ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತು ಮಧು ಮೇಹ ಬಂದ ಮೇಲಿನ ಬದಲಾವಣೆಗಳನ್ನು ಈಕೆಳಗೆ ವಿವರಿಸಿದೆ.
ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು: ಜಠರವು ನಾವು ತಿಂದ ಆಹಾರವನ್ನು ಗ್ಲೂಕೋಸ್ ಎಂಬ ಇಂಧನವಾಗಿ ಬದಲಾಯಿಸುವುದು. ಗ್ಲೂಕೋಸು ರಕ್ತಪ್ರವಾಹದಲ್ಲಿ ಸೇರಿ ದೇಹದಲ್ಲಿನ ಮಿಲಿಯನ್ ಗಟ್ಟಲೆ ಜೀವ ಕೋಶಗಳಿಗೆ ತಲಪುವುದು.
ಗ್ಲುಕೋಸು ಜೀವಕೋಶದಲ್ಲಿ ಪ್ರವೇಶಿಸುವುದು. : ಮೇದೋಜೀರಕವು ಇನಸುಲಿನ್ ಎಂಬ ರಸಾಯನಿಕವನ್ನು ಉತ್ಪಾದಿಸುವುದು. ಇನಸುಲಿನ್ ಸಹಾ ರಕ್ತ ಪ್ರವಾಹದಲ್ಲಿ ಸೇರಿ ಜೀವ ಕೋಶಗಳನ್ನು ತಲುಪುವುದು. ಅಲ್ಲಿ ಗ್ಲೂಕೋಸನ್ನು ಭೇಟಿಯಾಗಿ ಅದು ಜೀವಕೋಶವನ್ನು ಸೇರಲು ಸಹಾಯ ಮಾಡುವುದು.
ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವವು : ಜೀವ ಕೋಶಗಳು ಗ್ಲುಕೋಸನ್ನು ಉರಿಸಿ ದೇಹಕ್ಕೆ ಶಕ್ತಿಯನ್ನು ಕೊಡುವವು.
ಮಧುಮೇಹದಿಂದ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯುವುದು ಕಷ್ಟವಾಗುವುದು.
ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು : ಜಠರವು ಆಹಾರವನ್ನು ಗ್ಲುಕೋಸಾಗಿ ಬದಲಾಯಿಸುವುದು. ಗ್ಲುಕೋಸು ರಕ್ತ ಪ್ರವಾಹದಲ್ಲಿ ಹೋಗುವುದು. ಆದರೆ ಹೆಚ್ಚಿನ ಪಾಲು ಜೀವ ಕೋಶವನ್ನು ಪ್ರವೇಶಿಸಲು ಸಾಧ್ಯವಾಗದೆ ಇರಬಹುದು. ಏಕೆಂದರೆ:
ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವುದಿಲ್ಲ : ಹೆಚ್ಚಿನ ಗ್ಲೂಕೋಸು ರಕ್ತ ಪ್ರವಾಹದಲ್ಲೆ ಉಳಿದುಬಿಡುವವು.ಇದನ್ನೆ ಹೈಪರ್ ಗ್ಲಿಸಿಮಿಯಾಎನ್ನುವರು ( ಹೆಚ್ಚಿದ ರಕ್ತದ ಸಕ್ಕರೆ ಅಥವ ಹೆಚ್ಚಿದ ರಕ್ತದ ಗ್ಲೂಕೋಸು ಎಂದೂ ಕರೆಯುವುರು). ಜೀವ ಕೋಶದಲ್ಲಿ ಸಾಕಷ್ಟು ಗ್ಲೂಕೋಸು ಇಲ್ಲದಿದ್ದರೆ ಜೀವಕೋಶಗಳು ದೇಹದ ಸುಗಮ ಚಲನವಲನಕ್ಕೆ ಅಗತ್ಯವಾದ ಶಕ್ತಿಯನ್ನು ಉತ್ಪಾದಿಸಲಾಗುವುದಿಲ್ಲ.
ಮಧು ಮೇಹ ಇರುವವರು ವಿಭಿನ್ನ ಲಕ್ಷಣಗಳನ್ನು ಹೊಂದಿರುವರು. ಅವುಗಳಲ್ಲಿ ಕೆಲವು-
ಬಹು ಕಾಲದ ವರೆಗಿ ರಕ್ತದಲ್ಲಿನ ಏರಿದ ಸಕ್ಕರೆಯ ಮಟ್ಟವು
ಹೃದಯವು ಮಿಡಿದಾಗ ಅದು ರಕ್ತವನ್ನು ರಕ್ತನಾಳಗಳಿಗೆ ಪಂಪು ಮಾಡುವುದು ಮತ್ತು ಅಲ್ಲಿ ಒತ್ತಡವನ್ನು ಉಂಟುಮಾಡುವುದು. ಆರೋಗ್ಯವಂತರ ರಕ್ತನಾಳಗಳು ಸ್ಥಿತಿ ಸ್ಥಾಪಕ ಗುಣವನ್ನು ಹೊಂದಿರುತ್ತವೆ. ಹೃದಯವು ರಕ್ತವನ್ನು ಅವುಗಳಲ್ಲಿ ಪಂಪು ಮಾಡಿದಾಗ ಅವು ವಿಕಸನ ಹೊಂದುವವು. ಸಾಮಾನ್ಯ ಪರಿಸ್ಥಿತಿಯಲ್ಲಿ ಹೃದಯದ ಬಡಿತವು ನಿಮಿಷಕ್ಕೆ 60 ರಿಂದ 80 ಇರುವುದು. ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಏರುವುದು ಮತ್ತು ವಿಶ್ರಾಂತಿ ಪಡೆದರೆ ಕಡಿಮೆಯಾಗುವುದು. ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಬದಲಾಗುವುದು. ಅದು ನಿಮಿಷ ನಿಮಿಷಕ್ಕೂ ಬದಲಾಗುವ ಸಾಧ್ಯತೆ ಇದೆ. ಬದಲಾದ ಭಂಗಿಗೆ ಅನುಗುಣವಾಗಿ, ವ್ಯಾಯಾಮ ಮಾಡಿದಾಗ, ನಿದ್ರೆಯಲ್ಲಿ ಬದಲಾವಣೆ ಆಗುವುದು. ವಯಸ್ಕನಲ್ಲಿ 130/80 ಗಿಂತ ಕಡಿಮೆ ಇರಬೇಕು. ಇದಕ್ಕಿಂತ ಹೆಚ್ಚು ಇರುವುದು ಏರಿದ ರಕ್ತದೊತ್ತಡ. ಏರಿದ ರಕ್ತದ ಒತ್ತಡಕ್ಕೆ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಅನೇಕರಿಗೆ ಬಹಳ ವರ್ಷಗಳಿಂದ ಅವರಿಗೆ ಗೊತ್ತಿಲ್ಲದೆ ಏರಿದ ರಕ್ತದ ಒತ್ತಡವಿರುವುದು. ಅದಕ್ಕೂ ಆವೇಶ, ಗಾಬರಿ ಹೈಪರ್ ಆಕ್ಟೀವ್ ಅಗಿರುವುದಕ್ಕೆ ಸಂಬಂಧವಿಲ್ಲ. ನೀವು ತುಂಬ ನೆಮ್ಮದಿಯವರಾಗಿದ್ದರೂ, ಆರಾಮಾಗಿದ್ದರೂ ರಕ್ತದ ಒತ್ತಡ ಹೆಚ್ಚಿರಬಹುದು. ಅನಿಯಂತ್ರಿತ ರಕ್ತದ ಒತ್ತಡದಿಂದ ಮಾರಣಾಂತಿಕವಾದ (ಪಾರ್ಶವವಾಯು)ಲಕ್ವ, ಹೃದಯಾಘಾತ, ಹೃದಯ ವೈಫಲ್ಯ, ಮೂತ್ರ ಪಿಂಡಗಳ ವೈಫಲ್ಯ ಆಗಬಹುದು. ಇವೆಲ್ಲವುಗಳಿಂದ ಪ್ರಾಣಾಪಾಯದ ಸಾಧ್ಯತೆಯಿದೆ. ಅದಕ್ಕಾಗಿಯೇ ಏರು ರಕ್ತದ ಒತ್ತಡವನ್ನು “ಮೌನ ಕೊಲೆಗಾರ” ಎನ್ನುವರು.
ದೇಹದಲ್ಲಿನ ಏರಿದ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತದ ಅವಕಾಶವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ರಕ್ತದ ಪ್ರವಾಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಆಟ್ರಿಯಾಗಳ ಗೋಡೆಗಳ ಮೇಲೆ ದಪ್ಪನಾದ ಪೆಡುಸಾದ ಮೇಲ್ ಮೈ ಉಂಟಾಗುವಂತೆ ಮಾಡುವುದು. ಇದರಿಂದ ಅವು ಪೆಡುಸಾಗಿ ತಮ್ಮ ಸ್ಥಿತಿಸ್ಥಾಪಕತೆಯನ್ನು ಕಳೆದುಕೊಳ್ಳುವವು. ಹೃದಯಕ್ಕೆ ಹರಿಯುವ ರಕ್ತವು ನಿಧಾನವಾಗುವುದು. ಹಲವು ಸಲ ನಿಂತು ಬಿಡುವುದು. ರಕ್ತದ ಪ್ರವಾಹವು ಕಡಿಮೆಯಾದಾಗ ಎದೆ ನೋವು, ಅಂಜಿನಾ ಉಂಟಾಗಬಹುದು. ರಕ್ತ ಪ್ರವಾಹವು ಪೂರ್ಣವಾಗಿ ನಿಂತರೆ ಹೃದಯಘಾತ ಆಗುವುದು. ರಕ್ತದ ಏರು ಒತ್ತಡದ ಜೊತೆ ಹೆಚ್ಚಿದ ಕೊಲೆಸ್ಟ್ರಾಲ್, ಮಧುಮೇಹವೂ ಇದ್ದರೆ ಹೃದಯಾಘಾತದ ಮತ್ತು ಲಕ್ವದ ಸಂಭವನೀಯತೆಯ ಗಂಡಾಂತರ ಹದಿನಾರು ಪಟ್ಟು ಹೆಚ್ಚಾಗುವುದು.
ಪಥ್ಯ, ವ್ಯಾಯಾಮ, ವೈಯುಕ್ತಿಕ ಆರೋಗ್ಯ ಮತ್ತು ಇನ್ಸುಲಿನ್ ಇಂಜೆಕಷನ್ ಅಥವಾ ಮಾತ್ರೆಗಳು (ವೈದ್ಯರ ಸಲಹೆಯ ಮೇರೆಗೆ) ಇವುಗಳು ಮಧುಮೇಹದಿಂದ ಬರಬಹುದಾದ ಸಮಸ್ಯೆಗಳನ್ನು ತಡೆಯಬಹುದು.
ವ್ಯಾಯಾಮ : ವ್ಯಾಯಾಮವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ದೇಹವು ಸಕ್ಕರೆಯನ್ನು ಬಳಸುವ ಶಕ್ತಿಯನ್ನು ಹೆಚ್ಚಿಸುವುದು. ಗಂಟೆಗೆ 6 ಕಿ. ಮೀ ನಂತೆ ನೆಡೆಯುವುದರಿಂದ 135 ಕ್ಯಾಲೋರಿ ಶಕ್ತಿಯನ್ನು 30 ನಿಮಿಷದಲ್ಲಿ ಉರಿಸಬಹುದು. ಅದೇ ಸೈಕಲ್ಲು ಹೊಡೆದರೆ 200 ಕ್ಯಾಲೋರಿ ಬಳಕೆಯಾಗುವುದು.
ಮಧು ಮೇಹಿಗಳಲ್ಲಿ ಚರ್ಮದ ಅರೈಕೆ : ಚರ್ಮದ ಆರೈಕೆಯು ಮಧು ಮೇಹವಿರುವವರಲ್ಲಿ ಅತಿ ಅಗತ್ಯ. ಹೆಚ್ಚಿನ ಪ್ರಮಾಣದ ಗ್ಲೂಕೋಸು ಬ್ಯಾಕ್ಟಿರಿಯ ಮತ್ತು ಫಂಗೈಗಳಿಗೆ ಮಧುಮೇಹಿಗಳು ಫಲವತ್ತಾದ ಭೂಮಿ. ಪರಿಚಲನೆಯು ಕಡಿಮೆ ಇರುವುದರಿಂದ ದೇಹವು ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಪಡೆಯಲು ಆಗುವುದಿಲ್ಲ. ದೇಹದ ರಕ್ಷಕ ಕೋಶಗಳು ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ನಾಶಮಾಡಲು ಆಗುವುದಿಲ್ಲ. ಹೆಚ್ಚಿದ ಗ್ಲೂಕೋಸು ಚರ್ಮವನ್ನು ಒಣಗಿಸುವುದು ಆಗ ತುರಿಕೆಯನ್ನು ಹೆಚ್ಚಿಸುವುದು.
ದೇಹವನ್ನು ನಿಯಮಿತವಾಗಿ ಪರಿಶೀಲಿಸಿ,ಕೆಳಗಿನವುಗಳು ಕಂಡುಬಂದರೆ ವೈದ್ಯರಿಗೆ ವರದಿ ಮಾಡಿ
ಆಗೀಗ ಕತ್ತರಿಸಿಕೊಳ್ಳುವುದು, ತೆರಚುಗಾಯ ಮಾಡಿಕೊಳ್ಳದೆ ಇರುವುದು ಆಗದ ಮಾತು. ಮಧುಮೇಹ ಇರುವವರು ಚಕ್ಕ ಪುಟ್ಟ ಗಾಯಗಳಾದರೂ ಹೆಚ್ಚಿನ ಕಾಳಜಿ ವಹಿಸಬೇಕು. ಸೋಂಕು ತಗುಲದಂತೆ ಎಚ್ಚರವಹಿಸಬೇಕು. ಅವುಗಳಿಗೆ ತಕ್ಷಣ ಚಿಕಿತ್ಸೆ ಮಾಡಬೇಕು:
ನಿಮಗೇನಾದರೂ ಹೀಗೆ ಆದರೆ ವೈದ್ಯರನ್ನು ಕೂಡಲೆ ಸಮಪರ್ಕಿಸಿ,
ಮಧು ಮೇಹದಲ್ಲಿ ಪಾದಗಳ ಅರೈಕೆ : ಮಧು ಮೇಹವಿದ್ದಾಗ ರಕ್ತದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಇದ್ದರೆ ನರಗಳಿಗೆ ಹಾನಿಯಾಗಿರುವುದು. ಅದರಿಂದ ಪಾದದಲ್ಲಿ ಸ್ಪರ್ಶ ಜ್ಞಾನವೆ ಇರುವುದಿಲ್ಲ. ಪಾದಗಳ ಆರೈಕೆಗೆ ಇಲ್ಲಿ ಕೆಲವು ಸರಳ ಕ್ರಮಗಳನ್ನು ತೀಳಿಸಿದೆ:
ಪಾದಗಳನ್ನು ನಿಯಮಿತವಾಗಿ ಪರೀಕ್ಷಿಸಿ: ಸಾಕಷ್ಟು ಬೆಳಕಿನಲ್ಲಿ ಪ್ರತಿ ದಿನ ನಿಮ್ಮ ಪಾದಗಳನ್ನು ಗಮನಿಸಿ. ಅಲ್ಲಿ ಏನಾದರು ತೆರದ, ಕತ್ತರಿಸಿದ ಗಾಯಗಳಿವೆಯಾ ಎಂದು ನೋಡಿ, ಚರ್ಮದ ಸೀಳು, ಗುಳ್ಳೆಗಳು, ಕೆಂಪು ಮಚ್ಚೆಗಳು,ಬಾವು ಇತ್ಯಾದಿ.. ಹೆಬ್ಬಿರಳಿನ ಸಂದಿ ಮತ್ತು ಉಂಗುಷ್ಟಗಳ ಕೆಳಗೆ ಮತ್ತು ಮಧ್ಯ ನೋಡಲು ಮರೆಯ ಬೇಡಿ..
ಪಾದಗಳನ್ನು ನಿತ್ಯ ತೊಳೆದುಕೊಳ್ಳಿ : ಪಾದಗಳನ್ನು ಮೃದು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆದು ಕೊಳ್ಳಿ.
ಹೆಬ್ಬೆರಳಿನ ಉಗುರು ನಿಯಮಿತವಾಗಿ ಕತ್ತರಿಸಿಕೊಳ್ಳಿ.
ಸೂಕ್ತವಾದ ಪಾದರಕ್ಷೆ ಧರಿಸಿ ಪಾದವನ್ನು ರಕ್ಷಿಸಿ ಕೊಳ್ಳಿ.
ಬಾಯಿಯ ಆರೋಗ್ಯ
ದೈನಂದಿನ, ವ್ಯವಸ್ಥಿತವಾದ ಮನೆಯಲ್ಲಿನ ಆರೈಕೆಯಿಂದ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.ಹಲ್ಲುಜ್ಜುವುದು: ನಿಮ್ಮ ಬ್ರಷ್ಷು ಹೇಗಿದೆ ? ಗಟ್ಟಿ ಹಾಗೂ ಒರಟಾಗಿದೆಯಾ ? ಅವು ದವಡೆಗಳಿಗೆ ಹಾನಿ ಮಾಡಬಹುದು. ತಕ್ಷಣ ಮೃದುವಾದುದಕ್ಕೆ ಬದಲಾಯಿಸಿ..
ಈ ಕೆಳಗಿನ ಅಂಶಗಳೇನಾದರೂ ನಿಮಗಿದ್ದರೆ ದಂತವೈದ್ಯರನ್ನು ಭೇಟಿ ಮಾಡಿ
ಕಣ್ಣಿನ ಪೊರೆ (ಕ್ಯಾಟರಾಕ್ಟ) ಅಥವಾ ಗ್ಲೂಕೋಮಾ ಬರುವ ಸಾಧ್ಯತೆ ಆರೊಗ್ಯವಂತರಿಗೆ ಹೋಲಿಸಿದಾಗ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಎರಡು ಪಟ್ಟು ಹೆಚ್ಚು. ತುಂಬ ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ ಹೆಚ್ಚಿದ್ದರೆ ಕಣ್ಣಿನಲ್ಲಿರುವ ಸೂಕ್ಷ್ಮ ರಕ್ತನಾಳಗಳಿಗೆ ಧಕ್ಕೆಯಾಗುತ್ತದೆ. ಇದು ಡಯಾಬೆಟಿಕ್ ರೆಟಿನೋಪತಿಗೆ ಕಾರಣವಾಗಬಹುದು. ಮಧುಮೇಹದಿಂದ ಬಳಲುತ್ತಿರುವರು ದೃಷ್ಟಿಹೀನರಾಗುವುದಕ್ಕೆ ಡಯಾಬಿಟಿಕ್ ರೆಟಿನೋಪತಿಯೇ ಪ್ರಮುಖ ಕಾರಣ. ಮಧುಮೇಹ ಇರುವುದು ತಿಳಿದ ಕೂಡಲೇ ಪ್ರತಿವರ್ಷ ಸಂಪೂರ್ಣ ಕಣ್ಣಿನ ಆರೋಗ್ಯದ ತಪಾಸಣೆ ಮಾಡಿಸುವುದು ಅತ್ಯಗತ್ಯ. ಕೆಳಗಿನ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ
ಕೊನೆಯ ಮಾರ್ಪಾಟು : 7/12/2020