ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ
ಗುತ್ತಿಗೆದಾರರ ಸೂಚನೆಯಂತೆ ಅಪಾಯದ ಮ್ಯಾನ್ ಹೋಲ್ ಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡು ಮೃತಪಟ್ಟ ಸಫಾಯಿ ಕರ್ಮಚಾರಿ ಗಳ ಕುಟುಂಬದವರಿಗೆ ಕೆಳಕಂಡಂತೆ ಸವಲತ್ತುಗಳನ್ನು/ಪರಿಹಾರವನ್ನು ವಿತರಿಸಬೇಕಾಗಿರುತ್ತದೆ.
- ಸರ್ವೋಚ್ಚ ನ್ಯಾಯಾಲಯದ ದಿನಾಂಕ : 27-03-2014ರ ಆದೇಶದ ಪ್ರಕಾರ ಮೇಲ್ಕಂಡ ಪ್ರಕರಣಗಳಲ್ಲಿ ಮರಣ ಹೊಂದಿರುವಂತಹ ಸಫಾಯಿ ಕರ್ಮಚಾರಿ ಗಳ ಕುಟುಂಬಗಳಿಗೆ ರೂ.10.00 ಲಕ್ಷಗಳವರೆಗೂ ಪರಿಹಾರ ಮೊತ್ತವನ್ನು ನೀಡಬಹುದಾಗಿರುತ್ತದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ದ ಆದೇಶ ಸಂಖ್ಯೆ/ಸಆಇ10/ಎಂಡಬ್ಲ್ಯೂ/2012 ಬೆಂಗಳೂರು ದಿನಾಂಕ : 19-06-2012 ರನ್ವಯ ರೂ.5.00 ಲಕ್ಷಗಳವರೆಗೂ ಪರಿಹಾರ ಧನವನ್ನು ವಿತರಿಸಬಹುದಾಗಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಮುನ್ಸಿಪಲ್ ನಿಧಿ ಅಥವಾ ಎಸ್.ಎಸ್.ಸಿ ನಿಧಿಯಿಂದ ಭರಿಸುವುದು ಹಾಗೂ ಉಳಿದಂತೆ ಮಹಾನಗರ ಪಾಲಿಕೆ, ನಿಗಮ ಮಂಡಳಿಗಳು ತಮ್ಮ ಸ್ವಂತ ನಿಧಿಯಿಂದ ಭರಿಸಿ ಪಾವತಿಸಬಹುದಾಗಿರುತ್ತದೆ.
- ಮರಣ ಹೊಂದಿದ ಸಫಾಯಿ ಕರ್ಮಚಾರಿ ಗಳ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬಹುದಾಗಿರುತ್ತದೆ.
- ಆದ್ಯತೆ ಮೇರೆಗೆ ನಿವೇಶನ ಹಾಗೂ ಇತರೇ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
- ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ , ಏಕಲವ್ಯ , ನವೋದಯ ಮುಂತಾದ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡಬೇಕಾಗುತ್ತದೆ.
- ಇಬ್ಬರು ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನ ನೀಡಬಹುದಾಗಿರುತ್ತದೆ.
ಈ ಕಾರ್ಯಕ್ರಮಕ್ಕೆ ಯಾವುದೇ ವಾರ್ಷಿಕ ಗುರಿ ಇರುವುದಿಲ್ಲ ಪ್ರಕರಣಗಳನ್ವಯ ಪರಿಹಾರ ಧನ ವಿತರಿಸಲಾಗುವುದು.
ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.