ಸ್ಯಾಟ್ಕಾಂ ಮೂಲಕ ತರಬೇತಿ
ಪ್ರತಿ ಗ್ರಾಮ ಪಂಚಾಯತಿಗೆ 40 ಯುವಜನರಂತೆ 5,627 ಗ್ರಾಮಪಂಚಾಯತ್ಗಳಿಂದ 2,25,080 ಅಭ್ಯರ್ಥಿಗಳಿಗೆ ಉಪಗ್ರಹ ಆಧಾರಿತ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಕೆಎಸ್ಆರ್ಎಲ್ಪಿಎಸ್- “ಸಂಜೀವಿನಿ” ಏರ್ಪಡಿಸುವುದು.
ಒಟ್ಟು 175 ತಾಲ್ಲೂಕುಗಳಿಂದ ಪ್ರತಿ ತಾಲ್ಲೂಕಿಗೆ 1 ಪಂಚಾಯತಿಯಂತೆ, 34 ಪ್ರಸರಣಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
175 ತಾಲ್ಲೂಕುಗಳಿಂದ ಪ್ರತಿ ಪ್ರಸರಣದಲ್ಲಿ 40 ಶಿಬಿರಾರ್ಥಿಗಳು ಆಯಾಯ ಪಂಚಾಯಿತಿಯನ್ನು ಪ್ರತಿನಿಧಿಸುವರು ಅದರಂತೆ 175*40 = 7,000 ಯುವಜನರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಾಗೂ ಸ್ವ-ಉದ್ಯೋಗ ಮತ್ತು ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಅವಕಾಶಗಳ ಬಗ್ಗೆ ಯಶೋಗಾಥೆಯ ಹಾಗೂ ಕಿರು ಚಿತ್ರಗಳ ಮೂಲಕ ಪ್ರೇರಣೆ ನೀಡಿ ಆಯ್ಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು.
ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಯುವಜನರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಯೋಜನೆಯ ಬಗ್ಗೆ ಅರಿವು ಮೂಡಿಸುವುದು.
ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ:
ಅಗತ್ಯವಿರುವ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ ಕುರಿತಂತೆ “ಸಂಜೀವಿನಿ”- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು (ಕೆಎಸ್ಆರ್ಎಲ್ಪಿಎಸ್) ಕ್ರಮ ಕೈಗೊಳ್ಳುವುದು.
ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ವಿವರಣಾತ್ಮಕ ಹಾಗೂ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.
ಗ್ರಾಮ ಪಂಚಾಯತಿ ಮಟ್ಟಕ್ಕೆ ಚಿತ್ರಗಳ ಮೂಲಕ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ರಾಜೀವ್ ಗಾಂಧಿ ಚೈತನ್ಯ ಯೋಜನೆ(ಆರ್.ಜಿ.ಸಿ.ವೈ.) ಬಗ್ಗೆ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುವುದು.
ವ್ಯಾಪಕ ಪ್ರಚಾರದ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರÀ ಭಾಗವಹಿಸುವಿಕೆ ಖಾತ್ರಿಪಡಿಸಿಕೊಳ್ಳುವುದು.
ಮೂಲ: ಅರ್.ಜಿ.ಸಿ.ವೈ
ಕೊನೆಯ ಮಾರ್ಪಾಟು : 10/16/2019