ಕ್ಷಯರೋಗವು (TB) ಸೋಂಕಿ ನಿಂದ ಬರುವ ರೋಗ. ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೊಸಿಸ ನಿಂದ ಬರುವುದು.
ಹರಡುವುದು ಕ್ಷಯರೋಗವನ್ನು ರೋಗಿಯು ಗಾಳಿಯ ಮೂಲಕ ಹರಡಬಹುದು. ಒಬ್ಬನು ಒಂದು ವರ್ಷದಲ್ಲಿ 10 ಜನಕ್ಕೆ ಸೋಂಕು ತಗಲಿಸಬಹುದು.
ಹ್ಯುಮನ್ ಇಮ್ಯುನೊಡಿಫಿಷಿಯನ್ಸಿ ವೈರಸ್ ( ಎಚ್ ಐ ವಿ, ಏಡ್ಸ ಗೆ ಕಾರಣವಾಗುವ ವೈರಸ್ ) ವಯಸ್ಕರಲ್ಲಿ ಕ್ಷಯ ರೋಗ ತರುವ ಅತಿಹೆಚ್ಚಿನ ಅಪಾಯಕಾರಿ ಅಂಶ. ಕ್ಷಯವು ಎಚ್ ಐವಿ ಸೋಂಕು ಇದ್ದವರಲ್ಲಿ ಬರುವ ಮೊದಲರೋಗ. ಅವರಿಗೆ ಬೇರೆಯವರಿಗಿಂತ ಆರು ಪಟ್ಟು ಹೆಚ್ಚು ಅಪಾಯಕಾರಿ. ಕ್ಷಯದ ಸೋಂಕು ತಗಲಿದರೆ ರೋಗ ಬರುವುದು ಬೇಗ. ಆದರೂ ಕ್ಷಯವನ್ನು ಗುಣ ಪಡಿಸಬಹುದು. HIV- ಸೊಂಕಿತ ವ್ಯಕ್ತಿಗಳಲ್ಲೂ ಕ್ಷಯವನ್ನು DOTS ಚಿಕಿತ್ಸೆಗೆ ಒಳಪಡಿಸಿದರೆ ಅದರ ತೀವ್ರತೆ ಮತ್ತು ಅವರ ಮರಣ ಪ್ರಮಾಣ ಕಡಿಮೆ ಯಾಗುವುದು.
ಮಕ್ಕಳಲ್ಲಿ ಕ್ಷಯ ಕ್ಷಯ ಮಕ್ಕಳಿಗೆ ಬರುವ ಸಂಭವ ಹಚ್ಚು ಕೆಲವು ವರ್ಗದ ಮಕ್ಕಳು ಉಳಿದವರಿಗಿಂತ ಕ್ಷಯ ರೋಗಕ್ಕೆಸುಲಭವಾಗಿ ಗುರಿಯಾಗುವರು, ಅವರೆಂದರೆ
ರೋಗನಿರೋಧಕ ಚುಚ್ಚುಮದ್ದು ಕ್ಷಯದ ವ್ಯಾಕ್ಸಿನ್ ಬಿಸಿಜಿ ಯು, ಕ್ಷಯರೋಗದ ಸಮಸ್ಯೆಯನ್ನು ಕ್ಕ ಮಟ್ಟಿಗೆ ನಿವಾರಿಸುತ್ತದೆ.
ಚಿಕಿತ್ಸೆ ನೇರ ಪರಿಶೀಲನಾ ಚಿಕಿತ್ಸೆ ಅಲ್ಪಾವಧಿ ಕೋರ್ಸ (DOTS) ಅನ್ನು ಕ್ಷಯದ ಚಿತ್ಸೆಗೆ ಬಳಸುವರು. ಕ್ಷಯದ ಚಿಕಿತ್ಸೆ ಗೆ ಕನಿಷ್ಟ 6 ತಿಂಗಳು ಹಿಡಿಯುವುದು ..
ಎಕ್ಸಟ್ರಾ ಪಲ್ಮನರಿ ಕ್ಷಯವು
ಎಕ್ಸಟ್ರಾ –ಪಲ್ಮನರಿ ಕ್ಷಯವು (EPTB) ಶ್ವಾಸಕೋಶದ ಹೊರಭಾಗದಲ್ಲಿ ಬರುವುದು
ಲಕ್ಷಣಗಳು ಎಕ್ಸಟ್ರಾ –ಪಲ್ಮನರಿ ಕ್ಷಯವು ರೋಗಗ್ರಸ್ಥವಾದಾಗ ಸೊಂಕಿತ ಭಾಗವು ಬಾಯುವುದು (ಲಿಂಫ್ ನೋಡ್). ತ್ರಾಸದಾಯಕ ಚಲನೆ( ಬೆನ್ನು ಹುರಿ) ಅಥವ ತೀವ್ರ ತಲೆನೋವು, ನರದೌರ್ಬಲ್ಯಇತ್ಯಾದಿ ಎಕ್ಸಟ್ರಾ –ಪಲ್ಮನರಿ ಕ್ಷಯ ಬಂದಾಗ ಕೆಮ್ಮು ಇರುವುದಿಲ್ಲ ಏಕೆಂದರೆ ಅದು ಶ್ವಾಸ ಕೋಶದ ಕಾಯಿಲೆ ಅಲ್ಲ.
ಕ್ಷಯವು ವಂಶಾನುಗತ ರೋಗವಲ್ಲ. ಇದು ಸೋಂಕುರೋಗ. ಯಾವುದೆ ವ್ಯಕ್ತಿಗೂ ಕ್ಷಯ ಬರಬಹುದು. ಕ್ಷಯದ ಸೋಂಕಿರುವ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಗಾಳಿಯಲ್ಲಿ ರೋಗಾಣಗಳು ಹರಡುವವು. ಈ ಏರೋ ಶೆಲ್ ಗಳನ್ನು ಗಾಳಿಯ ಮೂಲಕ ದೇಹದೊಳಗೆ ತೆಗೆದುಕೊಂಡಾಗ ಸೊಂಕು ತಗುಲಬಹುದು.
ಕ್ಷಯದ ವಿಶಿಷ್ಟ ಲಕ್ಷಣ, ಮೂರು ವಾರಕ್ಕೂ ಮೀರಿದ ಬಿಟ್ಟೂ ಬಿಡದ ಕಫದಿಂದ ಕೂಡಿದ ಕೆಮ್ಮು.ಜ್ವರ,ತೂಕನಷ್ಟ, ನಿಪ್ಪಹಸಿವು ಇತ್ಯಾದಿ.ಈ ಲಕ್ಷಣಗಳು ಮೂರು ವಾರಕ್ಕೂ ಮಿಗಿಲಾಗಿ ಮುಂದುವರಿದರೆ ತಕ್ಷಣ ಡಾಟ್ಸ ಕ್ಷಯರೋಗ ಕೇಂದ್ರ ಅಥವ ಆರೋಗ್ಯ ಕೇಂದ್ರಕ್ಕೆ ಹೋಗಿ ಕಫ ಪರೀಕ್ಷೆ ಮಾಡಿಸಬೇಕು.
ಕ್ಷಯದ ರೋಗಾಣು ಪತ್ತೆ ಮಾಡಲು ಸತತ ಮೂರುದಿನ ಕಫದ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ದೆಹಲಿಯ NCT ಸ್ಥಾಪಿಸಿರುವ ವಿವಿಧ ಸ್ಥಳಗಳಲ್ಲಿ ಮತ್ತು ಡಾಟ್ಸ ಕೇಂದ್ರಗಳಲ್ಲಿ ಮಾಡುವರು. ಈ ಸೇವೆಯು ಸಂಪೂರ್ಣ ಉಚಿತ. ಸರಿಯಾಗಿ ಕೆಮ್ಮಿ ಕಫವನ್ನು ಪರಿಕ್ಷೆಗೆ ಕೊಡಬೇಕು. ಕಫದ ಬದಲಾಗಿ ಬರಿ ಉಗುಳನ್ನು ನೀಡಬಾರದು . ಆಗ ರೋಗ ಪತ್ತೆ ಆಗದಿರಬಹುದು.
ಕ್ಷಯರೋಗ ನಿರೋಧಕ ಔಷಧಿಯನ್ನು ಪೂರ್ಣ ಅವಧಿಗೆ ಸಕ್ರಮವಾಗಿ ತೆಗೆದುಕೊಂಡರೆ ರೋಗ ಗುಣವಾವುದು.. ರೋಗಿಯು ಸತತವಾಗಿ ಆರು ತಿಂಗಳ ಕಾಲ ಔಷಧಿ ಸೇವಿಸ ಬೇಕು. ಕೆಲವು ಸಲ ಒಂದು ವರ್ಷದ ವರೆಗೆ ಔಷಧಿ ಮುಂದುವರಿಸ ಬೇಕಾಗಬಹುದು. ವೈದ್ಯರ ಸಲಹೆಯ ಮೇರೆಗೆ ಔಷಧಿ ಸೇವನೆ ನಿಲ್ಲಿಸಬಹುದು. ರೋಗಿಗಳು ಔಷಧಿಯನ್ನು ಪೂರ್ಣಧಿಗೆ ತೆಗೆದುಕೊಳ್ಳದಿದ್ದರೆ ಅಥವ ಸರಾಗಿ ತೆದುಕೊಳ್ಳದಿದ್ದರೆ ಅದು ಗುಣವಾಗದ ರೋಗ ವಾಗುವುದು. ಪ್ರಾಣಾಪಾಯವಾಗಬಹುದು.
ಹೌದು, ರೋಗವು ಸಂಪೂರ್ಣವಾಗಿ ಗುಣ ವಾಗುವುದು. ಚಿಕಿತ್ಸೆಯನ್ನು ನಿರಂತರವಾಗಿ, ಕ್ರಮವಾಗ ಮತ್ತು ಅವಧಿ ಮುಗಿಯುವವರೆಗೆ ತೆಗೆದು ಕೊಂಡಾಗ ಮಾತ್ರ ಗುಣವಾಗುವುದು ಸಾಧ್ಯ.
ಕ್ಷಯ ರೋಗಿಯು ಕೆಮ್ಮುವಾಗ ಮತ್ತು ಸೀನುವಾಗ ಮುಖ ಮುಚ್ಚಿಕೊಳ್ಳಬೇಕು. ಎಲ್ಲೆಂದರೆ ಅಲ್ಲಿ ಉಗುಳಬಾರದು. ಪೀಕದಾನಿಯಲ್ಲೆ ಉಗುಳಬೇಕು. ಅದನ್ನು ನಂತರ ಪರಿಶುದ್ಧ ಗೊಳಿಸಬೇಕು.
ಯಾರಿಗೆ ಆದರೂ ಲಕ್ಷಣಗಳು ಕಂಡಾಗ ಗಾಬರಿ ಯಾಗಬಾರದು ಹಾಗು ಮುಚ್ಚಿಡಬಾರದು. ಸಮಬಂಧಿಸಿದವರು ಪರೀಕ್ಷೆಮಾಡಿಸಿಕೊಂಡು ಅಗತ್ಯವಾದರೆ ತಿಳಿಸಿದಷ್ಟು ಅವಧಿಗೆ ಔಷಧಿ ತೆಗೆದುಕೊಳ್ಳ ಬೇಕು.
ಕ್ಷಯ ರೋಗಿಯು ತನ್ನ ಇಷ್ಟಾನುಸಾರ ಯಾವುದೆ ವಿಧದ ಆಹಾರ ಸೇವಿಬಹುದು. ಅವರಿಗೆ ಯಾವುದೆ ವಿಶೇಷ ಪಥ್ಯದ ಅಗತ್ಯವಿಲ್ಲ.ಆ ವ್ಯಕ್ತಿಗೆ ಯಾವ ಆಹಾರ ತೊಂದರೆ ಮಾಡುವುದೋ ಅದನ್ನು ಬಿಡಬೇಕು.
ಕ್ಷಯ ರೋಗಿಯು ಬೀಡಿ, ಸಿಗರೇಟು, ಹುಕ್ಕಾ, ತಂಬಾಕು, ಮದ್ಯ ಮತ್ತು ಇತರೆ ಅಮಲು ಪದಾರ್ಥಗಳ ಸೇವನೆಯನ್ನು ಬಿಡಬೇಕು..
DOTS(ಡಾಟ್ಸ) ಎಂದರೆ ನೇರವಾದ ಪರಿಶೀಲನಾ ಚಿಕಿತ್ಸೆಯ ಅಲ್ಪಾವಧಿ ಕೋರ್ಸ. ಇದು ಕ್ಷಯ ಗುಣ ಪಡಿಸುವ ಚಿಕಿತ್ಸೆ. ಇದು ಒಂದು ಸರ್ವಾಂಗೀಣವಾದ ತಂತ್ರ. ಕ್ಷಯವನ್ನು ಗುರುತಿಸಲು ಚಿಕಿತ್ಸೆ ಮಾಡಲು ಜಗತ್ತಿನಲ್ಲೆಲ್ಲ ಬಳಸಲಾತ್ತಿದೆ. ಇದು ಐದು ಅಂಶಗಳನ್ನು ಒಳಗೊಂಡಿದೆ:
ಇತ್ತೀಚಿನ ವರ್ಷಗಳಲ್ಲಿ ಕ್ಷಯವು ದೊಡ್ಡ ಸಮಸ್ಯೆಯಾಗಿದೆ. ಏಕಂದರೆ ಅದು ಔಷಧಿ ನಿರೋಧತೆಯನ್ನು ಬೆಳಸಿಕೊಂಡಿದೆ. ಸಾಧಾರಣವಾದ ಆಂಟಿಬಯೋಟಿಕ್ ಗಳಿಗೆ ಅದು ಸ್ಪಂದಿಸುವುದೆ ಇಲ್ಲ. ಔಷಧಿ ನಿರೋಧತೆಗೆ ಕಾರಣ ರೋಗಿಯು ಔಷಧಿಯನ್ನು ಸಕ್ರಮವಾಗಿ ಮತ್ತು ತಪ್ಪದೆ ತೆಗೆದು ಕೊಳ್ಳದಿರುವುದೆ ಆಗಿದೆ. MDR ಕ್ಷಯವನ್ನು ತಡೆಯಲು ಔಷಧಿಗಳನ್ನು ಪೂರ್ತಿ ಅವಧಿಗೆ ಕ್ರಮವಾಗಿ ತೆಗದು ಕೊಳ್ಳಬೇಕು. ಈ ರೀತಿಯ ಕ್ಷಯಕ್ಕೆ ಬಹು ದುಬಾರಿಯಾದ ಔಷಧಿಗಳು ತೆಗೆದು ಕೊಳ್ಳ ಬೇಕಾಗುತ್ತದೆ. ಆದರೂ ಅವು ಕೆಲಸಮಾಡದೆ ಇರಬಹುದು ಮತ್ತು ಚಿಕಿತ್ಸೆಯ ಅವಧಿಯು 2 ವರ್ಷಗಳಿಗೂ ಹೆಚ್ಚಾಬಹುದು.
ಕ್ಷಯದ ಸೋಂಕು ಯಾರಿಗಾದರೂ ಬರಬಹುದು. ಆದರೆ ಎಚ್ ಐವಿ ಮತ್ತು ಕ್ಷಯದ ಸೊಂಕು ಇದ್ದವರಿಗೆ ಬರಿ ಕ್ಷಯ ಇರುವವರಿಗಿಂತ ಹೆಚ್ಚಿನ ಅಪಾಯವಿದೆ.
ನಿಮಗೆ ಬರಿ ಕ್ಷಯ ಮಾತ್ರ ಇದ್ದರೂ, ಬ್ಯಾಕ್ಟೀರಿಯಾ ದೇಹದಲ್ಲಿ ಇದ್ದೆ ಇರುತ್ತದೆ ಮತ್ತು ಅದರ ಭಯ ತಪ್ಪಿದ್ದಲ್ಲ. ಎಚ್ ಐವಿ ಯಿಂದ ನಿಮ್ಮ ನಿರೋಧಕ ವ್ಯವಸ್ಥೆಯು ದುರ್ಬಲವಾದಾಗ ಬ್ಯಾಕ್ಟೀರಿಯಾಗಳು ಬೆಳೆಯತೊಡಗುತ್ತವೆ. ನಂತರ ಅದೆ ಕ್ಷಯಕ್ಕೆ ತಿರುಗುವುದು
ಮೂಲ:ಪೋರ್ಟಲ್ ತಂಡಕೊನೆಯ ಮಾರ್ಪಾಟು : 7/2/2020