অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗಾಳಿ ಬಂತು ಭತ್ತ ಹೊಯ್ತು

ಕೃಷಿ ದಿನ­ದಿಂದ ದಿನಕ್ಕೆ ಬದ­ಲಾ­ಗು­ತ್ತಿದೆ. ಕೃಷಿ­ಯನ್ನು ಸುಲಭ ಮಾಡಿ­ಕೊ­ಳ್ಳಲು ಕೃಷಿ­ಕರು ಬಹು­ವಾ­ರ್ಷಿಕ ಮತ್ತು ಕೆಲಸ ಕಡಿಮೆ ಇರುವ ಕೃಷಿ­ಯತ್ತ ತಮ್ಮ ಚಿತ್ತ ಹಾಯಿ­ಸು­ತ್ತಿ­ದ್ದಾರೆ. ಆಹಾರ ಬೆಳೆ ಬೆಳೆ­ಯುವ ಜಾಗ­ದಲ್ಲಿ ಅರಣ್ಯ ಕೃಷಿ ಮಾಡು­ತ್ತಿ­ದ್ದಾರೆ. ಇಂತಹ ಅರಣ್ಯ ಕೃಷಿ­ಯಲ್ಲಿ ಗಾಳಿ (ಸರ್ವೆ, ಸುರ್ಗಿ)ಯೂ ಒಂದು. ಕ್ಯಾಸು­ರಿನಾ ಇಕ್ಯೂ­ಸಿ­ಟಿ­ಪೋ­ಲಿಯಾ ( easurina equisitifolia )ಎ­ನ್ನುವ ಜಾತಿಗೆ ಸೇರುವ ಈ ಸಸ್ಯ­ಗ­ಳನ್ನು ಮೊದಲು ಅರಣ್ಯ ಇಲಾ­ಖೆಯ ಜಮೀ­ನಿ­ನಲ್ಲಿ ಮಾತ್ರ ಬೆಳೆ­ಯು­ತ್ತಿ­ದ್ದರು. ಈಗ ಇದು ರೈತರ ಹೊಲ­ಗ­ಳಿಗೂ ಬಂದಿದೆ.


ಬೆಂಗ­ಳೂರು ಗ್ರಾಮಾಂ­ತರ, ಮಂಡ್ಯ, ಮೈಸೂ­ರಿನ ಕೆಲವು ಭಾಗ­ದಲ್ಲಿ ಗಾಳಿ­ಮ­ರ­ಗ­ಳನ್ನು ರೈತರು ಬೆಳೆ­ಸು­ತ್ತಿ­ದ್ದಾರೆ.


ಕೃಷಿ ಮಾಡು­ವುದು ಸುಲಭ:


ಗಾಳಿ ಮರ­ಗ­ಳನ್ನು ಬೆಳೆ­ಸು­ವಾಗ ಮೊದಲು ನರ್ಸರಿ ಮಾಡಿ­ಕೊಂಡು ಸಸಿ­ಗ­ಳನ್ನು ತಯಾ­ರಿ­ಸಿ­ಕೊ­ಳ್ಳ­ಬೇಕು. ನರ್ಸರಿ ಮಾಡುವ ವ್ಯವ­ಧಾ­ನ­ವಿ­ಲ್ಲ­ದಿ­ದ್ದರೆ, 30 ಪೈಸೆ­ಯಿಂದ ಎರಡು ರೂಪಾ­ಯಿ­ವ­ರೆಗೂ ಸಸಿ­ಗಳು ಖಾಸಗಿ ನರ್ಸ­ರಿ­ಗ­ಳಲ್ಲಿ ದೊರೆ­ಯು­ತ್ತದೆ.


ಸಸಿ­ಯಿಂದ ಸಸಿಗೆ ಮೂರು ಅಡಿ, ಸಾಲಿಂದ ಸಾಲಿಗೆ ಆರು ಅಡಿ ಅಂತ­ರ­ದಲ್ಲಿ, ಒಂದು ಅಡಿ ಆಳ- ಅಗ­ಲದ ಗುಂಡಿ­ಯನ್ನು ತೆಗೆದು, ಅದ­ರಲ್ಲಿ ಕೊಟ್ಟಿಗೆ ಗೊಬ್ಬ­ರ­ವನ್ನು ತುಂಬಿ ಗಾಳಿ ಸಸಿ­ಗ­ಳನ್ನು ನಾಟಿ ಮಾಡ­ಬೇಕು. ರಾಸಾ­ಯ­ನಿಕ ಗೊಬ್ಬ­ರ­ವನ್ನು ಗಾಳಿ ಸಸಿ ಬೇಡು­ವು­ದಿಲ್ಲ. ಆದರೂ ಸಸಿ ಸದೃ­ಢ­ವಾಗಿ ಬೆಳೆ­ಯುವ ಸಲು­ವಾಗಿ ಒಂದು ಸಸಿಗೆ ಹತ್ತು ಗ್ರಾಂನಂತೆ ಎನ್‌­ಪಿ­ಕೆ­ಯನ್ನು ನೀಡ­ಬೇಕು. ಮೂರು ತಿಂಗಳ ನಂತರ ಮತ್ತೊಮ್ಮೆ ಒಂದು ಸಸಿಗೆ 20ಗ್ರಾಂ­ನಂತೆ ಎನ್‌­ಪಿಕೆ ಕೊಡ­ಬೇಕು. ಮತ್ತೆ ಆರು ತಿಂಗಳ ನಂತರ ಒಮ್ಮೆ 40ಗ್ರಾಂ ಎನ್‌­ಪಿ­ಕೆ­ಯನ್ನು ಗಾಳಿ­ಗಿ­ಡ­ಗ­ಳಿಗೆ ನೀಡಿ­ದರೆ ರಾಸಾ­ಯ­ನಿಕ ಬಳ­ಕೆ­ಯನ್ನು ಮತ್ತೆ ಮಾಡುವ ಅಗ­ತ್ಯ­ವಿಲ್ಲ.
ಗಾಳಿ ಕೃಷಿಗೆ ನೀರಿನ ಅಗತ್ಯ ಏಪ್ರಿಲ್‌, ಮೆ ತಿಂಗ­ಳಿ­ನಲ್ಲಿ ಬೇಕಾ­ಗು­ತ್ತದೆ. ಸಸಿ­ಗಳ ಸಾಲು­ಗಳ ನಡುವೆ ಇರುವ ಸಣ್ಣ ಬಸಿ ಕಾಲುವೆ ಮೂಲಕ ಹದಿ­ನೈದು ದಿನ­ಕ್ಕೊಮ್ಮೆ ನೀರು ಹಾಯಿ­ಸಿ­ದರೆ ಸಾಕಾ­ಗು­ತ್ತದೆ. ಗಾಳಿ­ಸ­ಸಿ­ಗ­ಳನ್ನು ನಾಟಿ ಮಾಡಿ ಒಂದು­ವರೆ ವರ್ಷ­ವಾದ ನಂತರ ಗಿಡ­ಗ­ಳನ್ನು ಪ್ರೂನಿಂಗ್‌( ಅನ­ಗತ್ಯ ಟೊಂಗೆ­ಗ­ಳನ್ನು ಕಟಾವು ಮಾಡು­ವುದು) ಮಾಡ­ಬೆ­ಕಾ­ಗು­ತ್ತದೆ. ಗಿಡ­ವನ್ನು ನಾಟಿ ಮಾಡಿ ಮೂರು ವರ್ಷದ ನಂತರ ಕಟಾ­ವಿಗೆ ಬರು­ತ್ತದೆ.


ಖರ್ಚು- ಆದಾಯ:


ಒಂದು ಎಕ­ರೆ­ಯಲ್ಲಿ ಸುಮಾರು ಎರಡು ಸಾವಿರ ಸಸಿ­ಗ­ಳನ್ನು ನಾಟಿ ಮಾಡ­ಬ­ಹುದು. ಸಸಿ, ನೀರು, ಗೊಬ್ಬರ ಎಲ್ಲಾ ಸೇರಿ ಸುಮಾರು ಇಪ್ಪ­ತ್ತೈದು ಸಾವಿರ ರೂಪಾಯಿ ಖರ್ಚಾ­ಗು­ತ್ತದೆ. ಒಂದು ಟನ್‌ ಗಾಳಿ ಮರಕ್ಕೆ 800ರಿಂದ ಎರಡು ಸಾವಿರ ರೂಪಾ­ಯಿ­ವ­ರೆಗೂ ಬೆಲೆ ಸಿಗು­ತ್ತದೆ. ಒಂದು ಎಕ­ರೆಗೆ ಒಂದು ಲಕ್ಷ­ದಿಂದ ಒಂದು ಲಕ್ಷದ ಇಪ್ಪ­ತ್ತೈದು ಸಾವಿರ ರೂಪಾ­ಯಿ­ವ­ರೆಗೂ ಆದಾಯ ದೊರೆ­ಯು­ತ್ತದೆ. ಗಿಡ ನಾಟಿ ಮಾಡಿ ಒಂದು­ವರೆ ವರ್ಷ­ವಾದ ಮೇಲೆ ಮಾಡುವ ಪ್ರೂನಿಂ­ಗ್‌­ನಿಂದ ಸುಮಾರು ಹತ್ತು ಸಾವಿರ ರೂಪಾಯಿ ಆದಾಯ ಬರು­ತ್ತದೆ. ಪ್ರೂನಿಂಗ್‌ ಮಾಡಿದ ಗಾಳಿ ಕಟ್ಟಿ­ಗೆ­ಯನ್ನು ಪವರ್‌ ಪ್ಲಾಂಟ್‌­ನ­ವರು ಖರೀದಿ ಮಾಡು­ತ್ತಾರೆ.
`ಕೃಷಿ ಕಾರ್ಮಿ­ಕರ ಕೊರತೆ ನಮ್ಮನ್ನು ಅರಣ್ಯ ಕೃಷಿ ಕಡೆಗೆ ಬರು­ವಂತೆ ಮಾಡಿತು. ನಾವು ಈಗ ಗಾಳಿ ಮರ­ಗ­ಳನ್ನು ಬೆಳೆ­ಸಿದ ಜಾಗ­ದಲ್ಲಿ ಭತ್ತ­ವನ್ನು ಬೆಳೆ­ಯು­ತ್ತಿ­ದ್ದೆವು. ಈಗಲೂ ಐದು ಎಕ­ರೆ­ಯಲ್ಲಿ ಭತ್ತ­ವನ್ನು ಬೆಳೆ­ಯು­ತ್ತಿ­ದ್ದೇವೆ. ಮೂರು ಎಕ­ರೆ­ಯಲ್ಲಿ ಗಾಳಿ­ಮ­ರ­ಗ­ಳನ್ನು ನಾಟಿ ಮಾಡಿ­ದ್ದೇವೆ. ಈಗ ಇರುವ ಭತ್ತದ ಬೇಸಾಯ ಮಾಡಲು ಕೆಲ­ಸ­ಗಾ­ರರ ತಾಪ­ತ್ರಯ ಅನು­ಭ­ವಿ­ಸು­ತ್ತಿ­ದ್ದೇವೆ. ಗಾಳಿ­ಮ­ರ­ಗ­ಳಿಗೆ ಮೊದ­ಲಿ­ಗಿಂ­ತಲೂ ಈಗ ಮಾರು­ಕಟ್ಟೆ ಮೌಲ್ಯ ಹೆಚ್ಚಿದೆ. ನಮ್ಮ ಮಾಲ್ಕಿ ಜಾಗ­ದಲ್ಲಿ ಅರಣ್ಯ ಕೃಷಿ ಮಾಡಿ­ದರೆ ಅರಣ್ಯ ಇಲಾ­ಖೆ­ಯ­ವರ ರಗಳೆ ಇರು­ವು­ದಿಲ್ಲ. ಮೊದಲು ಅವರ ಅನು­ಮ­ತಿ­ಯನ್ನು ಪಡೆ­ಯದೆ ಈ ತರ­ಹದ ಕೃಷಿ ಮಾಡು­ವಂ­ತಿ­ರ­ಲಿಲ್ಲ.
ಗಾಳಿ­ಮ­ರ­ಗ­ಳನ್ನು ಬೆಳೆ­ಸುವ ಜಾಗ­ದಲ್ಲಿ ಮಧ್ಯೆ ಇರುವ ಖಾಲಿ ಜಾಗ­ದಲ್ಲಿ ತರ­ಕಾ­ರಿ­ಗ­ಳನ್ನು ಬೆಳೆ­ಯ­ಬ­ಹುದು. ಈ ಮರ­ಗ­ಳಿಂದ ಉದು­ರುವ ಎಲೆ­ಗ­ಳಿಂದ ಭೂಮಿ ಮುಚ್ಚಿ­ರು­ತ್ತದೆ. ತೇವಾಂಶ ಯಾವಾ­ಗಲೂ ಇರು­ತ್ತದೆ. ಭೂಮಿ ಫಲ­ವ­ತ್ತಾ­ಗು­ತ್ತದೆ. ಎರೆ­ಹು­ಳು­ಗಳ ಉತ್ಪ­ತ್ತಿಯೂ ಆಗು­ತ್ತದೆ.


`ಭ­ತ್ತ­ವನ್ನು ಬೆಳೆ­ದರೆ ನಮಗೆ ಮೂರು ವರ್ಷಕ್ಕೆ ಹೆಚ್ಚೆಂ­ದರೆ ಎಂಬತ್ತು ಸಾವಿರ ರೂಪಾಯಿ ಆದಾಯ ಬರು­ತ್ತಿತ್ತು. ಗಾಳಿ ಮರ­ದಿಂದ ಏನಿಲ್ಲ ವೆಂದರೂ ಮೂರು ವರ್ಷಕ್ಕೆ ಒಂದು­ಕಾಲು ಲಕ್ಷ ರೂಪಾಯಿ ಆದಾಯ ಬರು­ತ್ತದೆ. ನಾಟಿ ಮಾಡು­ವಾಗ ಮಾತ್ರ ಕೆಲ­ಸ­ಗಾ­ರರು ಬೇಕಾ­ಗು­ತ್ತದೆ. ನಂತರ ನಾವು ಗುತ್ತಿಗೆ ನೀಡು­ತ್ತೇವೆ. ಅವರೆ ಬಂದ ಕಟಾವು ಮಾಡಿ ಹೋಗು­ತ್ತಾರೆ. ಮನೆ ಜನವೇ ಕೆಲಸ ಮಾಡಿ­ದರೆ ಸಾಕಾ­ಗು­ತ್ತದೆ. ಬೇರೆ­ಯ­ವ­ರಿ­ಗಾಗಿ ಕಾಯುವ ಅಗ­ತ್ಯ­ವಿ­ರು­ವು­ದಿಲ್ಲ' ಎಂಬುದು ಮಳ­ವಳ್ಳಿ ತಾಲೂ­ಕಿನ ಕಿರು­ಗಾ­ವ­ಲಿನ ರೈತ ಸಯ್ಯದ್‌ ಘನಿ ಖಾನ್‌ ಅವರ ಅಭಿ­ಪ್ರಾಯ.


ಕೃಷಿ ಕೆಲ­ಸ­ದಲ್ಲಿ ತೊಡ­ಗಿ­ಸಿ­ಕೊ­ಳ್ಳು­ವ­ವರ ಸಂಖ್ಯೆ ಕಡಿ­ಮೆ­ಯಾ­ದಂತೆ ಬೆಳೆ­ಯ­ಲ್ಲಿಯೂ ವ್ಯತ್ಯಾ­ಸ­ವಾ­ಗು­ತ್ತಿದೆ. ಕೃಷಿ ಕ್ರಮವೂ ಬದ­ಲಾ­ಗು­ತ್ತಿದೆ ಎನ್ನು­ವು­ದಕ್ಕೆ ಬೇಸಾ­ಯದ ಭೂಮಿ ಅರಣ್ಯ ಕೃಷಿಗೆ ಒಳ­ಪ­ಡು­ತ್ತಿ­ರು­ವುದು ಒಂದು ಉದಾ­ಹ­ರಣೆ. ಗಾಳಿ ಕೃಷಿಯ ಕುರಿತು ಮಾಹಿ­ತಿ­ಗಾಗಿ: ಸಯ್ಯದ್‌ ಘನಿ ಖಾನ್‌, ಕಿರು­ಗಾ­ವಲು, ಮಳ­ವಳ್ಳಿ ತಾಲೂಕು, ಮಂಡ್ಯ-571424, ದೂರ­ವಾಣಿ-೯೯೦೧೭೩೩೫೧


ಆಹಾರ ಸ್ವಾವ­ಲಂ­ಬ­ನೆಗೆ ಕುತ್ತು!


ಬೇಸಾಯ ಭೂಮಿ ಬೇರೆ ಬೇರೆ ಕೃಷಿಗೆ ಮಾರ್ಪ­ಡು­ತ್ತಿ­ರು­ವುದು ಆತಂ­ಕ­ಕಾರಿ ಸಂಗತಿ. ಉತ್ತ­ರ­ಕ­ನ್ನಡ, ಶಿವ­ಮೊಗ್ಗ, ಚಿಕ್ಕ­ಮ­ಗ­ಳೂರು, ದಾವ­ಣ­ಗೆರೆ ಜಿಲ್ಲೆ­ಗಳ ಕೆಲವು ಭಾಗ­ದಲ್ಲಿ ಭತ್ತ ಬೆಳೆ­ಯುವ ಜಾಗ­ದಲ್ಲಿ ಅಡಿಕೆ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಅದೇ ಭತ್ತ ಹೆಚ್ಚು ಬೆಳೆ­ಯುವ ಮಂಡ್ಯ ಮುಂತಾದ ಹಳೇ ಮೈಸೂರು ಪ್ರಾಂತ್ಯ­ದಲ್ಲಿ ಭತ್ತದ ಕೃಷಿ ಬಿಟ್ಟು ಬೇರೆ ಕೃಷಿ ಕಡೆಗೆ ರೈತರು ಹೊರ­ಟಿ­ದ್ದಾರೆ.


ಆಹಾರ ಬೆಳೆ­ಯುವ ಪ್ರದೇ­ಶ­ದಲ್ಲಿ ಆದಾಯ ತರುವ ಬೆಳೆ­ಗ­ಳನ್ನು ಬೆಳೆ­ಯು­ವು­ದ­ರಿಂದ ಸ್ವತಃ ರೈತರೇ ಆಹಾ­ರದ ಸ್ವಾವ­ಲಂ­ಬನೆ ಕಳೆದು ಕೊಳ್ಳು­ತ್ತಿ­ದ್ದಾರೆ.`ಆ­ಹಾರ ಬೆಳೆ ಬೆಳೆ­ಯು­ವುದು ಬಿಟ್ಟು ಅರಣ್ಯ ಕೃಷಿ ಮಾಡು­ತ್ತಿ­ರುವ ಬಗ್ಗೆ ನಮಗೂ ಬೇಸ­ರ­ವಿದೆ. ಆದರೆ ಅನಿ­ವಾರ್ಯ. ಕೆಲ­ಸ­ಗಾ­ರ­ರಿಲ್ಲ. ಆಧು­ನಿಕ ಕೃಷಿ ಮಾಡು­ವಷ್ಟು ಆರ್ಥಿ­ಕ­ವಾಗಿ ಸಬ­ಲ­ರಲ್ಲ' ಎಂದು ಅರಣ್ಯ ಕೃಷಿ ಮಾಡುವ ರೈತರು ಹೇಳು­ತ್ತಾರೆ.

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 5/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate