ದೇಹ ದ್ರವಗಳಲ್ಲಿ ಬೈಲಿರೂಬಿನ್ನ ಸಾಂದ್ರತೆ ಹೆಚ್ಚಿ, ವ್ಯಕ್ತಿಯ ಚರ್ಮ, ಕಣ್ಣುಗುಡ್ಡೆ, ಶೇಷ¾ ಪದರಗಳು ಹಳದಿ ಮಿಶ್ರಿತ ವರ್ಣಕ್ಕೆ ತಿರುಗುವ ರೋಗವನ್ನು ನಾವು ಜಾಂಡೀಸ್ ಎಂದು ಗುರು ತಿಸುತೆೆ¤àವೆ. ವೈದ್ಯಕೀಯವಾಗಿ, ಪ್ಲಾಸ್ಮಾ ದ್ರವದಲ್ಲಿ ರುವ ಬೈಲಿರೂಬಿನ್ ಅಂಶ 3/ ಸಿಲೀಟರ್ಗಿತ ಹೆಚ್ಚಾದಾಗ ಅಂತಹ ವ್ಯಕ್ತಿ ಯಲ್ಲಿ ಜಾಂಡೀಸ್ ಇದೆ ಎಂದು ಹೇಳುತ್ತೇವೆ.
ಜಾಂಡೀಸ್ ಒಂದು ರೋಗವಲ್ಲ. ಅದೊಂದು ರೋಗ ಲಕ್ಷಣ ಮಾತ್ರ. ಹೆಚ್ಚಾಗಿ ರೋಗಿಯನ್ನು ವೈದ್ಯರ ಬಳಿಗೆ ಕರೆತರುವ ಮೂದಲೇ ಆತನ ಕುಟುಂಬಿಕರು ರೋಗವನ್ನು ಗುರುತಿಸಿರುತ್ತಾರೆ. ಈ ರೋಗ ಸ್ಥಿತಿಗೆ ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು, ಗಂಭೀರ ಕಾರಣಗಳು. ಇಂದು ಈ ಎಲ್ಲ ಕಾರಣಗಳನ್ನು ವಿಶ್ಲೇಷಿಸಿ, ವಿವರಿಸುವುದು ವೈದ್ಯಕೀಯ ವಿಜ್ಞಾನಕ್ಕೆ ಸಾಧ್ಯವಾಗಿದೆ.
ಪ್ರಾಚೀನ ಗ್ರೀಕರು ಈ ದೇಹ ಹಳದಿ ವರ್ಣಕ್ಕೆ ತಿರುಗುವ ರೋಗವನ್ನು ಗುರುತಿಸಿ ದ್ದರು. ಹಿಪೊ³ಕ್ರೆಟಸ್ ಸಹಿತ, ಅಂದಿನ ಎಲ್ಲ ವೈದ್ಯ ಮಹಾಶಯರೂ ಈ ತೊಂದರೆಗೆ, ಪಿತ್ತ ರಸದ ಪರಿಚಲನೆಗೆ ಪಿತ್ತಕೋಶದಲ್ಲಿ ಉಂಟಾಗಿ ರುವ ಅಡ್ಡಿಗಳು ಕಾರಣ ಎಂದು ತಿಳಿದಿದ್ದರು.
ಬೈಲಿರೂಬಿನ್ಗಳು ಪ್ರಾಯ ಸಂದು ನಾಶ ಹೊಂದಿದ ಕೆಂಪು ರಕ್ತಕಣಗಳಲ್ಲಿರುವ ಹಿಮೂಗ್ಲೋಬಿನ್ನಿಂದ ವಿಸರ್ಜಿತವಾಗ ಬೇಕಾಗಿರುವ ಅಂಶಗಳು. ತನ್ನ ಗುಣ ಪ್ರವೃತ್ತಿ ಯಲ್ಲಿ ಕರಗದ, ಜೋಡಿರಹಿತ ರಸಾಯನಿಕ ಅಂಶವಾಗಿರುವ ಬೈಲಿರೂಬಿನ್, ಆಲುºಮಿನ್ ಗಳ ಜೊತೆ ಪಿತ್ತಕೋಶವನ್ನು ಸೇರುತ್ತದೆ. ಪಿತ್ತಕೋಶದ ಜೀವಕೋಶಗಳಲ್ಲಿರುವ ಯುರಿಡೈನ್ ಡೈಫಾಸೆ–àಟ್&ಗುÉಕುರೋನಿಲ್ ಟ್ರಾನ್ಸ್ಫರೇಸ್ ಕಿಣÌವು ಈ ಕರಗದ, ಜೋಡಿ ರಹಿತವಾಗಿರುವ ಬೈಲಿರೂಬಿನ್ನ್ನು ಗುÉಕೊ ರಾನಿಕ್ ಆಮ್ಲದ ಜೊತೆೆ ಜೋಡಿಮಾಡುತ್ತದೆ. ಈ ಜೋಡಿ ಸಹಿತ ಬೈಲಿರೂಬಿನ್ ಮೂನೊಗುÉಕರೊನೈಡ್ ಹಾಗೂ ಬೈಲಿರೂಬಿನ್ ಮೂನೊಗುÉಕರೊನೈಡ್ ಹಾಗೂ ಬೈಲಿರೂಬಿನ್ ಡೈಗುÉಕರೊನೈಡ್ಗಳು ಈ ಪರಿವರ್ತನೆಯ ವೇಳೆ ಕರಗಬಲ್ಲ ಗುಣವನ್ನು ಪಡೆದಿರುತ್ತವೆ.
ಈ ಕರಗಬಲ್ಲ ಬೈಲಿರೂಬಿನ್ಪಿತ್ತರಸದ ಜೊತೆ ಸೇರಿ, ಕರುಳಿನಲ್ಲಿ ತಲುಪಿ, ಅಲ್ಲಿ ಯುರೋಬೈಲಿನೊಜೆನ್ ಆಗಿ ಪರಿವರ್ತಿತ ಗೊಳ್ಳುತ್ತದೆ ಮತ್ತು ಮೂತ್ರಪಿಂಡಗಳು ಇದನ್ನು ಹೀರಿಕೊಂಡು, ಮೂತ್ರದ ಜೊತೆ ದೇಹದಿಂದ ಹೊರಗೆ ವಿಸರ್ಜಿಸುತ್ತವೆ. ಇದು ಆರೋಗ್ಯವಂತ ಮನುಷ್ಯರಲ್ಲಿ ಬೈಲಿರೂಬಿನ್ ಉತ್ಪಾದನೆ&ವಿಸರ್ಜನೆಗಳ ಸ್ವರೂಪ.
ಬೈಲಿರೂಬಿನ್ ವಿಸರ್ಜನೆಗೆ ಅಡಚಣೆೆ ಆಗಿ ರುವ ಸ್ಥಿತಿಗಳನ್ನು 2 ವರ್ಗಗಳಲ್ಲಿ ವಿಂಗಡಿಸಿ, ವಿವರಿಸಬಹುದು. ಮೂದಲನೆಯದು "ವೈದ್ಯಕೀಯ' ಜಾಂಡೀಸ್. ಇಲ್ಲಿ ಬೈಲಿರೂಬಿನ್ ಉತ್ಪಾದನೆ ಹೆಚ್ಚಿ, ಅದರ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿ, ಕಾಮಾಲೆಯ ಲಕ್ಷಣಗಳು ಕಾಣಿಸಿ ಕೊಂಡಿರುತ್ತವೆ.
ಇನ್ನೊಂದು, ಶಸ್ತ್ರಕ್ರಿಯೆಯ ಅಗತ್ಯವಿರುವ ಜಾಂಡೀಸ್. ಪಿತ್ತರಸದ ಪರಿಚಲನೆಗೆ ಅಡ್ಡಿ ಉಂಟಾಗಿ ಜಾಂಡೀಸ್ ಲಕ್ಷಣಗಳು ಕಾಣಿಸಿ ಕೊಂಡಿರುವ ಈ ವರ್ಗದಲ್ಲಿ, ಶಸ್ತ್ರಕ್ರಿಯೆಗಳ ಮೂಲಕ ಪರಿಚಲನೆಯನ್ನು ಸುಗಮಗೊಳಿ ಸುವುದೇ ಚಿಕಿತ್ಸಾ ವಿಧಾನ. ಈ ರೀತಿಯ ಶಸ್ತ್ರಕ್ರಿಯೆ ಅಗತ್ಯವಿರುವ ಜಾಂಡೀಸ್ಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
ಪಿತ್ತರಸದ ಪರಿಚಲನೆಗೆ ಅಡ್ಡಿಗಳು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು.
ಅ) ಪಿತ್ತಕೋಶದಲ್ಲಿ
ಆ) ಪಿತ್ತಕೋಶದ ಗೋಡೆಯಲ್ಲಿ
ಇ) ಪಿತ್ತಕೋಶದ ಹೊರಗೆ
ಪಿತ್ತಕೋಶದಲ್ಲಿ ಸರ್ಜರಿ ಅಗತ್ಯವಿರುವ ಕಾಮಾಲೆ ರೋಗದ ಲಕ್ಷಣಗಳು ಈ ಕೆಳಗಿನಂತಿರುತ್ತವೆ.
ಗುಣವಾಗಬಲ್ಲ ಅಡ್ಡಿಗಳಿರುವಲ್ಲಿ
ಗುಣವಾಗದಿರುವ ಕ್ಯಾನ್ಸರ್ ತೊಂದರೆಗಳಿರುವವರಲ್ಲಿ
ಈ ಎಲ್ಲ ಶಸ್ತ್ರಕ್ರಿಯೆಗಳು ಬಹಳ ಸೂಕ್ಷ್ಮವಾಗಿದ್ದು, ಶಸ್ತ್ರಕ್ರಿಯೆಗೆ ಮುನ್ನ ಹಾಗೂ ಆ ಬಳಿಕ ಎಲ್ಲ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಶಸ್ತ್ರಕ್ರಿಯೆಗಳಲ್ಲಿ ಅಪಾಯದ ಅಂಶಗಳು ಈ ಕೆಳಗಿನಂತಿವೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ ಗಣೇಶ್ ಪೈ ಸಿ., ಪ್ರೊಫೆಸರ್ ಮತ್ತು ಮುಖ್ಯಸ್ಥರು, ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.
ಮೂಲ : ಆರೋಗ್ಯವನಿ .ಬ್ಲಾಗ್ಸ್ಪಾಟ್
ಕೊನೆಯ ಮಾರ್ಪಾಟು : 2/15/2020
ಮಗುವಿನ ಆರೋಗ್ಯದ ಸಮಸ್ಯೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ .
ಹೆಪಟೈಟಿಸ್ ಎ ವೈರಾಣುವಿನಿಂದಾಗಿ ಯಕೃತ್ತಿನಲ್ಲಿ ಕಾಣಿಸಿಕೊಳ...