ಕರ್ನಾಟಕ ರಾಜ್ಯದಲ್ಲಿ ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು ಜಾರಿಗೆತರಲಾಗಿದ್ದು ಮಾನ್ಯ ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಹಗಲು ಯೋಗಕ್ಷೇಮ ಕೇಂದ್ಯಗಳನ್ನು ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಬೆಳಗಾವಿ ನಗರಗಳಲ್ಲಿ ರಚಿಸಲಾಗಿದೆ. ಹಾಗೂ ಸಹಾಯವಾಣಿ ಕೇಂದ್ರಗಳನ್ನು ಪೋಲೀಸ್ ಕಛೇರಿಯಲ್ಲಿ ಸ್ಥಾಪಿಸಲಾಗಿದೆ, ಸಹಾಯವಾಣಿ ಸಂಖ್ಯೆ:1090
ಆಸರೆ ಇಲ್ಲದೆ ಹಿರಿಯ ನಾಗರಿಕರಿಗೆ ಸ್ವಯಂ ಸೇವಾ ಸಂಸ್ಥೆಗಳು ನಡಸುತ್ತಿರುವ ವೃದ್ದಾಶ್ರಮಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ನೀಡುತ್ತಿದೆ.ಇಲ್ಲಿ ವೃದ್ಧರಿಗೆ ಉಚಿತ ಊಟ ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 27ವೃದ್ಧಾಶ್ರಮಗಳು ರಾಜ್ಯ ಅನುದಾನದಿಂದ ನಡೆಯುತ್ತಿವೆ( ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ)ರಾಜ್ಯ ಅನುದಾನದಿಂದ ನಡೆಯುತ್ತಿರುವ ವೃದ್ಧಾಶ್ರಮಗಳ ಪಟ್ಟಿಯನ್ನುಅನುಬಂಧ 2ರಲ್ಲಿ ನೀಡಲಾಗಿದೆ. ಈಗಾಗಲೇ 26 ಜಿಲ್ಲೆಗಳಲ್ಲಿ 27 ವೃದ್ಧಾಶ್ರಮಗಳು ಜಿಲ್ಲಾವಲಯವಾರು ಇರುವುದು.
ರಾಜ್ಯದ 4 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗಾಗಿ 4 ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲಾಗುತ್ತಿದೆ.ಬೆಂಗಳೂರು, ಹುಬ್ಬಳ್ಳಿ,ಧಾರವಾಡ,ಗುಲ್ಬರ್ಗ,ಬೆಳಗಾಂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಸುತ್ತಿದೆ.ಇಲ್ಲಿ ಹಿರಿಯ ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಮತ್ತು ಸಮಾಜಿಕ ಮತ್ತು ಮಾನಸಿಕ ಒತ್ತಡಗಳ ನಿವಾರಣೆಗಾಗಿ ಮನೊರಂಜನೆ,ಆರೋಗ್ಯ ಕಾರ್ಯಕ್ರಮಗಳೊಂದಿಗೆ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಲಾಗುತ್ತಿದೆ.
ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ತುರ್ತು ಸೇವೆಯನ್ನು ನೀಡುವ ಸಲುವಾಗಿ ಬೆಂಗಳೂರು, ಮೈಸೂರು,ಹುಬ್ಬಳಿ, ಧಾರವಾಡ, ಗುಲ್ಬರ್ಗಾ, ಬೆಳಗಾಂ, ಮಂಗಳೂರು,ಬಳ್ಳಾರಿ,ಚಿತ್ರದುರ್ಗ,ಶಿವಮೊಗ್ಗ, ಬಾಗಲಕೋಟೆ, ಕೋಲಾರ, ತುಮಕೂರು,ಬೀದರ್,ಬಿಜಾಪುರಗಳಲ್ಲಿ ಹಿರಿಯ ನಾಗರಿಕರ ಸಹಾಯವಾಣಿಯನ್ನು ಜಿಲ್ಲಾ ಪೋಲಿಸ್ ಆಯುಕ್ತರು/ಆರಕ್ಷಕ ಅಧೀಕ್ಷಕರ ಸಹಯೋಗದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
ಜಿಲ್ಲೆಗಳಲ್ಲಿ ಆಯ್ಕೆಗೊಂಡ ಸ್ವಯಂ ಸೇವಾ ಸಂಸ್ಥೆಗಳು ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿಗಳನ್ನು ಪಡೆದು ವಿತರಿಸಬಹುದಾಗಿದೆ. ಸ್ವಯಂ ಸೇವಾ ಸಂಸ್ಥೆಯು ಗುರುತಿನ ಚೀಟಿಯನ್ನು ವಿತರಿಸುವ ಪ್ರಕ್ರಿಯೆಗಾಗಿ ಹಿರಿಯನಾಗರಿಕರಿಂದರೂ.25ನ್ನು ಮಾತ್ರಪಡೆಯತಕ್ಕದ್ದು. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ. ಮಾಹಿತಿಗೆ 1090 ಹಿರಿಯರ ಸಹಾಯವಾಣಿಯನ್ನು ಸಂಪರ್ಕಿಸುವುದು ಜಿಲ್ಲೆಗಳಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸರ್ಕಾರದ ಆದೇಶ ಸಂಖ್ಯೆ :ಸಾರಿಗೆ:45:ನಾಸಾಇ:2008 ದಿನಾಂಕ 8.9.2008 ರ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣದಲ್ಲಿ ಶೇ.25 ರಷ್ಟು ರಿಯಾಯಿತಿಯನ್ನು ನೀಡಲಾಗುವುದು
ಈ ಸೌಲಭ್ಯವನ್ನು ಪಡೆಯಬಯಸುವವರು ಇಲಾಖೆಯ ವತಿಯಿಂದ ನೀಡಲಾಗುವ ಹಿರಿಯ ನಾಗರಿಕರ ಗುರುತಿನ ಚೀಟಿ/ ಚುನಾವಣಾ ಗುರುತಿನ ಚೀಟಿ) ತೋರಿಸತಕ್ಕದ್ದು.
ತಮ್ಮ ಜೀವನವನ್ನು ನಿರ್ವಹಿಸಲು ಕಷ್ಟವಾಗಿರುವ ಹಿರಿಯ ನಾಗರಿಕರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ ರೂ.400 ಗಳ ವೃದ್ದಾಪ್ಯ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಟಾನಗೊಳಿಸುತ್ತಿದ್ದು ಸಂಬಂಧಪಟ್ಟವರು ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸತಕ್ಕದ್ದು.
ಕಂದಾಯ ಇಲಾಖೆಯಿಂದ ಸರ್ಕಾರದ ಆದೇಶ ಸಂಖ್ಯೆ:ಆರ್.ಡಿ.97.ಎಂ.ಎಸ್,ಟಿ.2007 ದಿನಾಂಕ: 2-7-2007 ಈ ಯೋಜನೆಯಡಿಯಲ್ಲಿ ಸಾಮಾಜಿಕ ಭದ್ರತಾ ರೂಪದಲ್ಲಿ ವಯೋವೃದ್ಧರಿಗೆ ರೂ.400ಗಳ ಆರ್ಥಿಕ ಸಹಾಯಧನವನ್ನು ಮಾಸಿಕವಾಗಿ ನೀಡಲಾಗುತ್ತಿದೆ.
ಅಧಿಸೂಚನೆ ಸಂಖ್ಯೆ:ಡಬ್ಲೂಸಿ.ಡಿ:479:ಪಿ.ಹೆಚ್.ಪಿ:2007 ದಿನಾಂಕ 27.3.2008 ರನ್ವಯ ಈ ಕಾಯಿದೆಯುದಿನಾಂಕ 1.4.2008ರಿಂದ ಜಾರಿಗೆ ಬಂದಿರುತ್ತದೆ. ಈ ಅಧಿನಿಯಮದ ಪ್ರಕಾರ ಸಮಸಂಖ್ಯೆ ಆದೇಶ ದಿನಾಂಕ 19.2.2009 ರನ್ವಯ ಅಪೆಲೇಟ್ ಟ್ರಿಬ್ಯುನಲ್ಸ್ ಮತ್ತು ಮೆಂಟೆನನ್ಸ್ ಟ್ರಿಬ್ಯೂನಲ್ಸ್ ಗಳು ರಚಿತವಾಗಿರುತ್ತವೆ.
ಕೊನೆಯ ಮಾರ್ಪಾಟು : 10/16/2019