অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗ್ರಾಹಕರ ಸಂಬಂಧಗಳು

  • ಗ್ರಾಹಕ ಎಂಬ ಪದವನ್ನು ಯಾವುದೇ ಕಾಯ್ದೆಯಡಿ ವ್ಯಾಖ್ಯಾನಿಸಲಾಗಿದೆ.
  • ಯಾವಾಗ ಬ್ಯಾಂಕರನು ಗ್ರಾಹಕನಿಗೆ ಓವರಡ್ರಾಫ್ಟ ಸೇವೆಯನ್ನು ಮಂಜೂರು ಮಾಡುತ್ತಾನೋ ಆಗ ಅವನ ಮತ್ತು ಗ್ರಾಹಕನ ಸಂಬಂಧವು ಸಾಲ ಕೊಟ್ಟವ ಮತ್ತು ಸಾಲಗಾರ ಆಗುತ್ತದೆ.
  • ಯಾವಾಗ ಗ್ರಾಹಕನು ಬ್ಯಾಂಕನಲ್ಲಿ ಭದ್ರಕಪಾಟು( ಲಾಕರ್)ನ್ನು ತೆಗೆದುಕೊಳ್ಳುತ್ತಾನೋ ಆಗ ಅವನ ಮತ್ತು ಬ್ಯಾಂಕರನ ಸಂಬಂಧವು ಭೋಗ್ಯದಾರ(ಲೆಸ್ಸೀ) ಮತ್ತು ಹಿಡುವಳಿದಾರ(ಲೆಸ್ಸರ್) ಆಗುವವು.
  • ಯಾವಾಗ ಗ್ರಾಹಕನು ಬ್ಯಾಂಕನಲ್ಲಿ ಖಾತೆಯನ್ನು ಬಂದ ಮಾಡುತ್ತಾನೋ ಆಗ ಅವರ ಸಂಬಂಧವು ನಿಂತು ಹೋಗುತ್ತದೆ.
  • ಠೇವಣಿ ಖಾತೆಗಳಲ್ಲಿ ಬ್ಯಾಂಕ ಮತ್ತು ಗ್ರಾಹಕನ ಮಧ್ಯೆ ಮುಖ್ಯ ಸಂಬಂಧವು ಬ್ಯಾಂಕ-ಸಾಲಗಾರ, ಗ್ರಾಹಕ-ಸಾಲಕೊಟ್ಟವ.
  • ಬ್ಯಾಂಕನಲ್ಲಿ ವಸ್ತುಗಳನ್ನು ಸುರಕ್ಷತೆಯ ರಕ್ಷಣೆಗೆ ಇದ್ದಾಗ ಅವರು ಜಾಮೀನಾದವನು ಮತ್ತು ಸ್ವತ್ತನ್ನು ವಶಕ್ಕೆ ತೆಗೆದುಕೊಂಡು (ಬೇಲರ-ಬೇಲೀ) ಸಂಬಂಧವನ್ನು ಹೊಂದಿರುತ್ತಾರೆ.
  • ಬ್ಯಾಂಕು ಗ್ರಾಹಕನಿಂದ ಧನಾದೇಶ(ಚೆಕ್)ನ್ನು ಹಣ ಬಿಡುಗಡೆ ಮಾಡಲು ಪಡೆದಾಗ ಅವರ ಮಧ್ಯ ಯಾವ ಸಂಬಂಧವು ನಿಮಾ೯ಣವಾಗುವುದಿಲ್ಲ.
  • ಯಾವಾಗ ಬ್ಯಾಂಕಿನ ಗ್ರಾಹಕನ ಯಾವುದೇ (ಎಫ್.ಡಿ.ಆರ್.) ಸ್ಥಿರ ಠೇವಣಿ ರಸೀದಿ ಕಳೆದುಕೊಂಡಿರುತ್ತಾನೋ ಆಗ ನಷ್ಟ ಭತಿ೯ ಕರಾರು ಪತ್ರ (ಇಂಡೆಮ್ನಿಟಿ ಬಾಂಡ್) ನ್ನು ಚಲಾಯಿಸಲಾಗುತ್ತದೆ.

ಮುಂಚೂನಿಯಲ್ಲಿರುವ ಹಾಗೂ ಮೊದಲಪ್ರಾಶಸ್ತ್ಯದ ಬ್ಯಾಂಕಿನ ಆಥಿ೯ಕ ವಿಭಾಗದ ಮೂಲತತ್ವಗಳು

  • ಹಣ ಈಡು ಮಾಡುವುದರ ಮೂಲ ಭೂತ ಮೂಲತತ್ವಗಳಾವುವೆಂದರೆ- ಸುರಕ್ಷತೆ ಮತ್ತು ಋಣ ಸಂದಾಯ ಸ್ಥಿತಿ, ಲಾಭದಾಯಕತೆ ಮತ್ತು ಅಪಾಯದ ವೈವಿಧ್ಯತೆ ಮತ್ತು ಉತ್ಪಾದನಾ ಉದ್ದೇಶ ಮತ್ತು ಭದ್ರತೆ.
  • ಬ್ಯಾಂಕಿನ ಋಣ ಸಂದಾಯ ಸ್ಥಿತಿ ಎಂದರೆ ಕೈಯಲ್ಲಿರುವ ನಗದು , ನಗದು ಮತ್ತು ಬ್ಯಾಂಕ ಶಿಲ್ಕುಗಳು ಮತ್ತು ನಗದಿಗೆ ಪರಿವತಿ೯ಸಬಹುದಾದ ಕಡಿಮೆ ಅವಧಿಯ ಚಾಲ್ತಿ ಸ್ವತ್ತುಗಳು.
  • ಗ್ರಾಹಕನ ಲಾಭತ್ವದ ವಿಮಶೆ೯ ಎಂದರೆ ಗ್ರಾಹಕನ ವಹಿವಾಟಿನ ಲಾಭತ್ವದ ಅಂದಾಜು.
  • ಸಾಲಮಾಡುವವನ ಭಾಗದ ಸಂದಾಯವನ್ನು ಅವನಲ್ಲಿರುವ ಇಚ್ಛೆಯನ್ನು ಮತ್ತು ಅವನ ಋಣಸಂದಾಯದ ಕೊರತೆಯ ಉದಾಸೀನತೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ ತನ್ನನ್ನು ಅಪಾಯದಲ್ಲಿ ಸಿಲುಕಿಸುವುದನ್ನು ತಡೆಯಬಲ್ಲದು.
  • ಬ್ಯಾಂಕಿನವರ ಮಾತಿನ ವಿಧಾನದಲ್ಲಿ ಸಾಲ ಕೊಡುವಲ್ಲಿಯ ಅಪಾಯ ಎಂದರೆ ಸಾಲಗಾರನ ಮರುಪಾವತಿಯಲ್ಲಿ ಇರುವ ಉದಾಸೀನತೆ ಎಂದಥ೯.

ಚಲಾವಣೆಯಲ್ಲಿರುವ ಪ್ರಧಾನ ನಿಧಿ ಎಂದರೆ ದಿನವಹಿಯ ವಹಿವಾಟಿಗೆ ಅಗತ್ಯವಾದದ್ದು

  • ಅವಧಿಯ ಸಾಲಗಳು ಎಂದರೆ ಒಂದು ವಷ೯ದಿಂದ ೧೦ ವಷ೯ಗಳ ನಂತರ ಸಂದಾಯ ಮಾಡಬೇಕಾದ ಸಾಲಗಳು. ಮರುಸಂದಾಯಗಳನ್ನು ಕಂತಿನಲ್ಲಿ ಮಾಡಬೇಕಾಗುತ್ತದೆ. ಮತ್ತು ಅವಧಿಯ ಸಾಲಗಳನ್ನು ಸ್ಥಿರ ಆಸ್ಥಿಗಳನ್ನು ಪ್ರಾಪ್ತಿ ಮಾಡಲು ಬಳಸಲಾಗುತ್ತವೆ.
  • ಬಳಕೆಯಲ್ಲಿರುವ ಪ್ರಧಾನ ನಿಧಿಯ ಬೇಡಿಕೆಯನ್ನು ಕಾರ್ಯ ನಡೆಸುವ ಚಕ್ರದ ವಿಧಾನ ಅಥವಾ ಯೋಚಿಸಿದ ಬಂಡವಾಳ ಹೂಡಿಕೆ ಮಾರಾಟದದ ಪ್ರಮಾಣದ ವಿಧಾನ ಅಥವಾ ನಗದು ಆಯ-ವ್ಯಯ ಪಟ್ಟಿಯ ವಿಧಾನವನ್ನು ಅನುಸರಿಸಿ ಅಂದಾಜಿಸಬಹುದಾಗಿದೆ.
  • ಮನೆಗಳನ್ನು ಕಟ್ಟಲು ವೈಯಕ್ತಿಕವಾಗಿ ರೂ.೨೦.ಲಕ್ಷದವರೆಗೆ ಮಂಜೂರು ಮಾಡಿದ ಮನೆಸಾಲ(ಬ್ಯಾಂಕುಗಳು ತಮ್ಮ ನೌಕರರಿಗೆ ಮಂಜೂರು ಮಾಡಿದ ಸಾಲಗಳನ್ನು ಹೊರತುಪಡಿಸಿ)ಗಳನ್ನು ಪ್ರಥಮ ಪಾಶಸ್ತ್ಯ ವಿಭಾಗದ ಮುಂಗಡ ಎಂದು ಭಾವಿಸಲಾಗುತ್ತದೆ.
  • ಶೈಕ್ಷಣಿಕ ಸಾಲಗಳು ಭಾರತದಲ್ಲಿಯ ವ್ಯಾಸಂಗಕ್ಕೆ ೧೦ ಲಕ್ಷದವರೆಗಿನ ಶೈಕ್ಷಣಿಕ ಸಂಬಂಧಕ್ಕೆ ಮಂಜೂರು ಮಾಡಿದ ಸಾಲ ಅಥವಾ ಮುಂಗಡಗಳನ್ನು ಮಾತ್ರ ಒಳಗೊಂಡಿರಬೇಕು. ಇದನ್ನು ಮೊದಲ ಪ್ರಾಶಸ್ತ್ಯ ವಿಭಾಗ ಎಂದು ವಿಂಗಡಿಸಲಾಗುತ್ತದೆ.
  • ನಿಗದಿತ ವಾಣಿಜ್ಯ ಬ್ಯಾಂಕುಗಳು ಮೊದಲ ಪ್ರಾಶಸ್ತ್ಯದ ವಿಭಾಗಕ್ಕೆ ಸಾಲವನ್ನು ವೄಧ್ಧಿಸಬೇಕು.ಮತ್ತು ಮೊದಲ ಪ್ರಾಶಸ್ತ್ಯದ ಮುಂಗಡಗಳು ಬ್ಯಾಂಕಿನ ನಿವ್ವಳ ಸಾಲದ ೪೦%ದಿಂದಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ.
  • ಕಿಸಾನ-ಕಾಡ೯ಗಳನ್ನು ರೈತರಿಗೆ ಅವರು ಅವರ ಕೄಷಿಯ ಬೇಡಿಕೆಗಳನ್ನು ಈಡೇರಿಸಲು ಮತ್ತು ತೊಡಗಿಸಲು ಬೇಕಾದ ವಸ್ತುಗಳ ಖರೀದಿ ಮತ್ತು ಕಡಿಮೆ ಅವಧಿಯ ಅಗತ್ಯಗಳು ಮತ್ತು ಅವರ ಚಟುವಟಿಕೆಗೆ ಸಂಬಂಧಿಸಿದ ಬಳಕೆಯಲ್ಲಿರುವ ಪ್ರಧಾನ ನಿಧಿಗಳಂತಹ ಇತರ ಅಗತ್ಯಗಳನ್ನು ಈಡೇರಿಸಲು ಕೊಡಲಾಗುತ್ತದೆ.
  • ಕೄಷಿ ಕ್ಷೇತ್ರ ಯಾಂತ್ರಿಕರನ ಸ್ಕೀಂ(ವ್ಯವಸ್ಥೆ)ಯ ಅಡಿ ಸಾಲಗಳನ್ನು ಕೄಷಿ ಕ್ಷೇತ್ರ ಸಲಕರಣೆಗಳನ್ನು ಕೊಳ್ಳಲು ಕೊಡಲಾಗುತ್ತದೆ.
  • ವಿದೇಶಿ ಬ್ಯಾಂಕುಗಳಿಂದ ಮಾಡಿದ ರಪ್ತಿನ ಆಥಿ೯ಕತೆಯ ಮೊದಲ ಪ್ರಾಶಸ್ತ್ಯದ ವಿಭಾಗದ ಮುಂಗಡ ಎಂದು ಎಣಿಕೆ ಮಾಡಲಾಗುತ್ತದೆ.
  • ಭಾರತದಲ್ಲಿಯ ವಿದೇಶಿ ಬ್ಯಾಂಕುಗಳ ಸಾಲ ರಫ್ತಿನ ಗುರಿಯು ಎ.ಎನ್.ಬಿ.ಸಿ.ಯ ೧೨% ಇರುತ್ತದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate