অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಿಂಚಣಿ, ಕುಟುಂಬ ಮತ್ತು ಮಾತೃ

ಸಂಬಂಧ ಪ್ರಯೋಜನಗಳು/ಸೌಲಭ್ಯಗಳು

ರಾಷ್ಟ್ರೀಯ ಸಾಮಾಜಿಕ ಸಹಾಚಿi ಕಾರ್ಯಕ್ರಮ (ಎನ್.ಎಸ್.ಎ.ಪಿ)ಯು ೧೫ ಆಗಸ್ಟ್ ೧೯೯೫ ರಿಂದ ಜಾರಿಗೆ ಬಂದಿದೆ. ಈ ಕಾರ್ಯಕ್ರಮವು ರಾಷ್ಟ್ರೀಯ ಸಾಮಾಜಿಕ ರಾಜ್ಯ ನೀತಿಯು ವೃದ್ಧರಿರುವ ಬಡಕುಟುಂಬಗಳು, ಕುಟುಂಬ ಪೋಷಣೆಗೆ ದುಡಿಯುವ ಸದಸ್ಯರ ಮತ್ತು ಮಾತೃಗಳು ಇರುವಂತಹ ಕುಟುಂಬಗಳಿಗೆ ಅನ್ವಯವಾಗುತ್ತದೆ. ಈ ಕಾರ್ಯಕ್ರಮವು ಮೂರು ಉಪಾಂಗಗಳನ್ನು ಹೊಂದಿದೆ. ಇವು ಯಾವುವೆಚಿದರೆ ೧) ರಾಷ್ಟ್ರೀಯ ವೃದ್ಧಾಪ್ಯ ವೇತನ ಕಾರ್ಯಕ್ರಮ (ಓಔಂPS-ಎನ್.ಒ.ಎ.ಪಿ.ಎಸ್) ೨) ರಾಷ್ಟ್ರೀಯ ಕುಟುಂಬ ಪ್ರಯೋಜನ ಕಾರ್ಯಕ್ರಮ (ಓಈಃS-ಎನ್.ಎಫ್.ಬಿ.ಎಸ್.)೩) ರಾಷ್ಟ್ರೀಯ ಮಾತೃತ್ವ/ತಾಯ್ತನ ಪ್ರಯೋಜನ ಕಾರ್ಯಕ್ರಮ (ಓಒಃS-ಎನ್.ಎಮ್.ಬಿ.ಎಸ್.)

ಭಾರತದ ಸಂವಿಧಾನ

  • ಅನುಚ್ಛೇದ - ಕೆಲಸಮಾಡುವ ಹಕ್ಕು, ಶಿಕ್ಷಣ ಮತ್ತು ಕೆಲವು ಸಚಿದರ್ಭಗಳಲ್ಲಿ ಸಾರ್ವಜನಿಕ ಒತ್ತಾಸೆಯನ್ನು ಹೊಂದುವ ಹಕ್ಕು.
  • ರಾಜ್ಯಗಳು ತಮಗೆ ಇರುವ ಆರ್ಥಿಕ ಸಾಮರ್ಥ್ಯಕ್ಕೆ ಮತ್ತು ಅಭಿವೃದ್ಧಿಗೆ ಅನುಸಾರವಾಗಿ ಕೆಲಸದ ಹಕ್ಕು, ಶಿಕ್ಷಣ ಮತ್ತು ಸಂಧರ್ಭೋಚಿತ ಎಂದರೆ ನಿರುದ್ಯೋಗ, ವೃದ್ಧಾಪ್ಯ, ಖಾಯಿಲೆ, ಅಂಗವಿಕಲತೆ, ಮತ್ತು ಇತರೆ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಸಚಿರಕ್ಷಿಸಲು ಮುಂದಾಗಿರುತ್ತವೆ. ಅನುಚ್ಛೇದ-೪೨ ಕೆಲಸದ ಪರಿಸ್ಥಿತಿಗಳಲ್ಲಿ ಮತ್ತು ತಾಯ್ತನಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಕ್ರಮಗಳಲ್ಲಿ ನ್ಯಾಯಯುತವಾದ ಮತ್ತು ಮಾನವೀಯತೆಯಿಂದ ಕೂಡಿದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು.

ರಾಷ್ಟ್ರೀಯ ವೃದ್ಧಾಪ್ಯ ಪಿಂಚಣೆ ಯೋಜನೆ (ಎನ್.ಒ.ಎ.ಪಿ.ಎಸ್.)

  • ಈ ಕಾರ್ಯಕ್ರಮವನ್ನು ರಾಜ್ಯಗಳಲ್ಲಿ ಜಾರಿಗೊಳಿಸಲು ಕೇಂದ್ರದ ನೆರವು ಕೆಳಕಂಡ ಅರ್ಹತೆಗಳಿಗೆ ಅನುಗುಣವಾಗಿ ದೊರಕುತ್ತದೆ.
  • ಅರ್ಜಿದಾರನ/ಳ (ಪುರುಷ/ಮಹಿಳೆ)ಯ ವಯಸ್ಸು ೬೫ ಅಥವಾ ಇದಕ್ಕಿಂತ ಹೆಚ್ಚಾಗಿರಬೇಕು.
  • ಅರ್ಜಿದಾರನಿ/ಳಿಗೆ(ನಿUತಿಕರು) ಜೀವನಾದಾರಕ್ಕಾಗಿ ಯಾವುದೇ ವಿಧವಾದ ಸತತವಾದ ಆದಾಯವು ತನ್ನದೇ ಹಣಕಾಸಿನ ಮೂಲ ಅಥವಾ ಕುಟುಂಬದ ಸದಸ್ಯರು ಅಥವಾ ಇನ್ನಾವುದೇ ಮೂಲಗಳಿಂದ ಇರುವುದಿಲ್ಲ.
  • ವೃದ್ಧಾಪ್ಯ ವೇತನವು ರೂ ೭೫/- ಗಳಿಗೆ ನಿಗದಿಪಡಿಸಲಾಗಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದ ಹಕ್ಕು ಭಾಧ್ಯತೆ ಇದೆ.

ರಾಷ್ಟ್ರೀಯ ಕುಟುಂಬ ಸೌಲಭ್ಯ ಪ್ರಯೋಜನ ಕಾರ್ಯಕ್ರಮ

  • ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಜೀವನಾಧಾರಕ್ಕೆ ಇದ್ದ ವ್ಯಕ್ತಿಯು ಮರಣ ಹೊಂದಿದರೆ ಅಂತಹ ಕುಟುಂಬಗಳಿಗೆ ನೀಡಲಾಗುತ್ತದೆ.
  • ಕೇಂದ್ರದಿಂದ ಬೆಂಬಲ/ನೆರವು ಕೆಳಕಂಡ ಅರ್ಹತೆಗಳಿಗೆ ಅನುಗುಣವಾಗಿ ದೊರೆಯುತ್ತದೆ.
  • ಕುಟುಂಬದ ಜೀವನಾಧಾರಕ್ಕೆ ಪ್ರಧಾನವಾದ ವ್ಯಕ್ತಿ ಪುರುಷ ಯಾ ಮಃಇಳೆ ಆಗಿದ್ದು ಕುಟುಂಬದ ಒಟ್ಟು ಆದಾಯಕ್ಕೆ ಅವರ ಕೊಡುಗೆಯು ಪ್ರಧಾನವಾಗಿರಬೇಕು.
  • ಮರಣ ಹೊಂದಿದ ಪ್ರಧಾನ ವ್ಯಕ್ತಿಯು ಗಂಡಾಗಲೀ, ಹೆಣ್ಣಾಗಲೀ ಅವರ ವಯಸ್ಸು ೧೮ ರಿಂದ ಹೆಚ್ಚು ಮತ್ತು ೬೫ ಕ್ಕಿಂತ ಕಡಿಮೆ ಇರಬೇಕು.
  • ಹೀಗೆ ನಿUತಿಕವಾದಂತಹ ಕುಟುಂಬವು ಕೇಂದ್ರ ಸರ್ಕಾರವು ನಿಗದಿಗೊಳಿಸಿದ ಬಡತನರೇಖೆಗಿಂತ ಕಡಿಮೆ ಇರುವ ಅಂಶಗಳನ್ನೊಳಗೊಂಡ ಅರ್ಹತೆ ಪಡೆದಿರಬೇಕು.
  • ಕುಟುಂಬದ ಪ್ರಧಾನ ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ನಯಸರ್ಗಿಕ/ಅಪಘಾತ ಯಾವುದೇ ಕಾರಣವಾಗಿರಲಿ ಇಚಿತಹ ಕುಟುಂಬಗಳಿಗೆ ರೂ. ೧೦,೦೦೦/- ಗಳ ಉಪಕಾರವನ್ನು ಧನಸಹಾಯದ ಮೂಲಕ ನೀಡಲಾಗುತ್ತದೆ.
  • ಸ್ಥಳೀಯ ವಿZರಣೆಯ ಬಳಿಕ ಕುಟುಂಬದಲ್ಲಿ ಬದುಕಿರುವ ವ್ಯಕ್ತಿಗೆ ಈ ಹಣವನ್ನು ಕೊಡಲಾಗುತ್ತದೆ.

ರಾಷ್ಟ್ರೀಯ ತಾಯ್ತನ ಯೋಜನೆ (ಎನ್.ಎಮ್.ಬಿ.ಎಸ್.)

  • ಈ ಯೋಜನೆಯಡಿ, ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬದ ಗರ್ಭಿಣಿ ಮಹಿಳೆಗೆ ಒಟ್ಟು ಹಣದ ಸಹಾಯವನ್ನು ನೀಡಲಾಗುತ್ತದೆ.
  • ಈ ಪ್ರಯೋಜನವನ್ನು ೧೯ ರಿಂದ ಮೇಲ್ಪಟ್ಟ ವಯಸ್ಸಿನ ಗರ್ಭಿಣಿ ಮಹಿಳೆಗೆ ಮೊದಲ ಎರಡು ಮಕ್ಕಳ ಜನನಕ್ಕೆ ಮಾತ್ರ ನೀಡಲಾಗುತ್ತದೆ.
  • ಕೇಂದ್ರ ಸರ್ಕಾರವು ಬಡತನಕ್ಕೆ ಗುರುತಿಸಿರುವ ಆಧಾರಾಂಶಗಳನ್ನು ಗುರುತಿಸಿರುವ ಅರ್ಹತೆಗಳನ್ನು ಪರಿಗಣಿಸಿ ಅಂತಹ ಕುಟುಂಬಗಳಿಗೆ ನೀಡಲಾಗುತ್ತದೆ.
  • ಈ ಪ್ರಯೋಜನದ ಭತ್ಯೆಯ ಮೊತ್ತ ರೂ. ೫೦೦/-
  • ಮಾತೃತ್ವದ ಭತ್ಯೆಯನ್ನು ೧೨-೮ ವಾರಗಳ ಪ್ರಸವಕ್ಕೆ ಮುನ್ನ ಗರ್ಭಿಣಿಗೆ ಒಂದೇ ಕಂತಿನಲ್ಲಿ ನೀಡಲಾಗುತ್ತದೆ. ತಾಯ್ತನದ ಭತ್ಯೆಯನ್ನು ಸರಿಯಾದ ನಿಗದಿತ ಸಮಯಕ್ಕೆ ಸಿಗುವ ಹಾಗೆ ನೋಡಿಕೊಳ್ಳಬೇಕು. ತಡ ಆದ ಸಂದರ್ಭಗಳಲ್ಲಿ ಮಗುವಿನ ಜನನ ಆದ ನಂತರ ಕೂಡ ಫಲಾನುಭವಿಗೆ ಕೊಡಬಹುದಾಗಿದೆ.

ಉದ್ದೇಶಗಳು

  • ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೆ ಜಾರಿಗೊಳಿಸಿರುವ ಅಥವಾ ಭವಿಷ್ಯದಲ್ಲಿ ಕೊಡಬೇಕೆಂದುಕೊಂಡಿರುವ ಯೋಜನೆಗಳಲ್ಲದೆ ಎನ್.ಎಸ್.ಎ.ಪಿ.ಯು ಶೇ ೧೦೦/- ರಷ್ಟು ಕೇಂದ್ರಸರ್ಕಾರದ ಅನುದಾನ ಯೋಜನೆಯಾಗಿದ್ದು, ನಿರ್ದಿಷ್ಟ ಪ್ರಮಾಣದ ಕನಿಷ್ಠ ಸಾಮಾಜಿಕ ನೆರವನ್ನು ನೀಡುತ್ತದೆ.
  • ದೇಶದಾದ್ಯಂತ ಫಲಾನುಭವಿಗಳಿಗೆ ಯಾವುದೇ ತಡೆಯಿಲ್ಲದೆ, ಸಾಮಾಜಿಕ ನೆರವನ್ನು ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಶೇ ೧೦೦% ರಷ್ಟು ನೆರವನ್ನು ನೀಡುತ್ತದೆ.
  • ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಯಾವುದೇ ಸಾಮಾಜಿಕ ನೆರವಿನ ಯೋಜನೆಯ ವೆಚ್ಚವನ್ನು ಅಡ್ಡಿಪಡಿಸುವುದಿಲ್ಲ ಮತ್ತು ರಾಜ್ಯಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕ ನೆರವಿನ ಯೋಜನೆಗಳನ್ನು ಎಷ್ಟು ವ್ಯಾಪಕವಾಗಿ ಬೇಕಾದರೂ ಕೈಗೊಳ್ಳಬಹುದಾಗಿದೆ.
  • ಬಡತನ ನಿವಾರಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳೊಂದಿಗೆ ಸಂಯೋಜಿಸಲು ಎನ್.ಎಸ್.ಎ.ಪಿ.ಯು ಅವಕಾಶ ಕಲ್ಪಿಸಿದೆ. ಉದಾ: ತಾಯ್ತನ ನೆರವು ಯೋಜನೆಯನ್ನು ತಾಯ್ತನ ಮತ್ತು ಶಿಶು ಸಂರಕ್ಷಣೆ ಯೋಜನೆಯೊಂದಿಗೆ ಸಂಯೋಜಿಸಬಹುದಾಗಿದೆ.

ಯೋಜನೆಯ ಅನುಷ್ಟಾನಗೊಳಿಸುವಿಕೆ

  • ಎನ್.ಎಸ್.ಎ.ಪಿ. ಯಡಿ ಬರುವ ಯೋಜನೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಂಚಾಯತ್ ಮತ್ತು ಪೌರಸಭೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
  • ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎನ್.ಎಸ್.ಎ.ಪಿ.ಯ ಮಾರ್ಗದರ್ಶಿಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಂದೊಂದು ನೋಡಲ್ ಇಲಾಖೆಗಳನ್ನು ಗುರುತಿಸಿ ವಹಿಸುತ್ತದೆ.
  • ನೋಡಲ್ ಇಲಾಖೆಯ ಕಾರ್ಯದರ್ಶಿಯನ್ನು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಎಸ್.ಎಸ್.ಎಪಿಯ ನೋಡಲ್ ಕಾರ್ಯದರ್ಶಿಯಾಗಿರುತ್ತಾರೆ.
  • ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತದೆ.
  • ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಆಯಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶ/ಜಿಲ್ಲಾಧಿಕಾರಿಯವರಿಗೆ, ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸುವ ಅಧಿಕಾರವನ್ನು ರಚಿಸುವಂತೆ, ಸಭಾಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ.
  • ಜಿಲ್ಲಾಧಿಕಾರಿ ಅಥವಾ ಅಧಿಕಾರ ವಹಿಸಿಕೊಂಡಿರುವ ಯಾವುದೇ ನೋಡಲ್ ಅಧಿಕಾರಿಯು ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ, ಪ್ರಯೋಜನವನ್ನು ವಿತರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
  • ವಿತರಣಾ ಅಧಿಕಾರಿಗಳು ಪ್ರಯೋಜನವನ್ನು ನೀಡುವ ವಿವಿಧ ವಿಧಾನಗಳನ್ನು ಅಂದರೆ ನೇರವಾಗಿ ಹಣವನ್ನೇ ಪಾವತಿಸುವ ಹಾಗೆ ಮಾರ್ಗದರ್ಶಿಯಲ್ಲಿ ಸೂಚಿಸಿರುವಂತೆ ಅನುಸರಿಸಬಹುದಾಗಿದೆ.
  • ಗ್ರಾಮ ಪಂಚಾಯಿತಿ/ಪೌರಸಭೆಗಳು ಎನ್.ಐ.ಎ.ಪಿ ಯೋಜನೆಯಲ್ಲಿ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಪ್ರಮುಖವಾದ ಹಾಗೂ ಪರಿಣಾಮಕಾರಿ ಪಾತ್ರವನ್ನು ವಹಿಸಬೇಕಾಗುತ್ತದೆ.
  • ರಾಜ್ಯ ಸರ್ಕಾರಗಳು ಎನ್.ಬಿ.ಎ.ಪಿ.ಎಸ್. ಎನ್.ಎಫ್.ಬಿ.ಎಸ್. ಎನ್.ಎಮ್.ಬಿ.ಎಸ್. ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಪಂಚಾಯಿತಿ/ಪುರಸಭೆಗಳು ಸೂಕ್ತವಾದ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ, ಗ್ರಾಮಪಂಚಾಯ್ತಿ, ನೆರೆಹೊರೆ ಸಮಿತಿ, ಮೊಹಲ್ಲಾ ಸಮಿತಿಯ ನೆರವನ್ನು ಪಡೆಯಬಹುದಾಗಿದೆ.
  • ಕೇಂದ್ರದ ನೆರವಿನ ಎನ್.ಬಿ.ಎ.ಪಿ.ಎಸ್. ಎನ್.ಎಫ್.ಬಿ.ಎಸ್. ಮತ್ತು ಎನ್.ಎಮ್.ಬಿ.ಎಸ್.ಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಯೋಜನ ಭತ್ಯೆಗಳನ್ನು ಸಾರ್ವಜನಿಕ ಸಭೆಗಳು ಎಂದರೆ; ಹಳ್ಳಿಗಳಲ್ಲಿ ಗ್ರಾಮ ಸಭೆ, ನೆರೆಹೊರೆಸಮಿತಿಸಭೆ ಪಟ್ಟಣ ಪ್ರದೇಶಗಳಲ್ಲಿ ಮೊಹಲ್ಲಾ ಸಮಿತಿ ಸಭೆಗಳಲ್ಲಿ ವಿತರಿಸಬಹುದಾಗಿದೆ.
  • ಎನ್.ಎಸ್.ಎ.ಪಿ ಯನ್ನು ಪಡೆಯುವ ವಿಧಾನವನ್ನು ಜನರಿಗೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪಂಚಾಯ್ತಿ/ಪುರಸಭೆಗಳಿಗೆ ವಹಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳನ್ನು ಜನರನ್ನು ಪ್ರೋತ್ಸಾಹಗೊಳಿಸುವಂತೆ ಬಳಸಿಕೊಳ್ಳಬಹುದಾಗಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate