ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 162 ಎಫ್ಡಬ್ಲ್ಯೂಎಲ್ 2008 ದಿನಾಂಕ 05-06-2009ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
ಬೆಳೆ ಹಾನಿ ಸಂಭವಿಸಿದ ಜಮೀನು ಒತ್ತುವರಿ ಮಾಡಿರುವ ಅರಣ್ಯ ಭೂಮಿ ಆಗಿಲ್ಲದೇ ಇದ್ದಲ್ಲಿ ಕಾಡು ಮೃಗದಿಂದ ಬೆಳೆ ಹಾನಿ ಸಂಭವಿಸಿದ ಜಮೀನಿನ ಮಾಲೀಕನು ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ.
ಸ್ಪಷ್ಟನೆ : ಕಾಡು ಮೃಗ ಎಂಬುದು ಯಾವುದನ್ನು ಒಳಗೊಂಡಿರುತ್ತದೆ ಎಂಬುದನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಸೆಕ್ಷನ್ 2 (36)ರಲ್ಲಿ ಹೇಳಿರುವ ವಿವರಣೆಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ.
ದರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ನಮೂನೆ ಇರುವುದಿಲ್ಲ. ಆದಾಗ್ಯೂ, ಜಮೀನಿನ ಮಾಲೀಕನ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು.
ಅರ್ಜಿಯ ಜೊತೆ ಆರ್.ಟಿ.ಸಿ.ಯನ್ನು ಲಗತ್ತಿಸಿರಬೇಕು.
ಅರ್ಜಿಯನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.
ಅರ್ಜಿಯ ಜೊತೆ ಫೆÇೀಟೋ ಲಗತ್ತಿಸುವುದು ಕಡ್ಡಾಯವಲ್ಲ. ಆದ್ಯಾಗ್ಯೂ ದಾಖಲೆಗಾಗಿ/ಕಡತಕ್ಕಾಗಿ ಫೆÇೀಟೋ ಲಗತ್ತಿಸುವುದು ಅಗತ್ಯ.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 11/14/2019
ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ...
ಕಾಡು ಮೃಗಗಳಿಂದ ಜಾನುವಾರು ಸಾವಿಗೆ
ದಾಳಿಯ ಸಂದರ್ಭದಲ್ಲಿ ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾ...
ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ...