অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಣ್ಣು ಭ್ರೂಣ

ಹೆಣ್ಣು ಭ್ರೂಣ

ಇಂದು ಹೆಣ್ಣು ಶಿಶು ಹತ್ಯೆಯು ಭಾರತದಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ಇತ್ತೀಚಿಗೆ ಅಲ್ಟ್ರಾ ಸೌಂಡ್ ಡಯಗ್ನೊಸ್ಟಿಕ್ ವಿಧಾನಗಳಂಥ ನವೀನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೆ ಅದರ ಲಿಂಗ ಪತ್ತೆ ಹಚ್ಚುವ ಸಾಧ್ಯತೆಗಳು ಕೈಗೊಂಡಿರುವುದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗೆ ರಾಜ ಮಾರ್ಗ ತೆರೆದಂತಾಗಿದೆ. ಹೆಣ್ಣು ಶಿಶು ಹತ್ಯೆ ಮತ್ತು ಭ್ರೂಣ ಹತ್ಯೆಗಳಂಥ ಕರಾಳ ಕ್ರಮಗಳಿಗೆ ಕಾರಣವೇನೆಂದರೆ, ನಮ್ಮ ಸಮಾಜದ ಬಹುಭಾಗದಲ್ಲಿ ಗಂಡು ಮಗುವಿಗೆ ಪ್ರಾಶಸ್ತ್ಯ ನೀಡುವ ಆಲೋಚನೆ ತುಂಬಾ ಆಳವಾಗಿ ಬೇರು ಬಿಟ್ಟಿರುವುದು. ಇಂದು ಕಾಣಿಸಿಕೊಂಡಿರುವ ಕೆಲವು ಆರ್ಥಿಕ ಮತ್ತು ಸಾಮಾಜಿಕ ಪ್ರಚಲಿತ ಪ್ರಕ್ರಿಯೆಗಳ ಪರಿಣಾಮವಾಗಿ ಸಮಾಜದಲ್ಲಿ ಗಂಡು ಮಗುವಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ

ನಮ್ಮ ಜನಸಂಖ್ಯೆಯಲ್ಲಿ ಕಾಣಬರುತ್ತಿರುವ ಹೆಣ್ಣು-ಗಂಡಿನ ಅನುಪಾತದಲ್ಲಿರುವ ವ್ಯತ್ಯಾಸ ಹೆಣ್ಣು ಶಿಶು ಹತ್ಯೆಯ ನೇರ ಪರಿಣಾಮವೆಂಬುವುದೆನೊ ಸ್ಪಷ್ಟವೇ ಇದೆ. ಹೆಣ್ಣು ಶಿಶು ಹತ್ಯೆಗಿಂತಲೂ ಹೆಣ್ಣು ಭ್ರೂಣ ಹತ್ಯೆಯ ಪರಿಣಾಮವಾಗಿ ೧೯೯೧ ಮತ್ತು ೨೦೦೧ ರ ನಡುವಿನ ಅವಧಿಯಲ್ಲಿ ಶೂನ್ಯದಿಂದ ಆರು ವರ್ಷ ವಯೋಮಾನದ ಹೆಣ್ಣು ಗಂಡಿನ ಅನುಪಾತ  ದಿನದಿಂದ ದಿನಕ್ಕೆ ದಾರುಣಾವಸ್ಥೆಗೆ ತಲುಪುತ್ತಿದೆ.

ಲಿಂಗ ತಾರತಮ್ಯದ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದರ ಪರಿಣಾಮವಾಗಿಯೇ ಭಾರತದ ಜನಸಂಖ್ಯೆಯಲ್ಲಿ ೫೦ ಮಿಲಿಯನಗಳಷ್ಟು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ.

ಭಾರತದಲ್ಲಿ ಪ್ರತಿ ವರ್ಷ ಹುಟ್ಟುವ ೧೨ ಮಿಲಿಯನ್ ಬಾಲಕಿಯರಲ್ಲಿ ಸುಮಾರು ಒಂದೊವರೆ ಮಿಲಿಯನ್ ಗಿಂತಲೂ ಹೆಚ್ಚು ಬಾಲಕಿಯರು ಒಂದು ವರ್ಷದ ಒಳಗೇ ಅಸುನೀಗುತ್ತಿದ್ದಾರೆ. ಅಂದರೆ ಶೇಕಡಾ ೧೨.೨ ರಷ್ಟು ಹೆಣ್ಣು ಮಕ್ಕಳು ತಮ್ಮ ಮೊದಲನೇ ಜನ್ಮ ದಿನೋತ್ಸವವನ್ನು ಆಚರಿಸುವ ಮುಂಚೆಯೇ ಮಣ್ಣು ಸೇರಿರುತ್ತಾರೆ. ಕೇವಲ ೯ ಮಿಲಿಯನ್ ಹೆಣ್ಣು ಮಕ್ಕಳು ಮಾತ್ರ ತಮ್ಮ ೧೫ ನೇ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳುವಷ್ಟು ಸುದೈವಿಗಳಾಗಿರುತ್ತಾರೆ.

ಭಾರತದಲ್ಲಿ ೦ ಯಿಂದ ೬ ವರ್ಷದ ವಯೋಮಾನದ ಜನಸಂಖ್ಯೆಯ ವಿವರ ೨೦೦೧

ಶಿಶುಗಳು ಮತ್ತು ಮಕ್ಕಳು: ಒಟ್ಟು ಸಂಖ್ಯೆ.- ೧೫.೮೦ ಕೋಟಿ

ಗಂಡು ಶಿಶು ಮತ್ತು ಮಕ್ಕಳು - ೮.೨೦ ಕೋಟಿ

ಹೆಣ್ಣು ಶಿಶುಗಳು ಮತ್ತು ಮಕ್ಕಳು -೭.೬೦ ಕೋಟಿ

ಕಡಿಮೆಯಿರುವ ಹೆಣ್ಣು ಶಿಶುಗಳು ಮತ್ತು ಬಾಲಕಿಯರು-೬೦.೦೦ ಲಕ್ಷ

ಮೂಲ: ಭಾರತದ ಜನಗಣತಿ ೨೦೦೧.

ಹೆಣ್ಣು ಮಕ್ಕಳ ಸಂಖ್ಯೆಯ ಅವನತಿಗೆ ಕಾರಣಗಳು

" ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಕುಟುಂಬದಲ್ಲಿ ಒಂದು ಸಾಮಾಜಿಕ ಹೊರೆಯೆಂದೇ ಪರಿಗಣಿಸಲಾಗುತ್ತಿದೆ. ವರದಕ್ಷಿಣೆ, ಕುಟುಂಬದ ಮರ್ಯಾದೆ, ಅವಳನ್ನು ಮದುವೆ ಮಾಡಿಕೊಡುವ ದೊಡ್ಡ ತಾಪತ್ರಯ ಮುಂತಾದ ಸಂಗತಿಗಳು ಕುಟುಂಬದ ಹಿರಿಯರನ್ನು ಸದಾ ಕಾಡುತ್ತವೆ. ಒಟ್ಟಿನಲ್ಲಿ ಹೆಣ್ಣು ಮಗುವೆ ಬೇಡ ಎಂಬ ತೀರ್ಮಾನಕ್ಕೆ ಬರುತ್ತಾರೆ". ಕುಟುಂಬದಲ್ಲಿ ಒಂದು ಗಂಡು ಮಗು ಜನಿಸಿದರೆ ಅದು ಸುದೈವದ ಸಂಕೀತವೆಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗು ಹುಟ್ಟಿದಂದಿನಿಂದ ದುರ್ದೈವದ ಸಂಕೇತವೆನಿಸುತ್ತದೆ.

ಹಾಗಾದರೆ ಈ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಕಾನೂನಿನಲ್ಲಿ ಅವಕಾಶವಿದೆಯೇ

ಹೌದು!ಇದೇ ಅದುವೇ

ಪಿ.ಸಿ ಮತ್ತು ಪಿ ಏನ್ ಡಿ ಟಿ ಕಾಯ್ದೆ - ೧೯೯೪

ಈ ಕಾಯ್ದೆಯ ಮುಖ್ಯಾಂಶಗಳು

ಈ ಕಾಯ್ದೆಯು ಗರ್ಭಪೂರ್ವ ಮತ್ತು ಪ್ರಸವ ಪೂರ್ವದಲ್ ಲಿಂಗ ಪತ್ತೆ ಮಾಡುವುದನ್ನು ನಿಷೇಧಿಸುತ್ತದೆ. ಪ್ರಸವ ಪೂರ್ವದಲ್ಲಿ ಆರೋಗ್ಯದ ಕಾರಣಗಳಿಗೆ ಅಂದರೆ ವರ್ಣತಂತುಗಳ ವೈಪರೀತ್ಯಗಳು (ಕ್ರೋಮೊಸೋಮಲ್ ಅಬ್ನಾರ್ಮಲಿಟೇಸ್), ಅಥವಾ ಇನ್ನಿತರ ಆರೋಗ್ಯ ಸಂಬಂಧಿ ವೈಪರೀತ್ಯಗಳು (ಅಬ್ನಾರ್ಮಲಿಟೇಸ್) ಅಥವಾ ಮೆಟಾಬಾಲಿಕ್ ಡಿಸ್ಆರ್ಡರ್ ಅಥವಾ ಕೆಲವು ಆಜನ್ಮ ನ್ಯೂನತೆ (congential malformaton ) ಅಥವಾ ಲಿಂಗ ಸಂಬಂಧಿ ವೈಪರೀತ್ಯಗಳಿಗಾಗಿ (sex linked dis-order) ಈ ಪರೀಕ್ಷೆಯನ್ನು ಸಿನ್ಧುಗೊಳಿಸುತ್ತದೆ ಮತ್ತು ಹೆಣ್ಣು ಭ್ರುನದ ಹತ್ಯೆಗೆ ಕಾರಣವಾಗುವ ಲಿಂಗ ನಿರ್ಧರಣೆಯ ದುರ್ಬಳಕೆಯನ್ನು ತಡೆಗಟ್ಟುತ್ತದೆ.

ಇತ್ತೀಚಿನ ದಿನಗಳಲ್ಲಿ ಲಿಂಗ ನಿರ್ಧರಣೆ ಮಾಡುವ (ಗರ್ಭ ಪೂರ್ವ ಮತ್ತು ನಂತರದಲ್ಲಿ ) ತಂತ್ರಜ್ಞಾನವು ಸಾಕಷ್ಟು ಮುಂದುವರೆದಿರುವ ಕಾರಣದಿಂದ ಪರಿಣಾಮಕಾರಿ ಅನುಷ್ಠಾನಕ್ಕೆ ತೊಡಕಾಗುತ್ತಿದ್ದ ಕಾರಣದಿಂದ ಮೂಲ ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದು ಪ್ರಸ್ತುತ ಈ ಕಾಯ್ದೆಯನ್ನು "ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ತಡೆ ಕಾಯ್ದೆ"  [The Pre-conception and Pre -natal diagnostic Techniques (Prohibition of Sex Selection ) Act "] ಎಂದು ಕರೆಯಲಾಗುತ್ತಿದ್ದು, ತಿದ್ದುಪಡಿಗೊಂಡ ನಿಯಮಾವಳಿಗಳು ೨೦೦೩ ರ ಫೆಬ್ರವರಿ  ೧೪ ರಿಂದ ಜಾರಿಗೆ ಬಂದಿವೆ.

ಜೆನೆಟಿಕ್ ಸಮಾಲೋಚನಾ ಕೇಂದ್ರಗಳು, ಜೆನೆಟಿಕ್ ಪ್ರಯೋಗಾಲಯಗಳು ಮತ್ತು ಜೆನೆಟಿಕ್ ಚಿಕಿತ್ಸಾ ಕೇಂದ್ರಗಳ ನಿಯಂತ್ರಣ

  • ಈ ಕಾಯ್ದೆಯನ್ವಯ ಜೆನೆಟಿಕ್ ಸಮಾಲೋಚನಾ ಕೇಂದ್ರಗಳು, ಜೆನೆಟಿಕ್ ಪ್ರಯೋಗಾಲಯಗಳು ಮತ್ತು ಜೆನೆಟಿಕ್ ಚಿಕಿತ್ಸಾ ಕೇಂದ್ರಗಳನ್ನು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಯ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
  • ಯಾವುದೇ ವ್ಯಕ್ತಿಯು ಯಾವುದೇ ತೆರನಾದ ಚಿಕಿತ್ಸಾಲಯಗಳನ್ನು (ಜೆನೆಟಿಕ್ ಸಮಾಲೋಚನಾ ಕೇಂದ್ರಗಳು, ಜೆನೆಟಿಕ್ ಪ್ರಯೋಗಾಲಯಗಳು, ಜೆನೆಟಿಕ್ ಚಿಕಿತ್ಸಾಲಯ ) ಅತ್ಯಾಧುನಿಕ ಯಂತ್ರೋಪಕರಣಗಳಾದ ಅಲ್ಟ್ರಾ ಸೋನೋಗ್ರಫಿ, ಇಮೇಜ್ ಮಿಷನ್, ಸ್ಕ್ಯಾನರ್ ಅಥವಾ ಭ್ರೂಣದಲ್ಲಿ ಲಿಂಗಪತ್ತೆ ಮಾಡುವ ಯಾವುದೇ ತೆರನಾದ ಯಂತ್ರೋಪಕರಣಗಳನ್ನು ಸ್ಥಾಪಿಸಬೇಕೆಂದರೆ ಆ ಕೇಂದ್ರ /ಚಿಕಿತ್ಸಾಲಯ /ಪ್ರಯೋಗಾಲಯವು ಕಡ್ಡಾಯವಾಗಿ ನೋಂದಣಿಯಾಗತಕ್ಕದ್ದು. ಇದು ವೈಯುಕ್ತಿಕವಾಗಿರಬಹುದು ಅಥವಾ ಜಂಟಿಯಾಗಿರಬಹುದು.
  • ವೈದ್ಯಕೀಯ ತಳಿಶಾಸ್ತ್ರಘ್ನ, ಸ್ತ್ರೀ ರೋಗತಜ್ಞ, ನೊಂದಾಯಿತ ವೈದ್ಯಕೀಯ ವೃತ್ತಿ ನಿರತರು, ರೇಡಿಯೋಲಾಜಿಸ್ಟ್, ಸೋನಾಲಾಜಿಸ್ಟ್ ಗಳು, ಈ ರೀತಿಯ ಪರೀಕ್ಷೆಗಳನ್ನು ಕೈಗೊಳ್ಳಬೇಕಾದರೆ ನೋಂದಣಿ ಕಡ್ಡಾಯ:

ಕೆಳಕಂಡ ಸಂದರ್ಭಗಳನ್ನು ಹೊರತುಪಡಿಸಿ ಪ್ರಸವ ಪೂರ್ವ ಪರೀಕ್ಷೆಯನ್ನು ನಿಷೇಧಿಸಿದೆ.

  • ವರ್ಣತಂತುಗಳ ವೈಪರೀತ್ಯಗಳು  (chromosamal abnormalities)
  • ಜೆನೆಟಿಕ್ ಮೆಟಾಬಾಲಿಕ್ ಡಿಸೀಸ್
  • ಹಿಮೊಗ್ಲೋಬಿನೋಪತಿಸ್
  • ಹುಟ್ಟಿನಿಂದ ಬಂಡ ಲಿಂಗ ಸಂಬಂಧಿ ಖಾಯಿಲೆಗಳು
  • ಆಜನ್ಮ ವ್ಯೈಪರೀತ್ಯಗಳು
  • ಕೇಂದ್ರೀಯ ಪರಿಶೀಲನಾ ಸಮಿತಿಯು ಗುರುತಿಸುವ ಯಾವುದೇ ರೀತಿಯ ಇತರ ಖಾಯಿಲೆಗಳು ಮತ್ತು ವೈಪರೀತ್ಯಗಳು.

ಕೆಳಕಂಡ ಸಂದರ್ಭದಲ್ಲಿ ಪ್ರಸವ ಪೂರ್ವ ಪರೀಕ್ಷೆಯನ್ನು ಮಾಡಲೇಬೇಕಾದ ಸಂದರ್ಭ ಬಂದಾಗ ಈ ಪರೀಕ್ಷೆಗೆ ಒಳಗಾಗುವ ವ್ಯಕ್ತಿಯ / ರೋಗಿಯ ಪೂರ್ವಾರ್ಹತೆಯ ಬಗ್ಗೆ ತೃಪ್ತಿಯಾದರೆ, ಪರೀಕ್ಷೆಗೆ ಒಳಪಡಿಸಬೇಕಾದ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ ಪರೀಕ್ಷೆ ಮಾಡಬೇಕು

  • ಗರ್ಭಿಣಿಯ ವಯಸ್ಸು ೩೫ ವರ್ಷಕ್ಕಿಂತ ಹೆಚ್ಚಾಗಿದ್ದಾಗ
  • ಗರ್ಭಿಣಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ತೀವ್ರತರನಾದ ಗರ್ಭಪಾತಕ್ಕೊಳಗಾಗಿದ್ದಾಗ ಅಥವಾ ಭ್ರೂಣದ ನಾಶವಾದಾಗ.
  • ಗರ್ಭಿಣಿಯು ಮಾದಕವಸ್ತು ವ್ಯಸನಿಯಾಗಿದ್ದಾಗ, ವಿಕಿರಣಗಳು, ಸೋಂಕುಗಳು ಅಥವಾ ರಾಸಾಯನಿಕ ವಸ್ತುಗಳ ದಾಳಿಗೆ ಒಳಗಾಗಿದ್ದರೆ.
  • ಗರ್ಭಿಣಿ ಅಥವಾ ಅವಳ ಸಂಗಾತಿಯ ಕುಟುಂಬದಲ್ಲಿ ಮಾನಸಿಕ ಅಸ್ವಸ್ಥರು, ದೈಹಿಕ ನ್ಯೂನತೆಗಳು ಅಂದರೆ ಸ್ಪಾಸ್ತಿಸಿಟಿ (ಮೆದುಳು ಬೇನೆ ) ಅಥವಾ ಇತರೆ ವಂಶವಾಹಿ ಖಾಯಿಲೆಗಳು.
  • ಕೇಂದ್ರೀಯ ಪರಿಶೀಲನಾ ಸಮಿತಿಯು ಗುರುತಿಸಿದ ಇನ್ನಿತರೇ ಯಾವುದೇ ರೀತಿಯ ವೈಪರೀತ್ಯಗಳು.

ದಂಡನೆಗಳು

ಯಾವುದೇ ವ್ಯಕ್ತಿಯು ಕಾಯ್ದೆಯ ಆಶಯಗಳಿಗೆ ವಿರುದ್ದವಾಗಿ ನಡೆದುಕೊಂಡ ಸಂದರ್ಭದಲ್ಲಿ ಕೆಳಕಂಡಂತೆ ಶಿಕ್ಷೆಗೆ ಗುರಿಯಾಗುತ್ತಾನೆ.

  • ಮೂರು ವರ್ಷಗಳ ಕಾರಾಗೃಹ ವಾಸ
  • ಹತ್ತು ಸಾವಿರ ರೂಪಾಯಿಗಳು ದಂಡ

ಮತ್ತೆ ಇದೇ ಅಪರಾಧ ಪುನರಾವರ್ತನೆಯಾದರೆ

  • ಐದು ವರ್ಷಗಳ ಕಾರಾಗೃಹ ವಾಸ
  • ಐವತ್ತು ಸಾವಿರ ರೂಪಾಯಿಗಳು ದಂಡ.

ವಿನಾಯಿತಿಗೊಳಪಟ್ಟ ಪರಿಸ್ತಿತಿಯನ್ನು ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಅಥವಾ ಗರ್ಭಿಣಿಯು ಲಿಂಗಪತ್ತೆ ಪರೀಕ್ಷೆ ಅಥವಾ ಪ್ರಸವಪೂರ್ವ ಪರೀಕ್ಷೆಗೆ  ಒತ್ತಾಯಿಸಿದಲ್ಲಿ ಕೆಳಕಂಡಂತೆ ಶಿಕ್ಷೆಗೆ ಗುರಿಯಾಗುತ್ತಾರೆ.

  • ಮೂರು ವರ್ಷಗಳ ಕಾರಾಗೃಹ ವಾಸ
  • ಐವತ್ತು ಸಾವಿರ ರೂಪಾಯಿಗಳು ದಂಡ

ಮತ್ತೆ ಇದೇ ಅಪರಾಧ ಪುನರಾವರ್ತನೆಯಾದರೆ

  • ಐದು ವರ್ಷಗಳ ಕಾರಾಗೃಹ ವಾಸ
  • ಒಂದು ಲಕ್ಷ ರೂಪಾಯಿಗಳು ದಂಡ

ನೊಂದಾಯಿತ ವೈದ್ಯಕೀಯ ವೃತ್ತಿ ಪರರು ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ, ಇವರ ಹೆಸರನ್ನು ಸಕ್ಷಮ ಪ್ರಾಧಿಕಾರಿಯು ಸೂಕ್ತ ಕ್ರಮಕ್ಕೆ ರಾಜ್ಯ ವೈದ್ಯಕೀಯ ಮಂಡಳಿಗೆ ವರದಿ ಸಲ್ಲಿಸುವುದು.

  • ಘನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದಾಗ, ಪ್ರಕರಣವು ಇತ್ಯರ್ಥವಾಗುವವರೆಗೂ ನೋಂದಣಿಯನ್ನು ಅಮಾನತ್ತಿನಲ್ಲಿದಲಾಗುವುದು.
  • ಮೊದಲ ಅಪರಾಧದಲ್ಲಿ ವೈದ್ಯಕೀಯ ಮಂಡಳಿಯಿಂದ ಐದು ವರ್ಷಗಳವರೆಗೆ ನೊಂದಣಿಯ ಅಮಾನತು.
  • ಮರುಕಳಿಸಿದ ಅಪರಾಧದಲ್ಲಿ ಶಾಶ್ವತವಾಗಿ ಅಮಾನತು.

ಚಿವುಟದಿರಿ, ಈ ಮುದ್ದು ಚಿಗುರ

ಬನ್ನಿ ಸೋದರ, ಸೋದರಿಯರೇ ಈ ದುಷ್ಟ ಪದ್ದತಿಯನ್ನು ತೊಲಗಿಸುವತ್ತ ನಾವೆಲ್ಲಾ ಕಟಿಬದ್ದರಾಗೋಣ.

ಮೂಲ: ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate