ಕ್ಯಾಟರಾಕ್ಟ ಅಂಧತ್ವ ತರುವ ಕಾರಣಗಳಲ್ಲಿ ಅತಿ ಪ್ರಮುಖವಾದುದು. ವಕ್ರೀಭವನೋಷವು ದೃಷ್ಡಿದೋಷ ಉಂಟು ಮಾಡುವ ಅತಿ ದೊಡ್ಡ ಕಾರಣ.ಇವಲ್ಲದೆ ಸ್ವಗೋತ್ರ ವಿವಾಹದಿಂದಾದ ಕಣ್ಣಿನ ದೋಷ, ಆಪ್ಟಿಕ್ ಟ್ರೊಫಿ, ಕಾರ್ನಿಯಲ್ ವ್ಯಾಧಿ ಗ್ಲುಕೊಮಾ, ರೆಟಿನಲ್ ವ್ಯಾಧಿ ಅಂಬ್ಲಿಯೊಪಿಕ್ಗಳು ಕುರುಡುತನಕ್ಕೆ ಮತ್ತು ದೃಷ್ಟಿದೋಷಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕ್ಯಾಟರಾಕ್ಟ ಮತ್ತು ವಕ್ರೀಭವನವುದೋಷವು ಕುರುಡುತನ ಮತ್ತು ದೃಷ್ಟಿದೋಷಗಳಿಗೆ ಅತಿ ದೊಡ್ಡ. ಕಾರಣಗಳಾಗಿವೆ. ಈ ಸ್ಥಿತಿಯನ್ನು ತಡೆಯುವುದು ಆಗದು. ಆದರೂ ಸರಳ ಶಸ್ತ್ರಕ್ರಿಯಿಂದ ಕಣ್ಣಿನ ಪೊರೆಯನ್ನು ತೆಗೆಯಬಹುದು. ಕನ್ನಡಕ ಉಪಯೋಗಿಸಿ ವಕ್ರೀಭವನ ದೋಷವನ್ನು ನಿವಾರಿಸಬಹುದು. ದೃಷ್ಟಿಹೀನತೆ ಮತ್ತು ದೃಷ್ಟಿ ದೋಷಗಳಗೆ ನೀಡುವ ಈ ಚಿಕಿತ್ಸೆಯು ಎಲ್ಲ ಆರೋಗ್ಯ ಚಿಕಿತ್ಸೆಗಳಲ್ಲಿ ಅತಿ ಯಶಸ್ವಿ ಹಾಗೂ ಬಹು ಅಗ್ಗದ್ದಾಗಿದೆ ಸಮಸ್ಯೆಗೆ ಮೂಲ ಕಾರಣವೆಂದರೆ ಕ್ರಮವಾದ ನೇತ್ರ ಆರೋಗ್ಯಸೇವೆ ಇಲ್ಲದೆ ಇರುವುದು. ಅಥವಾ ಸಾಕಷ್ಡು ತರಬೇತಿ ಪಡೆದ ಸೇವೆ ನೀಡುವವರ ಕೊರತೆ. ಕೆಲವು ಸಲ ಜನರಿಗೆ ಹಣದ ಅಭಾವದಿಂದಾಗಿ ನೇತ್ರ ಆರೈಕೆ ಸೇವಾ ಸ್ಥಳಕ್ಕೆ ಹೋಗುವುದೆ ಆಗುವುದಿಲ್ಲ.ಅಥವ ನೇತ್ರ ಆರೈಕೆ ಸೇವಾ ಕೇಂದ್ರಗಳು ಅತಿ ದೂರದಲ್ಲಿ ಇರುವುದರಿಂದ ಅಲ್ಲಿಗೆ ಹೋಗುವ ಪ್ರಯಾಣದ ವೆಚ್ಚ ದುಬಾರಿಯಾಗಿ ಇರುವುದು. ಅನೇಕ ಸಲ ತಮಗಿರುವ ದೃಷ್ಟಿ ಕ್ಷೀಣತೆಯನ್ನು ಸ್ವೀಕರಿಸಿ ತಾವು ಹೇಗೋ ಇದ್ದಷ್ಟು ದೃಷ್ಟಿಯಲ್ಲಿಯೇ ನಿರ್ವಹಣೆ ಮಾಡಬಹುದು ಎಂದು ಯೋಚಿಸುವರು..ಇದು ವಿಶೇಷವಾಗಿ ವಯಸ್ಸಾದವರ ವಿಷಯದಲ್ಲಿ ಸತ್ಯ.
ಸ್ವಗೋತ್ರವೆಂದರೆ ಪುರುಷ ಮತ್ತು ಮಹಿಳೆ ಇಬ್ಬರಿಗೂ ಪೂರ್ವಜರು ಒಬ್ಬರೆ ಆಗಿರುವರು. ಈ ಶಬ್ದವು ಲ್ಯಾಟಿನ್ ಮೂಲದ್ದು. ಇದರ ಅರ್ಥ ಸಾಮಾನ್ಯ ರಕ್ತ ಎಂದು . ಸ್ವಗೋತ್ರ ಎಂದರೆ ಇಬ್ಬರು ವ್ಯಕ್ತಿಗಳು ಹತ್ತಿರದ ರಕ್ತ ಸಂಬಂಧಿಗಳು. ಕನಿಷ್ಟ ಒಬ್ಬ ಪೂರ್ವಜ ಸಾಮಾನ್ಯ ವಾಗಿರುವನು.ಅವರು ಚಿಕ್ಕ ದೊಡ್ಡಪ್ಪನ ಮಕ್ಕಳಾಗಿರುವರು.ಅವರಿಗೆ ಮಕ್ಕಳಾದರೆ ಜೀನುಗಳು ಜೊತೆಜೊತೆಯಾಗಿ ಬರುವವು. ಅವು ನಮ್ಮ ತಾಯಿತಂದೆಯರಿಂದ ಪಡೆಯುವ ಅನುವಂಶಿಕವಾಗಿರುವ ಮಾಹಿತಿಯ ಪ್ಯಾಕೆಜುಗಳು. ಹುಟ್ಟುವಾಗಲೆ ದೋಷವಿರುವ ಮಗುವು ಜನಿಸುವ ಅಪಾಯ ಸ್ವಗೋತ್ರ ವಿವಾಹವಾದ ದಂಪತಿಗಳಲ್ಲಿ ಹೆಚ್ಚು .ಸಾಮಾನ್ಯವಾದ ದೋಷಪೂರಿತ ಜೀನುಗಳು ಮಗುವಿಗೆ ಎರಡು ಪಟ್ಟು ಜಾಸ್ತಿ ಬರುತ್ತವೆ. ಆದರೂ ಸ್ವಗೋತ್ರದಲ್ಲಿ ಮದುವೆಯಾದವರು ಆರೋಗ್ಯವಂತ ಮಕ್ಕಳನ್ನು ಪಡೆಯುವರು ಲಕ್ಷಣಗಳು ಸ್ವಗೋತ್ರ ವಿವಾಹದಿಂದ ಜನಿಸಿದ ಮಕ್ಕಳು ಗಣನೀಯ ಪ್ರಮಾಣದಲ್ಲಿ ಹೆಚ್ಚುಕಾಲ ಬದುಕುವುದಿಲ್ಲ. ಅಥವ ಆರು ತಿಂಗಳಲ್ಲಿಯೇ ಗಂಭೀರ ದೋಷದಿಂದ ಬಳಲುವರು. ಇವು ಬಹಳವಾಗಿ. ಜ್ಞಾನೇಂದ್ರಿಯಗಳ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ ಅನೇಕ ಸಲ ಮಗುವಿನ ಚರ್ಮವು ಗುಲಾಬಿ ಬಣ್ಣದ್ದಾಗಿರುವುದು ಮತ್ತು ಕೂದಲು ಬಿಳಿಯಾಗಿರುವುದು ಮತ್ತು. ಅನೆಕ ಸಲ ಮಗುವಿನ ಕಣ್ಣುಗಳಲ್ಲಿ ಅಗತ್ಯವಾದ ಪಿಗ್ಮೆಂಟುಗಳ ಕೊರತೆ ಯಾಗುವುದು.. ಈ ಸ್ಥಿತಿಯನ್ನು ಅಲ್ಬಿನಿಸಂ ಎನ್ನವರು. ಸ್ವಗಗೋತ್ರ ಮದುವೆಯ ಫಲವಾಗಿ ಕಣ್ಣಿನ ಸ್ಥಿತಿಯು ಬದಲಾವಣೆಯಾಗವುದು. ಮೆಳ್ಳ ಗಣ್ಣು,, ಇರುಳುಗಣ್ಣು, ರೆಟಿನಸ್ ಪಿಗ್ಮಂಟೊಸ, ಫೊಟೊಫೋಬಿಯಾ, ದೃಷ್ಟಿ ಕಡಿಮೆಯಾದ ಅಕ್ಯುಟಿ ಆಗ್ಮಮಸ್ ಮತ್ತು ವಕ್ರೀಭವನ ದೋಷಗಳು ಬರುವವು. ವಂಶ ಪಾರ್ಯಂಪರೆಯ ದುರ್ಬಲತೆ ಮತ್ತು ರೆಟಿನ ಆಟ್ರೊಫಿ ಹೆಚ್ಚುತ್ತಾ ಹೋಗಿ ದೃಷ್ಟಿಯು ಕಡಿಮೆ ಯಾಗುವುದು. ಟನಲ್ ದೃಷ್ಟಿ ಮತ್ತು ಇರುಳು ಗಣ್ಣುಗಳಲ್ಲಿ ಕೊನೆ ಗೊಳ್ಳುವುದು. ಇದು ಮಕ್ಕಳಲ್ಲಿ ಮತ್ತು ಎಳೆಯ ಯುವಕರಲ್ಲಿ ಸಾಮಾನ್ಯ.ಅಲ್ಬಿನಿಸಂ: ಇದು ವಂಶಪಾರಂಪರೆಯಾಗಿ ಬರುವುದು.ಕೂದಲಲ್ಲಿ, ಚರ್ಮದಲ್ಲಿ , ಕಣ್ಣಿನಲ್ಲಿ ಪಿಗಮೆಂಟುಗಳ ಕೊರತೆ ಇರುವುದು. ಅಕ್ಯುಲರ್ ಅಲ್ಬಿನಿಸಂನಲ್ಲಿ ಕಣ್ಣುಗಳು ಮಾತ್ರ ತೊಂದರೆಗೆ ಈಡಾಗುವವು.ಇದರ ಜತೆ ಫೊಟೊ ಫೋಬಿಯಾ, ಕಡಿಮೆಯಾದ ದೃಷ್ಟಿ, ಅಕ್ಯುಟಿ ನಿಷ್ಟಾಗಮಸ್ ಮತ್ತು ವಕ್ರೀಭವನದ ದೋಷಗಳೂ ಇರುವವು. ಅನಿರಿಡಿಯಾ: ಈ ಸ್ಥಿತಿಯಲ್ಲಿ ಐರಿಸ್ ಇರುವುದಿಲ್ಲ.ಐರಿಸ್ ನ ಕೊಲೊಬೊಮ/ ಕೊರೈಡ್: ಇದು ಎರಡರಲ್ಲಿ ಒಂದು ರಚನೆ ಇರುವುದಿಲ್ಲ.ಬೆಳವಣಿಗೆಯ ಅಸಹಜತೆಯಿಂದ ಇದು ಉಂಟಾಗುವುದು. ತಡೆ ಹತ್ತಿರದ ರಕ್ತ ಸಂಬಂಧಿಗಳನ್ನು ಮದುವೆಯಾಗುವುದು ಒಳ್ಳೆಯದಲ್ಲ.ಈ ರೀತಿ ಮದುವೆಯಾದ ದಂಪತಿಗಳು ಮಗುವನ್ನು ಎದುರು ನೊಡುತ್ತಿದ್ದರೆ ಅಥವ ಮಗುವನ್ನು ಪಡೆಯಲು ಯೋಜಿಸಿದ್ದರೆ ಅವರು ಜೆನೆಟಿಕ್ ಆಪ್ತ ಸಲಹೆ ಪಡೆಯುವುದು ಅವಶ್ಯ. ಭ್ರೂಣಕ್ಕೆ ಇರುವ ಅಪಾಯದ ಅರಿವು ಮಾಡಿಕೊಂಡು ಪರೀಕ್ಷೆಗೆ ಇರುವ ಅವಕಾಶಗಳನ್ನು ಅರಿತಿರಬೇಕು.
ಕಣ್ಣಿನ ಮಸೂರವು ಬೇರೆ ಬೇರೆ ದೂರದಲ್ಲಿರುವ ವಸ್ತುಗಳ ಮೆಲೆ ದೃಷ್ಟಿ ಕೇಂದ್ರಿಕರಿಸಲು ಸಹಾಯ ಮಾಡುವುದು.ಕಾಲಾನುಕ್ರಮದಲ್ಲಿ ಅದರ ಪಾರದರ್ಶಕತೆಯು ಕಡಿಮೆಯಾಗಿ ಅಪಾರದರ್ಶಕವಾಗುವುದು.ಈ ರೀತಿ ಮಸೂರದ ಮೇಲೆ ಮಸುಕು ಕವಿಯುವುದನ್ನು (ಕ್ಯಾಟರಾಕ್ಟ) ಪೊರೆ ಬರುವುದು ಎನ್ನವರು. ಬೇಳಕು ರೆಟಿನಾವನ್ನು ತಲುಪುವುದಿಲ್ಲ. ದೃಷ್ಟಿಯುಕ್ರಮೇಣ ಮಸುಕಾಗುವುದು.ಕೊನೆಗೆ ಕುರುಡುತನ ಬರಬಹುದು. ಬಹಳ ಜನರಿಗೆ ಮಬ್ಬಾದ ಪ್ರತಿ ಬಿಂಬ ಮತ್ತು ಓರೆಕೋರೆಯಾದ ದೃಷ್ಟಿ ಇರುವುದು.
ಕ್ಯಾಟರಾಕ್ಟ ಸಧಾರಣವಾಗಿ 55 ವರ್ಷವಾದವರಿಗೆ ಬರುವುದು.ಆದರೆ ಚಿಕ್ಕವರೂ ಅದರಂದ ಹೊರತೇನೇಲ್ಲ. ಪ್ರಪಂಚದಲ್ಲೆಲ್ಲ ಇದು ಕುರುಡುತನದ ಪ್ರಮುಖ ಕಾರಣವಾಗಿದೆ. ಪ್ರತಿ 10 ಜನರಲ್ಲಿ 4 ಜನರಿಗೆ 60 ವರ್ಷವಾದ ಮೇಲೆ ಕ್ಯಾಟರಾಕ್ಟ ಬೆಳೆಯುತ್ತದೆ. ಇದಕ್ಕೆ ಇರುವ ಒಂದೆ ಚಿಕಿತ್ಸೆ ಎಂದರೆ ಶಸ್ತ್ರ ಚಿಕಿತ್ಸೆ. ಅದು ಸರಳ ಮತ್ತು ಸುರಕ್ಷಿತ ಪ್ರಕ್ರಿಯೆಯಾಗಿದೆ. ಅದರ ಬರುವುದಕ್ಕೆ ಸರಿಯಾದ ಕಾರಣ ತಿಳಿದಿಲ್ಲ. ಬೇರೆ ಬೇರೆ ವಿಧದ ಕ್ಯಾಟರಾಕ್ಟಗಳಿವೆ. ಬಹಳ ಸಾಮಾನ್ಯವಾಗಿರುವುದು ಸೆನೈಲ್ ಕ್ಯಾಟರಾಕ್ಟ. ಅದು 50 ವರ್ಷದ ಮೇಲಿನವರಿಗೆ ಬೆಳೆಯುವುದು. ಇದಕ್ಕೆ ಕಾರಣಗಳು ರೋಗ,ವಂಶವಾಹಿನಿ,ವಯಸ್ಸಾಗುವುದುಅಥವ ಕಣ್ಣಿನ ಗಾಯ. ಸಿಗರೇಟಿನ ಹೊಗೆ,ಅಲ್ಟ್ರಾವೈಲೆಟ್ ವಿಕಿರಣಗಳು (ಸೂರ್ಯನ ಬೆಳಕೂ ಸೇರಿದಂತೆ) , ಕೆಲವು ಔಷಧಗಳು ಕ್ಯಾಟರಾಕ್ಟ. ಬೆಳೆಯಲು ಪೂರಕವಾಗಿವೆ.ಮುಕ್ತ ರಾಡಿಕಲ್ಲುಗಳು ಮತ್ತು ಆಕ್ಸಿಡೈಜಿಂಗ್ ಏಜೆಂಟುಗಳೂ ವಯಸ್ಸಾದ ಮೆಲೆ ಬರುವ ಬರುವ ಕ್ಯಾಟರಾಕ್ಟಗಳಿಗೆ ಸಂಬಂಧಿಸಿವೆ ಎನ್ನಲಾಗಿದೆ
ಗ್ಲುಕೋಮ ರೋಗವು ಸಾವಧಾನವಾಗಿ ಕುರುಡುತನವನ್ನು ತರುತ್ತದೆ ಆಪ್ಟಿಕ್ ನರವನ್ನು ತೀವ್ರವಾಗಿ ಮತ್ತು ಕ್ರಮವಾಗಿ ಹಾನಿಮಾಡುವ ಮೂಲಕ ದೃಷ್ಟಿಯನ್ನು ನಾಶ ಮಾಡುತ್ತದೆ. ಯಾವುದೆ ವಸ್ತುವನ್ನು ನೋಡಿದಾಗಅದರ ಪ್ರತಿಬಿಂಬವು ರೆಟಿನಾದಿಂದ ಮೆದುಳಿಗೆ ಆಪ್ಟಿಕ್ ನರದ ಮೂಲಕ ಸಾಗುವುದು. ಗ್ಲುಕೊಮಾದಲ್ಲಿ ಇಂಟ್ರಾಕ್ಯುಲರ್ ಒತ್ತಡವು ತೊಂದರಗೆ ಈಡಾದ ಕಣ್ಣು ತಡೆದು ಕೊಳ್ಳಲಾರದಷ್ಟು ಆಗುವುದು. ಇದರಿಂದ ಆಪ್ಟಿಕ್ ನರವು ಹಾನಿಗೆ ಒಳಗಾಗುವುದು.ಮತ್ತು ಅದು ದೃಷ್ಟಿಹಾನಿ ಉಂಟುಮಾಡುವುದು. ಗ್ಲುಕೊಮಾ ಆದ ವ್ಯಕ್ತಿಯು ಒಂದು ವಸ್ತುವನ್ನು ನೋಡಿದಾಗ ಅವನಿಗೆ ಮಧ್ಯಬಾಗವು ಮಾತ್ರ ಚೆನ್ನಾಗಿ ಕಾಣುವುದು. ಕಾಲಾನುಕ್ರಮದಲ್ಲಿ ಅದೂ ಕಾಣುದಿಲ್ಲ. ಹಾಗಾಗಿ ಜನರು ಇದನ್ನು ಗಮನಿಸುವುದು ವಿರಳ. ಸಾಕಷ್ಟು ಹಾನಿಯಾದ ಮೇಲೆಯೇ ಗೊತ್ತಾಗುವುದು. ಇದು ಯಾವದೆ ಲಕ್ಷಣಗಳನ್ನೂ ತೋರಿಸದೆ ಇರುವುದರಿಂದ ಇದನ್ನು” ನುಸುಳುವ ದೃಷ್ಟಿಚೋರ “ ಎನ್ನುವರು. ಜಗತ್ತಿನಾದ್ಯಂತ ಆರು ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಇದು ಜಗತ್ತಿನಲ್ಲಿ ಕುರುಡುತನಕ್ಕೆ ಅತಿ ದೊಡ್ಡ ಎರಡನೆ ಕಾರಣ. ಭಾರತದಲ್ಲಿ ಆರು ಕೋಟಿ ಜನರು ಗ್ಲುಕೊಮಾದಿಂದ ನರಳುತ್ತಿದ್ದಾರೆ ಅವರಲ್ಲಿ 1.5l ಲಕ್ಷ ಜನ ಕುರುಡರಾಗಿದ್ದಾರೆ. ಗ್ಲುಕೊಮಾ ಎರಡೂ ಕಣ್ಣಗಳನ್ನು ಬಾಧಿಸುವುದು. ಇದು ನಲವತ್ತು ವರ್ಷ ಮೀರಿದ ವಯಸ್ಕರಿಗೆ ಹೆಚ್ಚಾಗಿ ಬಂದರೂ ನವಜಾತ ಶಿಶುವಿನಲ್ಲೂ ಇರಬಹುದು.
ವಿಧಗಳು ಮುಖ್ಯವಾಗಿ ಎರಡು ವಿಧದ ಗ್ಲುಕೊಮಾ ಇವೆ : ಪ್ರೈಮರಿ ತೆರೆದ ಕೋನದ ಮತ್ತು ಕೋನ ಮುಚ್ಚಿದ ಗ್ಲುಕೊಮ 1.ಪ್ರೈಮರಿ ತೆರೆದ ಕೋನದ ಗ್ಲುಕೊಮಾ . ಪ್ರೈಮರಿ ತೆರೆದ ಕೋನದ ಗ್ಲುಕೊಮಾದಲ್ಲಿ ಕಣ್ಣಿನ ಡ್ರೈನೇಜು ಕಾಲವೆಯು ಕ್ರಮವಾಗಿ ಮುಚ್ಚಿಕೊಳ್ಳುತ್ತಾ ಹೋಗುವುದು. ಡ್ರೈನೇಜು ವ್ವಸ್ಥೆಯು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಕಣ್ಣಿನ ಒಳ ಒತ್ತಡವು ಹೆಚ್ಚವುದು ( ಆದರೂ . ಡ್ರೈನೇಜು ಕಾಲುವೆಯ ಪ್ರವೇಶ ಭಾಗವು ಕೆಲಸಮಾಡುತ್ತದೆ ಮುಚ್ಚಿರುವುದಿಲ್ಲ. ಮುಚ್ಚುವಿಕೆಯ ಒಳಭಾಗದಲ್ಲಿ ಆಗುವುದು. ಅದರಿಂದ ಫ್ಲೂಯಿಡ್ ಹೊರ ಬರುವುದು ಸಾಧ್ಯವಾಗುವುದಿಲ್ಲ.ಹೀಗಾಗಿ ಒಳಭಾಗದ ಒತ್ತಡವು ಏರುತ್ತಾ ಹೋಗುವುದು.ಪ್ರೈಮರಿ ತೆರೆದ ಕೋನದ ಗ್ಲುಕೊಮಾಕ್ಕೆ ಸಂಬಂಧಿಸಿದ ಯಾವುದೆ ನಿರ್ಧಿಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸುವುದು ಗ್ಲುಕೊಮಾವನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಸಹಕಾರಿ. ಆಗ ಇದನ್ನು ಔಷಧಿಯಿಂದ ನಿಯಂತ್ರಣದಲ್ಲಿ ಇಡಬಹುದು.2 ಕೋನ ಮುಚ್ಚಿದ ಲುಕೊಮಾ ಕೋನ ಮುಚ್ಚಿದ ಗ್ಲುಕೊಮಾವು ಬಹು ತೀವ್ರವಾದ ರೀತಿಯ ಗ್ಲುಕೊಮಾ ಆಗಿದೆ ಈ ಪರಿಸ್ಥಿತಿಯಲ್ಲಿ ಕಣ್ಣಿನ ಒತ್ತಡವು ತೀವ್ರವಾಗಿ ಏರುವುದು. ಐರಿಸ್ ಮತ್ತು ಕಾರ್ನಿಯಾಗಳ ಅಗಲ ಕಡಿಮೆ ಆಗುವುದು. ಪರಿಣಾಮವಾಗಿ ಡ್ರೈನೇಜು ಕಾಲುವೆಯು ಕಿರಿದಾಗುತ್ತಾ ಹೋಗುವುದು. ಲಕ್ಷಣಗಳು ವಯಸ್ಕರು ರೋಗಿಗಳು ಅಂಚಿನಲ್ಲಿನ ನೋಟ ಕಾಣುವುದಿಲ್ಲ ಎಂದು ದೂರುವರು. ರೋಗಿಗಳು ದೀಪದ ಸುತ್ತ ಪ್ರಭಾವಳಿ ಅಥವ ಕಾಮನ ಬಿಲ್ಲು ಅಥವ ಪ್ರಖರ ಬೆಳಕು ಕಾಣುವರು ದೃಷ್ಟಿಯು ಮಬ್ಬಾಗಿರುವುದು.ಕಣ್ಣು ಕೆಂಪಾಗುವುದು ಮತ್ತು ನೋವು . ನೋಟದ ಕ್ಷೇತ್ರವು ಕಿರಿದಾಗಿ ಅವರು ಸ್ವತಂತ್ರವಾಗಿ ಚಲಿಸಲು ಆಗುವುದಿಲ್ಲ ಕಣ್ಣಿಗೆ ಗಾಯವಾಗಿ ನೋವು ಮತ್ತು ದೃಷ್ಟಿ ನಾಶವಾದರೆ ಅನುಷಂಗಿಕಗ್ಲೂಕೊಮಾ ಅಂದುಶಂಕಿಸಬಹುದ
ಮಕ್ಕಳು ಶುಗಳಲ್ಲಿ ಮತ್ತು ಮಕ್ಕಳಲ್ಲಿನ ಲಕ್ಷಣಗಳು- ಕಣ್ಣು ಕೆಂಪಾಗುವುದು, ನೀರು ಬರುವುದು ಅಗಲವಾಗುವುದು, ಕಾರ್ನಿಯ ಮಸಕಾಗುವುದು ಮತ್ತು ಫೋಟೋ ಪೋಬಿಯಾ. ಮಕ್ಕಳ ಲಕ್ಷಣಗಳು,ಕಣ್ಣುಕೆಂಪಾಗುವುದು, ನೀರು ಬರುವುದು, ಕಣ್ಣು ಅಗಲವಾಗುವವು ಕಾರ್ನಿಯಲ್ ಮಸುಕಾಗುವುದು ಮತ್ತು ಫೋಟೋ ಫೋಬಿಯಾ.
ಕಣ್ಣಿನ ಗಾಯವು ಕುರುಡುತನಕ್ಕೆ ಪ್ರಮುಖವಾದ ಕಾರಣವಾಗಿದೆ. ಹೆಚ್ಚಿನ ಗಾಯದ ಪ್ರಕರಣಗಳಲ್ಲಿ ಜನರು ಸಾಕಷ್ಟು ವೈದ್ಯಕೀಯ ಸೌಲಭ್ಯ ಇಲ್ಲದೆ, ತರಬೇತಿ ಪಡೆದ ಚಿಕಿತ್ಸಕರಿಲ್ಲದೆ ಕುರುಡರಾಗುವುರು. ಕಣ್ಣಿನ ಗಾಯವನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ತಕ್ಷಣ ಚಿಕಿತ್ಸೆ ಪಡೆಯಬೇಕು. ತಕ್ಷಣದ ಪ್ರಥಮ ಚಿಕಿತ್ಸೆ ನೀಡಿ ಮತ್ತು ಪರಿಣಿತರಲ್ಲಿಗೆ ಕಳುಹಿಸುವುದು ದೃಷ್ಟಿಯನ್ನು ಪನಃ ಪಡೆಯಲು ಅತಿ ಅವಶ್ಯ. ಕಾರಣಗಳು ಮನೆಯಲ್ಲಾಗುವ ಗಾಯಗಳು
ಕೈಗಾರಿಕೆ
ಅಫಘಾತ
ರಸಾಯನಿಕ ಸುಟ್ಟ ಗಾಯಗಳು
ಕಣ್ಣಿಗೆ ತೊಂದರೆ ನೀಡುವ ಅಭ್ಯಾಸಗಳು
ಕಣ್ಣಿನ ಗಾಯದ ನಿರ್ವಹಣೆಯಲ್ಲಿ ನೆನಪಿಡಬೇಕಾದ ಮುಖ್ಯ ಅಂಶಗಳು
ಈ ಕೆಳಗೆ ಕಣ್ಣಿನ ಗಾಯವಾದರೆ ಏನು ಮಾಡಬೇಕೆಂಬುದಕ್ಕೆ ಕೆಲವು ಸೂಚನೆಗಳಿವೆ
ಕೊನೆಯ ಮಾರ್ಪಾಟು : 10/15/2019