অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-1

ಭಾಗ-1

ಪ್ರಶ್ನೆಗಳು:

ಉತ್ತರಗಳು:

೧. ಸ್ವತಂತ್ರ ಭಾರತದಲ್ಲಿ ನೇಮಕಗೊಂಡ
ಪ್ರಥಮ ಶಿಕ್ಷಣದ ಆಯೋಗ ಯಾವುದು?
೨. ಕೆಎಸ್ಆರ್ಪಿ (KSRP) ನ ವಿಸ್ತೃತ
ರೂಪವೇನು?
೩. ಹಸಿರು ಸಸ್ಯಗಳು ಯಾವ ಕ್ರಿಯೆಯ
ಮೂಲಕ ತಮ್ಮ ಆಹಾರವನ್ನು ತಾವೇ
ತಯಾರಿಸಿಕೊಳ್ಳುತ್ತವೆ.
೪. ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ
ಯಾವುದು?
೫. ಶೂಲಪಾಣಿ ಇದು ಯಾರ
ಕಾವ್ಯನಾಮವಾಗಿದೆ?
೬. ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ
ಬರುವ ವಾಧ್ಯ ಯಾವುದು?
೭. ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ
ಆಸ್ಟ್ರೇಲಿಯಾದ ಯಾವ
ಕ್ರೀಡಾಂಗಣದಲ್ಲಿದೆ?
೮. ಸೋಮೇಶ್ವರ ವನ್ಯಪ್ರಾಣಿಧಾಮ
ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೯. ಲಾಲ್ಲಜಪತ್ರಾಯರ ವಂದೇ ಮಾತರಂ
ಯಾವ ಭಾಷೆಯ ಪತ್ರಿಕೆಯಾಗಿತ್ತು?
೧೦. ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್
ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು
ತಂದ ಗೌವರ್ನರ್ ಜನರಲ್ ಯಾರು?
೧೧. ಅಂಗಾರಕ ಹೆಸರಿನ ಗ್ರಹ ಯಾವುದು?
೧೨. ವಿಕಿರಣಗಳು ಸೂಸುವ ಮೂರು ವಿಧವಾದ
ಕಿರಣಗಳು ಯಾವವು?
೧೩. ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ
ಬಂದ ವರ್ಷ ಯಾವುದು?
೧೪. ಭಾರತೀಯ ಮಾವು ಸಂಶೋಧನಾ
ಸಂಸ್ಥೆ ಎಲ್ಲಿದೆ?
೧೫. ನಿಜಾತ್ಮ ರಾಮರಾಯ ಇದು ಯಾರ
ಅಂಕಿತನಾಮವಾಗಿದೆ?
೧೬. ಡಾ||ಸಲೀಂ ಅಲಿ ಪಕ್ಷಿಗಳ
ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
೧೭. ಕಾಂಬೋಡಿಯಾ ದೇಶದಲ್ಲಿ
ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?
೧೮. ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ
ಆಯೋಗ ಯಾವುದು?
೧೯. ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ
ಯಾವುದು?
೨೦. ಏ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು
ರಚಿಸಿದವರು ಯಾರು?
೨೧. ಒಂದು ಮಸೂರದ ಸಾಮರ್ಥ್ಯವನ್ನು
ಅಳೆಯುವ ಮಾನ ಯಾವುದು?
೨೨. ಕರ್ನಾಟಕ ರಾಜ್ಯ ಮಹಿಳಾ ವಿಶ್ವ
ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?
೨೩. ಶ್ರೀನಿವಾಸ ರಾಮಾನುಜಂ ರವರ
ಹುಟ್ಟೂರು ಯಾವುದು?
೨೪. ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ
ಯಾವ ನದಿಯ ದಂಡೆಯ ಮೇಲಿದೆ?
೨೫. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ
ಸಂಸ್ಥಾಪಕರು ಯಾರು?
೨೬. ಚುಟುಕು ಬ್ರಹ್ಮ ಎಂದು ಕನ್ನಡದ
ಯಾವ ಸಾಹಿತಿಯನ್ನು ಕರೆಯುತ್ತಾರೆ?
೨೭. ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ
ಯಾರು?
೨೮. ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ
ಬಂದ ವರ್ಷ ಯಾವುದು?
೨೯. ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ
ತಂದುಕೊಟ್ಟ ಚಲನಚಿತ್ರ ಯಾವುದು?

೧. ಡಾ||ರಾಧಾಕೃಷ್ಣನ್ ಆಯೋಗ
೨. ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
೩. ದ್ಯುತಿಸಂಶ್ಲೇಷಣೆ ಕ್ರಿಯೆ
೪. ಜೂನ್ ೨೦೦೪
೫. ಬಿ.ಶಿವಮೂರ್ತಿ
೬. ತಬಲಾ
೭. ಮೆಲ್ಬೋರ್ನ್ ಕ್ರೀಡಾಂಗಣ
೮. ದಕ್ಷಿಣ ಕನ್ನಡ
೯. ಉರ್ದು
೧೦. ಲಾರ್ಡ್ ಕಾರ್ನ್ವಾಲಿಸ್
೧೧. ಮಂಗಳ ಗ್ರಹ
೧೨. ಅಲ್ಟಾ ಬೀಟ ಗಾಮಾ
೧೩. ೧೯೬೩
೧೪. ವಿಜಯವಾಡ (ಆಂಧ್ರಪ್ರದೇಶ)
೧೫. ಮಾದರ ಚನ್ನಯ್ಯ
೧೬. ಗೋವಾ
೧೭. ರೀಯಲ್
೧೮. ಕೊಠಾರಿ ಆಯೋಗ
೧೯. ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ
ಪ್ರದೇಶ
೨೦. ಮೌಲಾನಾ ಆಜಾದ್
೨೧. ಡಯಾಪ್ಟರ್
೨೨. ವಿಜಯಪುರ
೨೩. ಈರೋಡ (ತಮಿಳುನಾಡು)
೨೪. ನೇತ್ರಾವತಿ
೨೫. ಸರ್. ಅಹಮ್ಮದ್ ಖಾನ್
೨೬. ದಿನಕರ ದೇಸಾಯಿ
೨೭. ಗ್ಯಾನಿ ಜೇಲ್ಸಿಂಗ್
೨೮. ೩೦ಮೇ – ೧೯೮೭
೨೯. ಹಸೀನಾ


ಪ್ರಶ್ನೆಗಳು:

ಉತ್ತರಗಳು:

೧. ಭಾರತೀಯ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?
೨. ಹಚ್ಚೇವು ಕನ್ನಡದ ದೀಪ
ಗೀತೆಯನ್ನು ಬರೆದವರು ಯಾರು?
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು?
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ
ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು?
೬. ಸೀತಾತನಯ ಇದು ಯಾರ ಕಾವ್ಯನಾಮ?
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು
ಕರೆಯುತ್ತಾರೆ?
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು?
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ
ಯಾವ ರಾಜ್ಯದಲ್ಲಿದೆ?
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ
ಆತ್ಮಕಥನವಾಗಿದೆ?
೧೧. ಶರೀರದಲ್ಲೆ ತಯಾರಾಗುವ
ಜೀವಸತ್ವ ಯಾವುದು?
೧೨. ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ
ಯಾವುದು?
೧೪. ಸಂಗನ ಬಸವಣ್ಣ ಇದು ಯಾರ
ಅಂಕಿತನಾಮವಾಗಿದೆ?
೧೫. ವೃತ್ತ ಕ್ರಾಂತಿ ಇದು ಯಾವ ಬೆಳೆಗೆ
ಸಂಬಂಧಿಸಿದೆ?
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ
ಟ್ಯಾಂಕ್ದ ಹೆಸರೇನು?
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ
ಪ್ರಥಮ ವ್ಯಕ್ತಿ ಯಾರು?
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ
ಲೋಹಗಳು ಯಾವುವು?
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ
ನೀರು ಬರಿಸಿದರೆಂಬ ಪ್ರತೀತಿ ಇರುವ
ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ?
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ
ದೊಡ್ಡದಾದ ದ್ವೀಪ ಯಾವುದು?
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್
ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?
೨೨. ಮುಂಜಾನೆಯ ನಕ್ಷತ್ರ ಎಂದು ಯಾವ
ಗ್ರಹವನ್ನು ಕರೆಯುತ್ತಾರೆ?
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ
ಕರ್ನಾಟಕದಲ್ಲಿ ಎಲ್ಲಿದೆ?
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು
ನೀಡಿದವರು ಯಾರು?
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ
ಸಭೆ ನಡೆದ ನಗರ ಯಾವುದು?
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್
ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ
ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?
೨೯. ಇತ್ತೀಚಿಗೆ ವರ್ಣರಂಜಿತವಾಗಿ
ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ
ನಿರ್ದೇಶಕರು ಯಾರು?

೧. ಕೆ.ರಾಧಾಕೃಷ್ಣನ್
೨. ಡಿ.ಎಸ್.ಕರ್ಕಿ
೩. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ೧೯೫೬
೫. ಪೀನ ಮಸೂರು
೬. ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಒಂಟೆ
೮. ಲ್ಯಾಕ್ಟಿಕ್ ಆಮ್ಲ
೯. ಒಡಿಸ್ಸಾ (ಧನ್ಬಾದ್)
೧೦. ಡಾ||ಸಿದ್ಧಲಿಂಗಯ್ಯ
೧೧. ಜೀವಸತ್ವ ಕೆ
೧೨. ಉತ್ತರಾಂಚಲ
೧೩. ಕರ್ನಾಟಕದ ನಂದಿನಿ
೧೪. ಅಕ್ಕನಾಗಮ್ಮ
೧೫. ಆಲೂಗಡ್ಡೆ ಉತ್ಪಾದನೆ
೧೬. ಅರ್ಜುನ್
೧೭. ಖುದಾದ್ ಖಾನ್
೧೮. ತಾಮ್ರ, ಸತು ಮತ್ತು ನಿಕ್ಕಲ್
೧೯. ಬೀದರ್
೨೦. ನಿಕೋಬಾರ್
೨೧. ಬಾಲಘಾಟ್ & ಚಿಂದ್ವಾರ್
೨೨. ಶುಕ್ರಗ್ರಹ
೨೩. ಸಿಟ್ರಿಕ್ ಆಮ್ಲ
೨೪. ಬೆಂಗಳೂರು
೨೫. ಎಮ್.ವಿ.ಗೋಪಾಲಸ್ವಾಮಿ
೨೬. ಬೆಂಗಳೂರು
೨೭. ಪ್ರಕಾಶ ಪಡುಕೋಣೆ
೨೮. ಕೆ.ಎಲ್.ರಾಹುಲ್
೨೯. ಜಿ.ಕೆ.ವೆಂಕಟೇಶ್

ಪ್ರಶ್ನೆಗಳು:

ಉತ್ತರಗಳು:

೧. ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ
ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರಕಿದೆ?
೨. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೩. ಗೀತ ರಹಸ್ಯ ಗ್ರಂಥದ ಕರ್ತೃ ಯಾರು?
೪. ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು
ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
೫. ಎನ್ಕೆ ಇದು ಯಾರ ಕಾವ್ಯ ನಾಮ?
೬. ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?
೭. ಪೆನ್ಸಿಲ್ನ ಸಂಶೋಧಕರು ಯಾರು?
೮. ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು?
೯. ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ
ಯಾವುದು?
೧೦. ಭಾರತದಲ್ಲಿ ಮೊದಲ ಸಂಪೂರ್ಣ
ಹವಾನಿಯಂತ್ರಿತ ಟ್ರೈನ್ ಯಾವುದು?
೧೧. ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ
ಅಪರಾಧವೆಂದು ಘೋಷಿಸಲಾಗಿದೆ?
೧೨. ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ
ಯಾವುದು?
೧೩. ಅಮೃತಸರದ ಸ್ವರ್ಣ ಮಂದಿರದಲ್ಲಿ
ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ
ವರ್ಷ ಯಾವುದು?
೧೪. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ
ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೧೫. ಭಾರತದ ಯಾವ ರಾಜ್ಯವು ಬಹುದೊಡ್ಡ
ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?
೧೬. ಏಷಿಯಾದ ಬೆಳಕು ಎಂದು ಯಾರನ್ನು
ಕರೆಯುತ್ತಾರೆ?
೧೭. ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ
ಸ್ಥಳ ಯಾವುದು?
೧೮. ೧೯೯೨ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ
ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೯. ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ
ಪ್ರಸಿದ್ಧವಾಗಿದೆ?
೨೦. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ
ಜಲಾಶಯ ಯಾವುದು?
೨೧. ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ
ಚಳುವಳಿಯಲ್ಲಿ ಕೂಗಲಾಯಿತು?
೨೨. ಸಿಸ್ಟರ್ ನಿವೇದಿತಾ ಎಂದು ಯಾರನ್ನು
ಕರೆಯುತ್ತಾರೆ?
೨೩. ಖಾಲ್ಸಾದ ಸಂಸ್ಥಾಪಕರು ಯಾರು?
೨೪. ಜನತಾ ಪಕ್ಷದಿಂದ ವಿಭಜನೆಗೊಂಡ
ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ
ಯಾವುದು?
೨೫. ಪಾರಾದೀಪ ಬಂದರು ಯಾವ
ರಾಜ್ಯದಲ್ಲಿದೆ?
೨೬. ಅಂಡಮಾನ್ ದ್ವೀಪಗಳಲ್ಲಿರುವ ಅತಿ
ಎತ್ತರವಾದ ಶಿಖರ ಯಾವುದು?
೨೭. ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು
ಯಾರು?
೨೮. ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೯. ೨೦೦೧ರಲ್ಲಿ ಪಿ.ಗೋಪಿಚಂದ ರವರ ಯಾವ
ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ
ಪ್ರಶಸ್ತಿ ನೀಡಲಾಯಿತು?

೧. ಊರ್ವಶಿ
೨. ಡಾ||ಯು.ಆರ್.ಅನಂತ ಮೂರ್ತಿ
೩. ಬಾಲಗಂಗಾಧರ ತಿಲಕ್
೪. ೧೯೭೨
೫. ಎನ್.ಕೆ.ಕುಲಕರ್ಣಿ
೬. ಉತ್ತರಾಂಚಲ
೭. ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
೮. ಕಬ್ಬಿಣ
೯. ಕೊಡೈಕೆನಾಲ್
೧೦. ರಾಜಧಾನಿ ಏಕ್ಸ್ ಪ್ರೆಸ್
೧೧. ೧೭ನೇ ಕುಲುಮು
೧೨. ಪುಲಿಕಾಟ್
೧೩. ೧೯೮೪
೧೪. ಜೋಗ್
೧೫. ಆಂದ್ರಪ್ರದೇಶ
೧೬. ಬುದ್ಧ
೧೭. ನವದೆಹಲಿ
೧೮. ದೇವರು
೧೯. ಮೋಟಾರು ಕಾರು
೨೦. ಗೋವಿಂದ ಸಾಗರ್
೨೧. ಭಾರತ ಬಿಟ್ಟು ತೊಲಗಿ
೨೨. ಮಾರ್ಗರೇಟ್ ನೊಬೆಲ್
೨೩. ಗುರುಗೋವಿಂದ್ ಸಿಂಗ್
೨೪. ೧೯೮೦
೨೫. ಒರಿಸ್ಸಾ
೨೬. ಸ್ಯಾಡಲ್ ಶಿಖರ
೨೭. ಮೀರಾ ನಾಯಕ್
೨೮. ಟೆನ್ನಿಸ್
೨೯. ಬ್ಯಾಡ್ಮಿಂಟನ್

ಪ್ರಶ್ನೆಗಳು:

ಉತ್ತರಗಳು:

೧) ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ
ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨) ಸತ್ಯಕಾಮ ಇದು ಯಾರ ಕಾವ್ಯನಾಮ ?
೩) ಬಾ೦ಗ್ಲಾದೇಶದ ರಾಷ್ಟ್ರೀಯ
ಕ್ರೀಡೆ ಯಾವುದು ?
೪) ಕೃಷ್ಣನದಿಯ ಉಗಮಸ್ಥಳ ಯಾವುದು ?
೫) ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು
ಕ೦ಡುಹಿಡಿದವರು ಯಾರು ?
೬) ಐಎಸ್ಐ (ಇ೦ಡಿಯನ್ ಸ್ಟಾಂಡರ್ಡ್
ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ
ಯಾವುದು?
೭) ನೀರಿನಲ್ಲಿ ಆಮ್ಲಜನಕವವನ್ನು
ಹೀರಿಕೊಳ್ಳಲು ಮೀನಿಗೆ
ಸಹಾಯ ಮಾಡುವ ಅ೦ಗ ಯಾವುದು ?
೮) ಇ೦ದಿರಾ ಪಾಯಿ೦ಟ್ಗಿರುವ ಮತ್ತೊ೦ದು
ಹೆಸರೇನು ?
೯) ಲೋಮನಾಳಗಳು ಮಾನವನ ದೇಹದ ಯಾವ ಅ೦ಗದಲ್ಲಿ
ಕ೦ಡುಬರುತ್ತವೆ ?
೧೦) ಎಷ್ಟನೇಯ ಪ೦ಚವಾರ್ಷಿಕ ಯೋಜನೆಯ
ಅವಧಿಯಲ್ಲಿ ಕರ್ನಾಟಕದ ತು೦ಗಭದ್ರಾ
ಆಣೆಕಟ್ಟನ್ನು ನಿರ್ಮಿಸಲಾಯಿತು?
೧೧) ಪ್ಯಾರಿಸ್ನ ಐಫೆಲ್ ಟವರನ್ನು
ನಿರ್ಮಿಸಿದವರು ಯಾರು?
೧೨) ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ?

೧೩) ಪ್ರಸಿದ್ಧವಾದ ಕಾಮಾಕ್ಯ ದೇವಾಲಯ
ಎಲ್ಲಿದೆ ?
೧೪) ಪ್ರಥಮ ಸಾರ್ವಜನಿಕ ಅಂಚೆ
ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
೧೫) ಅತಿದೊಡ್ಡ ಥರ್ಮಲ್ ವಿದ್ಯುಚ್ಥಕ್ತಿ
ಕೇ೦ದ್ರ ಕರ್ನಾಟಕದಲ್ಲಿ ಎಲ್ಲಿದೆ ?

೧೬) ಪುಲಿಟ್ಜರ್ ಪ್ರಶಸ್ತಿ ಯಾದ ಕ್ಷೇತ್ರದಲ್ಲಿ
ಸಾಧನೆ ಮಾಡಿದವರಿಗೆ
ನೀಡಲಾಗುತ್ತದೆ ?
೧೭) ಜೇಮ್ಸಬಾ೦ಡ್ ಕಾದ೦ಬರಿಗಳ ಮೂಲಕ ಜನಪ್ರಿಯರಾದ
ಲೇಖಕರು ಯಾರು ?
೧೮) ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ
ಸ್ಧಾಪನೆಗೆ ಅವಕಾಶವಾದ ವರ್ಷ ಯಾವುದು ?
೧೯) ಭಾರತದಲ್ಲಿ ಶಾಖೆ ತೆರೆದ
ಪ್ರಥಮ ವಿದೇಶಿ ಬ್ಯಾ೦ಕ್ ಯಾವುದು ?
೨೦) ಕೊಡಗಿಗೆ ಇ೦ಗ್ಲೀಷ್ನಲ್ಲಿ
ಏನೆ೦ದು ಕರೆಯುತ್ತಾರೆ ?
೨೧) ನವೋದಯ ಶಾಲೆಗಳು ಜಾರಿಗೆ ಬ೦ದ
ವರ್ಷ ಯಾವುದು ?
೨೨) ರಾವಣನು ಸೀತೆಯನ್ನು
ಅಪಹರಿಕೊ೦ಡು ಹೋಗಲು ಉಪಯೋಗಿಸಿದ ಹಾರುವ
ರಥದ ಹೆಸರೇನು?
೨೩) ಹುಚ್ಚುನಾಯಿ ಕಡಿತದಿ೦ದ ಉ೦ಟಾಗುವ ರೋಗ ಯಾವುದು ?
೨೪) ಮೊಟ್ಟಮೊದಲಿಗೆ
ಪ್ಯಾರಾಚೂಟ್ ಬಳಸಿದವರು ಯಾರು ?
೨೫) ನಟ ಉದಯಕುಮಾರ ಯಾವ ಚಿತ್ರದ ಮೂಲಕ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ
ಮಾಡಿದರು?
೨೬) ಸೆನ್ಸಾರ್ ಬೋರ್ಡ್ ನೀಡುವ "ಯು"
ಸರ್ಟಿಪಿಕೇಟ್ ನಲ್ಲಿಯ "ಯು" ಅಕ್ಷರ ಏನನ್ನು
ಸೂಚಿಸುತ್ತದೆ?
೨೭) ಅತೀ ದೀರ್ಘಕಾಲ ಗರ್ಭಧರಿಸುವ
ಪ್ರಾಣಿ ಯಾವುದು ?
೨೮) ೨೦೧೪ ರ ಕಾಮನ್ ವೆಲ್ತ್ ಕ್ರೀಡಾ
ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ
ಕ್ರೀಡೆಗೆ ಚಿನ್ನದ ಪದಕ
ದೊರೆಯಿತು ?
೨೯) ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್
ಮ್ಯೂಸಿಯ೦ ಇರುವ ಕರ್ನಾಟಕದ ಸ್ಥಳ ಯಾವುದು ?

ಉತ್ತರಗಳು :-
೧) ಮಬ್ಬಿನಹಾಗೆ ಕಣಿವೆ ವಾಸಿ
೨) ಅನ೦ತಕೃಷ್ಣ ಶಹಾಪುರ
೩) ಕಬಡ್ಡಿ
೪) ಮಹಾರಾಷ್ಟ್ರದ ಮಹಾಬಳೇಶ್ವರ
೫) ಡಾರ್ವಿನ್
೬) ೧೯೪೭
೭) ಕಿವಿರು
೮) ಪಿಗ್ಮೇಲಿಯನ್ ಪಾಯಿ೦ಟ್
೯) ಶ್ವಾಸಕೋಶ
೧೦) ಒ೦ದನೇಯ ಪ೦ಚವಾರ್ಷಿಕ ಯೋಜನೆ
೧೧) ನೈಜೇರಿಯಾ
೧೨) ಅಲೆಗ್ಸಾ೦ಡರ್ ಗುಸ್ತೇನ್ ಐಫೆಲ್
೧೩) ಗುವಾಹಟಿ (ಅಸ್ಸಾಂ)
೧೪) ೧೮೩೭
೧೫) ರಾಯಚೂರು
೧೬) ವಿಜ್ಞಾನ
೧೭) ಐಯಾನ್ ಪ್ಲೇಮಿ೦ಗ್
೧೮) ೧೯೮೪
೧೯) ಚಾರ್ಟ್ರ್ಡ್ ಬ್ಯಾ೦ಕ್
೨೦) ಕೂರ್ಗ
೨೧)೧೯೮೬
೨೨) ಪುಷ್ಜಕ
೨೩) ರೇಬಿಸ್
೨೪) ಜೆ.ಪಿ.ಬ್ಲಾ೦ಚಾಡ್ (೧೯೭೩)
೨೫) ಭಾಗ್ಯೋದಯ (೧೯೫೬)
೨೬)ಅನರಿಸ್ಟಿಕ್ಟಡ್ ಪಬ್ಲಿಕ್ ಎಗ್ಜಿಬಿಷನ್ (ನಿರಾತಂಕ
ಪ್ರದರ್ಶನ )
೨೭) ಆನೆ
೨೮)ಡಿಸ್ಕನ್ ಥ್ರೋ
೨೯) ಬೆ೦ಗಳೂರು

ಮೂಲ : ಲಯನ್ ಡಿ.ವಿ.ಜಿ.

ಕೊನೆಯ ಮಾರ್ಪಾಟು : 7/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate