ರಸಾಯನಿಕದದಿಂದ ಸುಟ್ಟಾಗ,ಕಣ್ಣು ರಸಾಯನಿಕದ ಜತೆ ಸಂಪರ್ಕಕ್ಕೆ ಬಂದ -ಎಲ್ಲ ಪ್ರಕರಣಗಳಲ್ಲಿ
- ತಕ್ಷಣ ಕಣ್ಣನ್ನು ನೀರಿನಿಂದ ಅಥವ ಕುಡಿಯಬಹುದಾದ ಪಾನಿಯದಿಂದ ಫ್ಲಷ್ ಮಾಡಿ.
- ನೀರಿನ ಪ್ರವಾಹದ ಕೆಳಗೆ ಇಲ್ಲವೆ ತುಂತುರಿನ ಕೆಳಗೆ ಹಿಡಿಯಿರಿ.
- ಕಣ್ಣನ್ನು ಆದಷ್ಟು ಅಗಲವಾಗಿಸಿ ಹಿಡಿಯಿರಿ
- ಕನಿಷ್ಟ 1 5 ನಿಮಿಷ ಫ್ಲಷ್ ಮಾಡಿ.
- ಐ ಕಪ್ಪನ್ನು ಉಪಯೋಗಿಸಬೇಡಿ
- ಕಣ್ಣಿನಲ್ಲಿ ಕಾಂಟ್ಯಾಕ್ಟ ಲೆನ್ಸ ಇದ್ದರೆ ತಕ್ಷಣ ಅದರ ಮೇಲೆ ಫ್ಲಷ್ ಮಾಡಿ . ಇದರಿಂದ ಅನ್ಯ ವಸ್ತುವು ಹೊರಬರಬಹುದು.
- ಮಸೂರದ ಮೇಲಿನ ಅನ್ಯ ವಸ್ತುವು ನೀರಿನಿಂದ ತೊಳೆದಾಗ ಅದು ಅಲ್ಲಿಂದ ಸರಿಯಬಹುದು..
- ಕಣ್ಣಿಗೆ ಪಟ್ಟಿ ಕಟ್ಟ ಬೇಡಿ
- ತೊಳೆದ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ..
ಕಣ್ಣಿನಲ್ಲಿ ಕಣಗಳು
- ಕಣ್ಣು ಉಜ್ಜ ಬೇಡಿ.
- ಕಣ್ಣಿರಿನಿಂದಲೆ ಅನ್ಯವಸ್ತುವ ಹೊರಬರುವಂತೆ ಪ್ರಯತ್ನಿಸಿ ಅಥವ ಐ ವಾಷ್ ಉಪಯೋಗಿಸಿ.
- ಮೇಲ ರೆಪ್ಪೆಯನ್ನು ಮೇಲಕ್ಕೆಎತ್ತಿ ಕೆಳ ರೆಪ್ಪೆಯನ್ನು ಕೆಳಕ್ಕೇ ಸರಿಸಿ ಅನ್ಯ ವಸ್ತುವನ್ನು ಹೊರತೆರೆಯಲಯಪ್ರಯತ್ನಿಸಿ. .
- ಅನ್ಯ ವಸ್ತುವು ಹೊರಬರದಿದ್ದರೆ ಕಣ್ಣನ್ನು ಹಾಗೆಯೇ ಮುಚ್ಚಿರಿ , ಹಗುರವಾಗಿ ಬಟ್ಟೆ ಕಟ್ಟಿ , ವೈದ್ಯರಲ್ಲಿಗೆ ತಕ್ಷಣ.
- ಕಣ್ಣಿಗೆ ಗಾಳಿ ಊದಿ.
- ಒದ್ದೆ ಬಟ್ಟೆಯೀದ ಒತ್ತಿ. ಪುಡಿಮಾಡಿದ ಬರ್ಫವನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಹಣೆಯ ಮೇಲಿಡಿ. ಗಾಯವಾದ ಕಣ್ಣಿನ ಮೇಲೆ ಅದು ಹಗುರವಾಗಿ ಕೂರಬೇಕು,.
- ನೋವಿದ್ದರೆ, ದೃಷ್ಟಿ ಪಾಟ ಕಡಿಮೆಯಾದರೆ,ಅಥವ ಬಣ್ಣಗೆಟ್ಟರೆ ( ಕಣ್ಣು ಕಪ್ಪಾದರೆ) ತುರ್ತು ವೈದ್ಯಕೀಯ ಆರೈಕೆ ಪಡೆಯಿರಿ. ಈ ಯಾವುದೆ ಲಕ್ಷಣವು ಕಣ್ಣಿನ ಒಳ ಭಾಗದಲ್ಲಿನ ಹಾನಿಯನ್ನು ಸೂಚಿಸಬಹುದು
ಕಣ್ಣು ಮತ್ತು ರೆಪ್ಪೆ ಗೆ ತೂತಾಗುವುದು.
- ಕಣ್ಣನ್ನು ನೀರು ಅಥವ ಯಾವುದೆ ದ್ರವದಿಂದ ತೊಳೆಯ ಬೇಡಿ.
- ಕಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಸ್ತುವನ್ನು ತೆಗೆಯಲು ಪ್ರಯತ್ನಿಸಬೇಡಿ
- ಕಣ್ಣನ್ನು ಗಟ್ಟಿಯಾದ ಕಾಗದದಿಂದ ಒತ್ತಡ ಬೀಳದಂತೆ ಮುಚ್ಚಿ.
- ವೈದ್ಯರನ್ನು ತಕ್ಷಣ ನೋಡಿ.
ಸಾಮಾನ್ಯ ಎಚ್ಚರಿಕೆಗಳು
- ಕಣ್ಣಿಗೆ ಇಜ್ಜಲ ಚೂರು, ಕಟ್ಟಿಗೆ, ಮರಳು ಇತ್ಯಾದಿಗಳು ಬಿದ್ದಾಗ ಕಣ್ಣನ್ನು ಉಜ್ಜಬೇಡಿ
- ಕಣ್ಣನ್ನು ಅಗಲವಾಗಿ ತೆಗೆದು ಶುದ್ಧವಾದ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.
- ಚೂಪಾದ ವಸ್ತುಗಳೀಂದ –ಗರಿಕೆಯ ಎಸಳು. ಪೇಪರ್ ಮತ್ತು ಪೆನ್ಸಿಲ್ ನ ತುದಿಯಿಂದ, ಸುಟ್ಟ ಗಾಯ ಬಿಸಿ ನೀರು ಎಣ್ಣೆ ,ಉಗಿ , ಬಿಸಿಬೂದಿ ಪಟಾಕಿ, ಕಾಷ್ಟಿಕ್ ಸೋಡಾ, ಸುಣ್ಣ , ಆಮ್ಲ ಮತ್ತು ಇತರ ರಸಾಯನಿಕಗಳಿಂದ ಆಗಿದ್ದರೆ ಕಣ್ಣನ್ನು ನೀರಿನಿಂದ ತೊಳೆಯಿರಿ.
- ವೈದ್ಯಕೀಯ ಸಲಹೆಯನ್ನು ಅರ್ಹ ನೇತ್ರ ವೈದ್ಯರಿಂದ ತಕ್ಷಣ ಪಡೆಯಿರಿ.
- ಕಣಿಗೆ ಮೂಕ ಪೆಟ್ಟು ಬಿದ್ದಾಗ , ರೋಗಿಯನ್ನು ಆರಾಮಾಗಿ ನೇರವಾಗಿ ಮಲಗಿಸಿ . ಕಣ್ಣಿಗೆ ಶುದ್ಧ ಬಟ್ಟೆಯಿಂದ ಪಟ್ಟಿಕಟ್ಟಿ
- ಕಣ್ಣಿನ ವೈದ್ಯರ ಸಲಹೆಯನ್ನು ಆದಷ್ಟುಬೇಗ. ಪಡೆಯಿರಿ.
ತಡೆಗಟ್ಟಲು ಕ್ರಮಗಳು
- ಅಪಾಯಕಾರಿ ಕ್ರೀಡೆಯಲ್ಲಿ ಅಥವ ಕೆಲಸದಲ್ಲಿ ತೊಡಗಿದಾಗ ಮನೆಯಲ್ಲಿ , ಪ್ರವಾಸದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಕಣ್ಣಿನ ರಕ್ಷಣೆಬಗ್ಗೆ ಗಮನಿರಲಿ.
- ಮನೆಯಲ್ಲಿ, ಕೆಲಸದ ಜಾಗದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲಿ. ನಿಮ್ಮ ಪ್ರವಾಸದ ಚೀಲದಲ್ಲಿ ಕಣ್ಣಿನ ಕವಚ ಮತ್ತು ಗಾಯವಾದಾಗ ಅಗತ್ಯವಾದ ಐ ವಾಷ್ ಇರಲಿ.
- ಕಣ್ಣಿನ ಗಾಯವನ್ನು ನಿರಪಾಯಕಾರಿ ಎಂದು ಭಾವಿಸಬೇಡಿ. ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಕಣ್ಣಿನ ಆರೋಗ್ಯದ ಉತ್ತಮ ಅಭ್ಯಾಸಗಳು ಮತ್ತು ಪ್ರಥಮ ಚಿಕಿತ್ಸೆ.
- ಕಣ್ಣನ್ನು ಮತ್ತು ಕಣ್ಣಿನ ಸುತ್ತಲಿನ ಚರ್ಮವನ್ನು ಶುದ್ಧ ನೀರು ಮತ್ತು ಸೋಪಿನಿಂದ ತೊಳೆದು ಶುಚಿಮಾಡಿ. ಮಲಗುವ ಮುನ್ನ ಕಣ್ಣುಗಳನ್ನು ತೊಳೆಯುವುದು ಅತಿ ಮುಖ್ಯ. ದಿನವೆಲ್ಲ ಸಂಗ್ರಹವಾದ ಧೂಳು ಮತ್ತು ಕಸವನ್ನು ಅದರಿಂದ ತೆಗೆದುಹಾಕಬಹುದು.
- ಬೇರೆಯವರ ಟವಲ್ , ಕರವಸ್ತ್ರವನ್ನು ಎಂದೂ ಉಪಯೋಗಿಸ ಬೇಡಿ. ಹಳೆಯ ಬಟ್ಟೆಯಿಂದ ಕಣ್ಣು ಒರೆಸಬೇಡಿ ಇದರಿಂದ ಸೋಂಕು ಬರಬಹುದು..
- ಕಾಡಿಗೆ ಅಥವ ಸುರ್ಮಾ ಅಥವ ಇನ್ನು ಯಾವುದೋ ವಸ್ತುವನ್ನು ಕಣ್ಣಿಗೆ ಹಚ್ಚಬೇಡಿ. ಬಳಸಲೇ ಬೇಕಿದ್ದರೆ ಪ್ರತಿಯೊಬ್ಬರೂ ಪ್ರತ್ಯೇಕವಾದುದನ್ನು ಬಳಸಿ.
- ಧೂಳು, ಹೊಗೆ, ಮತ್ತು ಪ್ರಖರ ಬೆಳಕಿಗೆ ಕಣ್ಣು ಒಡ್ಡಬೇಡಿ
- ಬರಿ ಕಣ್ಣಿನಿಂದ ಸೂರ್ಯ ಗ್ರಹಣ ನೋಡಬೇಡಿ
- ನೊಣಗಳು ಸೋಂಕಿತ ಮನುಷ್ಯನಿಂದ ಅರೋಗ್ಯವಂತನಿಗೆ ರೋಗಗಳನ್ನು ಹರಡುವವು.ನಿಮ್ಮ ಪರಿಸರ ಶುಚಿಯಾಗಿರಲಿ.
- ಡಯಾಬೆಟಿಸ್ ಮತ್ತು ರಕ್ತದ ಏರು ಒತ್ತಡವು ದೃಷ್ಟಿಗೆ ಹಾನಿ ಮಾಡಬಹುದು.ಅವು ನಿಯಂತ್ರಣದಲ್ಲಿ ಇರಲಿ.ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ.
- ಎಲ್ಲ ಟಾಕ್ಸಿಕ್ ಔಷಧಗಳು,ಪಾನೀಯಗಳು, ತಂಬಾಕು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಕಣ್ಣಿಗೆ ಹೆಚ್ಚು ಹಾನಿಕರ. ಅವನ್ನು ದೂರಮಾಡಿ..
- ಮಕ್ಕಳನ್ನು ಅಪಾಯಕಾರಿ ಆಟಗಳಾದ ಬಿಲ್ಲು ಬಾಣ, ಗಿಲ್ಲಿ ದಾಂಡು ಮತ್ತು ಚೂಪಾದ ಅಂಚಿರುವ ಆಟಿಕೆಗಳಿಂದ ದೂರವಿಡಿ. ವಯಸ್ಕರ ಮೆಲ್ವಿಚಾರಣೆ ಇಲ್ಲದೆ ಪಟಾಕಿ ಸುಡಲು ಮಕ್ಕಳನ್ನು ಬಿಡಬೇಡಿ
- ವೆಲ್ಡಿಂಗ್ ಮತ್ತು ಮರಗೆಲಸ ಮಾಡುವಾಗ ರಕ್ಷಣಾ ಕನ್ನಡಕ ಹಾಕಿಕೊಳ್ಳಿ.
- ಸ್ವಯಂ ವೈದ್ಯ ಬೇಡ. ರಸ್ತೆ ಬದಿ ಔಷಧಿ ಮಾರವುವರಿಂದ, ನಕಲಿವೈದ್ಯರಿಂದ ಚಕಿತ್ಸೆಬೇಡ.ಕಣ್ಣಿನ ಸಮಸ್ಯೆಇದ್ದರೆ ನೇತ್ರ ತಜ್ಞರನ್ನು ಭೇಟಿಯಾಗಿ.
- ಕನ್ನಡಕ ಹಾಕುತ್ತಿದ್ದರೆ ಅದರ ಗಾಜನ್ನು ಶುಚಿಯಾಗಿಡಿ.ಅದರಮೇಲೆ ಗೀರುಗಳು ಇರಬಾರದು. ಬೇರೆಯವರ ಕನ್ನಡಕವನ್ನು ಯಾವಾಗಲೂ ಉಪಯೋಗಿಸ ಬೇಡಿ. ಅದರಿಂದ ಸೋಂಕು ಬರಬಹುದು.
- ಮಕ್ಕಳು ಕಣ್ಣು ಮುಚ್ಚಾಲೆ ಆಟ ಅಡುವುದನ್ನು ನಿರುತ್ತೇಜಿಸಿ. ಒಬ್ಬರ ಕಣ್ಣು ಇನ್ನೊಬ್ಬರು ಮುಟ್ಟುವುದರಿಂದ ರೋಗ ಪ್ರಸಾರ ವಾಗುವುದು. .
- ಅಡುಗೆ ಮಾಡುವಾಗ ಸೋಡಾ ಉಪಯೋಗಿಸ ಬೇಡಿ ಅದು ವಿಟಮಿನ್ ಗಳನ್ನು ನಷ್ಟ ಮಾಡುವುದು.
ಓದುವ ಒಳ್ಳೆಯ ಅಭ್ಯಾಸಗಳು.
ಮುದ್ರಿತ ಪುಸ್ತಕವನ್ನು ಕಣ್ಣಿನಿಂದ ಒಂದೂವರೆ ಅಡಿ ದೂರದಲ್ಲಿ 45 ರಿಂದ 70 ಡಿಗ್ರಿ ಕೋನದಲ್ಲಿ ಇರುವಂತೆ ಹಿಡಿದು ಓದಬೇಕು..
- ಚಲಿಸುವ ಬಸ್ಸಿನಲ್ಲಿ, ರೈಲಿನಲ್ಲಿ ಓದಬೇಡಿ.ಮಲಗಿ ಮತ್ತು ಮಂದ ಬೆಳಕಿನಲ್ಲಿ ಓದಬಾರದು
- ಸಾಕಷ್ಟು ಬೆಳಕಿಲ್ಲದಾಗ ಚಿಕ್ಕ ಅಕ್ಷರಗಳನ್ನು ಓದಬೇಡಿ
- ಓದುವಾಗ ಅಥವ ಕಣ್ಣಿಗೆ ಒತ್ತಡ ತರುವ ಕೆಲಸ ಮಾಡುವಾಗ ಆಗಾಗ ಕಣ್ಣು ಮುಚ್ಚಿ, ಇಲ್ಲವೆ ದೂರದ ವಸ್ತುಗಳನ್ನು ನೋಡಿ ಕಣ್ಣಿಗೆ ಒಂದು ನಿಮಿಷ ವಿಶ್ರಾಂತಿ ಕೊಡಿ.
ಮೂಲ :ಕಣ್ಣಿನ ಆರೋಗ್ಯ ಸಮುದಾಯಕ್ಕೆ ಒಂದು ಕೈಪಿಡಿಅಂತರಾಷ್ಟ್ರೀಯ ಮುಂದುವರೆದ ಗ್ರಾಮೀಣ ಕಣ್ಣಿನ ಆರೈಕೆ ಕೇಂದ್ರ ಎಲ್. ವಿ. ಪ್ರಸಾದಸಂಸ್ಥೆ, ರಾಜೇಂದರ ನಗರ ಅಂಚೆ , ಹೈದರಾಬಾದು- 500030
ಕೊನೆಯ ಮಾರ್ಪಾಟು : 4/24/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.