ನಿಮ್ಮ ತರಗತಿಗೆ ಅವನು ಹಾಜರಾಗುವುದು ಉಪಯುಕ್ತ ಎಂಬ ಭಾವನೆ ಮಗುವಿಗೆ ಬರುವಂತೆ ಮಾಡಿ ಕಲಿಯುವಿಕೆಯಲ್ಲಿ ಮುಕ್ತತೆ ಇರಲಿ. ಮಗುವಿಗೆ ಗೆಳೆಯ, ದಾರ್ಶನಿಕ ಮತ್ತು ಮಾರ್ಗದರ್ಶಿಯಾಗಿ. ತರಗತಿಯನ್ನು ಆಸಕ್ತಿದಾಯಕ ಮತ್ತು ಮಾಹಿತಿ ಯುಕ್ತವಾಗಿಸಿ. ಏಕ ಮುಖ ಸಂವಹನವನ್ನು ಕೈಬಿಡಿ ಮತ್ತು ಮಕ್ಕಳಿಗೆ ತಮ್ಮ ಅನುಮಾನ ಪರಿಹರಿಸಿಕೊಳ್ಳಲು , ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿ. ದುರ್ಬಳಕೆ, ಕಲಿಕೆಯಲ್ಲಿನ ನ್ಯೂನ್ಯತೆಗಳೂ ಮತ್ತು ಇತರ ಎದ್ದು ಕಾಣದ ಗುಣಗಳನ್ನು ಗುರುತಿಸುವುದನ್ನು ಕಲಿಯಿರಿ ಮಕ್ಕಳು ತಮ್ಮ ಅಭಿಪ್ರಾಯ, ಕಾಳಜಿ, ದುಃಖ , ಭಯ ಇತ್ಯಾದಿ.ಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅನುವಾಗುವಂತೆ ಸಂಬಂಧ ಬೆಳಸಿಕೊಳ್ಳಿ. ಮಕ್ಕಳನ್ನು ಅನೌಪಚಾರಿಕ ಮಾತುಕತೆಯಲ್ಲಿ ತೊಡಗುವಂತೆ ಮಾಡಲು ಪ್ರಯತ್ನಿಸಿ. ಒಳ್ಳೆಯ ಕೇಳುಗನಾಗಿ . ಮಕ್ಕಳು ಶಾಲೆಯಲ್ಲಿ ಅಥವ ಮನೆಯಲ್ಲಿ ಎದುರಿಸುವ ಸಮಸ್ಯೆಗಳನ್ನು ಹಂಚಿಕೊಳ್ಳಿ ಮತ್ತು ಚರ್ಚಿಸಿ ತಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದಾದ ವಿಷಯಗಳಲ್ಲಿ ಭಾಗವಹಿಸಲು ಪ್ರೊತ್ಸಾಹಿಸಿ. ಪರಿಣಾಮ ಕಾರಿಯಾಗಿ ಭಾಗವಹಿಸಲು ಅವರ ಸಾಮರ್ಥ್ಯವನ್ನು ಹೆಚ್ಚಿಸಿ. ಶಾಲಾ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿ . ಮಕ್ಕಳ ಹಕ್ಕುಗಳ ಬಗ್ಗೆ ತಾಯಿತಂದೆಯರೊಡನೆ ಶಿಕ್ಷಕ ಮತ್ತು ತಾಯಿ-ತಂದೆಯವರ (PTA) ಸಭೆಯಲ್ಲಿ ಚರ್ಚಿಸಿ. ಶಾರೀರಿಕ ಶಿಕ್ಷೆಗೆ ಇಲ್ಲ ಎಂದು ಹೇಳಿ. ಇತ್ಯಾತ್ಮಕ ಪೂರಕ ತಂತ್ರಗಳಾದ ಸಂಭಾಷಣೆ, ಆಪ್ತ ಸಲಹೆ ಗಳನ್ನು ಉಪಯೋಗಿಸಿ ಮಕ್ಕಳಲ್ಲಿ ಶಿಸ್ತು ಮೂಡಿಸಿ. ತಾರತಮ್ಯಕ್ಕೆ ಇಲ್ಲ ಎಂದು ಹೇಳಿ. ಅಲ್ಪಸಂಖ್ಯಾತ ಮತ್ತು ತಾರತಮ್ಯಕ್ಕೆ ಒಳಗಾದ ಗುಂಪಿನ ಮಕ್ಕಳನ್ನು ತಲುಪಲು ಸಕ್ರಿಯ ಕ್ರಮ ತೆಗೆದುಕೊಳ್ಳಿ ನಿಷೇದಾತ್ಮಕ ಕ್ಲೀಷೆಗಳನ್ನು ನಿಲ್ಲಿಸಿ ಮತ್ತು ಬಾಲ ಕಾರ್ಮಿಕರ , ಬೀದಿ ಮಕ್ಕಳ ಲೈಂಗಿಕ ದುರ್ಬಳಕೆಗೆ, ಕುಟುಂಬ ದೌರ್ಜನ್ಯಕ್ಕೆ. ಮಾದಕ ವಸ್ತು ದುರ್ಬಳಕೆಗೆ,ಗುರಿಯಾದ ಸಾಗಣಿಕೆಗೆ ಒಳಗಾದ, ಕಾನುನಿನೊಡನೆ ಸಂಘರ್ಷನೆಡಿಸಿದ ಈ ರೀತಿಯ , ರಕ್ಷಣೆ ಅವಶ್ಯವಿರುವ ಮಕ್ಕಳ ವಿರುದ್ಧದ ತಾರತಮ್ಯವನ್ನು ನಿಲ್ಲಿಸಿ ನಿಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಬಾಲಕಾರ್ಮಿಕರ ಬಳಕೆ ನಿಲ್ಲಿಸಿ. ಪ್ರಜಾತಂತ್ರ ಪರವಾಗಿರಿ ಆದರೆ ಅದರೆ ಅವ್ಯವಸ್ಥೆ ಬೇಡ ಮಕ್ಕಳಿಗೆ ಶಾಲೆಯಲ್ಲಿ ಹಾಗೂ ಸಮುದಾಯದಲ್ಲಿ ಸುರಕ್ಷತೆಯ ಖಾತ್ರಿ ನೀಡಿ ಅಗತ್ಯವಾದರೆ ಪೋಲೀಸರ ಮತ್ತು ಕಾನೂನಿನ ಕ್ರಮದ ಸಹಾಯ ಪಡೆಯಿರಿ. ಅವರಿಗೆ ಹಿರಿಯರ ಮುಂದೆ, ಸಮುದಾಯದ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲು ಪ್ರೋತ್ಸಾಹಿಸಿ. ಕಾರ್ಯ ಕ್ರಮಗಳ ಸಂಘಟನೆಯಲ್ಲಿ ಅವರನ್ನು ತೊಡಗಿಸಿರಿ .ಅವರಿಗೆ ಹೊಣೆ ನೀಡಿ ಮತ್ತು ಅಗತ್ಯ ಮಾರ್ಗದರ್ಶನ ನೀಡಿ. ಹತ್ತಿರದ ಸ್ಥಳಗಳಿಗೆ ಪಿಕ್ ನಿಕ್ ಮತ್ತು ಖುಷಿಗಾಗಿ ಕರೆದುಕೊಂಡು ಹೋಗಿ. ಮಕ್ಕಳನ್ನು ಸಂವಾದ/ ಚರ್ಚೆ/ ರಸಪ್ರಶ್ನೆ ಮತ್ತು ಇತರೆ ಮನರಂಜನಾ ಚಟುವಟಿಕೆಗಲ್ಲಿ ತೊಡಗಿಸಿ. ಹೆಣ್ಣು ಮಕ್ಕಳಿಗೆ ತರಗತಿಯಲ್ಲಿ ರಚನಾತ್ಮಕ ಕ್ರಮಗಳಿಂದ ಶಿಕ್ಷಣದಲ್ಲಿ ಭಾಗವಹಿಸುವಂತೆ ಮಾಡಿ. ಶಾಲೆ ಬಿಟ್ಟ , ಶಾಲೆಗೆ ಸರಿಯಾಗಿಬಾರದ ಹೆಣ್ಣು ಮಕ್ಕಳನ್ನು ವಿಚಾರಿಸಿ ಶಾಲೆಗೆ ಕ್ರಮವಾಗಿ ಹಾಜರಾಗುವುದನ್ನು ಖಾತ್ರಿಪಡಿಸಿ.. ಎಲ್ಲ ಶಿಕ್ಷಕರು ಮಕ್ಕಳ ಸುತ್ತಲೂ ರಕ್ಷಣಾ ವಾತಾವರಣವನ್ನು ನಿರ್ಮಾಣ ಮಾಡಬಹುದು. ನಿಮ್ಮ ಪರಿಶೀಲನೆಯು ಅತಿ ಮುಖ್ಯ. ನಿಮ್ಮ ತರಗತಿಯಲ್ಲಿರುವ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅದರಿಂದ ಮಾತ್ರ ಅರಿಯಬಹುದು. ನೀವು ಸಮಸ್ಯೆಯೊಂದನ್ನು ಗಮನಿಸಿದರೆ , ನಮ್ಮ ಮುಂದಿನ ಹೆಜ್ಜೆ , ಅದಕ್ಕೆ ಕಾರಣ ಏನಿರಬಹುದು ಎಂಬದನ್ನು ಅರಿಯುವುದು. ನಿಮ್ಮ ಮುಂದಿನ ಪ್ರಶ್ನೆ ಮಗುವು ಕುಟುಂಬ, ಬಂಧುಗಳು, ಗೆಳೆಯರಿಂದ ಒತ್ತಡಕ್ಕೆ ಒಳಗಾಗಿರುವನೆ ಎಂಬುದನ್ನು ಅರಿಯುವುದು. ಮಗುವಿನೊಂದಿಗೆ ಸ್ವಲ್ಪ ಸಮಯವನ್ನು ಖಾಸಗಿಯಾಗಿ ಕಳೆಯಬೇಕು. ಮಗುವಿಗೆ ಒತ್ತಾಯ,ಅವಮಾನ, ಮುಜುಗರ ಮಾಡಬಾರದು .. ಮಗುವು ಸಮಸ್ಯೆಯನ್ನು ಚಿತ್ರ ಬಿಡಿಸುವ , ಕಥೆ ಬರೆಯುವ, ನಿಮ್ಮಜೊತೆ, ಶಾಲಾ ಆಪ್ತ ಸಲಹೇಗಾರರ ಜತೆ ಇಲ್ಲವೆ ಸಮಾಜಿಕ ಕಾರ್ಯಕರ್ತ ಅಥವ ಗೆಳೆಯನ ಜೊತೆ ಮಾತನಾಡುವ ಮೂಲಕ ಅಭಿವ್ಯಕ್ತಿ ಗೊಳಿಸಲು ಸಹಾಅಯ ಮಾಡಿ. ಮೂಲ: ಪೋರ್ಟಲ್ ತಂಡ