অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ

ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ

 

ಬಿತ್ತಿದಂತೆ ಬೆಳೆ ಎನ್ನುವ ಗಾದೆಯ ನೈಜ ಅರ್ಥಕ್ಕೆ ನಾನಾ ಆಯಾಮಗಳಿವೆ. ಇಳುವರಿಯನ್ನು ಲಕ್ಷ್ಯದಲ್ಲಿರಿಸಿಕೊಂಡಾಗ, ಬಿತ್ತನೆ ಬೀಜ ಸಮಯ, ಹವಾಮಾನ, ಮಣ್ಣಿನ ಗುಣ ಧರ್ಮಗಳ ಜೊತೆಗೆ ಬೆಳೆಗಳನ್ನು ಕಾಡುವ ವಿವಿಧ ರೋಗಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಬೆಳೆಗಳಿಗೆ ತಗಲುವ ನಾನಾ ರೋಗಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಬೆಳೆ ರೋಗಗಳನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ ಆಗಬಹುದಾದ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು. ಅಂತಹ ನಿರ್ವಹಣಾ ಕ್ರಮಗಳ ಸಮಗ್ರ ಮಾಹಿತಿ ಇಲ್ಲಿದೆ.

ರೈತರು ಬೆಳೆಯುವ ಪ್ರತಿಯೊಂದು ಬೆಳೆಯೂ (ಕೃಷಿ ಅಥವಾ ತೋಟಗಾರಿಕೆ ಬೆಳೆ ) ಒಂದಾದರೊಂದು ರೋಗಕ್ಕೆ ತುತ್ತಾಗುವದು ಸಾಮಾನ್ಯ. ಅವುಗಳಿಂದಾಗುವ ಹಾನಿ ಅಪಾರ. ಈ ರೋಗಗಳಿಗೆ ಕಾರಣವಾದ ರೋಗಾಣು, ಅವುಗಳ ಜೀವನ ಚರಿತ್ರೆ, ಅವು ಹರಡುವ ವಿಧಾನಗಳನ್ನು ತಿಳಿದುಕೊಂಡಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸುವ ವಿಧಾನ ಅನುಸರಿಸಲು ಸಾಧ್ಯವಾಗುತ್ತದೆ. ಸಂರಕ್ಷಣಾ ಕ್ರಮಗಳು ಒಂದೇ ರೀತಿಯಾಗಿರದೇ ನಾನಾ ತೆರನಾಗಿರುತ್ತವೆ. ಅವುಗಳನ್ನೆಲ್ಲಾ ಅರಿತು ಸಂದರ್ಭಕ್ಕನುಸಾರವಾಗಿ ಕೈ ಕೊಂಡಲ್ಲಿ ಸಸ್ಯ ರೋಗಗಳ ತೀವ್ರತೆಯನ್ನು ಕಡಿಮೆಗೊಳಿಸುವುದಲ್ಲದೆ ಅಧಿಕ ಇಳುವರಿ ಹಾಗೂ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ:

ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ

ಮೂಲ : ಕೃಷಿ ಮುನ್ನಡೆ

ಕೊನೆಯ ಮಾರ್ಪಾಟು : 11/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate