ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲ. ಆಳವಾಗಿ ಬೇರು ಬಿಡುವ, ಶೀಘ್ರವಾಗಿ ಬೆಳೆಯುವ ಹಾಗೂ ಬಹುವಾರ್ಷಿಕ ಸಸ್ಯವಾಗಿರುವ ಹಿಪ್ಪುನೇರಳೆಯು, ನೀಡುವ ಪೋಷಕಾಂಶಗಳಿಗೆ ಸ್ಪಂದಿಸಿ ಹೆಚ್ಚು ಸೊಪ್ಪಿನ ಇಳುವರಿ ನೀಡುತ್ತದೆ. ಸೊಪ್ಪಿನ ಇಳುವರಿಯ ಪ್ರಮಾಣ ಮುಖ್ಯವಾಗಿ ಮೂರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳೆಂದರೆ ಹಿಪ್ಪುನೇರಳೆ ತಳಿ, ಅನುಸರಿಸಬೇಕಾದ ವ್ಯವಸಾಯಿಕ ಪದ್ಧತಿಗಳು ಮತ್ತು ಗಿಡಗಳಿಗೆ ತಗುಲುವ ರೋಗ ಹಾಗೂ ಕೀಟಗಳ ಸಮಗ್ರ ಹತೋಟಿ ಕ್ರಮಗಳು.
ಕೃಷಿಪೂರಕ ಗುಣಗಳಾದ ಬೇರು ಬಿಡುವಿಕೆ, ಬೆಳವಣಿಗೆ, ಹೆಚ್ಚಿನ ಇಳುವರಿ, ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮಥ್ರ್ಯ, ರೋಗ ನಿರೋಧಕ ಶಕ್ತಿ ಮತ್ತು ನೀಡುವ ಪೋಷಕಾಂಶಗಳಿಗೆ ಪ್ರತಿಕ್ರಯಿಸುವಿಕೆ ಗುಣಗಳನ್ನು ಹೊಂದಿರುವ ಹಿಪ್ಪುನೇರಳೆ ತಳಿಯಿಂದ ಗುಣಮಟ್ಟದ ಸೊಪ್ಪನ್ನು ಪಡೆಯಬಹುದು. ಸೊಪ್ಪಿನ ಗುಣಮಟ್ಟದ ಶ್ರೇಷ್ಠತೆಯು ಚಾಕಿ ಹಾಗೂ ಫ್ರೌಢ ಹುಳುಗಳಿಗೆ ಸೂಕ್ತವಾಗಿರಬೇಕು. ಅಧಿಕ ಸೊಪ್ಪಿನ ಇಳುವರಿ ಪಡೆಯಲು ಸುಧಾರಿತ ಮತ್ತು ಹೆಚ್ಚು ಇಳುವರಿ ಕೊಡಬಲ್ಲ ಹಿಪ್ಪುನೇರಳೆ ತಳಿಗಳನ್ನು ಬೆಳೆಸುವುದು ಅವಶ್ಯಕ. ಕರ್ನಾಟಕ ರಾಜ್ಯದ ಹವಾಮಾನಕ್ಕನುಗುಣವಾಗಿ ಹಾಗೂ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಿಗೆ ಶಿಫಾರಿತಗೊಂಡ ಕೆಲವು ಹಿಪ್ಪುನೇರಳೆ ತಳಿಗಳನ್ನು ಇಲ್ಲಿ ವಿವರಿಸಲಾಗಿದೆ.
ಮೂಲ : ಕರ್ನಾಟಕ ರೇಷ್ಮೆ ಇಲಾಖೆ
ಕೊನೆಯ ಮಾರ್ಪಾಟು : 5/24/2020
ಹಿಪ್ಪುನೇರಳೆ ತೋಟವನ್ನು ಒಮ್ಮೆ ನಾಟಿ ಮಾಡಿದಲ್ಲಿ ಸೂಕ್ತ ಬೇ...
ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗ...