অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೀದಿ ಮತ್ತು ಓಡಿ ಬಂದ ಮಕ್ಕಳು

ಬೀದಿ ಮತ್ತು ಓಡಿ ಬಂದ ಮಕ್ಕಳು

ಬೀದಿಯ ಮತ್ತು ಓಡಿ ಬಂದಿರುವ ಮಕ್ಕಳು. ಮಿಥ್ಯಗಳು ಮತ್ತು ಸತ್ಯಗಳು

  • ಮಿಥ್ಯೆ:    ಬಡ ಕುಟುಂಬದ ಮಕ್ಕಳು ಮಾತ್ರ  ಮನೆಯಿಂದ ಓಡಿಹೋಗಿ ಬೀದಿ ಮಕ್ಕಳಾಗುವರು. ಬೀದಿಯಲ್ಲಿನ ಮಕ್ಕಳು  ಕೆಟ್ಟವರು  ಸತ್ಯ:  ಸರಿಯಾಗಿ  ನೋಡಿಕೊಳ್ಳದಿದ್ದರೆ  ಯಾವುದೆ  ಮಗುವು  ಮನೆಯಿಂದ ಓಡಿ ಹೋಗಬಹುದು. ಮಗುವಿಗೆ ಗೌರವದಿಂದ ಬದುಕುವ ಹಕ್ಕಿದೆ. ಯಾರೇ ಆಗಲಿ ತಾಯಿತಂದೆ/ ಕುಟುಂಬ/ ಶಾಲೆ/ ಊರು ಮಕ್ಕಳಿಗೆ ಅವರ ಹಕ್ಕನ್ನು ನಿರಾಕರಿಸಿದರೆ ಅವರು ಮಕ್ಕಳ ವಿಷಯದಲ್ಲಿ ಸೋಲುತ್ತಾರೆ. ಬಹುಪಾಲು ಮಕ್ಕಳು.  ಉತ್ತಮ ಜೀವನ,  ಅವಕಾಶ ಅರಸಿ ಅಥವಾ ಮೆಟ್ರೊಗಳ ಆಕರ್ಷಣೆಗೆ ಒಳಗಾಗಿ,  ಅವರ ತಾಯಿ ತಂದೆಯರು ಒತ್ತಾಯದಿಂದ ಸೇರಿಸಿದ  ಶಿಕ್ಷಣ ವ್ಯವಸ್ಥೆಯ ಕಠೊರತೆಯನ್ನು ಸಹಿಸಲಾರದೆ  , ಗೃಹ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಮನೆ ಬಿಡುವರು, ನಗರ ಪ್ರವೇಶಿಸುವರು. ಅಲ್ಲಿ ತುಂಬ ಹೀನ ಜೀವನ ನಡೆಸಬೇಕಾಗುವುದು.ಬೀದಿಯ ಮಕ್ಕಳು ಎಂದೂ  ಕೆಟ್ಟವರಲ್ಲ. ಅವರು ಇರುವ ಪರಿಸರವು ಕೆಟ್ಟದಾಗಿರುವುದು.
  • ಈ ಮಕ್ಕಳೂ ದಿನಕ್ಕೆ  ಎರಡು ಊಟ ಕಾಣುವುದೂ ಕಷ್ಟ. ಅವರು ದರ್ಬಳಕೆಯ ವಿರುದ್ಧ ಬಹಳ ಅಸಾಹಯಕರು. ಒಂದು ಸಲ ಬೀದಿಗೆ ಬಿದ್ದರೆ ಅವರು  ಶೋಷಣೆ ಮತ್ತು ಅದಕ್ಕೆ ಸಂಬಂಧಿಸದ ವಿಷಚಕ್ರದಲ್ಲಿ ಸಿಕ್ಕಿ ಬೀಳುವರು. ಇಲ್ಲವೆ ಹಿರಿಯ ಮಕ್ಕಳ ಸಂರ್ಪಕಕ್ಕೆ ಬಂದೊಡನೆ ಹೊಸ ಎಳೆಯ ಹುಡುಗರು ಚಿಂದಿ ಆಯುವ ,ಇತರ ಸುಲಭವಾಗಿ ದೊರೆಯುವ ಕೆಲಸ  ಶುರುಮಾಡುವರು, ಅಥವ ಕಾನೂನು ಬಾಹಿರ ಚಟುವಟಿಕೆಗಳಾದ ಜೇಬು ಕತ್ತರಿಸುವುದು (ಪಿಕ್ ಪ್ಯಾಕೆಟ್) ಮಾಡುವುದು, ಭಿಕ್ಷೆ ಬೇಡುವುದು, ಮಾದಕದ್ರವ್ಯ ಮಾರಾಟ ಇತ್ಯಾದಿಗಳಲ್ಲಿ ತೊಡಗುವರು.

ಮನೆಯಿಂದ ಓಡಿಬರಲು ಮಕ್ಕಳಿಗೆ ಅನೇಕ ಕಾರಣಗಳಿವೆ :

  • ಉತ್ತಮ ಜೀವನದ ಅವಕಾಶ.
  • ಮೆಟ್ರೊಗಳ ಆಕರ್ಷಣೆ.
  • ಗೆಳೆಯರ ಒತ್ತಡ.
  • ಅನಾರೋಗ್ಯಕರ  ಕೌಟುಂಬಿಕ ಸಂಬಂಧಗಳು.
  • ತಾಯಿತಂದೆಯರೆ ತೊರೆದವರು.
  • ತಾಯಿತಂದೆ ಹೊಡೆತಕ್ಕೆ,  ಶಿ ಕ್ಷಕರ ಹೊಡೆತಕ್ಕೆ ಹೆದರಿದವರು.
  • ಲೈಂಗಿಕ ದುರ್ಬಳಕೆ.
  • ಜಾತಿ ತಾರತಮ್ಯ.
  • ಲಿಂಗ ತಾರತಮ್ಯ.
  • ವಿಕಲ ಚೇತನರು.
  • ಹೆಚ್. ಐ. ವಿ ಏಡ್ಸ್ (HIV/AIDS).ನಿಂದಾಗಿ ತಾರತಮ್ಯಕ್ಕೆ ಒಳಗಾದವರು

, ದೀಪ್ತಿ ಪಗರೆ , ಜಿ  ಎಸ್. ಮೀನಾಸ, ಆರ್.ಸಿ ಜಿಲೊಹ ಮತ್ತು ಎಂ. ಎಂ. ಸಿಂಗ್   ಭಾರತೀಯ ಮಕ್ಕಳ ತಜ್ಞರು,ಸಮುದಾಯ ಔಷಧಿ ಮತ್ತು ಮನೋವಿಜ್ಞಾನ (ಸೈಕಿಯಾಟ್ರಿಕ್) ವಿಭಾಗ, ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ಅವರು ೨೦೦೩-೨೦೦೪ರಲ್ಲಿ ಒಂದು ಅಧ್ಯಯನ ಮಾಡಿದರು  ’ಬೀದಿಯ ಮಕ್ಕಳ ಲೈಂಗಿಕ ದುರ್ಬಳಕೆ, ಪರಿಶೀಲನಾ ಗೃಹ ಕರೆತರಲಾದವರು’ ಎಂಬ ವಿಷಯದಮೇಲೆ ಅವರು ದೆಹಲಿಯಲ್ಲಿ ಪರಿಶಿಲನಾಗೃಹಕ್ಕೆ ಕರೆತಂದ ಗಂಡುಮಕ್ಕಳ ಮೇಲಿನ ಲೈಂಗಿಕ ದುರ್ಬಳಕೆಯ ಪ್ರಮಾಣ ಮತ್ತು ವಿಧಾನಗಳನ್ನು ಗಮನಿಸಿದರು. ಅದರ ಪ್ರಕಾರ ಬಹುತೇಕ ಮಕ್ಕಳು ಓಡಿ ಬಂದವರು ಮತ್ತು ೩೮.೧% ಲೈಂಗಿಕ ದುರ್ಬಳಕೆ ಅನುಭವಿಸಿದವರು. ವೈದ್ಯಕೀಯ ಪರೀಕ್ಷೆಯಲ್ಲಿ ೬೧.೧% ಜನ ಅದರ ಶಾರೀರಿಕ ಕುರುಹುಗಳನ್ನು ಹೊಂದಿದ್ದರು.   ೪೦.೨% ಜನರು ವರ್ತನೆಯಲ್ಲಿ ಆ ಕುರುಹು ತೋರಿದರು. ಬಲಾತ್ಕಾರದ ಸಂಭೋಗಕ್ಕೆ ಬಲಿ ಆದವರ  ಸಂಖ್ಯೆ ೪೪.೪ % ಆಗಿತ್ತು ಮತ್ತು  ೨೫% STD ಇರುವ ಕುರಹು ಹೊಂದಿದ್ದರು.  ಅವರನ್ನು ಲೈಂಗಿಕ ದುರ್ಬಳಕೆ ಮಾಡಿದವರಲ್ಲಿ ಅಪರಿಚಿತರೇ ಹೆಚ್ಚು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate