಹನುಮಂತ ರಾವ್ ಮಳಲಿ
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 1/28/2020