অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಲಗಾಂವ್ ಅಣ್ಣನ ಸಾಧಕ(ತೆ!)

ಜಲಗಾಂವ್ ಅಣ್ಣನ ಸಾಧಕ(ತೆ!)

ಭವ­ರ್‌­ಲಾಲ್‌ ಜೈನ್‌ ರೈತ ಕುಟುಂ­ಬ­ದಲ್ಲಿ ಹುಟ್ಟಿ­ದ­ವರು. `ಜೈನ್‌ ಇರಿ­ಗೇ­ಷನ್‌' ಎಂಬ ಸಾಮ್ರಾ­ಜ್ಯದ ಅಧಿ­ಪತಿ. ಸರ­ಕಾ­ರದ ತಿಂಗಳು-ತಿಂ­ಗಳು ಸಂಬಳ, ಕಾರು, ಬಂಗಲೆ ಎಲ್ಲ­ವನ್ನು ಪಡೆದು ತಣ್ಣಗೆ ಜೀವನ ಸಾಗಿ­ಸ­ಬ­ಹು­ದಾ­ಗಿತ್ತು. ಮಹಾ­ರಾ­ಷ್ಟ್ರದ ನಾಗ­ರಿಕ ಸೇವೆಗೆ ಆಯ್ಕೆ­ಯಾ­ಗಿದ್ದ ಬಾವು, ಅದನ್ನು ತಿರ­ಸ್ಕ­ರಿ­ಸಿ­ಬಿ­ಟ್ಟರು. ಆರಂ­ಭ­ದಲ್ಲಿ ಅವರು ತಾಯಿ­ಯಿಂದ ಐದು ಸಾವಿರ ರೂಪಾಯಿ ಪಡೆದು ಸೀಮೆ ಎಣ್ಣೆ ವ್ಯಾಪಾರ ಶುರು­ಮಾ­ಡಿ­ದರು. ಅವರೇ ಹೇಳು­ವಂತೆ `ಮಾ­ರ್ವಾ­ಡಿ­ಗ­ಳಿಗೆ ವ್ಯಾಪಾ­ರವೇ ಇಷ್ಟ'. ಇವರು ವ್ಯಾಪಾ­ರ­ದಲ್ಲಿ ಸೋಲ­ಲಿಲ್ಲ. ಬೆಳೆ­ಯುತ್ತ ಹೋದರು. ರೈತಾಪಿ ಹಿನ್ನೆಲೆ ಇರುವ ಇವ­ರಿಗೆ ಕೃಷಿಯ ಸೆಳೆತ ಸಹ­ಜ­ವಾ­ಗಿಯೇ ಇತ್ತು. ತಮ್ಮ ವ್ಯಾಪಾ­ರದ ಜತೆ ತಂದೆ­ಯಿಂದ ತಮಗೆ ಬಂದ ಜಮೀ­ನಿ­ನಲ್ಲಿ ಕೃಷಿ ಮಾಡಲು ಪ್ರಾರಂ­ಭಿ­ಸಿ­ದರು. ತಮ್ಮ ಯೋಚ­ನೆ­ಯನ್ನು ಇತ­ರಿಗೂ ತೋರಿ­ಸ­ಬೇಕು ಎಂಬ ಮನ­ಸ್ಸಾ­ಯಿತು. ರೈತ­ರಿಗೆ ಅನು­ಕೂ­ಲ­ವಾ­ಗುವ ನಿಟ್ಟಿ­ನಲ್ಲಿ ಕೆಲಸ ಮಾಡ­ಬೇಕು ಎಂಬ ನಿರ್ಧಾ­ರ­ವನ್ನು ಇವರು ತೆಗೆ­ದು­ಕೊಂ­ಡರು.


ಅವರ ಈ ಯೋಚನೆ ಇವರ ಊರಿಗೆ ಹೊಂದಿ­ಕೊಂ­ಡಿ­ರುವ ಊರು ಶಿರ್ಸೋ­ಳ್ಳಿ­ಯಲ್ಲಿ ಬೆಟ್ಟ ಕಣ್ಣಿಗೆ ಬಿತ್ತು. ಇದನ್ನು ಬಾವು ಖರೀ­ದಿ­ಸಿ­ದರು. ಹಲ­ವಾರು ಕನ­ಸು­ಗಳ ಮೂಟೆ ಹೊತ್ತು ಬೆಟ್ಟ­ವೇ­ರಿದ ಭಾವು ಅವ­ರಿಗೆ ಇದನ್ನು ಪ್ರಯೋ­ಜ­ನಕ್ಕೆ ಬರು­ವಂತೆ ಮಾರ್ಪಾಡು ಮಾಡು­ವುದೇ ದೊಡ್ಡ ಸವಾ­ಲಾ­ಯಿತು. ಕಲ್ಲಿನ ಅರೆ. ಹಸಿರು ಹೇಳುವ ಶಬ್ದಕ್ಕೆ ಇಲ್ಲಿ ಅರ್ಥ­ವಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತು ಈ ಬೆಟ್ಟದ ವಿಷ­ಯ­ದಲ್ಲಿ ಸುಳ್ಳಾ­ಯಿತು. ಇಲ್ಲಿ ಹತ್ತಿರ ಹೋಗಿ ನೋಡಿ­ದರೂ ನುಣ್ಣಗೆ. ಇಂತಹ ಬೆಟ್ಟ­ವನ್ನು ಖರೀ­ದಿ­ಸಿದ ಬಾವು ಅವ­ರಿಗೆ `ಸ­ರಿ­ಯಿಲ್ಲ' ಎಂಬ ಮಾತು­ಗಳು ಕೇಳಿ­ಬಂ­ದವು. ಆದರೆ, ಬಾವು ಮಾತ್ರ ತಮ್ಮ ಮನ­ಸ್ಸಿಗೆ ಬಂದ ಆಲೋ­ಚನೆ ಕೈಬಿ­ಡ­ಲಿಲ್ಲ. ಶಿರ್ಸೋಳ್ಳಿ ಬೋಳು­ಗು­ಡ್ಡಕ್ಕೆ`ಜೈನ್‌ ಹಿಲ್ಸ್‌' ಎಂದು ನಾಮ­ಕ­ರಣ ಮಾಡಿ­ದರು. ಸಾಧನೆ ಮಾಡಿ ತೋರಿ­ಸಲು ಪಣ ತೊಟ್ಟರು.
ಬೋಳು­ಗು­ಡ್ಡ­ದಲ್ಲಿ ಕೃಷಿ ಮಾಡು­ವುದು ಸುಲ­ಭದ ಮಾತಲ್ಲ. ಎಲ್ಲಿ­ಕ್ಕಿಂತ ಮೊದಲು ನೀರನ್ನು ಇಲ್ಲಿಗೆ ತರು­ವುದು ಸವಾ­ಲಾ­ಗಿತ್ತು. ಈ ಬೆಟ್ಟದ ಹತ್ತಿ­ರ­ದಲ್ಲಿ `ಗಿ­ರಣಾ' ನದಿ ಹರಿ­ಯು­ತ್ತದೆ. ಇದು ಹೆಸ­ರಿಗೆ ಮಾತ್ರ ನದಿ. ಮಳೆ ಬಂದಷ್ಟು ದಿನ ಮಾತ್ರ ನೀರು ಹರಿ­ಯು­ತ್ತದೆ. ಉಳಿದ ದಿನ­ದಲ್ಲಿ ಈ ನದಿ­ಯನ್ನು ನೋಡಿ­ದರೆ ಯಾವುದೋ ಶತ­ಮಾ­ನದ ಪಳ­ಯು­ಳಿ­ಕೆ­ಯಂತೆ ಕಾಣು­ತ್ತದೆ. ಆದರೂ ಇಲ್ಲಿಂದ ನೀರನ್ನು ತರುವ ಯೋಚ­ನೆ­ಯನ್ನು ಭಾವು ಮಾಡಿ­ದರು. ಈ ನದಿಗೆ ಒಂದು ಪಂಪ್‌­ಸೆಟ್‌ ಹಾಕಿಸಿ ನೀರನ್ನು ತಂದರು. ಆದರೆ ಇದು ಶಾಶ್ವತ ವ್ಯವ­ಸ್ಥೆ­ಯಾ­ಗಿ­ರ­ಲಿಲ್ಲ.


ನಂತರ ತಮ್ಮ ಸ್ವಂತ ಜಾಗ­ದ­ಲ್ಲಿಯೇ ಶಾಶ್ವತ ನೀರಿನ ವ್ಯವಸ್ಥೆ ಮಾಡಿ­ಕೊ­ಳ್ಳ­ಬೇ­ಕೆಂಬ ಆಲೋ­ಚನೆ ಮಾಡಿ­ದರು ಬಾವು. ಅಂತ­ರ್ಜಲ ತಜ್ಞ­ರೊಂ­ದಿಗೆ ಸಮಾ­ಲೋ­ಚನೆ ನಡೆ­ಸಿ­ದರು. ಸಾವಿರ ಅಡಿ ಆಳ ಬೋರ ಹೊಡೆ­ದರು ನೀರು ಬರು­ವು­ದಿಲ್ಲ ಎಂಬ ಉತ್ತರ ದೊರೆ­ಯಿತು. ಒಂದು ಹನಿ ನೀರು ಕೂಡಾ ನಿಲ್ಲ­ದಷ್ಟು ಕಡಿ­ದಾದ ಗುಡ್ಡ­ದಲ್ಲಿ ನೀರು ತರು­ವುದೇ ಒಂದು ಯಕ್ಷ ಪ್ರಶ್ನೆ­ಯಾ­ಯಿತು. ಏನಾ­ದರೂ ಸಾಧನೆ ಮಾಡ­ಬೇ­ಕೆಂ­ದರೆ, ನೀರು ಅನಿ­ವಾರ್ಯ. `ಅ­ನಿ­ವಾ­ರ್ಯವೇ ಆವಿ­ಷ್ಕಾ­ರಕ್ಕೆ ದಾರಿ­ಯ­ಲ್ಲವೇ?' ಈಡಿ ಗುಡ್ಡ­ವನ್ನು ತಾರ­ಸೀ­ಕ­ರಣ (ಟೆ­ರೇ­ಸಿಂಗ್‌) ಮಾಡುವ ಯೋಚನೆ ಮಾಡಿ­ದರು. ಇದು ಸುಲ­ಭದ ಕೆಲ­ಸ­ವಾ­ಗಿ­ರ­ಲಿಲ್ಲ. ಭೂ ವಿಜ್ಞಾ­ನ­ದಲ್ಲಿ ಪರಿ­ಣಿತಿ ಇರು­ವ­ವ­ರನ್ನು ಕರೆ­ಸಿ­ದರು ತಾರ­ಸೀ­ಕ­ರ­ಣಕ್ಕೆ ಯೋಜನೆ ರೂಪಿ­ಸಿ­ದರು. ಕಡಿ­ದಾದ ಗುಡ್ಡ­ವನ್ನು ಕಡಿದು ಕರ­ಗಿ­ಸು­ವುದು ಖರ್ಚಿನ ಬಾಬ್ತು. ಆದರೂ ಕೂಡಾ ಮಾಡದೇ ಬಿಡುವ ಹಾಗಿಲ್ಲ. ಯಂತ್ರ­ಗಳ ಜೊತೆ ಮನುಷ್ಯ ಶ್ರಮ­ವನ್ನು ಬಳ­ಸಿ­ದರು. ಒಂದು­ವರೆ ವರ್ಷದ ಸತತ ಪರಿ­ಶ್ರ­ಮ­ದಿಂದ ಗುಡ್ಡದ ಸುತ್ತಲು ತಾರ­ಸೀ­ಕ­ರಣ ಮಾಡಿ­ದರು. ಓಡುವ ನೀರು ನಿಂತು ನಿಂತು ಇಂಗ ತೊಡ­ಗಿತು.


ಗುಡ್ಡದ ಯಾವು ಮೂಲೆ­ಯಲ್ಲೂ ನೀರು ಸುಮ್ಮನೆ ಹರಿ­ದು­ಹೋ­ಗದೆ ಇರು­ವಂತೆ ಹತ್ತು ಬಾಂದಾ­ರ­ಗ­ಳನ್ನು ನಿರ್ಮಿ­ಸಿ­ದರು. `ಜೈ­ನ್‌­ಸಾ­ಗರ್‌' ಇದ­ರಲ್ಲಿ 1.25.000 ಘನ ಮೀಟರ್‌(ಒಂದು ಘನ ಮೀಟರ್‌= 1000 ಲೀಟರ್‌) ನೀರು ನಿಲ್ಲು­ತ್ತದೆ. `ಸಿಂಧೂ'ವಿ­ನಲ್ಲಿ 1.65.000, `ಜೈನ್‌ ಸಂಗ್ರಹ' 8.000, `ಜೈನ್‌ ಬಾಂದಾರ' 1200, `ಜೈನ್‌ ಉಪ­ಸಾ­ಗರ' 61000, `ಕ್ಷೀ­ರ­ಸಾ­ಗರ್‌' 42.500, `ಜೈ­ನ್‌­ಜ­ಲ­ಗಾರ' 15.000, `ಜೈನ್‌ ಜಲಾ­ಶಯ' 40.000, `ಮ­ಹಾ­ಸಾ­ಗರ' 4.40.000, `ಜೈನ್‌ ಜಲ­ನಿಧಿ' 3000 ಘನ ಮೀಟರ್‌ ನೀರು ಸಂಗ್ರ­ಹ­ವಾ­ಗು­ತ್ತದೆ.


ಇಲ್ಲಿ ಸಂಗ್ರ­ಹ­ವಾ­ಗುವ ನೀರನ್ನು ಹಿಡಿ­ದಿ­ಡಲು ಗುಡ್ಡದ ತಲೆ­ಯಲ್ಲಿ 3.25 ಹಾಗೂ 2.27 ಲಕ್ಷ ಲೀಟರ್‌ ಸಾಮ­ರ್ಥ್ಯದ ಎರಡು ೃಹತ್‌ ಟ್ಯಾಂಕ್‌ ನೀರ್ಮಾಣ ಮಾಡಿ­ದ್ದಾರೆ. ಇದ­ರಿಂದ ಈಡೀ ಗುಡ್ಡಕ್ಕೆ ನೀರು ಸರ­ಬ­ರಾ­ಜಾ­ಗು­ತ್ತದೆ. ನೀರಿನ ವ್ಯವ­ಸ್ಥೆ­ಯಾದ ನಂತರ ಸಾವಿರ ಎಕರೆ ಜೈನ್‌ ಹಿಲ್ಸ್‌ ಹಸಿ­ರು­ಕ­ರ­ಣ­ಗೊ­ಳಿ­ಸಲು ಪ್ರಾರಂ­ಭಿ­ಸಿ­ದರು. ಪೇರಲ, ಹುಣಸೆ, ಮಾವು, ಬೇವು, ತಾಡ ಮರ­ಮ­ಗನ್ನು ಬೆಳೆ­ಸಿ­ದರು. ಹದಿ­ನೈದು ವರ್ಷ­ಗ­ಳಲ್ಲಿ ಜೈನ್‌ ಹಿಲ್ಸ್‌ನ ಚಿತ್ರ­ಣವೇ ಬದ­ಲಾ­ಯಿತು. ನುಣ್ಣನೆ ಗುಡ್ಡ ಹಸಿ­ರಿಂದ ಕಂಗೊ­ಳಿ­ಸ­ತೊ­ಡ­ಗಿತು.


`ಜೈನ್‌ ಹಿಲ್ಸ್‌' ಇಂದು ಭಾರ­ತದ ಮೂಲೆ ಮೂಲೆ­ಯ­ಲ್ಲಿ­ರುವ ರೈತ­ರಿಗೂ ನೈಜ ಪ್ರಾತ್ಯ­ಕ್ಷಿಕೆ ತಾಣ. ಮಳೆ ನೀರು ಸದ್ಬ­ಳಕೆ, ತಾರ­ಸೀ­ಕ­ರಣ, ಇಲ್ಲಿನ ಕೃಷಿ ವಿಧಾನ, ನೀರಾ­ವರಿ ಕ್ರಮ ಹೀಗೆ ಹಲವು ದೃಷ್ಟಿ­ಯಿಂದ ಅಧ್ಯ­ಯನ ಯೋಗ್ಯ ಪ್ರವಾಸಿ ತಾಣ­ವಾಗಿ ಜೈನ್‌ ಹಿಲ್ಸ್‌ ಮಾರ್ಪಾ­ಡಾ­ಗಿದೆ. ದೇಶದ ಎಲ್ಲಾ ಕಡೆ­ಯಿಂ­ದಲೂ ರೈತರು ಇಲ್ಲಿನ ಯಶೋ­ಗಾ­ಥೆ­ಯನ್ನು ಕಣ್ಣಾರೆ ಕಂಡು, ತರ­ಬೇತಿ ಪಡೆದು ನವ ಕನ­ಸನ್ನು ಕಟ್ಟಿ­ಕೊಂಡು ತವ­ರಿಗೆ ಮರ­ಳು­ತ್ತಿ­ದ್ದಾರೆ.

ಬಾವು ಬೋಳು ಗುಡ್ಡ ಖರೀದಿಸಿದಾಗ ನಕ್ಕ ಮಂದಿಯೆಲ್ಲ ಇವರ ಸಾಧನೆಯನ್ನು ಕಂಡಿದ್ದಾರೆ. ನಗೆಯಾಡುತ್ತಿದ್ದ ಬಾಯಿ ಮುಚ್ಚಿದೆ. ಕನಸು, ಛಲ, ದೂರದೃಷ್ಟಿಯ ಮನೋಭಾವವಿದ್ದರೆ ಏನ¬ನ್ನಾ-ದರೂ ಸಾಧಿಸಬಹುದು ಎನ್ನುವುದಕ್ಕೆ ಬಾವು ಸಾಧನೆ ಸಾಕ್ಷಿ. ಬಾವು ಸಾಧನೆ ಕಂಡ ಕಂಡ ಅನೇ¬ಕರು ಅವರನ್ನು ಅಭಿನಂದಿಸಿದ್ದಾರೆ. `ಭಾರತೀಯ ಜಲ ರಕ್ಷಕ' ಎನ್ನುವ ಪುರಸ್ಕಾರ ನೀಡಿದ್ದಾರೆ.

ಜೈನ್‌ ಹಿಲ್ಸ್‌ ಬಗ್ಗೆ ಮಾಹಿ¬ತಿ¬ಗಾಗಿ:

ಸಿ.ಎ. ಜೋಶಿ,(ಡೆಪ್ಯುಟಿ ಮ್ಯಾನೇಜರ್‌, ಜೈನ್‌ ಇರಿಗೇಷನ್‌),ದೂರವಾಣಿ ಸಂಖ್ಯೆ- 9448286508

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate