অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಜೀವ್ ಆರೋಗ್ಯ ಭಾಗ್ಯ

ರಾಜೀವ್ ಆರೋಗ್ಯ ಭಾಗ್ಯ

ಕರ್ನಾಟಕ ರಾಜ್ಯ ಆರೋಗ್ಯ  ಇಲಾಖೆಯು ಎ ಪಿ ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆಯನ್ನು ನೀಡಲು  ರಾಜೀವ್ ಆರೋಗ್ಯ ಭಾಗ್ಯ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಒಳಗೊಳ್ಳುವ ಖಾಯಿಲೆಗಳ ವಿವರಗಳು

ಈ ಯೋಜನೆಯಡಿಯಲ್ಲಿ ೭ ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ(*) ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆ ೭ ಗಂಭೀರ ಖಾಯಿಲೆಗಳೆಂದರೆ

  • ಹೃದ್ರೋಗ
  • ನರರೋಗ
  • ಕ್ಯಾನ್ಸರ್
  • ನವಜಾತ ಶಿಶು & ಚಿಕ್ಕ ಮಕ್ಕಳ ಚಿಕಿತ್ಸೆ
  • ಅಪಘಾತ( ಮರ ಅಥವಾ ಮನೆ ಮೇಲಿಂದ ಬಿದ್ದು ಮೂಳೆ ಮುರಿತಗೊಂಡಾಗ)
  • ಸುಟ್ಟ ಗಾಯ
  • ಮೂತ್ರ ಪಿಂಡದ ಸಮಸ್ಯೆ( ಮೂತ್ರ ಪಿಂಡದ ಕಲ್ಲಿನ ಶಸ್ತ್ರ ಚಿಕಿತ್ಸೆ)

ಈ ೭ ಖಾಯಿಲೆಗಳಿಗೆ ರಾಜ್ಯದ  ಎಲ್ಲಾ ಜಿಲ್ಲಾ ಆಸ್ಪತ್ರೆಗಳು,ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀ ಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿ(*) ಚಿಕಿತ್ಸೆ ನೀಡಲಾಗುವುದು.

ಒಟ್ಟಾರೆಯಾಗಿ ೭ ಖಾಯಿಲೆಗಳ ೫೭೨ ವಿವಿದ ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.

ಅರ್ಹತೆ:- ಎ ಪಿ ಎಲ್ ಕಾರ್ಡು ಕಡ್ಡಾಯ

ಈ ಯೋಜನೆಯಲ್ಲಿ ಒಟ್ಟು ಚಿಕಿತ್ಸಾ ವೆಚ್ಚದ ಶೇಕಡಾ ೩೦%ರಷ್ಟನ್ನು ಮಾತ್ರ ರೋಗಿಗಳು ಭರಸಿಬೇಕು ಉಳಿದ ೭೦%ರಷ್ಟನ್ನು ಸರ್ಕಾರವೇ ಭರಿಸುತ್ತದೆ.

ಈ ಯೋಜನೆಯಲ್ಲಿ ೧ ಕುಟುಂಬದ ೫ ಸದಸ್ಯರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು.1 ವರ್ಷಕ್ಕೆ ಗರಿಷ್ಟ ೧.೫ ಲಕ್ಷದವರೆಗೆ ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ೫೦೦೦೦ ದವರೆಗೆ ಚಿಕಿತ್ಸೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ:- ೧೮೦೦೪೨೫೮೩೩೦ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವುದು ಹಾಗೂ ಸಮೀಪದ ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು

ಕೊನೆಯ ಮಾರ್ಪಾಟು : 5/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate