ರೋಗ ತಡೆಗಟ್ಟಲು ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ರೋಗಿಯ ಚಿಕಿತ್ಸೆ ಹಾಗೂ ಸೊಳ್ಳೆಗಳ ನಿಯಂತ್ರಣ ಎರಡು ಮುಖ್ಯ ಕಾರ್ಯಾಚರಣೆಗಳು. ಮಲೆರಿಯ ನಿಯಂತ್ರಣ ಕಾರ್ಯ ಗ್ಯಾಮಿಟೋಸೈಟ್ ಹಾಗೂ ಸೊಳ್ಳೆಗಳ ನಿಯಂತ್ರಣದ ಮೂಲಕ ಮಾಡಲಾಗುವುದು.
ಚಿಕಿತ್ಸೆಯ ಕಾರ್ಯಾಚರಣೆಯನ್ನು ರೋಗಿ ಹಾಗೂ ಜನ ಸಮೂಹದ ಹಿತದೃಷ್ಠಿ ಮುಂದಿಟ್ಟುಕೊಂಡು ರೂಪಿಸಲಾಗಿದೆ. ರೋಗಿಯ ಚಿಕಿತ್ಸೆ ಮಲೇರಿಯ ಕಾರ್ಯಕ್ರಮದಲ್ಲಿ ಹಲವಾರು ರೀತಿಗಳಲ್ಲಿ ಮಾಡಲಾಗುವುದು. ಮಲೇರಿಯ ಚಿಕಿತ್ಸೆಗೆ ನಮ್ಮ ಕಾರ್ಯಕ್ರಮದಲ್ಲಿ ಉಪಯೋಗಿಸುವ / ಸಹಾಯಕವಾದರೆ, ಆ ಔಷಧಿಯ ಕಾರ್ಯ ಶಕ್ತಿ ಫ್ಯಾಲ್ಸಿಪ್ಯಾರಂ ಗ್ಯಾಮಿಟೋಸೈಟ್ ಹಾಗೂ ವೈವ್ಯಾಕ್ಸ್ ಜೀವಾಣುವಿನ ಹಿಪ್ನೋಜಾಯ್ಟ್ ಹಂತಗಳ ಮೇಲೆ ಪರಿಣಾಮ ಬೀರದಿರುವುದರಿಂದ, ಆ ಹಂತಗಳ ಮೇಲೆ ಪರಿಣಾಮ ಬೀರಲು ಪ್ರೈಮಾಕ್ಟಿನ್ ಮಾತ್ರೆಗಳನ್ನು ಕೊಡಲಾಗುವುದು. ಇದರಿಂದಾಗಿ ಫ್ಯಾಲ್ಸಿಪ್ಯಾರಂ ಹರಡುವುದನ್ನು ಹಾಗೂ ವೈವ್ಯಾಕ್ಸ್ ಮಲೇರಿಯ ಮರುಕಳಿಸುವುದನ್ನು ತಪ್ಪಿಸಬಹುದು. ಕೆಲವು ಸಂದರ್ಭಗಳಲ್ಲಿ ಕ್ವಿನೀನ್, ಸಲ್ಫಾ + ಪೈರಿಮೆಥಮೀನ್, ಅರ್ಟಿಮೆಸೆನಿನ್ ಔಷಧಿಗಳನ್ನು ಕಾರ್ಯಕ್ರಮದಲ್ಲಿ ಬಳಸಲಾಗುವುದು. ಈ ಔಷಧಿಗಳನ್ನು ವೈದ್ಯರ ಸಲಹೆಯ ಮೇಲೆ ಮಾತ್ರ ಉಪಯೋಗಿಸತಕ್ಕದ್ದು.
ಆರೋಗ್ಯ ಕಾರ್ಯಕರ್ತರು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಮುಖ್ಯ ವಿಷಯಗಳು :
1. ಆರೋಗ್ಯ ಕಾರ್ಯಕರ್ತರು ಸ್ವತಃ ಮಲೇರಿಯ ಗುಳಿಗೆಗಳನ್ನು ರೋಗಿಗೆ ನುಂಗಿಸಿ ಬರಬೇಕು.
2. ಯಾವ ಕಾರಣಕ್ಕೂ ಮಾತ್ರೆಗಳನ್ನು ರೋಗಿಯ ಕೈಯಲ್ಲಿ ಕೊಟ್ಟು ಬರಬಾರದು.
3. ಸರಿಯಾದ ಪ್ರಮಾಣದಲ್ಲಿ ಗುಳಿಗೆಗಳನ್ನು ರೋಗಿಗೆ ನೀಡಬೇಕು.
4. ಎಲ್ಲಾ ಜ್ವರದ ರೋಗಿಗೂ ಕ್ಲೊರೋಕ್ವಿನ್ ಮಾತ್ರೆಗಳನ್ನು ನೀಡಲೇಬೇಕು. ಅವು ರೋಗಿಗೆ ಯಾವ ಹಾನಿಯನ್ನೂ ಉಂಟು ಮಾಡುವುದಿಲ್ಲ.
5. ಮಲೇರಿಯ ಗುಳಿಗೆಗಳನ್ನು ಖಾಲಿ ಹೊಟ್ಟೆಯಲ್ಲಿ ನುಂಗಿಸಬಾರದು.
ರೋಗಿ ಒಂದು ವರ್ಷಕ್ಕೆ ಒಳಪಟ್ಟಿರುವ ಹಸುಕೂಸೆ ಅಥವಾ ಗರ್ಭೀಣಿಯೇ ಎಂದು ತಿಳಿಯಬೇಕು. ಹಾಗಿದ್ದಲ್ಲಿ, ಅವರಿಗೆ ಪ್ರೈಮಾಕ್ಟಿನ್ ಮಾತ್ರೆಗಳನ್ನು ನೀಡಲೇಬಾರದು.
6. ಔಷಧಿ ಸೇವನೆಯ ನಂತರ ರೋಗಿಗೆ ಗುಳಿಗೆಗಳನ್ನು ವಾಂತಿ ಮಾಡಿಕೊಂಡಲ್ಲಿ ಮತ್ತೆ ಅವನಿಗೆ ಮಾತ್ರೆಗಳನ್ನು ನೀಡಬೇಕು. ಮತ್ತೆ ವಾಂತಿಯಾದರೆ ಅವನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯರಿಂದ ಸಲಹೆ ಪಡೆಯಬೇಕು. ಜ್ವರ ಜಾಸ್ತಿ ಇದ್ದಲ್ಲಿ, ವಾಂತಿಯಾಗುವುದು ಸಹಜ. ಅಂಥಹ ರೋಗಿಗಳಿಗೆ ಮೊದಲು ಜ್ವರ ಕಮ್ಮಿಯಾಗಲು ತಂಡಿ ಬಟ್ಟೆಯ ಒತ್ತಡ ಹಾಗೂ ಪ್ಯಾರಸಿಟಮಾಲ್ ಮಾತ್ರೆಗಳ ಮೂಲಕ ಜ್ವರ ಕಮ್ಮಿಯಾದ ಮೇಲೆ ಮಲೇರಿಯ ಗುಳಿಗೆಗಳನ್ನು ನುಂಗಿಸಬೇಕು.
7. ಯಾವುದೇ ತೊಂದರೆ ಕಂಡು ಬಂದಲ್ಲಿ, ರೋಗಿಯನ್ನು ತಕ್ಷಣ ವೈದ್ಯಾಧಿಕಾರಿಗಳ ಬಳಿ ಕರೆದೊಯ್ಯಬೇಕು.
ಕೊನೆಯ ಮಾರ್ಪಾಟು : 7/4/2020