অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೀಟನಾಶಕ ಔಷಧಿ ಸಿಂಪಡಣಾ ಕಾರ್ಯಾಚರಣೆ

ಕೀಟನಾಶಕ ಔಷಧಿ ಸಿಂಪಡಣಾ ಕಾರ್ಯಾಚರಣೆ

ಹಳ್ಳಿ ಪ್ರದೇಶಗಳಲ್ಲಿ ರೋಗವಾಹಕ ಸೊಳ್ಳೆಗಳನ್ನು ನಿಯಂತ್ರಿಸಲು ಕೀಟನಾಶಕ ಸಿಂಪಡಣಾ ಕಾರ್ಯಾಚರಣೆ ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಹಮ್ಮಿಕೊಳ್ಳಲಾಗಿದೆ (ಂಜuಟಣ ಅoಟಿಣಡಿoಟ) : ಪಟ್ಟಣದ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪಟ್ಟಣದ ಪ್ರದೇಶಗಳಲ್ಲಿ ಸೊಳ್ಳೆ ಮರಿಗಳ ನಿಯಂತ್ರಣ ಕಾರ್ಯಾಚರಣೆಯನ್ನು  ಹಮ್ಮಿಕೊಳ್ಳಲಾಗುವುದು

ಕೀಟನಾಶಕ ಸಿಂಪಡಣೆಯ ಉದ್ದೇಶ :

ರಕ್ತ ಸೇವನೆಯ ನಡುವೆ ಹಾಗೂ ರಕ್ತ ಸೇವನೆಯ ನಂತರ ಹೆಣ್ಣು ಸೊಳ್ಳೆಗಳು ಕೊಠಡಿಯ ಒಳಗೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಸೊಳ್ಳೆಗಳು ರಕ್ತ ಜೀರ್ಣವಾಗಿ ಮೊಟ್ಟೆಗಳನ್ನು ಇಡುವವರೆಗೂ ಕೋಣೆಯ ಗೋಡೆ ಅಥವಾ ಕತ್ತಲಿನ ಸ್ಥಳಗಳಲ್ಲಿ ಈ ರೀತಿ ವಿಶ್ರಾಂತಿ ಪಡಿಯುತ್ತವೆ. ಸಿಂಪಡಿಸಿದ ಕೀಟನಾಶಕ ಹೀಗೆ ಕುಳಿತ ಸೊಳ್ಳೆಗಳ ದೇಹವನ್ನು ಹೊಕ್ಕಿ ಅವನ್ನು ನಾಶ ಮಾಡುತ್ತವೆ. ರೋಗಿಯನ್ನು ಕಚ್ಚಿದ ಸೊಳ್ಳೆಗಳು ಮತ್ತೊಬ್ಬನಿಗೆ ರೋಗ ಹರಡಲು ಸುಮಾರು 10 ದಿನಗಳ ಕಾಲ ಬೇಕಾಗಿರುವುದರಿಂದ, ಕೀಟನಾಶಕದ ಪ್ರಭಾವಕ್ಕೆ ಒಳಪಟ್ಟಿರುವ ಸೊಳ್ಳೆಗಳ ಒಳಗೆ ಮಲೇರಿಯ ಜೀವಾಣುಗಳು ಬೆಳೆಯುವುದಕ್ಕೆ ಮೊದಲೇ ನಾಶವಾಗುವುವು. ಹೀಗಾಗಿ ಕೀಟನಾಶಕ ಸಿಂಪಡಣಾ ಕಾರ್ಯಾಚರಣೆಯಿಂದ ಮಲೇರಿಯ ರೋಗ ತಡೆಗಟ್ಟಲು ಸಾಧ್ಯವಾಗುವುದು.

ಈ ಕಾರ್ಯಾಚರಣೆಗೆ ಬಹಳಷ್ಟು ಹಣ ಖರ್ಚಾಗುವುದರಿಂದ, ಹೆಚ್ಚಿನ ಜವಾಬ್ದಾರಿ ವಹಿಸಿ ಕಾರ್ಯ ನಿರ್ವಹಿಸಬೇಕು.

 

ಸಿಂಪಡಣಾ ಕಾರ್ಯಾಚರಣೆಗೆ ಮೊದಲು ಮಾಡಬೇಕಾದ ತಯಾರಿ :

1.            ವರ್ಷದ ಮೊದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಲೇರಿಯ ಅಂಕಿ ಅಂಶಗಳನ್ನು ಪರಿಶೀಲಿಸಿ ಸೂಚ್ಯಾಂಕಗಳ ಮೂಲಕ ಕೀಟನಾಶಕ ಸಿಂಪಡಣೆಗೆ ಒಳಪಡುವ ಉಪಕೇಂದ್ರಗಳ ಪಟ್ಟಿ ತಯಾರಿಸಬೇಕು.

2.            ಸೂಚ್ಯಾಂಕದ ಮೂಲಕ ಎಲ್ಲಾ ಅತಿ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಬೇಕು.

3.            ಸೂಚ್ಯಾಂಕದ ಮೂಲಕ ಎ.ಪಿ.ಐ ಎರಡು ಮತ್ತು ಹೆಚ್ಚಿರುವ ಉಪಕೇಂದ್ರಗಳನ್ನು ಗುರುತಿಸಬೇಕು.

4.            ಪ್ರತಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಹೆಚ್ಚು ಎ.ಪಿ.ಐ ನಿಂದ ಕಡಿಮೆ ಎ.ಪಿ.ಐ ಇರುವ ಉಪಕೇಂದ್ರಗಳ ಪಟ್ಟಿಯನ್ನು ತಯಾರಿಸಬೇಕು.

5.            ಈ ಪಟ್ಟಿಯನ್ನು ಪ್ರತಿ ಕೀಟನಾಶಕಕ್ಕೆ ಅನುಗುಣವಾಗಿ ತಯಾರಿಸಬೇಕು.

6.            ಪ್ರತಿ ಕೀಟನಾಶಕಕ್ಕೆ ಒಳಪಡುವ ಉಪಕೇಂದ್ರಗಳ ಒಟ್ಟು ಜನಸಂಖ್ಯೆ ಗುರುತಿಸಿ, ಪ್ರತಿ ಸುತ್ತಿಗೆ ಬೇಕಾಗುವ ಕೀಟನಾಶಕದ ಪ್ರಮಾಣವನ್ನು ನಿಗಧಿಪಡಿಸಬೇಕು.

7.            ಕಳೆದ ಸುತ್ತಿನಲ್ಲಿ ಉಳಿದಿರುವ ಕೀಟನಾಶಕದ ಪ್ರಮಾಣವನ್ನು ತಿಳಿದು ಮುಂಬರುವ (ಇದೀಗಿನ) ವರ್ಷದಲ್ಲಿ ಬೇಕಾಗುವ ಪ್ರಮಾಣವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು.

8.            ತಮ್ಮ ಜಿಲ್ಲೆಗೆ ಪ್ರತಿ ಸುತ್ತಿಗೆ ಬೇಕಾಗುವ ಹಣವನ್ನು (ಪಿ.ಓ.ಎಲ್ ಮತ್ತು ಲೇಬರ್ ಚಾರ್ಜಸ್) ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು.

9.            ಸಿಂಪಡಣೆ ಕಾರ್ಯ ಆರಂಭಿಸುವ ಮೊದಲು ಕೀಟನಾಶಕವನ್ನು ಸುರಕ್ಷಿತವಾಗಿ ಹಳ್ಳಿಗಳಲ್ಲಿ ಇಡುವ ಸ್ಥಳಗಳನ್ನು ಗುರಿತಿಸಬೇಕು.

10.          ಸಿಂಪಡಣೆ ಉಪಕರಣಗಳು ಸರಿಯಾಗಿದೆಯೇ ಎಂದು ತಿಳಿದುಕೊಳ್ಳಬೇಕು. ಸರಿಯಿಲ್ಲದ್ದನ್ನು ಸರಿಪಡಿಸಬೇಕು. ಸರಿಪಡಿಸಲಾಗದಿದ್ದಲ್ಲಿ ಹೊಸ ಉಪಕರಣಗಳನ್ನು ಪಡೆಯುವ ವ್ಯವಸ್ಥೆ ಮಾಡಬೇಕು.

ಮೇಲೆ ಹೇಳಿರುವ ಕಾರ್ಯಗಳು ಜಿಲ್ಲಾ ಮಲೇರಿಯ ಅಧಿಕಾರಿಯವರ ಕೆಲಸವಾದರೂ ಇದಕ್ಕೆ ಬೇಕಾದ ಮಾಹಿತಿಗಳನ್ನು ಪ್ರಾಥಮಿಕ ಅರೋಗ್ಯ ಕೇಂದ್ರಗಳು ಒದಗಿಸುವಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಆರೋಗ್ಯಾಧಿಕಾರಿಗಳಿಗೆ ಸಹಾಯ ಮಾಡಬೇಕು.

ಕೊನೆಯ ಮಾರ್ಪಾಟು : 5/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate