অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನುಕೂಲಗಳು ಮತ್ತು ಅನಾನುಕೂಲಗಳು

ಅನುಕೂಲಗಳು ಮತ್ತು ಅನಾನುಕೂಲಗಳು

ಎಲೆಗಳಲ್ಲಿರುವ ಪೋಷಕಾಂಶಗಳು ವಿವಿಧ ಅರ್ಹತೆಗಳನ್ನು ಹೊಂದಿವೆ. ವೇಗದ ಪರಿಣಾಮ, ವಿಮರ್ಶಾತ್ಮಕ ಅವಧಿಯಲ್ಲಿ ಮತ್ತು ಎಲ್ಲ ಸಸ್ಯದ ಅವಧಿಯಲ್ಲಿ ಬೆಳೆಸುವ ಸಾಧ್ಯತೆ, ತೀವ್ರ ಕೊರತೆಗಳ ತಿದ್ದುಪಡಿಯಿಂದ, ಬಸಿಯುವಿಕೆ ಹಾಗೂ ಸ್ಥಿರೀಕರಣದ ಮೂಲಕ ಪೋಷಕಾಂಶಗಳ ನಷ್ಟವನ್ನು ತಡೆಯುತ್ತದೆ. ಹಾಗೂ ಮಣ್ಣಿನಿಂದ ಹೀರಿಕೊಳ್ಳಲು ಕಷ್ಟವಾಗುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ.

ಎಲೆಗಳ ಮೇಲೆ ಪೋಷಕಾಂಶಗಳ ಸಿಂಪರಣೆಯು ಕೇವಲ ಶೀಘ್ರ ಕ್ರಮವಲ್ಲದೆ., ಅದರ ವಿವಿಧ ಕೊರತೆಗಳನ್ನು ನೀಗಿಸುವಲ್ಲಿ ಸಹಾಯಕವಾಗುತ್ತದೆ.

  1. ಬೆಳೆಗಳ ಬೆಳವಣಿಗೆಗೆ ಎಲೆಗಳ ಮೂಲಕ ಗೊಬ್ಬರದ ಸಿಂಪರಣೆಯಿಂದ ಪೋಷಕಾಂಶಗಳ ಕೊರತೆ ಸರಿಪಡಿಸಲು ಉಪಯುಕ್ತ.
  2. ಹೆಚ್ಚಿನ ಒಣ ಹವಾಮಾನವಿರುವ ಪರಿಸ್ಥಿತಿಗಳಲ್ಲಿ ಸಸ್ಯಗಳು ಮಣ್ಣಿನಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಮಣ್ಣಿನ ತೇವಾಂಶ ಕಡಿಮೆ ಇರುವುದರಿಂದ ಎಲೆಗಳ ಮೂಲಕ ಪೋಷಕಾಂಶಗಳ ಸಿಂಪರಣೆ ಬಹಳ ಉಪಯುಕ್ತ.
  3. ರಸಗೊಬ್ಬರವು ಶೀಘ್ರ ಪ್ರತಿಕ್ರಿಯೆ ಅಗತ್ಯವಿದ್ದಾಗ, ಎಲೆಗಳ ಮೇಲೆ ಪೋಷಕಾಂಶಗಳ ಸಿಂಪರಣೆಯು ಮಾದರಿಯಾಗಿದೆ.

ಅನಾನುಕೂಲಗಳು

  1. ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ದ್ರಾವಣವನ್ನು ಬಳಸಿದರೆ ಮಾರ್ಜಿನಲ್ ಎಲೆಯು ಸುಟ್ಟಂತೆ ಅಥವಾ ಬೇಗೆಯು ಸಂಭವಿಸುತ್ತದೆ.
  2. ಕಡಿಮೆ ಸಾಂದ್ರತೆಯಿರುವ ದ್ರಾವಣ ಬಳಸಿದರೆ ಕೇವಲ ಕಡಿಮೆ ಪ್ರಮಾಣಸ ಪೋಷಕಾಂಶಗಳನ್ನು ಸ್ವಲ್ಪ ಸಮಯದಲ್ಲಿ ಸರಬರಾಜು ಮಾಡಬಹುದು.
  3. ಅನೇಕ ಸಿಂಪರಣೇಗಳ ಅಗತ್ಯವಿದೆ. ಇದರಿಂದ ಸಿಂಪರಣೆಗಳ ಮೇಲಿನ ವೆಚ್ಚವು ಹೆಚ್ಚಾಗುತ್ತದೆ. ಆದ್ದರಿಂದ ಇದನ್ನು ಇತರೆ ಸಿಂಪರಣೆಗಳ ಜೊತೆ ಮಿಶ್ರಮಾಡಿ ಉಪಯೋಗಿಸಬೇಕು.
  4. ಇದು ಒಂದು ಶಿಫಾರಸ್ಸಿನ ಏಕೈಕ ವಿಧಾನವಲ್ಲ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate