<div id="MiddleColumn_internal"> <h3 style="float: left; text-align: justify; ">ಸಮನ್ವಯದ ಬಗ್ಗೆ</h3> <p style="text-align: justify; ">ನೀವು ಸಮನ್ವಯದ ವಿವಿಧ ಹಂತ ಹಾಗೂ ಇದನ್ನು ಪರಿಣಾಮಕಾರಿಯಾಗಿ ಹೇಗೆ ಜಾರಿಗೆ ತರಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಪರಿಣಾಮಕಾರಿಯಾರಿ ಹೇಗೆ ಜಾರಿಗೆ ತರಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಪರಿಣಾಮಕಾರಿಯಾದ ಸಮನ್ವಯದಿಂದ ನೀವು ನಿಮ್ಮ ಸಮುದಯದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬಹುದು.</p> <p style="text-align: justify; ">ಸಮನ್ವಯದಿಂದ ಆರೋಗ್ಯ ಸೇವೆಗಳನ್ನು ಸುಧಾರಿಸಬಹುದು.</p> <p style="text-align: justify; ">ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಮಟ್ಟದ ನಿರ್ಧಾರಗಳನ್ನು ಕಲಿಯುವುದು.</p> <p style="text-align: justify; ">ಗ್ರಾಮೀಣ ಹಂತದ ಆರೋಗ್ಯ ಸೇವೆಗಳ ಆರೈಕೆ ಮತ್ತು ಪೌಷ್ಠಿಕ ಆಹಾರ ಸೇವೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಲುವುದು.</p> <p style="text-align: justify; ">ಆರೋಗ್ಯ ಚಟುವಟಿಕೆಗಳ ಕಾರ್ಯ ಯಫಜನೆಯನ್ನು ಕಾರ್ಯಗತಗೊಳಿಸಲು ಜೊತೆಂiಗೂಡುವುದು.</p> <p style="text-align: justify; ">ಗ್ರಾಮೀಣ ಹಂತದಲ್ಲಿ ಆರೋಗ್ಯ ಶಿಬಿರಗಳ ಯೋಜನೆಯನ್ನು ಹಾಕಿಕೊಳ್ಳುವುದು ಮತ್ತು ತಾಯಂದಿರ ದಿನವನ್ನು ಆಚರಿಸುವುದು.</p> <p style="text-align: justify; ">ಗರ್ಭಿಣಿ ಸ್ತ್ರೀಯರಿಗೆ ಸೂಕ್ತ ಸಮಯದಲ್ಲಿ ಆರೈಕೆ ಹಾಗೂ ಮುಂದಿನ ಆಸ್ಪತ್ರೆಗೆ ಕಳುಹಿಸಲು ಕಾರ್ಯಯೋಜನೆ ತಯಾರಿಸುವುದು.</p> <p style="text-align: justify; ">ಸಮನ್ವಯಗಳಲ್ಲಿ ಬೇರೆ ಬೇರೆ ವಿಧಾನಗಳಿಬೆ. ಸಾಮಾನ್ಯವಾದ ಸಮನ್ವಯವೆಂದರೆ ತೊಂದರೆಯಲ್ಲಿರುವ ಜನರಿಗೆ ಸತತವಾಗಿ ಭೇಟಿ ನೀಡಿ ಅವರೊಂದಿಗೆ ವಿಷಯವನ್ನು ಹಂಚಿಕೊಳ್ಳುವುದು. ಸಮನ್ವಯದ ಇನ್ನೊಂದು ವಿಧಾನವೆಂದರೆ ಸಭೆಗಳನ್ನು ಕರೆಯುವುದು. ಪರಿಣಾಮಕಾರಿಯಾಗಿ ಸಮನ್ವಯ ವಹಿಸಲು ನಿಮಗೆ ವಿಶೇಷ ಕೌಶಲ್ಯ ಬೇಕಾಗಬಹುದು. ಅದನ್ನು ಇಲ್ಲಿ ತಿಳಿಯೋಣ.</p> <p style="text-align: justify; ">ಪ್ರತಿಯೊಂದು ಸಭೆಯು ವ್ಯವಹಾರಿಕಬಾಗಿರಬೇಕು. ಇಂತಹ ಸಭೆಗಳನ್ನು ಯೋಜನಾ ಬದ್ಧವಾಗಿ ಮತ್ತು ಫಲಿತಾಂಶ ತರುವಂತವುಗಳಾಗಿರಬೇಕು. ಅವ್ಯವಹಾರಿಕ ಸಭೆಗಳು ತುಂಬಾ ಹೊತ್ತುಇರುತ್ತವೆ. ವಿಷಯಗಳ ತೀವ್ರತೆ, ಯೋಜನಾ ಬದ್ಧವಾಗಿಲ್ಲದಿರುವುದು ಹಾಗೂ ನಿರಾಶದಾಯಕವಾಗಿರುತ್ತವೆ.</p> <p style="text-align: justify; ">ಸಭೆಯ ನಡುವಳಿಕೆಗಳನ್ನು ನಿರ್ಧಾರ ಮಾಡುವುದು. ಯಾರನ್ನು ಕರೆಯಬೇಕು ಎಂಬುದನ್ನು ನಿರ್ಧರಿಸುವುದು. ಸಭೆಗಳಿಗೆ ಆಗಮಿಸಿ ಯಾರು ತಮ್ಮ ಅಮೂಲ್ಯವಾದ ಸಲಹೆಗಳನ್ನು ಕೊಡುತ್ತಾರೆ. ಅಂತಹವರನ್ನು ಮಾತ್ರ ಕರೆಯುವುದು ಮತ್ತು ಸಭೆಯ ನಂತರ ಅವರ ಮನೆಗೆ ಭೇಟಿ ನೀಡುವುದು.</p> <p style="text-align: justify; ">ಸಂಬಂಧಪಟ್ಟ ಜನರೊಂದಿಗೆ ಸಭೆಯ ನಡುವಳಿಕೆಗಳನ್ನು ಚರ್ಚಿಸುವುದು. ಇದು ತುಂಬ ಟೀಕಾತ್ಮಕವಾಗಿರಬಹುದು. ಗ್ರಾಮೀಣ ಹಂತದಲ್ಲಿ ಸಭೆಗಳನ್ನು ನಡೆದಲು ಲಿಖಿತ ನಡುವಳಿಕೆಗಳನ್ನು ಕಳುಹಿಸುವ ಅವಶ್ಯಕತೆ ಇರುವುದಿಲ್ಲ. ಆದರೂ ಕೂಡಾ ಸಭೆಯ ಉದ್ದೇಶದ ಬಗ್ಗೆ ವಿವರವಾಗಿ ಮೌಖಿಕವಾಗಿ ತಿಳಿಸುವ ಮತ್ತು ಸಭೆಯ ವಿಷಯಗಳನ್ನು ಚರ್ಚಿಸುವ ಅವಶ್ಯಕತೆಯಿದೆ.</p> <p style="text-align: justify; ">ಸಭೆಯ ಪ್ರಾರಂಭದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಬೇಕು. ಸಭೆಯಲ್ಲಿ ಚರ್ಚೆಗಳನ್ನು/ವಿಚಾರಗಳನ್ನು ಎಲ್ಲರಿಗೂ ಸರಿಯಾಗಿ ತಿಳಿಯುವಂತಾಗಲು ಸದಸ್ಯರು ಕುಳಿತುಕೊಳ್ಲುವ ವಿಧಾನವನ್ನು ವರ್ತುಲಾಕಾರವಾಗಿ ಮಾಡಬೇಕು.</p> <p style="text-align: justify; ">ಒಂದು ಸಾಮಾನ್ಯ ತಿಳುವಳಿಕೆಗೆ ಬರಲು ಸಭೆಯ ಉದ್ದೇಶಗಳನ್ನು ಮತ್ತೊಮ್ಮೆ ತಿಳಿಸಿ ಹೇಳುವುದು. ಸಭೆಗೆ ಎಷ್ಟು ಸಮಯ ವ್ಯಯ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.</p> <p style="text-align: justify; ">ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಮಯಕೊಡಿ. ಏಕ ಕಾಲಕ್ಕೆ ಬೇರೆ ಬೇರೆ ವಿಷಯಗಳನ್ನು ಚರ್ಚಿಸುವುದನ್ನು ತಪ್ಪಿಸಿ.</p> <p style="text-align: justify; ">ನಿರ್ಧಾರ ಕೈಗೊಳ್ಳಬೇಕಾದಲ್ಲಿ, ಚರ್ಚಿಸಿ ದೃಡ ನಿರ್ಧಾರಕ್ಕೆ ಬರಬೇಕು.</p> <p style="text-align: justify; ">ಸಭೆಯ ನಂತರ ನಿರ್ಧಾರ ಕೈಗೊಳ್ಳಬೇಕಾದಲ್ಲಿ, ಕೈಗೊಳ್ಳಬೇಕಾದ ನಿರ್ಧಾರಗಳ ಪಟ್ಟಿಯನ್ನು ನಿರ್ಧರಿಸುವ ಅವಶ್ಯಕತೆಯಿದೆ. ನಿರ್ಧಾರವನ್ನು ಯಾರು ಬೆಂಬಲಿಸುತ್ತಾರೆ. ಮತ್ತು ಸಭೆಯ ನಿರ್ಧಾರಗಳನ್ನು ಜಾರಿಗೆ ತರಲು ಸಮಯವನ್ನು ನಿಗಧಿಪಡಿಸುವುದು.</p> <p style="text-align: justify; ">ಸಭೆಯ ನಂತರ ವಿವರವಾದ ವರದಿಯನ್ನು ತಯಾರಿ ಒಳಗೊಂಡಿರಬೇಕು.</p> <p style="text-align: justify; "> </p> <p style="text-align: justify; ">ದಿನಾಂಕ ವೇಳೆ ಸ್ಥಳ</p> <p style="text-align: justify; ">ಸಭೆಯ ಉದ್ದೇಶ :</p> <p style="text-align: justify; ">ಸಭೆಯಲ್ಲಿ ಭಾಗವಹಿಸಿಸದ ಸದಸ್ಯರುಗಳ ಹೆಸರು ಭಾಗವಹಿಸಿದ ಸದಸ್ಯರು</p> <p style="text-align: justify; ">1</p> <p style="text-align: justify; ">2</p> <p style="text-align: justify; ">3</p> <p style="text-align: justify; ">4</p> <p style="text-align: justify; ">ಕೈಗೊಂಡ ನಿರ್ಧಾರಗಳು</p> <p style="text-align: justify; ">1</p> <p style="text-align: justify; ">2</p> <p style="text-align: justify; ">೩</p> <p style="text-align: justify; ">ಕೈಗೊಳ್ಳಬೇಕಾದ ನಿರ್ಧಾರಗಳು ನಿರ್ಧಾರಗಳು</p> <p style="text-align: justify; ">ಯಾರು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ?</p> <p style="text-align: justify; ">ಯಾರು ಇದನ್ನು ಬೆಂಬಲಿಸುತ್ತಾರೆ ?</p> <p style="text-align: justify; ">ಕಾರ್ಯ ಮುಗಿದ ದಿನಾಂಕ</p> <p style="text-align: justify; ">ಸದಸ್ಯರುಗಳ ಸಹಿಗಳು</p> <p style="text-align: justify; "> </p> <p style="text-align: justify; ">ಈ ವರದಿಯನ್ನು ಸರಿಯಾಗಿ ಹಾಗೂ ವಿವರಬಾಗಿ ತುಂಬುವ ಅವಶ್ಯಕತೆಯಿದೆ ಮತ್ತು ಇದರ ಪ್ರಗತಿಯನ್ನು ಪರಿಶೀಲಿಸಲು ಮುಂದಿನ ಸಭೆಗೆ ಇದನ್ನು ಕಳುಹಿಸಬೇಕು.</p> <p style="text-align: justify; "> </p> <p style="text-align: justify; ">ಸಮನ್ವಯಕಾರರಾಗಿ ಹಳ್ಳಿಯ ಸಭೆಗಳಲ್ಲಿ ಪರಿಣಾಮಕಾರಿಯಾಗಿ ಪಾತ್ರಬಹಿಸಲು ಕೆಲಬೊಂದು ಮುಖ್ಯವಾದ ಸಲಹೆಗಳು :</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ನೀವು ಸಭೆಗೆ ಮುಂಚಿತವಾಗಿ ಹಾಗೂ ಸರಿಯಾಗಿ ತಯಾರಾಗಿರಬೇಕು. ಸಭೆಯ ನಡುವಳಿಕೆಗಳನ್ನು ವೈಯಕ್ತಿಕವಾಗಿ ಸಭೆಯಲ್ಲಿ ಭಾಗವಹಿಸಿದವರಿಗೆ ಮೊದಲು ತಿಳಿಸಬೇಕು. ಸಭೆಯಲ್ಲಿ ಏನೂ ಚರ್ಚಿಸಬೇಕು ಎಂಬುದರ ಬಗ್ಗೆ ನಿಮಗೆ ಸ್ವಷ್ಟವಾಗಿ ತಿಳುವಳಿಕೆ ಇರಬೇಕು.</p> <p style="text-align: justify; ">ಸಭೆಯಲ್ಲಿ ಭಾಗವಹಿಸಿದ್ದವರ ಅಭಿಪ್ರಾಯಗಳನ್ನು ಅವರೊಂದಿಗೆ ಚರ್ಚಿಸಿ ನಿರ್ಧರಿಸಿ. ಅವರ ವಾದ ವಿವಾದಗಳಿಗೆ ಉತ್ತರಿಸಲು ಸಿದ್ಧರಾಗಿ.</p> <p style="text-align: justify; ">ಸಭೆಯಲ್ಲಿ ಚರ್ಚಿಸುವಾಗ ಸರಿಯಾಗಿ ಕೇಳಿಸಿಕೊಳ್ಳಿ ಮತ್ತು ಕಾಳಜಿಪೂರ್ವಕವಾಗಿ ಗಮನಹರಿಸಿ. ವ್ಯಕ್ತಿಗಳ ವಾಗದಗಳಲ್ಲಿ ಬದಲಾವಣೆಯಾದರೆ ಅವರಿಗೆ ತಿಳಿದಿದೆಯೆಂಬ ಅರ್ಥ.</p> <p style="text-align: justify; ">ಚರ್ಚೆಯ ಸಮಯದಲ್ಲಿ, ತಾವು ತಕ್ಷಣದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ನೀವು ತಯಾರಿರಬೇಕು.</p> <p style="text-align: justify; ">ಚರ್ಚೆಯ ನಂತರ, ಸಭೆಯಲ್ಲಿ ತೆಗೆದುಕೊಂಡ ನಿರ್ಧಾಗಳನ್ನು ಪಟ್ಟಿ ಮಾಡಿ.</p> <p style="text-align: justify; ">ಚರ್ಚೆಯು ನಡೆದ ಕೆಲವು ದಿನಗಳ ನಂUತರ, ತೆಗೆದುಕೊಂಡ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗಿದೆಯೇ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.</p> <p style="text-align: justify; ">ಪ್ರತಿಯೊಂದು ಸಭೆಗಳ ವರದಿಯನ್ನು ತಯಾರಿಸುವುದು ತುಂಬಾ ಮುಖ್ಯವಾಗಿದೆ. ನಿಮಗೆ ಕೊಡಲಾದ ವರದಿಯ ಮಾದರಿಗಳನ್ನು ನಿಮ್ಮ ಸಭೆಗಳಲ್ಲಿ ಉಪಯೋಗಿಸಿಕೊಳ್ಳಬಹುದು.</p> <p style="text-align: justify; ">ಇಂತಹ ಸಮಯದಲ್ಲಿ ಪ್ರತಿಯೊಬ್ಬ ಸದಸ್ಯರುಗಳ ಪಾತ್ರ ಅತ್ಯಂತ ಮಹತ್ವವಾಗಿದೆ. ಆಶಾ ಕಾರ್ಯಕರ್ತರಾಗಿ ನೀವು ಎಲ್ಲ ಸಂಬಂಧಪಟ್ಟ ಸದಸ್ಯರುಗಳೊಂದಿಗೆ ಸತತ ಸಂಪರ್ಕ ಇಟ್ಟುಕೊಳ್ಳಬೇಕು ಹಾಗೂ ಅವರಿಗೆ ಅಭೀವೃದ್ಧಿ ವಿಷಯದ ಬಗ್ಗೆ ತಿಳಿಸುತ್ತಿರಬೇಕು.</p> <p style="text-align: justify; ">ಸಭೆಗಳನ್ನು ನಡೆಸಲು ಬೇರೆಯವರ ಸಹಾಯ ಪಡೆಯಲು ಹಿಂಜರಿಯಬೇಡಿ. ನಿಮಗೆ ಸಹಾಯ ಬೇಕಾದರೆ, ಅಂತಹವರನ್ನು ಮೊದಲು ಗುರ್ತಿಸಿ ಅವರಿಗೆ ಮುಂಚಿತವಾಗಿ ನಿಮ್ಮ ಸಹಾಯದ ಬಗ್ಗೆ ತಿಳಿಸಬೇಕು. ನೀವು ಆಯ್ಕೆ ಮಾಡಿಕೊಂಡ ವ್ಯಕ್ತಿಯ ಮೇಲೆ ನಿಮಗೆ ಸಂಪೂರ್ಣ ನಂಬಿಕೆಯಿರಬೇಕು.</p> <p style="text-align: justify; ">ವ್ಯಕ್ತಿಯು ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ಒಳ್ಳೆಯ ಪರಿಣಾಮಕಾರಿಯಾದ ದೃಡ ವಿಚಾರಗಳನ್ನು ಹೊಂದಿರಬೇಕು.</p> <h3 style="float: left; text-align: justify; ">ಸಂಧಾನಕ್ಕೆ ಸಲಹೆಗಳು</h3> <p style="text-align: justify; ">ಪರಿಣಾಮಕಾರಿಯಾದ ಸಂಧಾನಕ್ಕೆ ಕೆಲವು ಸಲಹೆಗಳು</p> <p style="text-align: justify; ">ಆಶಾಳಾಗಿ ನೀವು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವಾತ ನಿಮಗೆ ಸಾಕಷ್ಟು ತಾಳ್ಮೆ ಇರಬೇಕು. ನಿಮ್ಮ ಪ್ರತಿಸ್ಪರ್ಧಿಯನ್ನು ಕೆಳ ಮಟ್ಟದಲ್ಲಿ ಮತ್ತು ಸೋತ ರೀತಿಯಲ್ಲಿ ನೋಡುವುದಕ್ಕೆ ಪ್ರಯತ್ನಿಸಬೇಡಿ. ಮತ್ತೊಬ್ಬರ ದೃಷ್ಟಿಕೋನವನ್ನು (ಅವನು/ಅವಳು) ಅರ್ಥ ಮಾಡಿಕೊಳ್ಳುವಂತೆ ಮಾಡಿ.</p> <p style="text-align: justify; "> </p> <p style="text-align: justify; ">ಆಯ್ಕೆಗಳನ್ನು ಮುಂಚಿತವಾಗಿ ತಯಾರು ಮಾಡಿಕೊಳ್ಳಿ</p> <p style="text-align: justify; ">ನಿಮ್ಮ ಮೊದಲ ಸಲಹೆಯ ಆಯ್ಕೆಯನ್ನು ಒಪ್ಪದಿದ್ದಾಗ ಬೇರೆ ಆಯ್ಕೆಗಳನ್ನು ಸಂಧಾನ ಪ್ರಕ್ರಿಯೆಯ ಅವಧಿಗೆ ಮೊದಲೇ ಸಲಹೆ ನೀಡಬೇಕೆಂದಿರುವುದನ್ನು ತಯಾರಿಸಿಕೊಳ್ಳಿ ಮತ್ತೊಬ್ಬ ವ್ಯಕ್ತಿಯು ಏತಕ್ಕಾಗಿ ಈ ಸಲಹೆಯನ್ನು ಒಪ್ಪುತ್ತಿಲ್ಲವೆಂದು ಮೊದಲೇ ಊಹಿಸಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಿ.</p> <p style="text-align: justify; "> </p> <p style="text-align: justify; ">ವಾದಿಸಬೇಡಿ</p> <p style="text-align: justify; ">ಸಂಧಾನವೆಂದರೆ ಒಂದು ಪರಿಹಾರದ ಹಂತಕ್ಕೆ ಬರುವುದಾಗಿದೆ. ವಾದಿಸುವುದರಿಂದ ಮತ್ತೊಬ್ಬ ವ್ಯಕ್ತಿಯ ಅಭಿಪ್ರಾಯವನ್ನು ತಪ್ಪು ಎಂದು ಹೇಳಿದಂತಾಗುತ್ತದೆ. ನಮಗೆ ತಿಳಿದಿರುವಂತೆ ಸಂಧಾನಿಸುವಾಗ ಒಂದು ಪಕ್ಷವೂ ಇನ್ನೊಂದು ಪಕ್ಷವನ್ನು ತಪ್ಪು ಎಂದು ನಿರೂಪಿಸುವುದಕ್ಕೆ ಪ್ರಯತ್ನಿಸುತ್ತದೆ. ಇದರಿಂದ ಹಾವುದೇ ಪ್ರಗತಿ ಸಾಧ್ಯವಿಲ್ಲ. ಆದುದರಿಂದ ನಿಮ್ಮ ಸಮಯವನ್ನು ವಾದ ಮಾಡುವುದರಲ್ಲಿ ಕಳೆಯದಿರಿ. ಯಾವುದೇ ಕಾರಣಕ್ಕೂ ಮತ್ತೊಬ್ಬ ವ್ಯಕ್ತಿಯನ್ನು ಹೀನಾಯವಾಗಿ ಕಾಣಬೇಡಿ ಮತ್ತು ಇದು ಅಧಿಕಾರದ ಹಣಾಹಣಿಯಾಗಬಾರದು.</p> <p style="text-align: justify; "> </p> <p style="text-align: justify; ">ಸಮಯವನ್ನು ಪರಿಗಣಿಸಿ</p> <p style="text-align: justify; ">ಸಂಧಾನಿಸಲು ಒಳ್ಳೆಯ ಮತ್ತು ಕೆಟ್ಟ ಕಾಲವೆರಡೂ ಇರುತ್ತದೆ. ಎರಡೂ ಪಕ್ಷಗಳಲ್ಲಿ ಹೆಚ್ಚಿನ ಕೋಪ ಅಥವಾ ಕೆಲಸದ ಒತ್ತಡ ಹಗೂ ಆಯಾಸ ಮತ್ತು ಬೇರೆ ವಿಷಯದಲ್ಲಿ ಮಗ್ನರಾಗಿದ್ದರೆ ಅದು ಸಂಧಾನಕ್ಕೆ ಕೆಟ್ಟ ಸಮಯ. ಎಲ್ಲಾ ರೀತಿಯ ಸಂಧಾನಗಳಲ್ಲೂ ಸಕಾರಾತ್ಮಕ ಮನೋಭಾವನೆಯಿಂದ ಎರಡೂ ಪಕ್ಷಗಳು ತಾವು ಅಂದುಕೊಂಡ ಗುರಿ ಸಾಧಿಸಿದ್ದೇವೆ ಎಂಬ ಗೆಲುವಿನ ಭಾವನೆಯಿಂದ ಹೊರಬರುವುದೇ ಗೆಲುವಿನ ಸಂಧಾನ.</p> <p style="text-align: justify; ">ಯಾವಾಗಲೂ ನಿಮ್ಮ ದೃಷ್ಟಿಕೋನವು ವಾಸ್ತವದಿಂದ ಕೂಡಿರಲಿ</p> <p style="text-align: justify; ">ಯಾವಾಗಲೂ ನಿಮ್ಮ ದೃಷ್ಟಿಕೋನವು ವಾಸ್ತವದಿಂದ ಕೂಡಿರಲಿ, ಚರ್ಚೆಗಳನ್ನು ಊಹೆಗಳನ್ನು ಆಧರಿಸಿ ಅಥವಾ ನಕರಾತ್ಮಕದಿಂದಾಗಲೀ ಆರಂಭಿಸದಿರಿ. ಸಂಧಾನದಲ್ಲಿ "ನಿಮ್ಮನ್ನು ಜೊತೆಗಾರನಾಗಿ ಭಾವಿಸುತ್ತೇನೆ ಮತ್ತು ನಿಮಗೆ ನಿಮ್ಮ ಅಭಿಪ್ರಾಯದ ಹಕ್ಕು ಇದೆ" ಎಂಬ ಭಾವನೆಯೊಂದಿಗೆ ಚಾಲನೆ ನೀಡಿ. ನಿಮಗೆ ಇದು ತುಂಬಾ ಮೃದುವಾದ ಮತ್ತು ಪರಿಣಾಮಕಾರಿಯಲ್ಲದ ಮಾರ್ಗ ಎನಿಸಬಹುದು ಆದರೆ ಇದು ನಿಮ್ಮ ಆಂತರಿಕ ಬಲ ಮತ್ತು ದೃಢತೆಯ ಸಂಕೇತವಾಗಿರುತ್ತದೆ.</p> <p style="text-align: justify; "> </p> <p style="text-align: justify; ">ಸಮನ್ವಯ ಕೌಶಲ್ಯ</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ನೀವು ಆರೋಗ್ಯ ಸೇವೆಗಳ ಮತ್ತು ಸಮುದಾಯದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ, ನೀವು ಬೇರೆ ಬೇರೆ ಗುಂಪುಗಳ ಹಾಗೂ ಸಮುದಾಯದ ನಡುವೆ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು</p> <p style="text-align: justify; ">ಪರಿಣಾಮಕಾರಿಯಾದ ಸಂಧಾನಕ್ಕೆ ಕೆಲವು ಸಲಹೆಗಳು</p> <p style="text-align: justify; ">ಆಶಾಳಾಗಿ ನೀವು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವಾತ ನಿಮಗೆ ಸಾಕಷ್ಟು ತಾಳ್ಮೆ ಇರಬೇಕು. ನಿಮ್ಮ ಪ್ರತಿಸ್ಪರ್ಧಿಯನ್ನು ಕೆಳ ಮಟ್ಟದಲ್ಲಿ ಮತ್ತು ಸೋತ ರೀತಿಯಲ್ಲಿ ನೋಡುವುದಕ್ಕೆ ಪ್ರಯತ್ನಿಸಬೇಡಿ. ಮತ್ತೊಬ್ಬರ ದೃಷ್ಟಿಕೋನವನ್ನು (ಅವನು/ಅವಳು) ಅರ್ಥ ಮಾಡಿಕೊಳ್ಳುವಂತೆ ಮಾಡಿ.</p> <p style="text-align: justify; "> </p> <p style="text-align: justify; ">ಆಯ್ಕೆಗಳನ್ನು ಮುಂಚಿತವಾಗಿ ತಯಾರು ಮಾಡಿಕೊಳ್ಳಿ</p> <p style="text-align: justify; ">ನಿಮ್ಮ ಮೊದಲ ಸಲಹೆಯ ಆಯ್ಕೆಯನ್ನು ಒಪ್ಪದಿದ್ದಾಗ ಬೇರೆ ಆಯ್ಕೆಗಳನ್ನು ಸಂಧಾನ ಪ್ರಕ್ರಿಯೆಯ ಅವಧಿಗೆ ಮೊದಲೇ ಸಲಹೆ ನೀಡಬೇಕೆಂದಿರುವುದನ್ನು ತಯಾರಿಸಿಕೊಳ್ಳಿ ಮತ್ತೊಬ್ಬ ವ್ಯಕ್ತಿಯು ಏತಕ್ಕಾಗಿ ಈ ಸಲಹೆಯನ್ನು ಒಪ್ಪುತ್ತಿಲ್ಲವೆಂದು ಮೊದಲೇ ಊಹಿಸಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಿ.</p> <p style="text-align: justify; "> </p> <p style="text-align: justify; ">ವಾದಿಸಬೇಡಿ</p> <p style="text-align: justify; ">ಸಂಧಾನವೆಂದರೆ ಒಂದು ಪರಿಹಾರದ ಹಂತಕ್ಕೆ ಬರುವುದಾಗಿದೆ. ವಾದಿಸುವುದರಿಂದ ಮತ್ತೊಬ್ಬ ವ್ಯಕ್ತಿಯ ಅಭಿಪ್ರಾಯವನ್ನು ತಪ್ಪು ಎಂದು ಹೇಳಿದಂತಾಗುತ್ತದೆ. ನಮಗೆ ತಿಳಿದಿರುವಂತೆ ಸಂಧಾನಿಸುವಾಗ ಒಂದು ಪಕ್ಷವೂ ಇನ್ನೊಂದು ಪಕ್ಷವನ್ನು ತಪ್ಪು ಎಂದು ನಿರೂಪಿಸುವುದಕ್ಕೆ ಪ್ರಯತ್ನಿಸುತ್ತದೆ. ಇದರಿಂದ ಹಾವುದೇ ಪ್ರಗತಿ ಸಾಧ್ಯವಿಲ್ಲ. ಆದುದರಿಂದ ನಿಮ್ಮ ಸಮಯವನ್ನು ವಾದ ಮಾಡುವುದರಲ್ಲಿ ಕಳೆಯದಿರಿ. ಯಾವುದೇ ಕಾರಣಕ್ಕೂ ಮತ್ತೊಬ್ಬ ವ್ಯಕ್ತಿಯನ್ನು ಹೀನಾಯವಾಗಿ ಕಾಣಬೇಡಿ ಮತ್ತು ಇದು ಅಧಿಕಾರದ ಹಣಾಹಣಿಯಾಗಬಾರದು.</p> <p style="text-align: justify; "> </p> <p style="text-align: justify; ">ಸಮಯವನ್ನು ಪರಿಗಣಿಸಿ</p> <p style="text-align: justify; ">ಸಂಧಾನಿಸಲು ಒಳ್ಳೆಯ ಮತ್ತು ಕೆಟ್ಟ ಕಾಲವೆರಡೂ ಇರುತ್ತದೆ. ಎರಡೂ ಪಕ್ಷಗಳಲ್ಲಿ ಹೆಚ್ಚಿನ ಕೋಪ ಅಥವಾ ಕೆಲಸದ ಒತ್ತಡ ಹಗೂ ಆಯಾಸ ಮತ್ತು ಬೇರೆ ವಿಷಯದಲ್ಲಿ ಮಗ್ನರಾಗಿದ್ದರೆ ಅದು ಸಂಧಾನಕ್ಕೆ ಕೆಟ್ಟ ಸಮಯ. ಎಲ್ಲಾ ರೀತಿಯ ಸಂಧಾನಗಳಲ್ಲೂ ಸಕಾರಾತ್ಮಕ ಮನೋಭಾವನೆಯಿಂದ ಎರಡೂ ಪಕ್ಷಗಳು ತಾವು ಅಂದುಕೊಂಡ ಗುರಿ ಸಾಧಿಸಿದ್ದೇವೆ ಎಂಬ ಗೆಲುವಿನ ಭಾವನೆಯಿಂದ ಹೊರಬರುವುದೇ ಗೆಲುವಿನ ಸಂಧಾನ.</p> <p style="text-align: justify; ">ಯಾವಾಗಲೂ ನಿಮ್ಮ ದೃಷ್ಟಿಕೋನವು ವಾಸ್ತವದಿಂದ ಕೂಡಿರಲಿ</p> <p style="text-align: justify; ">ಯಾವಾಗಲೂ ನಿಮ್ಮ ದೃಷ್ಟಿಕೋನವು ವಾಸ್ತವದಿಂದ ಕೂಡಿರಲಿ, ಚರ್ಚೆಗಳನ್ನು ಊಹೆಗಳನ್ನು ಆಧರಿಸಿ ಅಥವಾ ನಕರಾತ್ಮಕದಿಂದಾಗಲೀ ಆರಂಭಿಸದಿರಿ. ಸಂಧಾನದಲ್ಲಿ "ನಿಮ್ಮನ್ನು ಜೊತೆಗಾರನಾಗಿ ಭಾವಿಸುತ್ತೇನೆ ಮತ್ತು ನಿಮಗೆ ನಿಮ್ಮ ಅಭಿಪ್ರಾಯದ ಹಕ್ಕು ಇದೆ" ಎಂಬ ಭಾವನೆಯೊಂದಿಗೆ ಚಾಲನೆ ನೀಡಿ. ನಿಮಗೆ ಇದು ತುಂಬಾ ಮೃದುವಾದ ಮತ್ತು ಪರಿಣಾಮಕಾರಿಯಲ್ಲದ ಮಾರ್ಗ ಎನಿಸಬಹುದು ಆದರೆ ಇದು ನಿಮ್ಮ ಆಂತರಿಕ ಬಲ ಮತ್ತು ದೃಢತೆಯ ಸಂಕೇತವಾಗಿರುತ್ತದೆ.</p> <p style="text-align: justify; "> </p> <p style="text-align: justify; ">ಸಮನ್ವಯ ಕೌಶಲ್ಯ</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ನೀವು ಆರೋಗ್ಯ ಸೇವೆಗಳ ಮತ್ತು ಸಮುದಾಯದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ, ನೀವು ಬೇರೆ ಬೇರೆ ಗುಂಪುಗಳ ಹಾಗೂ ಸಮುದಾಯದ ನಡುವೆ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು</p> <p style="text-align: justify; ">ಮತ್ತೊಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ಕೇಳಿರಿ.</p> <p style="text-align: justify; ">ಸಂಧಾನದ ಪರಿಸ್ಥಿತಿಯಲ್ಲಿ ಮತ್ತೊಬ್ಬ ವ್ಯಕ್ತಿಯ ಕಾಳಜಿ ಮತ್ತು ಬೇಕುಬೇಡಗಳು ಏನೆಂಬುದನ್ನು, ಪ್ರಶ್ನೆಗಳನ್ನು ಉಪಯೋಗಿಸಿ ತಿಳಿಯಿರಿ. ಕೆಲವು ಪ್ರಶ್ನೆಗಳ ಉದಾಹರಣೆಗಳು ಹೀಗಿವೆ. ಈ ವಿಷಯದಲ್ಲಿ ನನ್ನಿಂದ ನಿಮಗೆ ಏನಾಗಬೇಕಿದೆ ? ನಾನು ಏನನ್ನು ಸಲಹೆ ಮಾಡುತ್ತಿದ್ದೇನೆ / ಕೇಳುತ್ತಿದ್ದೇನೆ ಎಂಬುದರ ಬಗ್ಗೆ ತಮ್ಮ ಕಾಳಜಿ ಏನು ? ಮತ್ತೊಬ್ಬ ವ್ಯಕ್ತಿಯ ತಮ್ಮ ಕಾಳಜಿ ಅಥವಾ ಬೇಕಾದುದನ್ನು ತೋರ್ಪಡಿಸಿದರೆ ನೀವು ಸರಿಯಾಗಿ ಕೇಳಿಸಿಕೊಂಡಿರುವುದನ್ನು ಮನವರಿಕೆ ಮಾಡಿಕೊಂಡು ಅದನ್ನು ವಿನಿಯೋಗಿಸುವುದರ ಮೂಲಕ ಪ್ರತಿಕ್ರಿಯಿಸಿ.</p> <p style="text-align: justify; ">ನಿಮ್ಮ ಬೇಕುಗಳನ್ನು ನಿವೇದಿಸಿ</p> <p style="text-align: justify; ">ಸಂಧಾನಿಸುವ ಪ್ರಕ್ರಿಯೆಯಲ್ಲಿ ಮತ್ತೊಬ್ಬ ವ್ಯಕ್ತಿಯ ನಿಮಗೆ ಏನು ಬೇಕಾಗಿದೆ ಎಂಬುದನ್ನು ತಿಳಿದಿರಬೇಕು. ನಿಮಗೆ ಏನು ಬೇಕಾಗಿದೆ ಎಂಬುದಷ್ಟೇ ಹೇಳುವುದು ಮುಖ್ಯವಲ್ಲ. ನಿಮಗೆ ಏತಕ್ಕಾಗಿ ಅದು ಬೇಕಾಗಿದೆ ಎನ್ನುವುದು ಮುಖ್ಯ.</p> <p style="text-align: justify; ">ಆಯ್ಕೆಗಳನ್ನು ಮುಂಚಿತವಾಗಿ ತಯಾರು ಮಾಡಿಕೊಳ್ಳಿ</p> <p style="text-align: justify; ">ನಿಮ್ಮ ಮೊದಲ ಸಲಹೆಯ ಆಯ್ಕೆಯನ್ನು ಒಪ್ಪದಿದ್ದಾಗ ಬೇರೆ ಆಯ್ಕೆಗಳನ್ನು ಸಂಧಾನ ಪ್ರಕ್ರಿಯೆಯ ಅವಧಿಗೆ ಮೊದಲೇ ಸಲಹೆ ನೀಡಬೇಕೆಂದಿರುವುದನ್ನು ತಯಾರಿಸಿಕೊಳ್ಳಿ ಮತ್ತೊಬ್ಬ ವ್ಯಕ್ತಿಯು ಏತಕ್ಕಾಗಿ ಈ ಸಲಹೆಯನ್ನು ಒಪ್ಪುತ್ತಿಲ್ಲವೆಂದು ಮೊದಲೇ ಊಹಿಸಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಿ.</p> <p style="text-align: justify; "> </p> <p style="text-align: justify; ">ವಾದಿಸಬೇಡಿ</p> <p style="text-align: justify; ">ಸಂಧಾನವೆಂದರೆ ಒಂದು ಪರಿಹಾರದ ಹಂತಕ್ಕೆ ಬರುವುದಾಗಿದೆ. ವಾದಿಸುವುದರಿಂದ ಮತ್ತೊಬ್ಬ ವ್ಯಕ್ತಿಯ ಅಭಿಪ್ರಾಯವನ್ನು ತಪ್ಪು ಎಂದು ಹೇಳಿದಂತಾಗುತ್ತದೆ. ನಮಗೆ ತಿಳಿದಿರುವಂತೆ ಸಂಧಾನಿಸುವಾಗ ಒಂದು ಪಕ್ಷವೂ ಇನ್ನೊಂದು ಪಕ್ಷವನ್ನು ತಪ್ಪು ಎಂದು ನಿರೂಪಿಸುವುದಕ್ಕೆ ಪ್ರಯತ್ನಿಸುತ್ತದೆ. ಇದರಿಂದ ಹಾವುದೇ ಪ್ರಗತಿ ಸಾಧ್ಯವಿಲ್ಲ. ಆದುದರಿಂದ ನಿಮ್ಮ ಸಮಯವನ್ನು ವಾದ ಮಾಡುವುದರಲ್ಲಿ ಕಳೆಯದಿರಿ. ಯಾವುದೇ ಕಾರಣಕ್ಕೂ ಮತ್ತೊಬ್ಬ ವ್ಯಕ್ತಿಯನ್ನು ಹೀನಾಯವಾಗಿ ಕಾಣಬೇಡಿ ಮತ್ತು ಇದು ಅಧಿಕಾರದ ಹಣಾಹಣಿಯಾಗಬಾರದು.</p> <p style="text-align: justify; "> </p> <p style="text-align: justify; ">ಸಮಯವನ್ನು ಪರಿಗಣಿಸಿ</p> <p style="text-align: justify; ">ಸಂಧಾನಿಸಲು ಒಳ್ಳೆಯ ಮತ್ತು ಕೆಟ್ಟ ಕಾಲವೆರಡೂ ಇರುತ್ತದೆ. ಎರಡೂ ಪಕ್ಷಗಳಲ್ಲಿ ಹೆಚ್ಚಿನ ಕೋಪ ಅಥವಾ ಕೆಲಸದ ಒತ್ತಡ ಹಗೂ ಆಯಾಸ ಮತ್ತು ಬೇರೆ ವಿಷಯದಲ್ಲಿ ಮಗ್ನರಾಗಿದ್ದರೆ ಅದು ಸಂಧಾನಕ್ಕೆ ಕೆಟ್ಟ ಸಮಯ. ಎಲ್ಲಾ ರೀತಿಯ ಸಂಧಾನಗಳಲ್ಲೂ ಸಕಾರಾತ್ಮಕ ಮನೋಭಾವನೆಯಿಂದ ಎರಡೂ ಪಕ್ಷಗಳು ತಾವು ಅಂದುಕೊಂಡ ಗುರಿ ಸಾಧಿಸಿದ್ದೇವೆ ಎಂಬ ಗೆಲುವಿನ ಭಾವನೆಯಿಂದ ಹೊರಬರುವುದೇ ಗೆಲುವಿನ ಸಂಧಾನ.</p> <h3 style="float: left; text-align: justify; ">ಸಂಧಾನಿಸುವ ಕುಶಲತೆ</h3> <p style="text-align: justify; ">ಎಲ್ಲರೂ ಎಲ್ಲಾ ಸಮುದಾಯದಲ್ಲೂ ತಮಗೆ ತಿಳಿಗಯದೆಯೆ, ಅನೌಪಚರಿಕವಾಗಿ ಸಂದಾನ ನಡೆಸಿದ್ದರೂ, ಔಪಚಾರಿಕವಾಗಿ ಸಂಧಾನ ನಡೆಸುವುದು ಒಂದು ಕೌಶಲ್ಯವಾಗಿದೆ. ಇದನ್ನು ಅನುಭವ ಮತ್ತು ಅಭ್ಯಾಸದ ಮೂಲಕ ಸರಿಯಾಗಿ ಮಾಡಬಹುದಾಗಿದೆ. ಸಂಧಾನ ನಡೆಸುವ ಜನರಲ್ಲಿ ಔಪಚಾರಿಕವಾಗಿ ಸಂಧಾನ ನಡೆಸುವ ಪ್ರಕ್ರಿಯೆಯಲ್ಲಿಭಾಗವಹಿಸದೇ ಇರುವವರಿಗಿಂತ ಹೆಚ್ಚಿನ ಕುಶಲಬೆ ಇರಬೇಕಾಗುತ್ದೆ. ಸಂಧಾನವೆಂದರೆ ಇಬ್ಬರು ಅಘವಾ ಹೆಚ್ಚಿನ ವ್ಯಕ್ತಿಗಳೊಂದಿಗೆ ಅಥವಾ ಗುಂಪುಗಳೊಂದಿಗೆ ಇರುವ ವ್ಯತ್ಯಾಸಗಳನ್ನು ವ್ಯವಹಾರಿಕವಾಗಿ ಬಗೆಹರಿಸುವುದಾಗಿದೆ. ಆಶಾಳಾಗಿ ನೀವು ಈ ಕಾರ್ಯವನ್ನು ಮಾಡಬೇಕಿದೆ. ಈ ರೀತಿಯ ವ್ಯತ್ಯಾಸಗಳನ್ನು ಬಗೆಹರಿಸುವುದರಿಂದ ನೀವು ನಿಮ್ಮ ಹಳ್ಳಿಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಗುರಿಯನ್ನು ಸಾಧೀಸಬಹುದಾಗಿದೆ. ಈಗ ನಾವು ಸಂಧಾನ ನಡೆಸುವ ಕ್ರಮವು ಹೇಗೆಂಬುದನ್ನು ಅರ್ಥ ಮಾಡಿಕೊಳ್ಳೋಣ.</p> <p style="text-align: justify; ">ಸಂಧಾನವೆಂದರೆ, ಇಬ್ಬರು ವ್ಯಕ್ತಿಗಳು/ಪಕ್ಷಗಳಲ್ಲಿ ಇರುವ ಬೇರೆ ಬೇರೆ ಬೇಕುಗಳನ್ನು ಮತ್ತು ಗುರಿಗಳನ್ನು ಮುಟ್ಟುವುದರಲ್ಲಿ ಇಬ್ಬರಿಗೂ ಒಪ್ಪಿಗೆಯಾಗುವಂತಹ ಸಲಹೆಗಳನ್ನು ಯಾವುದೇ ಒಂದು ವಿಚಾರದಲ್ಲಿ ಹುಡುಕುವಂಗಹ ಕ್ರಮವಾಗಿದೆ. ಏಕೆಂದರೆ ಸಂಧಾನ ನಡೆಸುವುದು ಮುಖಾಮುಖಿ ನಡೆಸುವ ಕ್ರಮವಾಗಿದ್ದು, ಒಂದೊಂದು ಸಂಧಾನಗಳೂ ಪರಿಸ್ಥಿತಿಗಳ ಅನುಸಾರ ಬೇರೆಯಾಗಿರುತ್ತದೆ ಮತ್ತು ಇದು ಒಂದೊಂದು ಪಕ್ಷದವರಲ್ಲಿರುವ ಕೌಶಲ್ಯ, ದೃಷ್ಠಿಕೋನ ಮತ್ತು ಅದರ ಶೈಲಿಯ ಮೂಲಕ ಪ್ರಭಾವ ಬೀರುವುದಾಗಿದೆ. ನಾವು ಯಾವಾಗಲೂ ಸಂಧಾನವೆಂದರೆ ಒಂದು ಅಹಿತಕರವಾದ ಕೆಲಸವೆಂದು ತಿಳಿದಿರುತ್ತೇವೆ. ಏಕೆಂದರೆ ಇದು ಸಿಟ್ಟಿನ ನಡವಳಿಕೆಯಿಂದ ಇರಬೇಕೆಂಬುದೇನೂ ಇಲ್ಲ. ಸಂಧಾನದ ಕ್ರಮವನ್ನು ನ್ನೂ ಹೆಚ್ಚಾಗಿ ಅರ್ಥಮಾಡಿಕೊಳ್ಳುವುದರಿಂದ ನಾವು ದೃಢತೆಯಿಂದ ಸಂಧಾನವನ್ನು ನಿರ್ವಹಿಸಲು ಸಾಧ್ಯವಾಗುವುದು. ಹಾಗೂ ಇದರಿಂದ ಎರಡು ಪಕ್ಷದವರಿಗೂ ಸಕಾರಾತ್ಮಕವಾದ ಪರಿಣಾಮ ಬೀರುವುದು ಹೆಚ್ಚಾಗುತ್ತದೆ. ಸಂಧಾನವು ಪ್ರತಿರೋಧವಾಗಿ, ಅವಹೇಳನಕರವಾಗಿ ಮತ್ತು ಸವಾಲೊಡ್ಡುವಂತೆ ಎದಿರುಗೊಳ್ಳುವಂತಿರಬೇಕೆಂಬುದೇನಿಲ್ಲ. ಆದರೆ ಪರಿಣಾಮಕಾರಿಯಾದ ಸಂಧಾನವು ಬೇರೆ ಬೇರೆ ಗುಂಪುಗಳು ಒಟ್ಟಿಗೆ ಕೆಲಸ ಮಾಡುತ್ತಾ ಒಂದು ನಿರ್ಧಿಷ್ಟ ಪರಿಹಾರವನ್ನು ಕಂಡುಕೊಳ್ಳುವ ವೈಶಿಷ್ಟ್ಯವಿರಬೇಕೆ ಹೊರತು ಇದು ನನ್ನ ಗುಂಪಿಗೆ ಗೆಲುವು ಎಂದು ಯಾವುದೇ ಕಾರಣಕ್ಕೂ ಹೇಳಿಕೊಳ್ಳಲು ಪ್ರಯತ್ನಿಸಬಾರದು. ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ (ಉದಾಹರಣೆಗೆ ಸಹಕಾರಿಯಾಗಲೀ / ಪ್ರತಿಕೂಲಕವಾಗಲೀ) ಪರಸ್ಪರ ವಿನಿಯೋಗ ಮಾಡುವಂತಿರಬೇಕೆಂಬುದನ್ನು ನೀವು ಮನಗಂಡಿರಬೇಕು. ನೀವು ಎದುರಾಳಿಗಳಾದರೆ ನಿಮ್ಮ ಕೈಗಳಲ್ಲೇ ನೀವು ಸೆಣಸಾಟವಾಡಬಾಕಾಗಬಹುದು.</p> <p style="text-align: justify; ">ಸಂಧಾನ ನಡೆಸುವುದು ಒಂದು ಜಟಿಲವಾದ ಕಾರ್ಯಆಚರನೆ. ಆದರೆ ಇದರಲ್ಲಿ ಮೇಧಾವಿಗಳಾಗುವುದು ನಿಶ್ಚಯವಾಗಿ ಒಂದು ಉತ್ತಮ ಸಾಧನೆ. ನೀವು ಸಂಧಾನ ನಡೆಸುವಾಗ ಅದರ ಯಶಸ್ಸಾಗಲೀ ಅಥವಾ ವಿಫಲತೆಯಾಗಲೀ ನೀವೇ ಜವಾಬ್ದಾರರು ಎಂದು ಮನಗಂಡಿದ್ದರೆ ಮತ್ತು ಕೆಳಗೆ ನೀಡಿದ ಸಲಹೆಗಳನ್ನು ಪಾಲಿಸಿದರೆ ಈ ಕಾರ್ಯವನ್ನು ನಡೆದುವುದು ಸುಲಭವಾಗುತ್ತದೆ. ಯಶಸ್ವಿಯಾಗಿ ಸಂಧಾನ ನಡೆಸಿದರೆ ಎಲ್ಲರೂ ಗೆಲ್ಲುವಿರೆಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮುಖ್ಯ ಉದ್ದೇಶವು ಒಡಂಬಡಿಕೆಯಾಗಿರಬೇಕೆ ಹೊರತಾಗಿ ಗೆಲುವಿನ ರೀತಿಯಲ್ಲಿ ಅಥವಾ ಬೇರೆಯವರನ್ನು ಕಡೆಗಾಣಿಸುವಂತಿರಬಾರದು.</p> <p style="text-align: justify; ">ಆಶಾ ಕಾರ್ಯಕರ್ತಳಾಗಿ ನೀವು ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಯಾವಾಗಲೂ ಜನರೊಂದಿಗೆ ಮತ್ತು ಪರಿಸ್ಥಿತಯ ಅನುಸಾರ ಸಂದಾನದ ಮೂಲಕ ನಿಭಾಯಿಸಬೇಕಾಗುತ್ತದೆ. ಆಧಿಕಾರಮುಕ್ತ ಜನರೊಂದಿಗೆ ಸಂದಾನಿಸುವುದು ಒಂದು ಸವಾಲೆಂದು ನೀವು ಮುಖ್ಯವಾಗಿ ತಿಳಿದಿರಬೇಕಾಗಿದೆ. ಆದರೆ ಇದನ್ನು ನೀವು ಪೂರ್ವಸಿದ್ಧತೆ ಮತ್ತು ಆಚರಣೆಯ ಮೂಲಕ ಎಂತಹ ಪರಿಸ್ಥಿತಯನ್ನು ಸಂಧಾನದ ಮೂಲಕ ಪರಿಣಾಮಕಾರಿಯಾಗಿ ಮಾಡಬಹುದು.</p> <h3 style="float: left; text-align: justify; ">ಸಂಕಷ್ಟದ ಸ್ಥಿತಿ ನಿರ್ವಹಣೆ</h3> <p style="text-align: justify; ">ನಿಮಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವೆಂದು ಅನಿಸಿದರೆ ಸ್ವಲ್ಪ ಸಮಯ ಬಿಟ್ಟು ನಂತರ ಮುಂದುವೆಸಿ. ಬಿಡುವಿನ ನಂತರ ಗುಂಪಿನ ಪ್ರತಿನಿಧೀಗಳು ಸಂಬಂಧಿಸಿದ ವಿಷಯಗಳನ್ನು ಮತ್ತು ಆಯ್ಕೆಗಳನ್ನು ಪುನರ್ ಪರಿಶೀಲಿಸಲು ಕೇಳಿ, ಯಾವುದೇ ತೀರ್ಮಾನವನ್ನಾಗಲೀ ಜನರು ಒಂದು ರಾತ್ರಿ ಯೋಚಿಸಲು ಮುಂದಕ್ಕೆ ಹಾಕುವುದು ಒಳ್ಳೆಯ ವಿಚಾರವಾಗಿದೆ.</p> <p style="text-align: justify; ">ಪರಿಣಾಮಕಾರಿಯಾದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ವಿವರಣೆ</p> <p style="text-align: justify; ">ಪರಿಣಾಮಕಾರಿಯಾದ ನಿರ್ಧಾರವು ಗುಂಪಿನ ಪ್ರತಿನಿಧಿಗಳಲ್ಲಿ ಸಭೆಯನ್ನು ಮುಂದೂಡಿದ ನಂತರ ಯಾವುದೇ ರೀತಿಯ ಅಸಂತೋಷವನ್ನುಂಟುಮಾಡಬಾರದು.</p> <p style="text-align: justify; ">ಪರಿಣಾಮಕಾರಿಯಾದ ನಿರ್ಧಾರಗಳು ಸಹಜಸ್ಥಿತಿಯುತ್ತ ಕಾರ್ಯಗತಗೊಳಿಸುವಂತಿರಬೇಕು. ಅದು ಕಾರ್ಯಗತ ಮಾಡಲು ಸಾಧ್ಯವಿಲ್ಲದಂತಿರಬಾರದು.</p> <p style="text-align: justify; ">ತೆಗೆದುಕೊಳ್ಳುವ ನಿರ್ಧಾರಗಳು ಜನರ ಅಥವಾ ಗುಂಪಿನಲ್ಲಿ ಗೊಂದಲವನ್ನುಂಟು ಮಾಡುವ, ದೌರ್ಬಲ್ಯದ ಗುಣದಿಂದ ಕೂಡಿರಬಾರದು. ಇದು ಜೀವಂತಿಕೆಯಿಂದಿರಬೇಕು.</p> <p style="text-align: justify; ">ಪರಿಣಾಮಕಾರಿಯಾದ ನಿರ್ಧಾರವು ಗುಂಪಿನ ಪ್ರತಿನಿಧಿಗಳು ಕಾರ್ಯಗತ ಮಾಡಲು ಎಷ್ಟು ಸಾಧ್ಯವೋ ಅಷ್ಟನ್ನು ಒಳಗೊಂಡಿರಬೇಕು.</p> <h3 style="float: left; text-align: justify; ">ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ</h3> <p style="text-align: justify; ">ನಾವು ಯಾವುದೇ ನಿರ್ಧಾರವನ್ನು ಮಾಡುವಾಗ ಅದರ ಪರಿಣಾಮ ಮತ್ತು ಅದರಿಂದಾಗುವ ಪ್ರಭಾವವನ್ನು ಒಳಗೊಂಡಿರುತ್ತದೆ. ಸಾಮಾನ್ಯ ತೀರ್ಮಾನವೂ ಒಂದು ತೀಕ್ಷ್ಣ ಬದಲಾವಣೆಯನ್ನು ನಮ್ಮ ಬದುಕಿನಲ್ಲಿ ಮಾಡುತ್ತದೆ. ನಾವೆಲ್ಲರೂ ನಮ್ಮ ಮೇಲೆ ಪ್ರಭಾವ ಬೀರಿದ ತೀರ್ಮಾನಗಳನ್ನು ಸ್ವಂತದ್ದಾಗಲೀ ಅಥವಾ ಬೇರೆಯವರದ್ದಾಗಲೀ ಮೆಲುಕು ಹಾಕೋಣ. ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲಿಕೆಯ ಕೌಶಲ್ಯ ಇದನ್ನು ಜಾಗೃತರಾಗಿ ಅಭ್ಯಾಸ ಮಾಡಿ ಬಲ ಪಡಿಸೋಣ.</p> <p style="text-align: justify; ">ಆಶಾಳಾಗಿ ನೀವು ಕೆಲವು ವಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮುದಾಯಕ್ಕೆ ಪರಿಣಾಮ ಬೀರುತ್ತದೆ. ಆದುದರಿಂದ ಇದರ ಕುಶಲಗೆಯಲ್ಲಿ ಪ್ರವೀಣರಾಗಿ ಸಮುದಾಯದ ಎಲ್ಲರ ಸಹಭಾಗಿತ್ವದೊಂದಿಗೆ ಎಲ್ಲಾ ಹಂತದಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.</p> <p style="text-align: justify; ">ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೆಲಬು ಸಾಮಾನ್ಯ ಹಂತಗಳಿವೆ. ಇವುಗಳನ್ನು ನಾವು ಅನುಸರಿಸಬೇಕಾಗಿದೆ.</p> <p style="text-align: justify; "> </p> <p style="text-align: justify; ">ತೊಂದರೆ ಏನು ಎಂಬುದನ್ನು ತಿಳಿಯಲು, ಮೊದಲು ಪರಿಸ್ಥಿತಯನ್ನು ಎಲ್ಲಾ ದೃಷ್ಟಿಕೋನದಿಂದ ಸರಿಯಾಗಿ ಅವಲೋಕಿಸಿ, ಪರೀಕ್ಷಿಸಿರಿ.</p> <p style="text-align: justify; ">ಉದಾಹರಣೆಗೆ, ನೀವು ಹಳ್ಳಿಯಲ್ಲಿ ಪದೇ ಪದೇ ಮಲೇರಿಯಾ ರೋಗವು ಬರುತ್ತಿರುವುದನ್ನು ನೋಡಿರುತ್ತೀರಿ ಹಾಗೂ ಇದು ಜನರ ಆರೋಗ್ಯ ಸ್ಥಿತಿಯ ಮೇಲೆ ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸ್ಥಿತಿಯ ಮೇಲೆ ಪರಿಣಾಮ ಬೀರುವುದನ್ನು ಕಂಡಿರುತ್ತೀರಿ. ಇಲ್ಲಿ ಮಲೇರಿಯಾ ಒಂದು ತೊಂದರೆ ಮತ್ತು ಇದನ್ನು ನಿವಾರಣೆ ಮಾಡಬೇಕು. ಆದರೆ ಇದರ ಮೂಲ ಕಾರಣ ಮನೆ ಮತ್ತು ಶಾಲೆಗಳಿಂದ ಹರಿದು ಬರುವ ಚರಂಡಿ ನೀರು, ವಾಸಸ್ಥಳಗಳಲ್ಲಿ ಶೇಖರಣೆಯಾಗುವುದು ಆಗಿದೆ.</p> <p style="text-align: justify; "> </p> <p style="text-align: justify; ">ಮಲೇರಿಯಾವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು, ನೀವು ಮೊದಲು ಜನರನ್ನು ಸಂಘಟಿಸಿ ಇದರ ಬಗ್ಗೆ ಸಂಚಲವನ್ನುಮಟು ಮಾಡಿ ಮತ್ತು ಚರಂಡಿ ನೀರಿನ ಸಮಸ್ಯತನ್ನು ನಿಯಂತ್ರಿಸಲು ಪರಿಹಾರಗಳನ್ನು ಕಂಡುಕೊಳ್ಳಿ.</p> <p style="text-align: justify; "> </p> <p style="text-align: justify; ">ಮಾಹಿತಿಯನ್ನು ಸಂಗ್ರಹಿಸಿ</p> <p style="text-align: justify; ">ತೊಂದರೆ ಯಾವುದೆಂದು ಗುರುತಿಸಿದ ನಂತರ, ಇದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸಂಗ್ರಹಿಸಿ, ಸಂಬಂಧಪಟ್ಟ ಸಿಬ್ಬಂದಿ ವರ್ಗದ ಸಲಹೆ ಪಡೆದು ಸಮುದಾಯವನ್ನು ಇದರಲ್ಲಿ ಸೇರಿಸಿಕೊಳ್ಳಿ ದೊರೆಯುವ ಎಲ್ಲಾ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಈ ತೊಂದರೆಯನ್ನು ಎಲ್ಲರೂ ಸಮ್ಮತಿಸುವ ರೀತಿಯಲ್ಲಿ ನಿವಾರಿಸಿಕೊಳ್ಳಿ.</p> <p style="text-align: justify; "> </p> <p style="text-align: justify; ">ಪರ್ಯಾಯ ವ್ಯವಸ್ಥೆಯನ್ನು ಯೋಚಿಸಿ.</p> <p style="text-align: justify; ">ಯಾವುದೇ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುವ ಮೊದಲು ನೀವು ಸಮುದಾಯವನ್ನು ಸಭೆಗಳಿಗೆ ಆಹ್ವಾನಿಸಿ ಮತ್ತು ನೀವು ಜೊತೆಗೂಡಿ ಕೆಲಸ ಮಾಡಿದ ಜನರೊಂದಿಗೆ ಪರಿಸ್ಥಿತಿಯ ವಿಮರ್ಶೆ ಮಾಡಿ ತೊಂದರೆಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಸಂಗ್ರಹಿಸಿ. ಇದನ್ನು ನೀವು ಗ್ರಾಮಸಭೆಗಳಲ್ಲೂ ಸಹ ಒಪ್ಪಿಸಬಹುದು. ಮುಖ್ಯವಾಗಿ ಇದಕ್ಕೆ ಬೇಕಾಗಿರುವುದು ಜನರು ತೊಂದರೆಗಳನ್ನು ಒಪ್ಪಿಕೊಂಡು ಅರ್ಥಮಾಡಿಕೊಳ್ಳುವುದಗಿದೆ. ನಂತರ ಇದಕ್ಕೆ ಸೂಕ್ತ ಸಲಹೆಗಳನ್ನು ಸೂಚಿಸಬಹುದು.</p> <p style="text-align: justify; ">ಸಹಭಾಗಿತ್ವದೊಂದಿಗೆ ತೀರ್ಮಾನ ತೆಗೆದುಕೊಳ್ಳುವಾಗ ಸಮುದಾಯದವರು ತೊಮದರೆಗಳನ್ನು ತಮ್ಮದೆಂದು ತಿಳಿದು ಇದನ್ನು ನಿವಾರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಿರಬೇಕು.</p> <p style="text-align: justify; ">ಇನ್ನು ಹೆಚ್ಚು ಹೇಳಬೇಕೆಂದರೆ ಜನರು ಈ ಪರಿಣಾಮವನ್ನು ಒಪ್ಪಿಕೊಳ್ಳದೆ ಇದನ್ನು ಶಾಶ್ವತವಾಗಿ ಸಾಧಿಸಲು ಸಾಧ್ಯವಾಗುವುದಿಲ್ಲ.</p> <p style="text-align: justify; ">ಪರ್ಯಾಯ ವ್ಯವಸ್ಥೆಯ ಆಯ್ಕೆ</p> <p style="text-align: justify; ">ಪರಿಣಾಮಕಾರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವು ಇರುವ ನನಾ ಆಯ್ಕೆಗಳಲ್ಲಿ ಒಂದು ಒಳ್ಳೆ ಪರ್ಯಾಯ ವ್ಯವಸ್ಥೆಯನ್ನು ನಿರ್ಧರಿಸುವುದಾಗಿರುತ್ತದೆ. ಇದನ್ನು ಸಮುದಾಯದವರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯ ಮತ್ತು ಒಪ್ಪಿಗೆಯ ಮೂಲಕ ಮಡಬಹುದಾಗಿದೆ. ಈ ಅಭೀಪ್ರಾಯಗಳನ್ನು ಮತ್ತು ಒಪ್ಪಿಗೆಯನ್ನು ಪಡೆಯಲು ನೀವು ಹಳ್ಳಿಯಲ್ಲಿ ಸಭೆಗಳ ಮೂಲಕ ಚರ್ಚೆ ಮಾಡಬೇಕು ಮತ್ತು ಗ್ರಾಮಸಭೆ ಮತ್ತು ಪಂಚಾಯತಿಗಳಲ್ಲಿ ಸಭೆಗಳ ಮೂಲಕ ಪಡೆಯಬಹುದು.</p> <p style="text-align: justify; ">ಸರಿಯಾದ ಪರ್ಯಾಯ ವ್ಯವಸ್ಥೆಯನ್ನು ಆಯ್ದುಕೊಳ್ಳುವ ಮೊದಲು ಇರುವ ಎಲ್ಲಾ ಆಯ್ಕೆಗಳನ್ನು ಪರಮಾರ್ಶಿಸಿ ನಿರ್ಧಾರ ತೆಗೆದುಕೊಳ್ಳುವುದು. ಮೊದಲಿಗೆ ಬಾಸ್ತವಿಕ ಸ್ಥಿತಿಯನ್ನು ತಿಳಿಯುವುದು ಮುಖ್ಯವಾಗಿದೆ.</p> <p style="text-align: justify; ">ನಿರ್ಧರಿಸಿದ್ದನ್ನು ಕಾರ್ಯಗತಗೊಳಿಸಿ</p> <p style="text-align: justify; ">ಯಾವುದೇ ಪರಿಣಾಮಕಾರಿಯಾದ ನಿರ್ಧಾರಗಳನ್ನು ತೆಗೆದುಕೊಂಡಾಗ ಅದನ್ನು ಯಶಸ್ವಿಯಾಗಿ ಕಾರ್ಯಾಚರಣೆಗೊಳಿಸಿವುದು. ಈ ಹಂತದಲ್ಲಿ ಮುಖ್ಯವಾಗಿದೆ. ನೀವು ನಿರೀಕ್ಷಿಸಿದ ರೀತಿಯಲ್ಲಿ ಪರಿಹಾರ ಪರಿಣಾಮಕಾರಿಯಾಗಿದೆಯೇ ಎಂದು ಗಮನಿಸುತ್ತೀರಿ ಮತ್ತು ಇನ್ನೇನಾದರೂ ಹೆಚ್ಚಿಗೆ ನಿವೇದಿಸಬೇಕೆ ಎಂದು ತಿಳಿದುಕೊಳ್ಳಿ.</p> <p style="text-align: justify; ">ಯಾರೇ ಆಗಲೀ ಎಲ್ಲಾ ಕಾರ್ಯದಲ್ಲೂ ಪರಿಣಿತರಾಗಿರುವುದಿಲ್ಲ. ಅದನ್ನು ಕಾರ್ಯಗತಗೊಳಿಸಿದಾಗಲೇ ಮೇಧಾವಿಗಳಾಗುತ್ತಾರೆ. ಆದುದರಿಂದ ನಿರ್ಧಾರ ತೆಗೆದುಕೊಳ್ಳುವ ಕುಶಲತೆಯನ್ನು ಅನುಭವ ಮತ್ತು ಆಚರಣೆಯ ಮೂಲಕ ಚುರುಕುಗೊಳಿಸುವುದಾಗಿದೆ.</p> <p style="text-align: justify; "> </p> <p style="text-align: justify; ">ಒಂದೊಚ್ಚೆ ನಿರ್ಧಾರಗಳು ಫಲಿಸದಿದ್ದಲ್ಲಿ ಅದರ ಜವಾಬೆಆರಿಯನ್ನು ದೃಢತೆಯಿಂದ ಒಪ್ಪಿಕೊಳ್ಳುವಂತಿರಬೇಕು. ಇದು ಒಂದು ಕಲಿಕೆಯ ಭಾಗವಗಿದೆ. ಜಬಾಬ್ದಾರಿಯುತವಾಗಿ ನಿಮ್ಮ ಕಾರ್ಯಚಟುವಟಿಕೆಗಳನ್ನು ಒಪ್ಪಿಕೊಳ್ಳುವುದು ಒಂದು ಮುಖ್ಯವಾದ ಪರಿಪೂರ್ಣತೆಯ ಗುಣವಾಗಿದೆ.</p> <h3 style="float: left; text-align: justify; ">ಬರೆಯುವುದರಲ್ಲಿ ಸೂತ್ರಗಳು</h3> <p style="text-align: justify; ">ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ಸಂಕ್ಷಿಪ್ತವಾಗಿ ತಿಳಿಸಬೇಕಾದರೆ ಸಾಕಷ್ಟು ಅಂಶಗಳನ್ನು ತಿಳಿದಿರಬೇಕು. ಬರೆಯುವುದರಲ್ಲಿ ಯಾವುದು ಬರೆಯಬೇಕು ಯಾವುದನ್ನು ಬರೆಯಬಾರದು ಎಂದು ಕೆಲವು ಸೂತ್ರಗಳಿವೆ.</p> <p style="text-align: justify; ">ಕೆಲವು ಮಾಡಬೇಕಾದದ್ದು :</p> <p style="text-align: justify; ">1. ತಕ್ಕನಾದ ವ್ಯಕ್ತಿಗೆ ಭಿನ್ನವಿಸಿಕೊಳ್ಳಿ</p> <p style="text-align: justify; ">2. ಪತ್ರದಲ್ಲಿ ದಿನಾಂಕ ಮತ್ತು ಉಲ್ಲೇಖವನ್ನು ಪರಿಶೀಲಿಸಿಕೊಳ್ಳಿ.</p> <p style="text-align: justify; ">3. ವಾಕ್ಯವು ಚಿಕ್ಕದಾಗಿರಲಿ</p> <p style="text-align: justify; ">4. ಜಟಿಲವಾದ ಮತ್ತು ಸಾಮಾನ್ಯವಲದಲದ ಶಬ್ದಗಳಿಗೆ ಬದಲಾಗಿ ಸಾಮಾನ್ಯ ಮತ್ತು ಎಲ್ಲರಿಗೂ ತಿಳಿದಿರುವಂತ ಪದಗಳನ್ನು ಬಳಸಿ.</p> <p style="text-align: justify; ">5. ಅಸ್ಪಷ್ಟವಾಗಿ ಹೇಳದೇ ಉದ್ದೇಶಿತ ಅಂಶಗಳನ್ನು ಸ್ಪಷ್ಟವಾಗಿ ಹೇಳಿ.</p> <p style="text-align: justify; ">6. ಓದುವವರು ಎಲ್ಲಾ ಅಂಶಗಳನ್ನು ಅರ್ಥಮಾಡಿಕೊಂಡಿರುತ್ತಾರೆಂದು ಊಹಿಸಿಕೊಳ್ಳಬೇಡಿ.</p> <p style="text-align: justify; ">7. ನೀವು ಬರೆದಿದ್ದರಲ್ಲಿ ಯಾವುದಾದರೂ ಅಂಶವನ್ನು ಸೇರಿಸುವುದು ಬಿಟ್ಟಿದೆಯೇ ಎಂದು ತಿಳಿಯಲು ಪುನರಾವಲೋಕಿಸಿ.</p> <p style="text-align: justify; ">8. ನೀವು ಬರೆಯ ಬೇಕೆಂದಿರುವುದರ ಸಾರಾಂಶವು ಸ್ಪಷ್ಟವಾಗಿ ಬರುವವರೆಗೂ ಪತ್ರವನ್ನು ಪುನಃ ಪುನಃ ಬರೆಯುತ್ತೀರಿ.</p> <p style="text-align: justify; ">9. ನೀವು ವಿವರಿಸಬೇಕೆಂದಿರುವ ಅಂಶವನ್ನು ಉದಾಹರಣೆ ಮತ್ತು ಸಾಕ್ಷ್ಯಾಧಾರದ ಮುಲಕ ತಿಳಿಸಿ.</p> <p style="text-align: justify; ">10. ನೀವು ಬರೆದ ಪತ್ರವು ಒಂದು ಅಂಶಕ್ಕು ಮತ್ತೊಂದಕ್ಕೂ ತರ್ಕಬದ್ಧವಾಗಿ ಹರಿದು ಬರುವಂತಿರಬೇಕು.</p> <p style="text-align: justify; ">11. ನೀವು ಬರೆಯುವುದು ವ್ಯಕ್ತಪಡಿಸುವ ದೃಷ್ಠಿಕೋನದಿಂದಿರಬೇಕೇ ಹೊರತು ಪ್ರಭಾವ ಬೀರುವಂತಿರಬಾರದು.</p> <p style="text-align: justify; ">ಕೆಲವು ಮಾಡದೇ ಇರಬೇಕಾದ್ದು :</p> <p style="text-align: justify; ">1. ಬೇಡವಾದ ಶಬ್ದಗಳನ್ನು ಬಳಸಬೇಡಿ</p> <p style="text-align: justify; ">2. ಪೂರ್ಣವಲದಲದ, ಸಂಬಂಧವಲದಲದ ವಾದಗಳನ್ನು ಮಾಡದಿರಿ.</p> <p style="text-align: justify; ">3. ಸಂದಿಗ್ಧ ಮತ್ತು ಸಆಮಾನ್ಯವಾದ ನಕಾರಾತ್ಮಕ ವಾಕ್ಯಗಳನ್ನು ಬಳಸದಿರಿ.</p> <h3 style="float: left; text-align: justify; ">ಲಿಖಿತ ಸಂಪರ್ಕ</h3> <p style="text-align: justify; ">ಆಶಾ ಕಾರ್ಯಕರ್ತಳಾಗಿ ನೀವು ಸಂಬಂಧಪಟ್ಟ ಸಿಬ್ಬಂದಿಗಳೊಂದಿಗೆ ಆರೋಗ್ಯ ರಕ್ಷಣೆಯ ಸೇವೆಗಳನ್ನು ದೊರಕಿಸುವಲ್ಲಿ ಪತ್ರ ಮುಖೇನ ವ್ಯವಹರಿಸಬೇಕಾಗುತ್ತದೆ. ಹಾಗೂ ನೀವು ವಿವಿಧ ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಕಾರ್ಯಾಚರಣೆಯ ದಾಖಲೆ ಇಡಬೇಕಾಗುತ್ತದೆ. ಈಗ ಮೊದಲು ನಾವು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬರೆಯುವುದನ್ನು ಕಲಿಯೋಣ, ಈ ಕೆಳಗೆ ನೀಡಿದ ಪತ್ರವನ್ನು ಓದಿ :</p> <p style="text-align: justify; ">ಮಾನ್ಯರೆ,</p> <p style="text-align: justify; ">ಹಳ್ಳಿಗಳಲ್ಲಿ ಮತ್ತು ಬೇರೆ ಸೈಳಗಳಲ್ಲಿ ಹೆಚ್ಚಾಗಿ ಮಹಿಳೆಯರು ಪ್ರಸವಪೂರ್ವ ಆರೈಕೆ ಕೇಂದ್ರಗಳೀಂದ ದೂವಿದ್ದರೆ ಅದರಲ್ಲೂ ಬೇಸಿಗೆ ಕಾಲದಲ್ಲಿ ಅವರುಗಳು ತುಂಬಾ ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ಪ್ರಸವ ಪೂರ್ವ ಪರೀಕ್ಷೆಗಳಿಂದ ವಂಚಿತರಾಗುತ್ತಾರೆ. ಆದುದರಿಂದ ಈ ಚಿಕಿತ್ಸಾ ಕೇಂದ್ರಗಳನ್ನು ಎರಡು ಕಡೆ ಬೇರೆ ಬೇರೆ ದಿನಾಂಕದಂದು ದಿರೆಯುಬಂತೆ ಮಾಡಿದರೆ ಎಲ್ಲ ಮಹಿಳೆಯರೂ ಇದರ ಸೌಲಭ್ಯ ಪಡೆಯಬಹುದು. ಇದನ್ನು ನಾನು ಸಮುದಾಯದ ಎಲದಲಾ ಮಹಿಳೆಯರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.</p> <p style="text-align: justify; ">(ಆಶಾ) ಹಳ್ಳಿಯ ಹೆಸರು</p> <p style="text-align: justify; ">ಈ ಪತ್ರದ ಒಕ್ಕಣೆ ಸ್ಪಷ್ಟವಾಗಿ ಅರ್ಥವಾಯಿತೆ ?</p> <p style="text-align: justify; ">ಹಳ್ಳಿ ಮಹಿಳೆಯರಿಗೆ ಪ್ರಸವಾ ಪೂರ್ವ ಆರೈಕೆಯ ಸೇವೆಗಳನ್ನು ದೊರಕದೆ ಇರುವ ಸ್ಥಿತಿಗಳನ್ನುಸಂಬಂಧಪಟ್ಟ ವ್ಯಕ್ತಿಗಳ ಗಮನಕ್ಕೆ ತರುವುದು ಒಂದು ಸೂಕ್ತವಾದ ಪ್ರಯತ್ನವಾಗಿದೆ ಮತ್ತು ತೊಂದರೆಗಳ ನಿವಾರಣೆಗಾಗಿ ಪರಿಹಾರಾರ್ಥವಾಗಿ ಸಲಹೆಗಳನ್ನು ವೀಡಬೇಕಗಿದೆ. ಆದರೆ ಇದು ಸ್ಪಷ್ಟವಾಗಿ ಮತ್ತು ನಿರ್ಧಿಷ್ಟವಾಗಿಲ್ಲದ ಕಾರಣ ಇದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲವೆಂದು ಅನ್ನಿಸುವುದು.</p> <p style="text-align: justify; ">ಈ ಕೆಳಗಿನ ಅಂಶಗಳನ್ನು ಪತ್ರದ ಒಕ್ಕಣೆಯಲ್ಲಿ ಸೇರಿಸಿದರೆ ಇನ್ನೂ ಹೆಚ್ಚು ಪರಿಣಾಮ ಬೀರುವುದು.</p> <p style="text-align: justify; ">ಯಾವುದೇ ಅರ್ಜಿಯನ್ನು /ಪತ್ರವನ್ನು ಬರೆಯುವ ಮೊದಲು ಬರಹಗಾರರು ಕೆಳಗಿನವುಗಳನ್ನು ಖಂಡಿತ ಕೇಳಿಕೊಳ್ಳಬೇಕಾಗಿದೆ ?</p> <p style="text-align: justify; ">1. ನನಗೆ ಏನು ಹೇಳಬೇಕೆಂಬುದು ತಿಳಿದಿದೆಯಾ ? (ವಿಷಯ)</p> <p style="text-align: justify; ">2. ನಾನು ಏನು ಬರೆಯುತ್ತಿರುವೆನೆಂದು ನನತೆ ತಿಳಿದಿದೆಯೆ ?</p> <p style="text-align: justify; ">3. ನಾನು ಏತಕ್ಕೆ ಬರೆಯುತ್ತಿರುವೆನೆಂದು ಗೊತ್ತಿದೆಯಾ ?</p> <p style="text-align: justify; ">ಕೆಳಗೆ ಕೊಟ್ಟ ಪತ್ರವನ್ನು ಓದಿ ನಂತರ ಮೊದಲ ಪತ್ರಕ್ಕೂ ಮತ್ತು ಎರಡನೇ ಪತ್ರಕ್ಕೂ ಇರುವ ವ್ಯತ್ಯಸವನ್ನು ನೋಡಿ</p> <p style="text-align: justify; "> </p> <p style="text-align: justify; ">ಇಂದ ದಿನಾಂಕ</p> <p style="text-align: justify; ">------------------</p> <p style="text-align: justify; ">ವಿಷಯ : 'ಮಮತ' ದಿನವನ್ನು ಹಳ್ಳಿಯಲ್ಲಿ ವ್ಯವಸ್ಥೆ ಮಾಡಲು ಎರಡು ಸ್ಥಳಗಳನ್ನು ಗೊತ್ತು ಮಾಡುವ ಬಗ್ಗೆ ಮಾನ್ಯರೆ (ಸಂಬಂಧಪಟ್ಟ ವ್ಯಕ್ತಿಯ ಹೆಸರನ್ನು ಬರೆಯಿರಿ)</p> <p style="text-align: justify; ">ನಾಣು ಆಶಾ ಕಾರ್ಯಕರ್ತೆಯಾಗಿ ಈ ಹಳ್ಳಿಯ -------- ಬ್ಲಾಕ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಚದುರಿದಂತಿದೆ. ಂಓಒ ನಿರಂತರವಾಗಿ ಒಂದು ಮಮತಾ ದಿನವನ್ನು ವ್ಯವಸ್ಥೆ ಮಾಡುತ್ತಿರುತ್ತಾರೆ. ಆದರೆ ವ್ಯವಸ್ಥೆ ಮಾಡುವ ಸ್ಥಳ ಎಲ್ಲಾ ಗರ್ಭಿಣಿ ತಾಯಂದಿರು ಬರುವುದಕ್ಕೆ ಸಾಧ್ಯವಿರುವುದಿಲ್ಲ. ಹೆಚ್ಚು ಮಂಡಿ ಹೆಂಗಸರು ಹಳ್ಳಿಯ ಇನ್ನೊಂದು ತುದಿಯಲ್ಲಿರುವುದರಿಂದ ಪ್ರಸವಪೂರ್ವ ಕೇಂದ್ರಗಳಿಗೆ ದೂರವಿರುವುದರಿಂದ ಪ್ರಸವಪೂರ್ವ ಕೇಂದ್ರಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಪ್ರಸವಾಪೂರ್ವ ಕೇಂದ್ರಗಳನ್ನು ಹಳ್ಳಿಯ ಎರಡು ಸ್ಥಳಗಳಲ್ಲಿ, ಬೇರೆ ಬೇರೆ ದಿನಗಳಂದು ನಡೆಸಬೇಕೆಂಬುದು ನನ್ನ ಸಲಹೆಹಾಗಿದೆ. ಇದರ ಬಗ್ಗೆ ನಾನು ಂಓಒ ಜೊತೆಯಲ್ಲಿಯೂ ಚರ್ಚೆ ಮಾಡಿದ್ದೇನೆ. ಆಕೆ ನಿಮ್ಮಿಂದ ಅನುಮತಿ ಬೇಕೆಂದು ತಿಳಿಸಿರುತ್ತಾಳೆ. ನಾವು ಈ ವಿಷಯದ ಕುರಿತು ಗಮನ ಹರಿಸಬೇಕೆಂದು ವಿನಂಗಿಸುತ್ತೇನೆ. ಆಶಾ ಕಾರ್ಯಕರ್ತಳಾಗಿ ಎಲ್ಲಾ ಗರ್ಭಿಣಿ ಹೆಂಗಸರನ್ನು ಪ್ರಸವಪೂರ್ವ ಪರೀಕ್ಸೆಗಾಗಿ ಕರೆದುಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ತಿಳಿದು ಎಲ್ಲರಿಗೂ ಈ ಸೇವೆ ಸಿಗಬೇಕೆಂದು ಬಯಸುತ್ತೇನೆ. ನಿಮ್ಮನ್ನು ನಮ್ಮ ಹಳ್ಳಿಗೆ ಬನ್ನಿ ಎಂದು ಆಹ್ವಾನಿಸುತ್ತೇನೆ.</p> <p style="text-align: justify; ">ವಂದನೆಗಳೊಂದಿಗೆ,</p> <p style="text-align: justify; ">ನಿಮ್ಮ ನಂಬುಗೆಯ,</p> <p style="text-align: justify; ">ಆಶಾ (ಆಶಾಳ ಹೆಸರು ಮತ್ತು ಹಳ್ಳಿಯ ಹೆಸರು)</p> <h3 style="float: left; text-align: justify; ">ಗಮನಿಸಬೇಕಾದ ಅಂಶಗಳು</h3> <p style="text-align: justify; ">ಎಲ್ಲಾ ಸೇವಾರ್ಥಿಗಳನ್ನು ಗೌರವದಿಂದ ಕಾಣಿಸಿ. ಅವರುಗಳು ಸಮುದಾಯಕ್ಕೆ ಸೇರಿದವರಾಗಿರಲಿ ಅಥವಾ ಆರೋಗ್ಯ ಸೇವೆಯ ವ್ಯವಸ್ಥೆಯವರಾಗಲಿ.</p> <p style="text-align: justify; ">ಸಶವಾರ್ಥಿಗಳೊಮದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವಾಗ ನೀವು ಸೂಕ್ತವಾದ ವಿಷಯಗಳನ್ನು ತಯಾರಿಸಿ. ಅವುಗಳು ಬೇಕಾದ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ಒಳಗೊಂಡಿರಲಿ. ಯಾವುದೇ ವಿಷಯವನ್ನೇ ಆಗಲಿ ಅವರಿಂದ ನೀವು ಪಡೆಯುವಾಗ ಯಾವುದು ಬಏಕು ಅಥವಾ ಯಾವುದು ಬೇಡ, ಯಾವುದನ್ನು ಬದಲಾಯಿಸಬೇಕು ಮುತ್ತು ಯವುದನ್ನು ಮುಂದುವರೆಸಬೇಕೆಂದು ಸ್ಪಷ್ಟಪಡಿಸಿಕೊಳ್ಳಿ.</p> <p style="text-align: justify; ">ಷಂಪರ್ಕಿಸುವಾಗ ಶಾಂತವಾಗಿರಿ, ನಿಮ್ಮಲ್ಲಿನ ಕಳವಳವನ್ನು ತೋರಿಸದಿರಿ</p> <p style="text-align: justify; ">ನಿಮ್ಮ ಧ್ವನಿಯು ಚೃದುವಾಗಿರಲಿ.</p> <p style="text-align: justify; ">ನಿಮ್ಮ ಸುತ್ತಮುತ್ತಲಿರುವವರಿಗೆ ನಿಮ್ಮ ಒಂದು ಮುಗುಳ್ನಗೆ ಮತ್ತು ನಮ್ರತೆ ಹೇಗೆ ಪರಿಣಾಮ ಬೀರುವುದೆಂದು ನಿಮಗೇ ಆಶ್ಚರ್ಯವಾಗುವುದು, ನಿಮ್ಮಲ್ಲಿರುವ ದೃಢವಾದ ಮತ್ತು ನಿಶ್ಚಲವಾದ ಭಾವನೆ ಯಾವುದೇ ಮಾಹಿತಿಯನ್ನು ಸುಲಭವಾಗಿ ತಲುಪಿಸಲು ಸಹಾಯವಾಗುವುದು.</p> <p style="text-align: justify; ">ಇಚನದಲ್ಲಿಡಬೇಕಾದ ಅಂಶ - ಮಾತನಾಡುವ ಮೊದಲು ಯೋಚನೆ ಮಾಡಿ.</p> <h3 style="float: left; text-align: justify; ">ಕೆಲವು ಸಂಪರ್ಕ ವಿಧಾನಗಳು</h3> <p style="text-align: justify; ">ಮಾತು ರಹಿತ ಸಂಪರ್ಕ</p> <p style="text-align: justify; ">ನಮಗೆಲ್ಲಾ ತಿಳಿದಿರುವಂಗೆ ಸಂಪರ್ಕವೆಂದರೆ ಬರಿ ಪದಗಳು ಹಾಗೂ ಬಾಷೆಗಳಲ್ಲ. ಮಾತಿಲ್ಲದೆಯೂ ಸಂಪರ್ಕಿಸಬಹುದು ಮತ್ತು ಕಣ್ಣುಗಳಲ್ಲಿಯೂ ಮಾತನಾಡಬಹುದು. ಆದುದರಿಂದ ಸಂಪರ್ಕದ ಈ ವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇವುಗಳನ್ನು ಮಾತು ರಹಿತ ಸಂಪರ್ಕಬೆಂದು ಕರೆಯಲಾಗುತ್ತದೆ.</p> <p style="text-align: justify; ">ಇಲ್ಲಿ ಕೆಲಬು ಮಾತು ರಹಿತ ನಡವಳಿಕೆಗೆ ಸಂಬಂಧಪಟ್ಟ ವಿಷಯಗಳನ್ನು ವಿಶೇಷವಾಗಿ ಗಮನಿಸಬೇಕಾಗಿದೆ.</p> <p style="text-align: justify; ">ಕಣ್ಣುಗಳ ಚಲನೆ : ನೀವು ಯಾರೊಂದಿಗಾದರೂ ಮಾತನಾಡಲು ಪ್ರಾರಂಭಮಾಡುವ ಮುನ್ನ ಅವರ ಕಣ್ಣಿನಲ್ಲಿ ಸಂದಿಸಿ, ನೇರವಾಗಿ ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಸಂಪರ್ಕಿಸುವುದರಿಂದ ಸಂಪರ್ಕದ ದೃಢತೆ ಬರುತ್ತದೆ.</p> <p style="text-align: justify; ">ದೇಹದ ಭಂತಿ : ನೀವು ಕಳುಹಿಸಿದ ಶಕ್ತಿಯುತ ಸಂದೇಶದಿಮದ ಒಬ್ಬ ವ್ಯಕ್ತಿಯ ಭಾವನೆಗಳನ್ನು ತಿಳಿಯುವುದರಿಂದ ಸಂದೇಶದ ಮಹತ್ವವನ್ನು ಹೆಚ್ಚಿಸಬಹುದು.</p> <p style="text-align: justify; ">ಮುಖದ ಭಾವನೆ ವ್ಯಕ್ತಪಡಿಸುವುದು : ಮುಖದಲ್ಲಿ ಅಗತ್ಯವಾದ ಭಾವನೆಗಳನ್ನು ವ್ಯಕ್ತಪಡಿಸಿರಿ. ಪರಿಣಾಮಕಾರಿಯಾದ ಸಂಪರ್ಕಕ್ಕೆ ಮುಖದ ಭಾವನೆಗಳು ಸಹಾಯಕವಾಗಿದೆ.</p> <p style="text-align: justify; ">ಸಂಜ್ಷೆಗಳು : ಯಾವುದಾದರೂ ವಿಷಯವನ್ನು ವಿವರಿಸಬೇಕಾದರೆ ಕೈಗಳಿಂದ ಸಂಜ್ಷೆ ಮಾಡುವುದು ಉಪಯೋಗವಾಗುವುದು. ಆದರೆ ಇದನ್ನು ಉದ್ವೇಗದಿಂದಿರುವಾಗ ಅಥವಾ ಕಳಬಳದಿಮದಿರುವಾಗ ಹೆಚ್ಚಾಗಿ ಮಾಡಬಾರದು.</p> <p style="text-align: justify; ">ಧ್ವನಿಯಲ್ಲಿನ ವೈವಿಧ್ಯತೆಗಳು : ದನಿಯಲ್ಲಿನ ತೂಕ, ಏರಿಳಿತ ಸಂಭಾಷಣೆ, ವೇಗ ಮತ್ತು ಸ್ವರದ ಏರಿಕೆ ಇವುಗಳನ್ನು ಸರಿಯಾಗಿ ನಿಯಂತ್ರಿಸಿಕೊಳ್ಳಿ.</p> <p style="text-align: justify; ">ಆಸಕ್ತಿಯಿಂದ ಆಲಿಸುವುದೂ ಒಂದು ಸಂಪರ್ಕದ ವಿಧಾನ</p> <p style="text-align: justify; ">ನಾವು ಎಲ್ಲರೂ ಕೇಳಿಸಿಕೊಳ್ಳುತ್ತೇವೆ. ಆದರೆ ಎಲ್ಲರೂ ಆಲಿಸುವುದಿಲ್ಲ. ಕೇಳಿಸಿಕೊಳ್ಳುವುದ ಮತ್ತು ಆಲಿಸುವುದು ಒಂದೇ ಅಲ್ಲ. ಕೇಳಿಸಿಕೊಳ್ಳುವುದು ಅನುದ್ದೇಶೀತವಾಗಿರಬಹುದು. ಇದು ಕೇಳಿಸಿದ ಶಬ್ದವನ್ನು ಅರ್ಥಪೂರ್ಣವಾಗಿ ಮಾಡುವುದು. ಇದನ್ನು ಈ ರೀತಿ ಹೇಳಬಹುದು. ಬಾಗಿಲನ್ನು ತಟ್ಟುವ ಶಬ್ದವು ಯಾವಾಗಲೂಒಂದೇ ರಈತಿ ಕೇಳಿಸುವುದೇ ? ನೀವು ಒಬ್ಬರೆ ಇದ್ದು ರಾತ್ರಿ ಆವೇಳೆಯಲ್ಲಿ ಬಾಗಿಲು ತಟ್ಟಿದ ಶಬ್ದ ಕೇಳಿದರೆ ? ನೀವು ಯಾರಿಗಾದರೂ ಆಪ್ತರಿಗಾಗಿ ಕಾಯುತ್ತಿರುವಾಗ ಬಾಗಿಲು ತಟ್ಟಿದ ಶಬ್ಧ ಕೇಳಿದರೆ ಏನಾಗುವುದು ?</p> <p style="text-align: justify; ">ಆಸಕ್ತಿಯಿಂದ ಆಲಿಸುವಲ್ಲಿ ಯಾವುದಾದರೂ ಒಂದು ವಿಷಯವನ್ನು ಕೇಳಿಸಿಕೊಳ್ಳುವುದು ಒಳಗೊಂಡಿರುತ್ತದೆ. ಇದು ಯಾವುದಾದರೂ ವಿಷಯವನ್ನು ತಿಳಿದುಕೊಳ್ಳಲು, ಅದರ ಮಾರ್ಗವನ್ನು ಕಂಡುಕೊಳ್ಳಲು, ಬೇರೆಯವರನ್ನು ಅರ್ಥ ಮಾಡಿಕೊಳ್ಳಲು, ಗೊಮದರೆಗಳನ್ನು ನಿವಾರಿಸಲು, ಆಸಕ್ತ ವಿಷಯಗಳನ್ನು ಹಂಚಿಕೊಳ್ಳಲು, ಬೇರೆ ವ್ಯಕ್ತಿಗಳ ಭಾವನೆಗಳನ್ನು ತಿಳಿಯಲು ಅಥವಾ ತಮ್ಮ ಸಹಾಯ ಹಸ್ತವನ್ನು ತೋರಿಸಲು ಸಹಾಯವಾಗುತ್ತದೆ. ಈ ರೀತಿ ಆಲಿಸುವುದರಲ್ಲಿ ಒಮದೇ ನಿರ್ಧಿಷ್ಟ ಸಮಯವಿರಬಹುದು. ರ್ಅವಾ ಹೆಚ್ವಿರಬಹುದು. ಇದು ಆಲಿಸುವವರು ಬೇರೆ ಬೇರೆ ಮಾಹಿತಿಗಳನ್ನು ಕೇಳಿಸಿಕೊಳ್ಳಲು ಬೇಕಾಗುವುದು. ಹೇಳಿದ ವಿಷಯಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೋ ಇಲ್ಲವೋ ಎಂದು ತಿಳಿಯಲು ಪುನರ್ ಮನನ ಮಾಡಿ ಅಥವಾ ಏನು ಕೇಳಿಸಿಕೊಂಡಿದ್ದಾರೋ ಅದು ಸರಿಯಾಗಿದೆಯೇ ಎಂದು ದೃಢಪಡಿಸಿಕೊಳ್ಳಿ.</p> <p style="text-align: justify; ">ಆಸಕ್ತಿಯಿಂದ ಆಲಿಸುವ ಕೆಲಬು ಸಲಹೆಗಳನ್ನು ಕೆಳಗೆ ಸೂಚಿಸಲಾಗಿದೆ.</p> <p style="text-align: justify; ">ಕಣ್ಣುಗಳ ಚಲನೆಯನ್ನು ನಿಯಂಗ್ರಣದಲ್ಲಿಡಿ</p> <p style="text-align: justify; ">ಕುಳಿತಿರುವಾಗ ಆಗಲೀ ಅಥವಾ ನಿಂತಿರುವಾಗ ಆಗಲೀ ಸ್ವಾಗತಾರ್ಹ ಭಂತಿಯಲ್ಲಿದ್ದು ಸ್ವಲ್ಪ ಮುಂದಕ್ಕೆ ಬಾಗಿರಿ.</p> <p style="text-align: justify; ">ಪ್ರತಿಕೂಲಕರ ಸಂಜ್ಞೆಗಳ ಮೂಲಕ ಮತ್ತು ಪದಗಳ ಉಪಯೋಗದಿಂದ ಉತ್ತೇಜಿಸಿರಿ.</p> <p style="text-align: justify; ">ಅಡೆ ತಡೆಗಳನ್ನು ನಿವಾರಿಸಿ.</p> <p style="text-align: justify; ">ಮಾತುರಹಿತ ಸಂಜ್ಞೆಗಳನ್ನು ಅರ್ಥಮಾಡಿಕೊಳ್ಳಿ</p> <p style="text-align: justify; ">ನೀವು ಆಲಿಸುವ ಮೊದಲು, ಬೇಜೆ ಏನನ್ನಾದರೂ ಮಾತನಾಡುತ್ತಿದ್ದರೆ ಅಥವಾ ಏನಾದರೂ ಕೆಲಸ ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ.</p> <p style="text-align: justify; ">ಬೇರೆಯವರು ಮಾತನಾಡುವಾಗ ಮಧ್ಯದಲ್ಲಿ ತೀರ್ಪು ನೀಡುವುದಾಗಲೀ ಅಥವಾ ಅವರು ಹೇಳಿದ್ದನ್ನು ಅವಹೇಳನ ಮಾಡದಿರಿ.</p> <p style="text-align: justify; ">ನೀವು ಕೇಳಿಸಿಕೊಂಡ ವಿಷಯಗಳ ಮಂಢನ ಮಾಡಿ ಭಾವನೆಗಳಿಗೆ ಪ್ರತಿಕ್ರಿಯಿಸಿ.</p> <p style="text-align: justify; ">ತಾಳ್ಮೆಯಿಂದಿರುವುದನ್ನು ರೂಢಿಸಿಕೊಳ್ಳಿ</p> <p style="text-align: justify; ">ಆಶಾ ಕಾರ್ಯಕರ್ತಳಾಗಿ ಜನಸಮುದಾಯದ ಜೊತಡ ಸಂಪರ್ಕಿಸುವಾಗ ಈ ಕೆಳಗೆ ಸೂಚಿಸಿದ ಅಂಶಗಳನ್ನು ಗಮನದಲ್ಲಿಡಿ.</p> <p style="text-align: justify; ">ಜನ ಸಮುದಾಯದಲ್ಲಿ ಸಂಪರ್ಕಿಸುವಾಗ ಯಾವುದೇ ಕಾರಣಕ್ಕೂ ಜಾತಿ, ವರ್ಗಗಳೆಂದು ತಆರತಮ್ಮಯ ಮಾಡದಿರಿ. ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಧಾಟಿ ಹಾಗೂ ಹಾವಭಾವಗಳು ಬದಲಾಗಬಾರದು. ಅವರ ಜೊತೆ ಗೌರವದಿಂದ, ಗಾಂಭೀರ್ಯವಾಗಿ ಮಾತನಾಡಿ.</p> <p style="text-align: justify; ">ಸಮುದಾಯದ ಜನರಲ್ಲಿ ಸಾಕಷ್ಟು ತಿಳಿವಳಿಕೆ ಮತ್ತು ಅನುಭವವಿರುತ್ತದೆ. ಆದ್ದರಿಂದ ಅವರ ತಿಳಿವಳಿಕೆ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ನೆರವಾಗಿ. ಅವರನ್ನು ಖಾಲಿ ಕೊಡಗಳೆಂದು ಪರಿಗಣಿಸದಿರಿ.</p> <p style="text-align: justify; ">ನೀವು ಸಂಪರ್ಕಿಸುವಾಗ ಲಿಂಗಬೇಧ ಮಾಡದಿರಿ. ಯಾವುದೇ ಕಾರಣಕ್ಕೂ ಲಿಂಗಭೇದಕ್ಕೆ ಸಂಬಂಧಪಟ್ಟ ಟೀಕೆಗಳನ್ನು ಮಾಡದಿಇರ.</p> <p style="text-align: justify; ">ಯಾವುದೇ ಕಾರಣಕ್ಕೂ ತಕ್ಷಣವೇ ಪ್ರತಿಕ್ರಿಯಿಸದೇ ಆಲಿಸಿ, ಸಮೀಕರಿಸಿ, ವಿಶ್ನೇಷಿಸಿ, ನಂತರ ಪ್ರತಿಕ್ರಿಯಿಸಿರಿ.</p> <h3 style="float: left; text-align: justify; ">ಮುಖಂಡರ ಕೌಶಲ್ಯಗಳು</h3> <p style="text-align: justify; ">ಆಶಾ ಕಾರ್ಯಕರ್ತರಾಗಿ, ಆರೋಗ್ಯ ಸಮಸ್ಯಗಳನ್ನು ನಿಮ್ಮ ಸಮುದಾಯದ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವವರೊಂದಿಗೆ ಚರ್ಚಿಸಬೇಕು. ನೀವು, ನಿಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೀರಿ. ನಿಮ್ಮ ಅಭಿಪ್ರಾಯಗಳಿಗಿಂತ ಅವರ ಅಭಿಪರಾಯಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು.</p> <p style="text-align: justify; ">ಉದಾ : ನೀವು ಪಂಚಾಯತ್, ಆರೋಗ್ಯ ಮತ್ತು ನಿರ್ಮಲೀಕರಣ ಸಮಿತಿಯೊಂದಿಗೆ ಹಳ್ಳಿಯ ಆರೋಗ್ಯ ಸೇವೆಗಳ ವಿವಿರವಾದ ಕಾರ್ಯಯೋಜನೆಯನ್ನು ತಯಾರಿಸಬೇಕು. ಇದನ್ನು ತಯಾರಿಸುವಾಗ ನಿಮ್ಮ ಸಮುದಾಯದ ಅತಿ ಕಡು ಬಡವರ ಅಭೀಪ್ರಾಯ ಹಾಗೂ ಅವರ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಯಾವುದೇ ನಿರ್ಧಾರಗಳನ್ನು ಕೈಗೊಂಡರು ಅವರ ಅಭೀಪರಾಯಗಳ ಅಥವಾ ಸಮಸ್ಯೆಗಳ ಪ್ರತಿಬಿಂಭವಾಗಿರಬೇಕು. ಕೆಲಬೊಂದು ಸಮುದಾಯದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾದರೆ, ಚರ್ಚಿಸಲು ಇದು ಅತ್ಯಂತ ಸುಖ್ತವಾದ ವಿಷಯವಾಗಿದೆ. ಇದರಿಂದ, ಯಳ್ಳಿಯ ವಿವರವಾದ ಆರೋಗ್ಯಕಾರ್ಯ ಯೋಜನೆಯನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.</p> <p style="text-align: justify; ">ಮುಖಂಡರಾಗಿ ಈ ಕೆಳಕಂಡ ಕೌಶಲ್ಯಗಳನ್ನು ನೀವು ಹೊಂದಿರಬೇಕು.</p> <p style="text-align: justify; ">ಸಂಪರ್ಕ</p> <p style="text-align: justify; ">ನಿರ್ಧಾರ ಕೈಗೊಳ್ಳುವ</p> <p style="text-align: justify; ">ಸಮಾಲೋಚನೆ</p> <p style="text-align: justify; ">ಸಮನ್ವಯತೆ</p> <p style="text-align: justify; "> </p> <p style="text-align: justify; "> </p> <p style="text-align: justify; ">ಸಂಪರ್ಕಿಸುವ ಕುಶಲತೆ</p> <p style="text-align: justify; ">ಸಂಪರ್ಕಿಸಲು ದೇವರು ನಮಗೆ ಒಂದು ಬಾಯಿ ಹಾಗೂ ಎರಡು ಕಿವಿಗಳನ್ನು ನೀಡಿದ್ದಾನೆ.</p> <p style="text-align: justify; ">ಸಂಪರ್ಕಿಸಲು ಸಾಧ್ಯವಾಗದ ಜನರು ಗೊಂದಲದಿಂದ ಹತಾಶರಾಗಿ ನಾನಾ ಗೊಂದರೆಗಳಿಗೆ ಒಳಪಡುತ್ತಾರೆ. ಸಂಪರ್ಕಿವೆಂದರೆ ಒಬ್ಬರಿಗೊಬ್ಬರಿಗೆ ವಿನಿಮಯ ಮಾಡುವ ಅಥವಾ ವಿಷಯಗಳನ್ನು ಮತ್ತು ವಿಚಾರಗಳನ್ನು ಇಬ್ಬರು ಅಥವಾ ಹೆಚ್ಚು ಜನರಿಗೆ ತಿಳಿಸುವುದಾಗಿದೆ.</p> <p style="text-align: justify; ">"ಆಶಾ"ಳ ಪಾತ್ರದಲ್ಲಿ ಸಂಪರ್ಕಿಸುವ ಕಲೆಯು ಒಂದು ಮುಖ್ಯವಾದ ಕುಶಲತೆಯಿಂದ ಕೂಡಿದ ವಿಷಯವಾಗಿದೆ. ಸಂಪರ್ಕವು "ಆಶಾ"ಳಾಗಿ ಕುಶಲತೆಯಿಂದ ಕಾರ್ಯ ನಿರ್ವಹಿಸುವಲ್ಲಿ ಒಂದು ಮುಖ್ಯವಾದ ಅಂಶವಾಗಿದೆ.</p> <p style="text-align: justify; ">ಸಂಪರ್ಕಿಸುವಲ್ಲಿ ನಾನಾ ವಿಧಾನಗಳಿಗೆ :</p> <p style="text-align: justify; ">ಮೌಖಿಕ (ಮಾತಿನ) ಸಂಪರ್ಕ</p> <p style="text-align: justify; ">ಮಾತು ರಹಿತ ಸಂಪರ್ಕ</p> <p style="text-align: justify; ">ಲಿಖಿತ ಸಂಪರ್ಕ</p> <p style="text-align: justify; ">ಆಶಾಳಾಗಿ ನೀವು ಮೇಲೆ ತಿಳಿಸಿದ ಮೂರು ಸಂಪರ್ಕಗಳನ್ನು ಉಪಯೋಗಿಸಬೇಕಾಗಿದೆ.</p> <p style="text-align: justify; "> </p> <p style="text-align: justify; ">ಮೌಖಿಕ ಸಂಪರ್ಕ</p> <p style="text-align: justify; ">ಇದು ಸರ್ವೆ ಸಾಮಾನ್ಯವಾಗಿ ಬಳಸುವ ಸಂಪರ್ಕದ ವಿಧಾನ. ಸಾಮಾನ್ಯವಾಗಿ ಒಂದು ಮಾಹಿತಿಯನ್ನು ಮಾತಿನ ಮುಖಾಂತರ ಒಪ್ಪಿಸಿದಾಗ ಸಂಪರ್ಕಿಸಿದ್ದು ಮುಗಿಯಿತೆಂದು ತಿಳಿಯುತ್ತೇವೆ. ಆದರೆ ಇದು ನಿಜವಲ್ಲ. ಏಕೆಂದರೆ ತಿಳಿಸಿದ ಮಾಹಿತಿಯನ್ನು ಸರಿಯಾಗಿ ಸ್ವೀಕರಿಸದೆ ಇರುವ ಸಾಧ್ಯತೆಗಳಿರುತ್ತವೆ. ನೀವು ತಿಳಿಸಿದ ಮಾಹಿತಿಯನ್ನು ಸರಿಯಾಗಿ ಸ್ವೀಕರಿಸಿದ್ದಾರೆಯೇ ಎಂದು ತಿಳಿಯಲು (ಅವಳು/ಅವನು) ಅವರಿಂದ ಪುನರ್ಮನನ ಪಡೆಯಿರಿ. ಇದರಿಂದ ಅವರುಗಳು ಸರಿಯಾಗಿ ರ್ಅಮಾಡಿಕೊಂಡಿದ್ದಾರೆಂದು ತಿಳಿಯಬಹುದಾಗಿದೆ. ಷುಟುಕವಾಗಿ ಪರಿಣಾಮಕಾರಿಯಾಗಿರುವುದಿಲ್ಲ.</p> <p style="text-align: justify; "> </p> <p style="text-align: justify; ">ಮೌಖಿಕ ಸಂಪರ್ಕವು ಪರಿಣಾಮಕಾರಿಯಾಗಲು ಕೆಲಬು ಸಲಹೆಗಳು (ಖಿIPS)</p> <p style="text-align: justify; ">ನಿಖರತೆ</p> <p style="text-align: justify; ">ಸ್ಪಷ್ಟತೆ</p> <p style="text-align: justify; ">ಸರಿಯಾದದ್ದು</p> <p style="text-align: justify; ">ಸಂಪರ್ಕಿಸುವಾಗ ಇಮನಿಸಬೇಕಾದ ಕೆಲಬು ಅಂಶಗಳು :</p> <p style="text-align: justify; ">ನೀವು ಯಾವ ವ್ಯಕ್ತಿಯ ಜೊತೆ ಮಾತನಾಡುವಿರೋ ಅವರ ಕಣ್ಣುಗಳು ಸಂಧಿಸುವುದನ್ನು ಗಮನದಲ್ಲಿಡಿ.</p> <p style="text-align: justify; ">ಸಂಪರ್ಕಿಸುವಾಗ ಕುಳಿತಿದ್ದರೂ, ನಿಂತಿದ್ದರೂ ದೃಢವಾಗಿರಿ.</p> <p style="text-align: justify; ">ಯಾವುದಾದರೂ ಒಂದು ಅಂಶಕ್ಕೆ ಬದ್ಧರಾಗಿರಿ, ಇದರಿಂದ ನೀವು ಸಮಯದ ಅಪವ್ಯಯವನ್ನು ತಪ್ಪಿಸಬಹುದು.</p> <p style="text-align: justify; ">ಸಂಪರ್ಕಿಸುವಾಗ ನಿರ್ಧಿಷ್ಟವಾಗಿರಿ, ನ್ಯಾಯಬದ್ಧರಾಗಿರಿ, ಪ್ರಮಾಣಿಕರಾಗಿರಿ ಮತ್ತು ನೇರವಾಗಿರಿ.</p> <p style="text-align: justify; ">ಸಂಪರ್ಕಿಸುವಾಗ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ</p> <p style="text-align: justify; ">ತೆರೆದ ಮನಸ್ಸಿನಿಂದಿರಿ, ಇದರಿಂದ ನೀವು ಇನ್ನೊಬ್ಬ ವ್ಯಕ್ತಿಯಲ್ಲಿರುವ ಅಂಶವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.</p> <p style="text-align: justify; ">ನಿಮ್ಮ ಧ್ವನಿಯು ಏರುದನಿಯಲ್ಲಿರಬೇಕು. ಇದರಿಂದ ಎಲ್ಲರಿಗೂ ಕೇಳಿಸುವಂತಿರಬೇಕು. ನಿಮ್ಮ ಉಚ್ಛಾರಣೆಯು ಸ್ಪಷ್ಟವಾಗಿರಬೇಕು. ಎಲ್ಲರಿಗೂ ಅರ್ಥವಾಗುವ ಶಬ್ದಗಳನ್ನೇ ಬಳಸಿ. ತಾಂತ್ರಿಕ ಶಬ್ದಗಳನ್ನು ಅಥವಾ ಕ್ಲಿಷ್ಟ ಪದಗಳನ್ನು ಬಳಸದಿರಿ.</p> <p style="text-align: justify; ">ಯಾರಾದರೂ ಉತ್ತಮವಾದದ್ದನ್ನು ಹೀಳುವಂತಿದ್ದರೆ ಅವರಿಗೆ ಅವಕಾಶ ನೀಎಇ, ಬೇರೆಯವರನ್ನು ಉತ್ತೇಜಿಸಲು/ಅಭಿನಂದಿಸಲು ಮರೆಯದಿರಿ.</p> <p style="text-align: justify; ">ಭಾಷಣಕಾರರಿಗೆ ನೀವು ಆಸಕ್ತಿಯಿಂದ ಆಲಿಸುತ್ತಿರುವಿರೆಂಬ ಭರವಸೆ ನೀಡಬೇಕು. ನೀವು ಮೌಖಿಕ ಸ್ಥಿರತೆಯ ಪದಗಳಾದ 'ನಾನು ನೋಡಿದೆ' ' ನಾನು ¥ಒಪ್ಪಿದೆ' ಹೂಂ, ಸರಿ "ಆದರೆ" ಎಂದು ಸಂಭಾಷಿಸುವಾಗ, ಸಂಬಂಧೀಸಿದ ಕಡೆ ಸರಿಯಾದ ಅಂಶವನ್ನು ಸೇರಿಸಿ.</p> <h3 style="float: left; text-align: justify; ">ಕೆಲವೊಂದು ಸಲಹೆಗಳು</h3> <p style="text-align: justify; ">ನೀವು ಹೊಣೆಗಾರರಾಗಿ ಸಮರ್ಥವಾಗಿ ಕೆಲಸ ನಿರ್ವಹಿಸುದರೆ ಬುನಗೆ ವಥತಯಜುತಜ ಅಧಿಕಾರ ಹಾಗೂ ಫಲಿತಾಂಶ ಪಡೆಯುವ ಸಾಮಥ್ರ್ಯ ಹೊಂದುತ್ತೀರಿ. ಸಧ್ಯದಲ್ಲಿ ಪಡೆಯದಿದ್ದರು ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯಬಹುದು.</p> <p style="text-align: justify; ">ಒಳ್ಳೆಯ ಕಾರ್ಯ ಮಾಡುವವರ ಹತ್ತಿರ ತಮ್ಮ ಸಮಸ್ಯೆಗಳನ್ನು ತಿಳಿಸಬೇಕು.</p> <p style="text-align: justify; ">ಬೇರೆಯವರ ತಪ್ಪುಗಳನ ನು ಹುಡುಕುವುದು ಅಥಗವಾ ಬೇರೆಯವರ ದೋಷಾರೂಪಣೆ ಮಾಸುವುದರಿಂದ ನಿಮ್ಮ ಹಾಗೂ ನಿಮ್ಮೊಂದಿಗೆ ಇರುವ ಜನರ ಶಕ್ತಿಯು ಕುಂದುತ್ತದೆ.</p> <p style="text-align: justify; ">ನಿಮ್ಮ ಭಾವನೆಗಳನ್ನು ಒಂದು ಅಥವಾ ಎರಡು ಸಲ ಹೇಳಿಕೊಳ್ಳುವುದು ಒಳ್ಳೆಯ ಆಡಳಿತಾತ್ಮಕ ಆಂಶವಾಗಿದೆ. ಸತತವಾಗಿ ನೀವು ಅವರನ್ನು ಟೀಕೆ ಮಾಡುವುದು ಒಳ್ಳೆಯದಲ್ಲ.</p> <p style="text-align: justify; ">"ಕಾರ್ಯಕ್ಕೆ ಹೆಚ್ದಚು ಒತ್ತುಕೂಡಿ ಆದರೆ ದೂಷಣೆಗಲ್ಲ"</p> <p style="text-align: justify; ">"ಇದು ಈ ರೀತಿಯಾದರೆ, ಇದು ನನಗೆ ಸಂಬಂಧಿಸಿದ್ದು"</p> <p style="text-align: justify; ">"ಕತ್ತಲನ್ನು ದೂಷಿಸುತ್ತ ಕೂಡುವ ಬದಲು ಮೇಣದ ಬತ್ತಿಯನ್ನು ಹಚ್ಚಿರಿ"</p> <p style="text-align: justify; ">ಕೊನೆಗೆ ನಿಮ್ಮ ಕೆಲಸಕ್ಕೆ ನೀವೇ ಜವಾಬ್ದಾರಾಗುತ್ತೀರಿ. ನಿಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕು. ಈರಿರುವ ಸ್ಥಿತಿಯು ನಿಮ್ಮ ಪ್ರಯತ್ನದ ಫಲ. ಇದೆ ಹೊಣೆಗಾರಿಕೆ.</p> <p style="text-align: justify; "> </p> <p style="text-align: justify; ">ಮುಖಂಡರು ನಿರ್ಧಾರ ಕೈಗೊಳ್ಳಲು ಬೇರೆಯವರನ್ನು ಸೇರಿಸಿಕೊಳ್ಳಬೇಕು</p> <p style="text-align: justify; ">ಮುಖಂಡರಾಗಿ ನೀವು ಹಲವಾರು ನಿರ್ದಾರಗಳನ್ನು ಕಯಗೊಳ್ಳಬೇಕಾಗುತ್ತದೆ. ಸಮುದಾಯದ ಮುಖಂಡರು ತಾವೇ ನಿರ್ಧಾರ ಕೈಗೊಳ್ಳುವುದು ತುಂಬಾ ವಿರಳ. ಕಾನೂನಿನ ಪ್ರಕಾರ, ಸಮುದಾಯದ ಮುಖಂಡರ ಅವಶ್ಯಕತೆಗಳನ್ನು ಸಮುದಾಯದ ಸದಸ್ಯರೊಂದಿಗೆ ಕೂಡಿ ನಿರ್ಣಯಿಸಬೇಕು. ಸಮುದಾಯವು ಕೈಗೊಂಡಿರುವ ನಿರ್ಧಾರವನ್ನು ಸಮರ್ಥಿಸಬೇಕು. ಆವಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು.</p> <p style="text-align: justify; ">ಉದಾ : ಆಶಾ ಕಾರ್ಯಕರ್ತರಾಗಿ, ತಾವು ಸಮುದಾಯದ ಆರೋಗ್ಯದ ಅವಶ್ಯಕತೆಗಳನ್ನು ದೃಢವಾಗಿ ತಿಳಿಸಬೇಕು. ಸಮುದಾಯದ ಜನರೊಂದಿಗೆ ಸೇರೆಇ ಆರೋಗ್ಯ ಸೇವೆಯ ಅಗತ್ಯಗಳ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಳ್ಳಬೇಕು. ಇದರಿಂದ ತಾವು ಮುಂದೆ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ.</p> <p style="text-align: justify; ">ಮುಖಂಡರು ಬೇರೆಯವರನ್ನು ಪ್ರೋತ್ಸಾಯಿಸುತ್ತಾರೆ :</p> <p style="text-align: justify; ">ಆರೋಗ್ಯ ಸೇವೆಗಳ ಗುರಿಗಳನ್ನು ಸಾಧಿಸಲು ನಿಮಗೆ ಸಮುದಾಯದ ಜನರ ಬೆಂಬಲ ಅವಶ್ಯಕವಾಗಿದೆ.</p> <p style="text-align: justify; ">ಸಮುದಾಯದೊಂದಿಗೆ ಸತತ ಸಂಪರ್ಕ.</p> <p style="text-align: justify; ">ಪ್ರತಿನಿತ್ಯ ವಿಷಯಗಳನ್ನು ಹಂಚಿಕೊಳ್ಳುವುದು.</p> <p style="text-align: justify; ">ಜವಾಬ್ದಾರಿಗಳನ್ನು ಕೊಡುವುದು.</p> <p style="text-align: justify; ">ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ಹೇಳುವುದು.</p> <p style="text-align: justify; ">ಅವರ ಪ್ರಯತ್ನಕ್ಕೆ ಮಹತ್ವ ಕೊಡುವುದು.</p> <p style="text-align: justify; ">ಸಾರ್ವಜನಿಕವಾಗಿ ಅವರ ಪ್ರಾಮಾಣಿಕತೆಯನ್ನು ಹೊಗಳುವುದು.</p> <p style="text-align: justify; ">ಮುಖಂಡರು ಒಗ್ಗಟ್ಟನ್ನು ಸಾಧಿಸಬೇಕು :</p> <p style="text-align: justify; ">ಮುಖಂಡರಾಗಿ ನೀವು ಸಮುದಾಯದ ಮತ್ತು ಸಮುದಾಯದ ಸದಸ್ಯರಲ್ಲಿ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವವರಲ್ಲಿ ಒಗ್ಗಟ್ಟನ್ನು ಸಾಧಿಸಲು ಪ್ರಯತ್ನಿಸಬೇಕು. ಪ್ರತಿಯೊಬ್ಬರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಂಡರೆ ಒಗ್ಗಟ್ಟು ಸಾಧಿಸಬಹುದು. ಯಾರನ್ನು ದೂಷಿಸಬಾರದು. ಇದರಿಂದ ಮುಂದೆ ಅವರನ್ನು ಸಮಧಾನಪಡಿಸುವುದು ಕಷ್ಟವಾಗುತ್ತದೆ.</p> <p style="text-align: justify; "> </p> <p style="text-align: justify; ">ಸಮುದಾಯದ ಜನರಲ್ಲಿ ಒಗ್ಗಟ್ಟನ್ನು ಸಾಧಿಸಿದ ಭಾವನೆ ಬಂದರೆ ಆಶಾ ಕಾರ್ಯಕರ್ತರಾಗಿ ನೀವು ಹಳ್ಳಿಯಲ್ಲಿ ಸಾಧಿಸಬೇಕಾದ ಗುರಿಗಳನ್ನು ಸಾಧಿಸಲು ಸಹಾಯಕವಾಗುತ್ತದೆ.</p> <p style="text-align: justify; ">ಮುಖಂಡರು ಇತರರಿಗೆ ಆದರ್ಶಪ್ರಾಯವಾಗಿರಬೇಕು :</p> <p style="text-align: justify; ">ಮುಖಂಡರಿಗೆ ಅನುಯಾಯಿಗಳಿರುತ್ತಾರೆ. ಆದ್ದರಿಂದ ನೀವು ಮಾಡುವ ಕಾರ್ಯಗಳು ಜವಾಬ್ದಾರಿಯುತವಾಗಿರಬೇಕು. ಉದಾ : ಆಶಾ ಕಾರ್ಯಕರ್ತರಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಗರ್ಭಿಣಿ ಸ್ತ್ರೀಯರೊಂದಿಗೆ ನೀವು ಹೋಗುವ ಸಂದರ್ಭ ಬರಬಹುದು. ಈ ಕೆಲಸವನ್ನು ನೀವು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಹಳ್ಳಿಯ ಒಬ್ಬ ತಾಯಿಯ ಅಮೂಲ್ಯವಾದ ಜೀವವನ್ನು ಉಳಿಸಿದಂತಾಗುತ್ತದೆ, ನೀವು ಬೇರೆಯವರಿಗೆ ಆದರ್ಶರಾಗುತ್ತೀರಿ. ಮುಂದೆ, ಪ್ರಸಂಗ ಬಂದಲ್ಲಿ ಇತರ ಸಮುದಾಯದ ಸದಸ್ಯರು ಇಂತಹ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಸಂರ್ದೌ ಬಂದರೆ, ಅವರು ಹಣ ಮತ್ತು ಸಾರಿಗೆ ವ್ಯವಸ್ಥೆಯನ್ನು ಮಾಡಬಹುದು.</p> <p style="text-align: justify; ">ಮುಖಂಡರು ತಿಳಿಯಬೇಕು ಮತ್ತು ತಿಳಿಸಬೇಕು :</p> <p style="text-align: justify; ">ಕೇಳುವುದರಿಂದ, ನಿರ್ಧಾರ ಕೈಗೊಳ್ಳಲು ಸರಳ ಹಾಗೂ ಅರ್ಥಪೂರ್ಣಬಾಗುತ್ತದೆ. ಮುಖಂಡರಾಗಿ ನಿಮ್ಮ ಅಭಿಪ್ರಾಯಗಳನ್ನು ದೃಢವಾಗಿ ಹೇಳುವ ಸಾಮಥ್ರ್ಯವಿರಬೇಕು.</p> <p style="text-align: justify; ">ಉದಾ : ಹಳ್ಳಿಯಲ್ಲಿ, ಕುಟುಂಬಗಳು ಹೆರಿಗೆ ಮಾಡಿಸಲು ಸಿದ್ಧರಿರುವುದಿಲ್ಲ ನೀವು ಅವರನ್ನು ಕೇಳಿ, ಹೆರಿಗೆ ಮಾಡಿಸದೆ ಇರುವುದಕ್ಕೆ ಕಾರಣಗಳನ್ನು ತಿಳಿದುಕೊಳ್ಳಬೇಕು. ಅದರ ಅಭಿಪ್ರಾಯದ ಆಧಾರದ ಮೇಲೆ ನೀವು ಅವರಿಗೆ ಹೆರಿಗೆಯ ತಯಾರಿ ಹಾಗೂ ಅದರಿಂದಾಗುವ Àರಿಣಾಮಗಳನ್ನು ತಿಳಿಸಬೇಕು. ನಿಮ್ಮ ಒಳ್ಳೆಯ ಉದಾಯರಣೆಗಳನ್ನು ಅವರೊಂದಿಗೆ ಹಂಚಿಕೊಂಡು ಒಂದು ತಾಯಿಯ ಜೀವ ಉಳಿಸಲು ಸಹಾಯ ಮಾಡಬೇಕು.</p> <p style="text-align: justify; ">ಮುಖಂಡರು ಸಮುದಾಯದ ಮುಖವಾಣಿಯಾಗಿದ್ದಾರೆ.</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ಆರೋಗ್ಯ ಸಮಸ್ಯೆಗಳನ್ನು ನಿಮ್ಮ ಸಮುದಾಯದ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವವರೊಂದಿಗೆ ಚರ್ಚಿಸಬೇಕು. ನೀವು, ನಿಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೀರು. ನಿಮ್ಮ ಅಭಿಪ್ರಾಯಗಳಿಗಿಂತ ಅವರ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು.</p> <p style="text-align: justify; "> </p> <p style="text-align: justify; ">ಮುಖಂಡರು ಸಮುದಾಯದ ಮುಖವಾಣಿಯಾಗಿದ್ದಾರೆ</p> <h3 style="float: left; text-align: justify; ">ಮುಖಂಡತ್ವ</h3> <p style="text-align: justify; ">ಮುಖಂಡರ ಬಗ್ಗೆ ಯೋಚಿಸುವಾಗ ಮೊದಲಿಗೆ ನಮಗೆ ನೆನಪಾಗುವುದು ಸ್ವಾತಂತ್ಯ ಯೋಧರು. ಜನಪ್ರಿಯ ರಾಜಕಾರಣಿಗಳು ಹಾಗೂ ಹೆಸರಾಮತ ಧರ್ಮ ಗುರುಗಳು. ಈ ಎಲ್ಲ ಜನರಲ್ಲಿ ಸಆಮಾನ್ಯವಾದ ಒಂದು ಗುಣಗಳಿವೆ, ಅವರೆಲ್ಲರೂ ಒಣದು ಜಟಿಲವಾದ ಪರಿಸ್ಥಿತಿ ಅಥವಾ ಸಮಸ್ಯೆಯನ್ನು ಒಂದು ಉತ್ತಮ ಅವಕಾಶವನ್ನಾಗಿ ಮಾಡುತ್ತಾರೆ.</p> <p style="text-align: justify; ">ಜನರನ್ನು ಸಂಘಟಿಸುವುಉದ ಹಾಗೂ ಮಹತ್ವದ ಗುರಿಗಳನ್ನು ತಲುಪಲು ಸಂಪನ್ಮೂಲಗಳನ್ನು ಕ್ರೋಢೀಕರಿಸುವವರನ್ನು ಮುಖಂಡರು ಎಂದು ವ್ಯಾಖ್ಯಾನಿಸಬಹುದು. ಜ್ಞಾನ ಹಾಗೂ ಅನುಭವಗಳಿಂದ ಎಷ್ಟೋ ಜನರು ಎಂತಹ ಪರಿಸ್ಥಿತಿಯಲ್ಲಿಯೂ ಮುಖಂಡರಾಗುವ ಸಾಮಥ್ರ್ಯ ಹೊಂದಿದ್ದಾರೆ.</p> <p style="text-align: justify; ">ಪರಿಣಾಮಕಾರಿಯಾದ ಮುಖಂಡತ್ವವು ಸಮುದಾಯದಲ್ಲಿ ಸಂಘಟನೆ, ಸಂಪರ್ಕ, ಜಟಿಲವಾದ ಸಮಸ್ಯೆ, ಮಧ್ಯಸ್ಥಿಕೆ ಮತ್ತು ಬದಲಾವಣೆಯ ಪರವಾಗಿ ಕೆಲಸ ನಿರ್ವಹಿಸುವ ಪರಿಣತಿ ಹೊಂದಿರಬೇಕು.</p> <p style="text-align: justify; ">ಆಶಾ ಕಾರ್ಯಕರ್ತರಾಗಿ ಮುಖಂಡತ್ವದ ಪಾತ್ರವಹಿಸಬೇಕಾಗುತ್ತದೆ. ಆದ್ದರಿಂದ, ಮುಖಂಡತ್ವದ ಅರ್ಥ ಹಾಗೂ ಅದರ ಗುಣಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಇದರಿಂದ, ಮುಖಂಡತ್ವದ ಪಾತ್ರ ವಹಿಸಲು ಸಹಾಯಕವಾಗಲಿದೆ.</p> <p style="text-align: justify; "> </p> <p style="text-align: justify; ">ಮುಖಂಡತ್ವ ಅಂದರೆ :</p> <p style="text-align: justify; ">ಜವಾಬ್ದಾರಿಯಾಗಿರುವುದು</p> <p style="text-align: justify; ">ಜನರಿಗೆ ಸ್ಫೂರ್ತಿಯಾಗಿರುವುದು</p> <p style="text-align: justify; ">ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಜನರಿಗೆ ನಿಸ್ಪಕ್ಷಪಾತವಾಗಿರುವುದು.</p> <p style="text-align: justify; ">ಆತ್ಮವಿಶ್ವಾಸ, ದೃಢ ಸಂಕಲ್ಪ, ಕೆಲಸದಲ್ಲಿ ಆಸಕ್ತಿ, ಇಚ್ಛಾಶಕ್ತಿ ಹಾಗೂ ಹೊಣೆಗಾರರಾಗಿರುವುದನ್ನು ತೋರಿಸುವುದು.</p> <p style="text-align: justify; ">ಇತರರೊಂದಿಗೆ ಸೇರಿ ಕೆಲಸ ನಿರ್ವಹಿಸುವ ಕೌಶಲ್ಯ ಹೊಂದಿರಬೇಕು.</p> <p style="text-align: justify; ">ಗಾಂಧೀಜಿಯವರು ಒಬ್ಬ ಬಹು ದೊಡ್ಡ ಮುಖಂಡರಾಆಗಿದ್ದರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಜನರನ್ನು ತಮ್ಮೊಂದಿಗೆ ಕರೆದೊಯ್ದರು. ಮುಖಂಡರಾಗಿ ಅವರು ಪಾಲಿಸಿದ ಆದರ್ಶ ತತ್ವಗಳನ್ನು ನೋಡೋಣ.</p> <p style="text-align: justify; ">ದೈರ್ಯ ನಿಮ್ಮ ನಂಬಿಕೆ ಹಾಗೂ ಅಭಿಪ್ರಾಯಗಳಿಗೆ ಬದ್ಧರಾಗಿ ನಿಲ್ಲುವ ಸಾಮರ್ಥವಿರಬೇಕು.</p> <p style="text-align: justify; ">ನಿಮ್ಮ ಸಮುದಾಯದ ಆರೋಗ್ಯದ ಹಕ್ಕುಗಳಿಗೆ ಧಕ್ಕೆಯಾದರೆ, ಆಶಾ ಕಾರ್ಯಕರ್ತರಾಗಿ ಇದನ್ನು ಸಂಬಂಧಿಸಿದವರ ಗಮನಕ್ಕೆ ಧೈರ್ಯ ಮಾಡಬೇಕಾಗುತ್ತದೆ. ಉದಾ : ಕಿರಿಯ ಮಹಿಳಾ ಆರೋಗ್ಯ ಸಯಾಹಕಿಯ ನಿಮ್ಮ ಗ್ರಾಮಕ್ಕೆ ಪ್ರತಿನಿತ್ಯ ಬರದೆ ಇದ್ದರೆ ಅಥವಾ ದುರ್ಬಲ ವರ್ಗದ ಜನರ ಮನೆಗಳಿಗೆ ಭೇಟಿ ನೀಡದೆ ಇದ್ದ ಸಂದರ್ಭದಲ್ಲಿ ಅವರ ಗೈರು ಹಾಜರಿ ಬಗ್ಗೆ ಅವರ ಗಮನಕ್ಕೆ ತಂದು ಇದೆ ರೀತಿ ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಬೇಕು. ಇದನ್ನು ಆಕೆಯು ಕೇಳದಿದ್ದರೆ, ಊರ ಮುಖಂಡರು, ಸ್ವಸಹಾಯ ಗುಂಪಿನ ಮುಖಂಡರು ಹಾಗೂ ಸಂಬಂಧಿಸಿದ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಈ ಪ್ರಯತ್ನಗಳನ್ನು ಆರೋಗ್ಯ ಸಹಾಯಕಿಯು ನಿಮ್ಮ ಹಳ್ಳಿಗೆ ದಿನಾಲು ಭೇಟಿ ನೀಡುವವರೆಗೂ ಮುಂದುವರೆಸಿಕೊಂಡು ಹೋಗಬೇಕು.</p> <p style="text-align: justify; ">ಜವಾಬ್ದಾರಿ : ನಿಮ್ಮ ಪಾತ್ರ ಹಾಗೂ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಹಿಸುವುದು.</p> <p style="text-align: justify; ">ಮೊದಲು ನಿಮ್ಮ ಸಲುವಾಗಿ ನಂತರ ಸಮುದಾಯ ಮುಖಂಡರಾಗಿ ನೀವು ಜವಾಬ್ದಾರಿರಬೇಕಾಗುತ್ತದೆ. ಆಶಾ ಕಾರ್ಯಕರ್ತರಾಗಿ ನಿಮಗೆ ಕೆಲವೊಂದು ಪಾತ್ರ ಹಾಗೂ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದನ್ನು ನೀವು ಸಮುದಾಯದ ಜನರಿಗೆ ತಿಳಿಸಬೇಕು. ಇದರಿಂದ ಎರಡು ರೀತಿಯ ಉಪಯೋಗವಾಗುತ್ತದೆ.</p> <p style="text-align: justify; ">ನಿಮ್ಮ ಪಾತ್ರದ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆಯಿದ್ದರೆ ನೀವು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಬಹುದು.</p> <p style="text-align: justify; ">ನಿಮ್ಮ ಪಾತ್ರ ಹಾಗೂ ಜವಾಬ್ದಾರಿಗಳನ್ನು ಇನ್ನೂ ಪರಿಣಾಮಕಾರಿಗಯಾಗಿ ನಿರ್ವಹಿಸಲು ಅವರು ಕೂಡಾ ಬೆಂಬಲಿಸುತ್ತಾರೆ.</p> <p style="text-align: justify; ">ಉತ್ತೇಜನ : ಗುಣªಮಟ್ಟದ ಆರೋಗ್ಯ ಶಿಕ್ಷಣದ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಸಮುದಾಯದ ಜನರನ್ನು ನಿಮ್ಮೊಂದಿಗೆ ಆಹ್ವಾನಿಸಬೇಕು.</p> <p style="text-align: justify; ">ಪ್ರತಿಯೊಬ್ಬ ವ್ಯಕ್ತಿಗೆ ಉತ್ತೇಜನ ಅವಶ್ಯಕವಾಗಿದೆ. ಒಬ್ಬ ಮುಖಂಡರಾಗಿ, ನೀವು ಯಾರನ್ನಾದರೂ ಭೇಟಿಯಾದಾಗ ಅವರ ಹಣೆ ಬರಹವನ್ನು ನೀವು "ನಾನು ತುಂಬಾ ಮಹತ್ವದ ವ್ಯಕ್ತಿ" ಎಂದು ಗುರುತಿಸುವುದು. ಇಂತಹ ಸಂದರ್ಭದಲ್ಲಿ ಸಮುದಾಯದ ಜನರನ್ನು ನಿಂಮ ಕೆಲಸದಲ್ಲಿ ಸೇರಿಸಿಕೊಂಡರೆ ಅಥವಾ ಸಮುದಾಯದ ಆರೋಗ್ಯದ ಪರಿಸರ ಸುಧಾರಿಸಲು ಅವರಿಗೆ ಕೆಲವೊಂದು ಜವಾಬ್ದಾರಿಗಳನ್ನು ನೀಡಿದರೆ ಉತ್ತೇಜನ ನೀಡಿದಂತಾಗುತ್ತದೆ.</p> <p style="text-align: justify; ">ಸುಧಾರಣೆ : ನಿಮ್ಮ ಕೌಶಲ್ಯವನ್ನು ಸತತವಾಗಿ ಹೆಚ್ಚಿಸುವುದು.</p> <p style="text-align: justify; ">ಒಬ್ಬ ಮುಖಂಡರಾಗಿ, ಆಶಾ ಕಾರ್ಯಕರ್ತೆಯರು ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಸತತವಾಗಿ ಪ್ರಯತ್ನಿಸಬೇಕು. ಹೊಸ ಹೊಸ ಯೋಜನೆಗಳ ಹಾಗೂ ಆರೋಗ್ಯ ಸೇವೆಗಳ ನಿರ್ಣಯಗಳನ್ನು ತಿಳಿದುಕೊಂಡಿರಬೇಕು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಒಳ್ಳೆಯ ವಿಷಯಗಳನ್ನು ತಿಳಿದುಕೊಂಡಿದ್ದು ನೀವು ಅವರೋಂದಿಗೆ ಸತತ ಸಂಪರ್ಕದಲ್ಲಿರಬೇಕು. ಇದನ್ನು ಮಾಡುವುದರಿಂದ ನಿಮ್ಮ ಕೌಶಲ್ಯ ಹೆಚ್ಚುತ್ತದೆ. ಇಲದಲದಿದ್ದರೆ ನೀವು ಯಶಸ್ವಿಯಾಗುವುದಿಲ್ಲ. ಸೋಲುವುದರಿಂದ ನೀವು ಏನು ಮಾಡಬಾರದಾಗಿತ್ತು ಎಂದು ಕಲಿತುಕೊಳ್ಳಬಹುದು. ನೀವು ಸದಾ ತಪ್ಪುಗಳನ್ನು ಮಾಡುತ್ತಿದ್ದರೆ, ನೀವು ಅದರಿಂದ ಏನೂ ಕಲಿತಿಲ್ಲವೆಂದು ತಿಳಿಯುತ್ತದೆ. ಕಲಿಯುವುದರಿಂದ ನೀವು ಎಲ್ಲ ರೀತಿಯಿಂದಲೂ ಸಮರ್ಥರಾಗಬಹುದು.</p> <p style="text-align: justify; "> </p> <p style="text-align: justify; ">ಮುಖಂಡತ್ವದ ಗುಣ :</p> <p style="text-align: justify; ">ಜನರು ಮುಖಂಡತ್ವದ ವಿವಿಧ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಅದರಲ್ಲಿ ಎರಡು ಪ್ರಕಾರಗಳು :</p> <p style="text-align: justify; ">ಅಧಿಕಾರಯುತವಾಗಿ</p> <p style="text-align: justify; ">ಭಾಗವಹಿಸುವುದರಿಂದ</p> <p style="text-align: justify; ">ಅಧೀಕಾಯುತವಾದ ಮುಖಂಡರು ಸಹಕಾರ ಅಥವಾ ಸಹಯೋಗಕ್ಕಾಗಿ ಮುಂದೆ ಬರುವುದಿಲ್ಲ. ಅವರು ಹೆಚ್ಚಿನ ಕಾರ್ಯ ಒತ್ತಡ ಇರುವವರು. ಅವರು, ಜನರು ಯಾವುದೇ ಚರ್ಚೆ ಅಥವಾ ಪ್ರಶ್ನೆ ಮಾಡದೆ ಕೆಲಸ ನಿರ್ವಹಿಸುವುದನ್ನು ಅಪೇಕ್ಷಿಸುತ್ತಾರೆ. ಯಾವುದರ ಬಗ್ಗೆ ಅವರು ನಂಬುವುದಿಲ್ಲವೋ ಅದರ ಬಗ್ಗೆ ಸಾಮಾನ್ಯವಾಗಿ ಅಸಹಕಾರಿದಂದ ಇರುತ್ತಾರೆ. ಈ ತರಹದ ಮುಖಂಡತ್ವದಿಂದ ಸಮುದಾಯದ ಮುಖಂಡರಿಗೆ ಅವರ ಭಾವನೆಗಳನ್ನು ಅಥವಾ ಅಧಿಕಾರವನ್ನು ಚಲಾಯಿಸಲು ತುಂಬಾ ಕಷ್ಟವಾಗುತ್ತದೆ.</p> <p style="text-align: justify; ">ಸದಾ ಚಟುವಟಿಕೆಯಿಂದಿರುವ ಮುಖಂಡರು ಒಂದು ಒಳ್ಳೆಯ ವಾತಾವರಣವನ್ನು ಎಲ್ಲ ಸದಸ್ಯರಿಗೆ ತಲುಪುವಂತೆ ನಿರ್ಮಾಣ ಮಾಡುತ್ತಾರೆ. ಅವರು ತಮ್ಮ ಗುರಿಗಳನ್ನು ಪರಿಣಾಮಕಾರಿಯಾಗಿ, ಸಾಧ್ಯವಾದಷ್ಟು, ಎಡಬಿಡದೆ ಕೆಲಸ ನಿರ್ವಹಿಸಿ ಜನರಲ್ಲಿ ಹೆಚ್ಚಿನ ಶಕ್ತಿ ತುಂಬಲು ಸಹಾಯಕವಾಗುತ್ತಾರೆ. ಅವರು ಸಾಮಾನ್ಯವಾಗಿ ಕೆಲಬೊಂದು ಉಗ್ಪಾದಕ ಗುಂಪುಗಳನ್ನು ರಚಿಸಿ ಅದರ ಮುಖಂಡತ್ವ ವಹಿಸುತ್ತಾರೆ.</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ಭಾಗವಹಿಸುವಿಕೆಯ ಮುಖಾಂತರ ಮುಖಂಡತ್ವದ ಗುಣಗಳನ್ನು ರೂಢಿಸಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ.</p> <p style="text-align: justify; ">ಮುಖಂಡರು ಗುರಿಗಳಣ್ನು ಹಾಕಿಕೊಳ್ಳುತ್ತಾರೆ ಹಾಗೂ ದಿಕ್ಸೂಚಿಯಾಗುತ್ತಾರೆ.</p> <p style="text-align: justify; ">ಆಶಾ ಕಾರ್ಯಕರ್ತಕರಾಗಿ, ನೀವು ಎಲ್ಲರನ್ನು ಸೇರಿಸಿ ಹಳ್ಳಿಯಲ್ಲಿ ಸಾಧಿಸಬೇಕಾದ ಗುರಿಗಳನ್ನು ಹಾಕಿಕೊಳ್ಳುವುದು. ಗುರಿಗಳನ್ನು ಸಾಧಿಸಲು ಸಮುದಾಯದ ಸಹಕಾರದೊಂದಿಗೆ ಹೇಗೆ, ಎಲ್ಲಿ ಮತ್ತು ಯಾವಾಗ ಇವುಗಳನ್ನು ಸಾಧಿಸಬೇಕು ಎಂಬುದರ ಬಗ್ಗೆ ಮುಂಚಿತವಾಗಿ ತಿಳಿದಿರಬೇಕು.</p> <p style="text-align: justify; ">ಉದಾ : ಹಳ್ಳಿಯಲ್ಲಿ ಮುಂದಿನ ವರ್ಷ ಒಂದೂ ತಾಯಿ ಮರಣ ಸಂಭವಿಸದಂತೆ ಅಥವಾ ಮುಂದಿನ 6 ಗಿಂಗಳಲ್ಲಿ ಎಲ್ಲಾ ಮಕ್ಕಳಿಗೆ ಲಸಿಕೆ ಸಿಗುವಂತಾಗಬೇಕು.</p> <p style="text-align: justify; ">ಮುಖಂಡರು ಮೌಲ್ಯಗಳನ್ನು ದೃಢೀಕರಿಸುವುದು</p> <p style="text-align: justify; ">ಮುಖಂಡರಾಗಿ ನೀವು ಕೆಲವು ಮೌಲ್ಯಗಳಾದ ಪ್ರಮಾಣಿಕತೆ, ಕಠಿಣ ಶ್ರಮ, ವಿಶ್ವಾಸ ವೃದ್ಧಿಸುವಂತಹ ಮೌಲ್ಯಗಳನ್ನು ರೂಢಿಸಿಕೊಳ್ಳುವುದು. ನಿಮ್ಮ ಕಾರ್ಯಗಳಲ್ಲಿ ಈ ಮೌಲ್ಯಗಳನ್ನು ಪ್ರದರ್ಶಿಸುವುದು. ನೀವು ಕಠಿಣ ಕೆಲಸ ನಿರ್ವಹಿಸುವುದನ್ನು ನಿಮ್ಮ ಸಮುದಾಯದ ಜನರಿಗೆ ತಿಳಿಸುವುದು. ಆದರೆ, ನೀವು ಇದನ್ನು ಕಾರ್ಯರೂಪದಲ್ಲಿ ತೋರಿಸದೆ ಇದ್ದರೆ ಜನರು ನಿಮ್ಮನ್ನು ನಂಬುವುದಿಲ್ಲ.</p> <p style="text-align: justify; ">ಉದಾ-ಹಳ್ಳಿಯ ಎಲ್ಲ ಮಕ್ಕಳಿಗೆ ಲಸಿಕೆ ಹಾಕಬೇಕು. ಆದರೆ, ಕಿರಿಯ ಆರೋಗ್ಯ ಸಹಾಯಕಿಯು ಲಸಿಕೆ ಹಾಕುವುದಕ್ಕಾಗಿ ತಮ್ಮ ಹಳ್ಳಿಗೆ ಬಂದಾಗ ತಾವು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರು ನೀವು ಕಠಿಣ ಪರಿಶ್ರಮ ಪಡುತ್ತಿದ್ದೀರಿ ಎಂಬುದನ್ನು ನಂಬುವುದಿಲ್ಲ.</p> <p style="text-align: justify; ">ಮುಖಂಡರಿಗೆ ಉನ್ನತ ದರ್ಜೆಯ ಹಾಗೂ ಹೆಚ್ಚಿನ ಅಪೇಕ್ಷೆಗಳು ಇರಬೇಕು :</p> <p style="text-align: justify; ">ಆಶಾ ಕಾರ್ಯಕರ್ತರಾಗಿ, ನಿಮ್ಮ ಹಳ್ಳಿಯ ಸಮುದಾಯದ ಜನರಿಗೆ ಉನ್ನತ ದರ್ಜೆಯ ಆರೋಗ್ಯ ಸೇವೆಗಳನ್ನು ಉಪಕೇಂದ್ರಗಳಿಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆಯಲು ದೃಢ ನಿಶ್ಚಯ ಮಾಡಬೇಕು.</p> <p style="text-align: justify; ">ಕಿರಿಯ ಆರೋಗ್ಯ ಸಹಾಯಕಿಯು ತನ್ನ ಕರ್ತವ್ಯವನ್ನು ತೃಪ್ತಿಕರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಆಶಾ ಕಾರ್ಯಕರ್ತರಾಗಿ, ಅವರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ನಿಮ್ಮ ಸಹಾಯ ಅತ್ಯಂತ ಅವಶ್ಯಕವಾಗಿದೆ. ಉದಾ : ಸಮುದಾಯದಲ್ಲಿ ಆರೋಗ್ಯ ಶಿಬಿರ ನಡೆಯುವ ದಿನಾಂಕ ಹಾಗೂ ಸ್ಥಳಗಳನ್ನು ಅಥವಾ ಆರೋಗ್ಯ ಸಹಾಯಕಿಯು ಬೇಟಿ ನೀಡುವ ದಿನವನ್ನು ತಿಳಿಸಿ ಶಿಬಿರದಲ್ಲಿ ಉಪಸ್ಥಿತರಿರಲು ತಾವು ಉತ್ತೇಜನ ನೀಡಬೇಕು.</p> <p style="text-align: justify; "> </p> <p style="text-align: justify; ">ಆರೋಗ್ಯ ಸೇವೆಯನ್ನು ಒದಗಿಸುವ ಸಮುದಾಯದ ಸದಸ್ಯರನ್ನು ಸೆನ್ನಾಗಿ ಚಿಕಿತ್ಸೆ ಕೊಡದಿದ್ದರೆ, ಇದನ್ನು ತಾವು ಗಮನಹರಿಸಿ ಸಂಬಂಧಿಸಿದ ವ್ಯಕ್ತಿಗೆ ತಿಳಿಹೇಳಬೇಕು.</p> <p style="text-align: justify; ">ಮುಖಂಡರು ಹೊಣೆಗಾರರು ಹಾಗೂ ಜವಾಬ್ದಾರರು ಆಗಿರಬೇಕು.</p> <p style="text-align: justify; ">ಆಶಾ ಕಾರ್ಯಕರ್ತರಾಗಿ ನೀವು ಸಮುದಾಯಕ್ಕೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವವರಿಗೆ ಹೊಣೆಗಾರರಾಗಿದ್ದೀರಿ, ನೀವು ವಿಷಯವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುವಲ್ಲಿ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು.</p> <h3 style="float: left; text-align: justify; ">ಆಶಾಳಾದ ನೀವು</h3> <p style="text-align: justify; ">ಕಾಯಿಲೆ ಇದ್ದಾಗಲೂ ಆಹಾರ ಉಣಿಸುವುದನ್ನು ಮುಂದುವರಿಸಬೇಕು ಎಂದು ತಾಯಂದಿರಿಗೆ ಸಲಹೆ ನೀಡುವುದು.</p> <p style="text-align: justify; ">ಆಹಾರ ಕಡಿಮೆ ಪ್ರಮಾಣದಲ್ಲಿ ನೀಡಬೇಕು. ಅದರೆ ಪದೇ ಪದೇ ನೀಡಬೇಕು ಎಂದು ತಾಯಂದಿರಿಗೆ ಸಲಹೆ ನೀಡುವುದು.</p> <p style="text-align: justify; ">ಮನೆಯಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ತಯಾರಿಸಿ ಕೊಡಬೇಕು.</p> <p style="text-align: justify; ">ಕಾಯಿಲೆ ನಂತರ ಕೆಲವು ದಿನಗಳು ತುಂಬ ಪದೇ ಪದೇ ಎದೆಹಾಲನ್ನು ನೀಡುವುದನ್ನು ಮುಂದುವರಿಸಬೇಕೆಂದು ತಾಯಿಗೆ ಮಾರ್ಗದರ್ಶನ ನೀಡಬೇಕು.</p> <p style="text-align: justify; ">ಬೇಳೆ ಅಥವಾ ಬೇರೆ ಆಹಾರವನ್ನು ತೆಳ್ಳಗೆ ಮಾಡಿ ಮಕ್ಕಳಿಗೆ ಕೊಡಬಾರದು ಎಂದು ತಾಯಂದಿರಿಗೆ ಸಲಹೆ ನೀಡಬೇಕು. ಮಕ್ಕಳಿಗೆ ಆಹಾರವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ನಂತರ ಉಳಿದ ಕುಟುಂಬದ ಸದಸ್ಯರಿಗೆ ಮಸಾಲೆ ಪದಾರ್ಥವನ್ನು ಆಹಾರಕ್ಕೆ ಸೇರಿಸಿಕೊಳ್ಳಿ. ಒಂದು ಚಮಚ ಬೆಣ್ಣೆ / ತುಪ್ಪ / ಎಣ್ಣೆಯನ್ನು ಮಗುವಿನ ಆಹಾರಕ್ಕೆ ಸೇರಿಸಬೇಕು ಎಂದು ತಾಯಂದಿರಿಗೆ ಸಲಹೆ ನೀಡಬೇಕು.</p> <p style="text-align: justify; ">ಅತಿ ಸಣ್ಣ ಪೌಷ್ಠಿಕಾಂಶಗಳು (ವಿಟಮಿನ್ - ಎ, ಕಬ್ಬಿಣಾಂಶ, ಐಯೊಡಿನ್)</p> <p style="text-align: justify; ">ವಿಟಮಿನ್ - ಎ ಕೊರತೆ</p> <p style="text-align: justify; ">ಸಣ್ಣ ಪ್ರಮಾಣದಲ್ಲಿ ಬೇಕಾದರೂ ಸಾಮಾನ್ಯ ದೃಷ್ಠಿಗೆ "ವಿಟಮಿನ್-ಎ" ಅತಿ ಪ್ರಾಮುಖ್ಯವಾಗಿದೆ. ಇಷ್ಟಿ ಕಡಿಚೆ ಪ್ರಮಾಣದ್ದಾರೂ ವಿಟಮಿನ್-ಎ ದೇಹದಲ್ಲಿ ಸಂಯೋಜನೆಯಾಗುವುದಿಲ್ಲ. ಆದುದರಿಂದ 6 ತಿಂಗಳಿಂದ 3 ವರ್ಷಗಳವರೆಗೆ ವಿಟಮಿನ್-ಎ ಕೊರತೆ ಸಾಮಾನ್ಯವಾಗಿರುತ್ತದೆ. ಇದು ಕುರುಡುತನಕ್ಕೆ ಕಾರಣವಾಗುತ್ತದೆ. ರಾತ್ರಿ ಕುರುಡುತನ ಈ ಕೊರತೆಯ ಮೊದಲ ಲಕ್ಷಣ.</p> <h3 style="float: left; text-align: justify; ">ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು</h3> <p style="text-align: justify; ">ಕಬ್ಬಿಣಾಂಶವಿರುವ ಆಹಾರ ಮತ್ತುಪ್ರೊಟೀನ್ ಹೆಚ್ದಿರುವ ಆಹಾರದ ಬಗ್ಗೆ (ಬೆಲ್ಲ, ಹಾಲು, ಮೊಟ್ಟೆ, ಬೇಳೆಗಳು, ಹಸಿರು ಎಲೆ ತರಕಾರಿಗಳು, ಪೇರಳೆ, ಸೇಬು ಇತ್ಯಾದಿ) ಸಲಹೆ ಕೊಡಬೇಕು.</p> <p style="text-align: justify; ">ಹುಳು ನಿವಾರಣೆ ಔಷಧಿಯ ಪ್ರಾಮುಖ್ಯತೆ ಮತ್ತು ಅತಿಭೇದಿ ತಡೆಗಟ್ಟುವ ಸಂಬಂಧ ಸಲಹೆ ನೀಡಬೇಕು.</p> <p style="text-align: justify; ">ಮಲ ಕಪ್ಪು ಬಣ್ಣವಾಗಿರಲು, ಮಲವಿಸರ್ಜನೆ ಕಡಿಮೆಯಾಗಲು/ಹೆಚ್ಚಾಗಲು ಕಬ್ಬಿಣಾಂಶ ಮಾತ್ರ ಕಾರಣವಾಗಿರುತ್ತದೆ ಎಂದು ತಿಳಿಸಬೇಕು.</p> <h3 style="float: left; text-align: justify; ">ಐಯೊಡಿನ್ ಕೊರತೆ</h3> <p style="text-align: justify; ">ಐಯೊಡಿನ್ ಬಹುಮುಖ್ಯವಾದ ಮೂಲವಸ್ತು. ಇದು ಮನುಷ್ಯರ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿತೆ ಅಗತ್ಯವಾಗಿ ಬೇಕಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಇದರ ಕೊರತೆಯಿಂದ ಸಹಜವಾಗಿ ಗರ್ಭಪಾತವಾಗುತ್ತದೆ, ನಿರ್ಜೀವ ಮಗುವಿನ ಜನನವಾಗುತ್ತದೆ/ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.</p> <p style="text-align: justify; ">ಐಯೊಡಿನ್ ಇರುವ ಉಪ್ಪನ್ನು ಗರ್ಭಿಣಿಯರು ಉಪಯೋಗಿಸಬೇಕು ಎಂದು ಸಲಹೆ ನೀಡಬೇಕು. ಅದು ಐಯೊಡಿನ್ ಕೊರತೆ ತಪ್ಪಿಸಲು ಸಾಕಾಗುತ್ತದೆ.</p> <h3 style="float: left; text-align: justify; ">ಜ್ವರ</h3> <p style="text-align: justify; ">ಜ್ವರ ಅನೇಕ ರೋಗಗಳ ಸಾಮಾವಯ ಲಕ್ಷಣವಾಗಿರುತ್ತದೆ. ಅದು ಸರಳವಾಗಿರಬಯುದು ಅಥವಾ ತೀವ್ರವಾಗಿರಬಹುದು. ಕೆಲವು ಸೌಮ್ಯ ಜ್ವರ ಚಿಕಿತ್ಸೆ ಇಲ್ಲದೆ ಮನೆಯಲ್ಲಿಯ ಚಿಕಿತ್ಸೆಯಿಂದ ಕಡಿಮೆಯಾಗಬಹುದು ಅಥವಾ ಮಾಮೂಲು ಮಟ್ಟಕದಕೆ ಇಳಿಯಬಹುದು. ಉದಾಹರಣೆಗೆ ಕೆಮ್ಮುರಹಿತ ಜ್ವರ/ನೆಗಡಿ/ಗಂಡೆಗಳಿಲ್ಲದ ಜ್ವರ/ಅತಿಸಾರ ಭೇದಿರಹಿತ ಜ್ವರ / ಕಿವಿ ಸೋರುವುದು / ಸ್ಪಷ್ಟ ಸೋಂಕುರಹಿತ ಜ್ವರ ಇತ್ಯಾದಿ. ಆದಾಗ್ಯೂ ಆನೇಕ ಮಕ್ಕಳಲ್ಲಿ ಜ್ವರ ತೀಕ್ಷ್ಣ ರೋಗದ ಲಕ್ಷಣವಾಗಬಹುದು. ಮಕ್ಕಳಲ್ಲಿ ಜ್ವರವಿದ್ದರೆ ರಕ್ತಲೇಪನ ಪರೀಕ್ಷೆ ಮಾಡಬೇಕು.</p> <h3 style="float: left; text-align: justify; ">ಉಷ್ಣತೆ ಮತ್ತು ಜ್ವರ</h3> <p style="text-align: justify; ">ನಮ್ಮ ದೇಹ ಬೇಸಿಗೆ ಮತ್ತು ಚಳಿಗಾಲದಲ್ಲೂ ಸಹ ಬೆಚ್ಚಗಿರುತ್ತದೆ. ಹೊರಗಡಿ ತುಂಬಾ ಬಿಸಿಯಾಗಿದ್ದಾಗ ನಮ್ಮ ದೇಹ ಬೆವರನ್ನು ಸುರಿಸುತ್ತದೆ. ಇದು ನೀರನ್ನು ಬಿಡುಗಡೆ ಮಾಡುತ್ತದೆ. ನಂತರ ಮಣ್ಣಿನ ಮಡಿಕೆ ರೀತಿ ತಣ್ಣಗಾಗುತ್ತದೆ. ಹೊರಗಡೆ ತುಂಬ ತಣ್ಣಗಿದ್ದರೆ ನಮ್ಮ ಶರೀರ ಶಾಖ ಉತ್ಪತ್ತಿ ಮಾಡಲು ನಡುಗುತ್ತದೆ. ಎಲ್ಲಾ ಕಾಲದಲ್ಲೂ ದೇಹ ತನ್ನ ಕರ್ಯಗಳನ್ನು ನಿರ್ವಹಿಸಲು ಸಾಕಾಗುವಷ್ಟು ಶಾಖವನ್ನು ಹೊಂದಿರುತ್ತದೆ. ದೇಹದ ಸಾಮಾನ್ಯ ಉಷ್ಣತೆ 360ಅÀ. ಅಥವಾ 980ಈಗು ಸ್ವಲ್ಪ ಜಾತಿ ಇರುತ್ತದೆ.</p> <p style="text-align: justify; ">ಸೂಕ್ಷ್ಮ ಜೀವಾಣುಗಳು ಆಕ್ರಮಣ ಮಾಡಿದ ನಂತರ ನಮ್ಮ ದೇಹ ಬಹಳ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತದೆ. ಆದುದರಿಂದ ಹೆಚ್ಚು ಜ್ವರ ಹಾನಿಕಾರವಾಗಬಹುದು ಮತ್ತು ಅನೇಕ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು.</p> <p style="text-align: justify; ">ಪ್ರಾಯಕ್ಕೆ ಬಂದವರಲ್ಲಿ ಜ್ವರ ಅಳತೆ ಮಾಡುವುದು</p> <p style="text-align: justify; ">ರೋಗದಿಂದ ನರಳುತ್ತಿರುವ ವ್ಯಕ್ತಿಗಳು ಜ್ವರ ಇರುವ ಬಗ್ಗೆ ಹೇಳದಿದ್ದರೂ, ಶಾಖ ನೋಡುವುದು ಉತ್ತಮ. ನಿಮ್ಮ ಹಣೆಯನ್ನು ಮುಟ್ಟಿ ಮತ್ತು ನಿಮ್ಮ ಕೈ ಎರಡುಕಡೆ ವ್ಯಕ್ತಿಯ ಹಣೆಯನ್ನು ಮುಟ್ಟಿ ನಿಮ್ಮ ಹಣೆಯ ಶಾಖಕ್ಕಿಂತ ವ್ಯಕ್ತಿಯ ಹಣೆಯ ಶಾಖ ಹೆಚ್ಚಾಗಿದ್ದರೆ ಅವಳು/ಅವನು ಜ್ವರವನ್ನು ಹೊಂದಿರಬಹುದು. ಒಬ್ಬ ವ್ಯಕ್ತಿಗೆ ಜ್ವರ ಇದೆ ಆಥವಾ ಇಲ್ಲ ಎಂದು ಕಂಡುಹಿಡಿಯಲು ಈ ವಿಧಾನ ತುಂಬ ಸರಳ ವಿಧಾನ.</p> <p style="text-align: justify; ">ಥರ್ಮಾಮೀಟರನ್ನು ಶಾಖ ಅಳತೆ ಮಾಡಲು ಉಪಯೋಗಿಸುತ್ತಾರೆ.</p> <p style="text-align: justify; ">ಸರಳವಾದ ಬಾಯಿಯ ಮೂಲಕ ನೋಡುವ ಥರ್ಮಾಮೀಟರ್ನ್ನು ತೆಗಿದುಕೊಂಡು ಅದನ್ನು ಚೆನ್ನಾಗಿ ಕುಲುಕಿ ಪಾದರಸದ ಗುರುತು ನೋಡಿ ಮಾಮೂಲಿ (ಸಾಧಾರಣ) ಗುರುತಿಗಿಂತ ಕೆಳಗಿರಬೇಕು. (360ಅ. ಅಥವಾ 980ಈ). ಥರ್ಮಾಮೀಟರಿನಲ್ಲಿ ಪಾದರಸ ಇಲ್ಲದೆ ಇರುವ ಕಡೆ ಹಿಡಿದುಕೊಳ್ಳಬೇಕು. ಏಕೆಂದರೆ ಪಾದರಸದ ಲೈನ್ ಮೇಲಕ್ಕೆ ಏರಬಹುದು ಮತ್ತು ತಪ್ಪು ಅಳತೆ ನಿಮಗೆ ದೊರೆಯುತ್ತದೆ.</p> <p style="text-align: justify; ">ಥರ್ಮ ಮೀಟರಿನ್ ಬಲ್ಬನ್ನು ರೋಗಿಯ ನಾಲಿಗೆಯ ಕೆಳಗೆ ಇಡಿ. ಅಥವಾ ಕಂಕುಳಲ್ಲಿ 2 ನಿಮಿಷ ಇಡಿ.</p> <p style="text-align: justify; ">ಕಂಕುಳಿಗಿಂತ ಬಾಯಿಯ ಶಾಖ ಸ್ವಲ್ಪ ಜಾಸ್ತಿ ಇರುತ್ತದೆ.</p> <p style="text-align: justify; ">ಹೊರಗಡೆ ತೆಗೆದು ನಿಧಾನವಾಗಿ ತಿರುಗಿಸಿ ಹತ್ತಿರದಿಂದ ನೋಡಿ.</p> <p style="text-align: justify; ">ರೋಗಿಯ ಶಾಖವನ್ನು ದಾಖಲಿಸಿ 360ಅ. ಅಥವಾ 980ಈ ಗಿಂತ ಹೆಚ್ಚು ಜ್ವರವಿದೆಯೇ ?</p> <p style="text-align: justify; ">370ಅ. ಅಥವಾ 390ಅ. ಶಾಖ ಸೌಮ್ಯ ಜ್ವರ.</p> <p style="text-align: justify; ">390ಅ. ಮತ್ತು 400ಅ, ಮಧ್ಯ ಇದ್ದರೆ ಸಾಧಾರಣ ಜ್ವರ.</p> <p style="text-align: justify; ">3400ಅ. ಗೂ ಜಾಸ್ತಿ ಇದ್ದರೆ ಇದು ಜಾಸ್ತಿ ಜ್ವರ. ಹೆಚ್ಚು ಜ್ವರವಿರುವ ವ್ಯಕ್ತಿಯನ್ನು ಸ್ಪಂಜಿನಿಂದ ಒರೆಸಿ, ಪ್ಯಾರಸಟಮಾಲ್ ಗುಳಿಗೆ ನೀಡಿದ ಮೇಲೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಬೇಕು.</p> <p style="text-align: justify; ">ಥರ್ಮಾಮೀಟರನ್ನು ಉಪಯೋಗಿಸಿದ ಮೇಲೆ ಪ್ರತಿಸಾರಿ ನೀರಿನಿಂದ ಶುಚಿಗೊಳಿಸಿ.</p> <p style="text-align: justify; ">ಥರ್ಮಾಮೀಟರ್ ಒಳಗೆ ಪಾದರಸವಿರುತ್ತದೆ. ಅದು ವಿಷವಾಗಿರುತ್ತದೆ, ಆದುದರಿಂದ ಮಕ್ಕಳಿಗೆ ಉಪಯೋಗಿಸುವಾಗ ಸಾಕಷ್ಟು ಎಚ್ಚರಿಗೆ ವಹಿಸಬೇಕು.</p> <h3 style="float: left; text-align: justify; ">ಜ್ವರಕ್ಕೆ ಚಿಕಿತ್ಸೆ</h3> <p style="text-align: justify; ">ಸಾಮಾನ್ಯ ಚಿಕಿತ್ಸೆ</p> <p style="text-align: justify; ">ಸೌಮ್ಯ ಜ್ವರಕ್ಕೆ ಚಿಕಿತ್ಸೆ ಅಗತ್ಯವಿರುವುದಿಲ್ಲ. ಮಲೇರಿಯ, ಕ್ಷಯ, ನಿಮೋನಿಯಂ ಸೋಂಕುಗಳಾಗಿರದಿದ್ದರೆ.</p> <p style="text-align: justify; ">ಸಾಧಾರಣ ಜ್ವರಕ್ಕೆ ಪ್ಯಾರಾಸಟಮಾಲ್ ಗುಳಿಗೆ ಉತ್ತಮ ಚಿಕಿತ್ಸೆ. ಪ್ರಾಯದವರಿಗೆ ದಿನಕ್ಕೆ 3 ಗುಳಿಗೆ ಕು. ಹೆಚ್ಚು ವಿವರಣೆಗೆ ಪುಸ್ತಕ-1ರಲ್ಲಿ ಔಷಧಿ ಪಟ್ಟಿ ನೋಡಬೇಕು. ಎರಡು ದಿನಗಳಿಗೆ ಪ್ಯಾರಾಸಟಮಾಲ್ ಗುಳಿಗೆ ಕೊಡಬೇಕು. ಹೆಚ್ಚು ಜ್ವರವಿರುವವರಿಗೆ ಗುಳಿಗೆಯ ಜೊತೆ ಉಗುರು ಬೆಚ್ಚಗಿನ ಬಿಸಿನೀರಿನಿಂದ ಸ್ಪಂಜು ಸ್ನಾನ ಪ್ರಥಮ ಚಿಕಿತ್ಸೆಯಾಗುತ್ತದೆ. 2 ದಿನದೊಳಗೆ ಜ್ವರ ಕಡಿಮೆಯಾಗದಿದ್ದರೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು. ಉಗುರು ಬಿಸಿ ನೀರಿನಲ್ಲಿ ಪೂರ್ಣ ದೇಹವನ್ನು ಸ್ಪಂಜು ಸ್ನಾನ ಮಾಡಿಸಿ. ದೇಹ ನಡುಗುವುದಕ್ಕೆ ತಣ್ಣೀರು ಸ್ನಾನ ಕಾರಣವಾಗುವುದರಿಮದ ತಣ್ಣೀರು ಉಪಯೋಗಿಸಬೇಡಿ. ಹೊದಿಕೆ ಕೊಡಬೇಡಿ. ಕಿಟಕಿಗಳನ್ನು ತೆರೆದಿಡಿ.</p> <p style="text-align: justify; ">ದ್ರವಗಳು ಮತ್ತು ನೀರನ್ನು ಚೆನ್ನಾಗಿ ಕುಡಿಸಬೇಕು.</p> <p style="text-align: justify; ">ಲಘು ಆಹಾರ, ಉದಾಹರಣೆಗೆ ; ಕಿಚಡಿ, ಬೇಳೆ, ಅನ್ನ, ಮೊಸರು, ದಲಿಯಗಳು ಮೃದು ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.</p> <p style="text-align: justify; ">ಜ್ವರಬು ರೋಗದ ಲಕ್ಷಣ, ಜ್ವರವೇ ಕಾಯಿಲೆ ಅಲ್ಲ. ಪ್ಯಾರಾಸಟಮಲ್ ಗುಳಿಗೆ ಅಥವಾ ಸಿರಪ್ ಜ್ವರಕ್ಕೆ ಮದ್ದು. ಇವು ಶಾಖವನ್ನು ಕಡಿಮೆ ಮಾಡುತ್ತವೆ. ಇದು ಕಾಯಿಲೆಗೆ ಕಾರಣವಾದ ಸೂಕ್ಷ್ಮಾಣುಗಳನ್ನು ಕೊಲ್ಲುವುದಿಲ್ಲ ಅದರಿಂದ ಜ್ವರ ಹೋಗುವುದಿಲ್ಲ. ಸಾಮಾನ್ಯ ಶೀತಕ್ಕೆ ಮತ್ತು ಕೆಮ್ಮಿಗೆ ಪ್ಯಾರಾಸಟಮಲ್ ಗುಳಿಗೆ ಅಥವಾ ಹರ್ಬಲ್ಗಳ ಔಷಧ ಸಾಕು ಮತ್ತು ಬೇಕೆ ಯಾವ ಚಿಕಿತ್ಸೆಯು ಅಗತ್ಯವಿರುವುದಿಲ್ಲ.</p> <h3 style="float: left; text-align: justify; ">ಜ್ವರಕ್ಕೆ ಕೆಲವು ಮನೆಯ ಮದ್ದುಗಳು</h3> <p style="text-align: justify; ">ಮನೆ ಮದ್ದುಗಳು ಜ್ವರದ ಪ್ರಭಾವವನ್ನು ಶಮನಗೊಳಿಸುತ್ತದೆ.</p> <p style="text-align: justify; ">ಗುಲ್ವೆಲ್ ಕಧಾ</p> <p style="text-align: justify; ">ಹೆಬ್ಬೆಟ್ಟಿನ ಮಂದದಷ್ಟು ಗುಲ್ವೆಲ್ ಚೂರನ್ನು ತೆಗೆದುಕೊಳ್ಳಬೇಕು. ಅದಕ್ಕೆ ಎರಡು ಟೀ ಚಮಚ ಒಣಗಿದ ಶುಂಠಿಯನ್ನು ಸೇರಿಸಿ. ಇವಕ್ಕೆ 10-12 ಗ್ಲಾಸ್ ನೀರನ್ನು ಸೇರಿಸಿ. ಕಡಿಚೆ ಶಾಖದಲ್ಲಿ ಕುದಿಸಿ. 3 ಗ್ಲಾಸ್ ಕಷಾಯ (ಡಿಕಾಕ್ಷನ್) ಉಳಿದಾಗ, ಅದನ್ನು ತಣ್ಣಗೆ ಮಾಡಿ. ಹೊಸದಾಗಿ ತಯಾರಿಸಿದ 1/2 ಗ್ಲಾಸ್ ಕಷಾಯವನ್ನು ಕೊಡಬೇಕು.</p> <p style="text-align: justify; ">ಚೈನ ಗ್ರಾಸ್ ಟೀ</p> <p style="text-align: justify; ">ಚೈನ ಗ್ರಾಸ್ನಿಮದ ತಯಾರಿಸಿದ ಟೀ ಕಷಾಯ ಸೌಮ್ಯ ಜ್ವರದಿಂದ ನರಳುವ ವ್ಯಕ್ತಿಗೆ ಚೈತನ್ಯ ನೀಡುತ್ತದೆ.</p> <h3 style="float: left; text-align: justify; ">ರೋಗಗಳಿಗೆ ನಿರ್ಧಿಷ್ಟ ಚಿಕಿತ್ಸೆ</h3> <p style="text-align: justify; ">ವಿವಿಧ ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳಿಗೆ ನಾವು ನಿರ್ಧಿಷ್ಠ ಔಷಧಿಯನ್ನು ಕೊಡಬೇಕು. ಮಲೇರಿಯ, ಕ್ಷಯ, ನಿಮೋನಿಯ ಇತ್ಯಾದಿ ರೋಗಗಲೀಗೆ ಪ್ರಾರಾಸಟಮಾಲ್ಗಿಂತ ನಿರ್ಧಿಷ್ಟ ಔಷಧಿ ಅಗತ್ಯವಿರುತ್ತದೆ. ಆದಾಗ್ಯೂ ವೈರಸ್ನಿಂದ ಬರುವ ರೋಗಗಳಿಗೆ ನಿರ್ಧಿಷ್ಟ ಔಷಧಿ ಇರುವುದಿಲ್ಲ. ವೈರಸ್ ತುಂಬ ಚಿಕ್ಕ ಸೂಕ್ಷ್ಮಜೀವಿ. ಇದು ಅನೇಕ ಜ್ವರದ ರೋಗಗಳಿಗೆ ಕಾರಣವಾಗುತ್ತದೆ. ಸಾಮಾನ್ಯ ಶೀತ, ಪ್ಲೂ, ಡೆಂಗಿ, ಕಾಮಾಲೆ ಇತ್ಯಾದಿಗಳು ವೈರಲ್ ರೋಗಗಳು.</p> <p style="text-align: justify; ">ನೆನಪಿಡಿ : ಅನೇಕ ತೀವ್ರತರವಾದ ರೋಗಗಳು ಜ್ವರವನ್ನು ತರುತ್ತವೆ. ಉದಾಹರಣೆಗೆ : ಮಲೇರಿಯ, ನ್ಯುಮೋನಿಯ, ಟೈಫಾಯಿಟ್, ಕ್ಷಯ, ಕಾಲಾಅಜರ್, ಪೈಲೇರಿಯ, ಮೆದುಳು ಜ್ವರ, ಹೆಚ್.ಐ.ವಿ./ಏಡ್ಸ್ ಇತ್ಯಾದಿ. ನಾವು ಅವುಗಳ ಬಗ್ಗೆ ಕಲಿಯಬೇಕು. ವಾಸಿಯಾಗಲು ಎರಡು ದಿನಗಳಿಗಿಂತ ಹೆಚ್ಚು ಕಾಯಬೇಡಿ.</p> <h3 style="float: left; text-align: justify; ">ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು</h3> <p style="text-align: justify; ">ಈ ಕೆಳಗಿನ ಸಂದರ್ಭದಲ್ಲು ಮಗುವನ್ನು ಆರೋಗ್ಯ ಕೇಂದ್ರಕ್ಕೆ ತಕ್ಷಣವೇ ಕರೆದುಕೊಂಡು ಹೋಗಲು ತಾಯಂದಿರಿಗೆ ಸಲಹೆ ನೀಡಬೇಕು.</p> <p style="text-align: justify; ">ಎರಡು ತಿಂಗಳಿಗಿಂತ ಕಡಿಚೆ ವಯಸ್ಸಿನ ಮಗುವಾಗಿದ್ದರೆ.</p> <p style="text-align: justify; ">ಜ್ವರದ ಜೊಗೆ ತೂಕಡಿಕೆ / ಪ್ರಜ್ಞೆ ತಪ್ಪಿದರೆ</p> <p style="text-align: justify; ">ಜ್ವರದ ಜೊತೆ ಕೈ ಕಾಲು ಅದುರುತ್ತಿದ್ದರೆ (ಫಿಟ್ಸರ ಬಂದರೆ)</p> <p style="text-align: justify; ">ಜ್ವರವಿದ್ದ ಮಗುವಿಗೆ ಕುಡಿಯುವುದಕ್ಕೆ ಸಾಧ್ಯವಾಗದಿದ್ದರೆ.</p> <p style="text-align: justify; ">5 ದಿನಗಳಿಗೂ ಹೆಚ್ಚು ಅವಧಿ ಜ್ವರವಿದ್ದರೆ.</p> <p style="text-align: justify; ">ನಿಮ್ಮ ಗ್ರಾಮದಲ್ಲಿ ಜ್ವರವಿರುವ ವ್ಯಕ್ತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಮಲೇರಿಯ ಕಾರ್ಯಕರ್ತರು ಇಂತಹ ರೋಗಿಗಳಿಂದ ರಕ್ತ ಮಾದರಿ ತೆಗೆದುಕೊಳ್ಳಲು ನೀವು ನೆರವು ನೀಡಬೇಕು.</p> <p style="text-align: justify; ">ನಿಮ್ಮ ಗ್ರಾಮದಲ್ಲಿ ವರ್ಷದ ಯಾವ ತಿಂಗಳುಗಳಲ್ಲಿ ಇಂತಹ ಜ್ವರ ಸಾಮಾನ್ಯವಾಗಿರುತ್ತದೆ. ಎಂದು ತಿಳಿದುಕೊಳ್ಳಬೇಕು. ಇಂತಹ ತಿಂಗಳಲ್ಲಿ ಸಾಕಷ್ಟು ಕ್ಲೊರೊಕ್ಟಿನ್ ಮಾತ್ರೆಗಳನ್ನು ದಾಸ್ತಾನು ಮಾಡಿಕೊಂಡಿರಬೇಕು.</p> <p style="text-align: justify; ">ಜ್ವರವಿರುವ ಮಗುವಿಗೆ ಶಿಫಾರಸ್ಸು ಪ್ರಮಾಣದ ಅನ್ವಯ ಕ್ಲೊರೊಕ್ಟಿನ್ ಗುಳಿಗೆ ಕೊಡಬೇಕು. ಮಗು ಪೂರ್ಣ ಚಿಕಿತ್ಸೆ ತೆಗೆದುಕೊಂಡಿರವು ಬಗ್ಗೆ ದೃಢಪಡಿಸಿಕೊಳ್ಳಬೇಕು.</p> <p style="text-align: justify; ">ಮಲೇರಿಯ ತಡೆಗಟ್ಟುವ ಬಗ್ಗೆ ಹೆಚ್ಚಿನ ಮಾಹಿತಿಗೆ ದಯವಿಟ್ಟು ಮಲೇರಿಯಾ ಅಧ್ಯಾಯ ನೋಡುವುದು.</p> <h3 style="float: left; text-align: justify; ">ವಿಶ್ವಾಸದ ಮೌಲ್ಯ</h3> <p style="text-align: justify; ">ಜನರು ಪರಸ್ಪರ ಗೌರವಿಸಿದಾಗ ಅವರಲ್ಲಿ ವಿಶ್ವಾಸ ಮೂಡಿ ಅದರಿಂದಾಗಿ ಪರಿಸ್ಪರ ಸಹಕಾರ ಒಬ್ಬರೊನ್ನೊಬ್ಬರು ಅವಲಂಭಿಸುವುದು ಮತ್ತು ಪರಸ್ಪರ ಗೌರವ ಮೂಡುತ್ತದೆ. ನಿಮ್ಮ ಸುತ್ತಮುತ್ತಲೂ ಇರುವವರ ನಂಬಿಕೆಗಳಿಸುವುದು ಕಷ್ಟ ಅಥವಾ ಅಸಾಧ್ಯವಾದುದಲ್ಲ. ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಿಂದ, ವಿಚಾರಗಳಿಂದ ದೃಷ್ಟಿ ಕೋನದಿಂದ ಹಾಗೂ ಪಾರದರ್ಶಕತೆಯಿಂದ ವಿಶ್ವಾಸವನ್ನು ಗಳಿಸಿಕೊಳ್ಳಬಹುದು. ವಿಶ್ವಾಸವು ಜನರನ್ನು ಒಗ್ಗೂಡಿಸಿ ಬಂಧಿಸುವ ಶಕ್ತಿಯಾಗಿದೆ.</p> <p style="text-align: justify; ">ಮಹಾತ್ಮಗಾಂಧೀಜಿಯವರಿಂದ ಪ್ರತಿವಾದಿಸಲ್ಪಟ್ಟ ಕೆಲವು ಮೌಲ್ಯಗಳು ಈ ರೀತಿ ಇವೆ :</p> <p style="text-align: justify; ">ಯಾವಾಗಲೂ ಸತ್ಯವನ್ನೇ ನುಡಿಯಿರಿ.</p> <p style="text-align: justify; ">ಅಹಿಂಸೆಯಲ್ಲಿ ನಂಬಿಕೆಯಿಡಿ.</p> <p style="text-align: justify; ">ಲಿಂಗ, ಧರ್ಮ, ಜಾತಿ ವರ್ಗಗಳ ಆಧಾರದ ಮೇಲೆ ಭೇದಭಾವ ಮಾಡಬೇಡಿ. ಎಲ್ಲರನ್ನು ಮಾನವರಂಗೆ ಕಾಣಿರಿ.</p> <p style="text-align: justify; ">ನೀವು ತಪ್ಪು ಮಾಡಿದರೆ ಕ್ಷಮಾಯಾಚನೆಗೆ ಸಂಕೋಚಪಡಬೇಡಿ.</p> <p style="text-align: justify; ">ಭೂಮಿ, ನೀರು, ಗಾಳಿ, ಅರಣ್ಯ ಹಾಗೂ ಗಿಡಮರಗಳು ಸಾರ್ವಜನಿಕ ಆಸ್ತಿ ಆಗಿದ್ದು ಇವುಗಳನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಇದು</p> <p style="text-align: justify; ">ಪ್ರತಿಯೊಬ್ಬರಿಗೂ ಸೇರಿದ ಆಸ್ತಿಯಾಗಿದ್ದು ಎಲ್ಲರಿಗೂ ಸರಿಸಮಾನವಾಗಿ ದೊರಕಬೇಕು.</p> <p style="text-align: justify; ">ನಿಮ್ಮಲ್ಲಿ ಅವರಿಗೆ ಸೇವೆ ಮಾಡಬೇಕೆಂಬ ಬದ್ಧತೆ ಇದ್ದರೆ ಜನರ ಅತಃಕರಣವನ್ನು ತಟ್ಟಬಲ್ಲಿರಿ.</p> <p style="text-align: justify; ">ಜನರು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಕೇಂದ್ರ ಬಿಂದುವಾಗಿರಲಿ. ಜನಶಕ್ತಿಯಲ್ಲಿ ನಂಬಿಕೆ ಇಡಿ.</p> <p style="text-align: justify; ">ಮೌಲ್ಯಧಾರಿತ ಆದ್ಯತೆಯನ್ನು ಇಟ್ಟುಕೊಂಡಿರುವ ಜನರು ಯಾವಾಗಲೂ ಸುಖಿಗಳಾಗಿದ್ದು ಸಂತೋಷದಿಂದಿರುತ್ತಾರೆ. ಅವರು ತಮ್ಮ ತಮ್ಮ ಕುಟುಂಬದವರ ಮತ್ತು ಸಮುದಾಯದ ಬೆಳವಣೆಗೆ ಮತ್ತು ಪ್ರಗತಿಗೆ ಹೆಚ್ಚು ಪರಿಣಾಮಕಾರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿಮ್ಮ ಸ್ವಂತದ ಮೌಲ್ಯಗಳನ್ನು ಅರಿತುಕೊಳ್ಳಬೇಕಾದರೆ ನಿಮಗೆ ಮೊದಲು ತಿಳಿಯಬೇಕಾದದ್ದು ನೀವು ಯಾರು, ನಿಮಗೆ ಏನು ಬೇಕು ಹಾಗೂ ನಿಮಗೆ ಏನು ಬೇಡ ಎನ್ನುವುದು.</p> <p style="text-align: justify; ">"ಆಶಾ" ಆಗಿ ನಿಮ್ಮ ಕೆಲಸವು ತುಂಭಾ ಮಹತ್ವದ್ದಾಗಿದೆ. ಆದ್ದರಿಂದ ನೀವು ನಿಮ್ಮ ಕುಟುಂಬ ಹಾಗೂ ಸಮುದಾಯಕ್ಕೆ ಮೌಲ್ಯ ನೀಡಬೇಕು. ನೀವು ನಿಮಗೆ ಯಾವುದು ಕಾರ್ಯ ಅತಿ ಮಹತ್ವದಾಗಿದೆ ಮತ್ತು ಯಾಕೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರವನ್ನು ನೀವೇ ನೀಡಿದರೆ ಅದು ಹೊರಹೊಮ್ಮುತ್ತದೆ. ಕೆಲವು ಸಂದರ್ಭಗಳಲ್ಲಿ ಕುಟುಂಬವೇ ಮುಖ್ಯವಾಗುವುದಾದರೆ ಮತ್ತೊಮ್ಮೆ ದುಡಿಮೆ ಮುಖ್ಯವಾಗುತ್ತದೆ. ಒಂದು ಇನ್ನೊಂದಕ್ಕೆ ಪೂರಕವಾಗಿರುತ್ತವೆ. ಜೊತೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ನೀವು ನಿಮ್ಮ ಕುಟುಂಬಕ್ಕೆ ಸಹಾಯ ನೀಡುವುದರ ಜೊತೆಗೆ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಅವಕಾಶವಾಗುತ್ತದೆ. ಕುಟುಂಬ ನಿಮಗೆ ಕೆಲಸದಲ್ಲಿ ಆಧಾರ ನೀಡುತ್ತದೆ.</p> <h3 style="float: left; text-align: justify; ">ಜವಾಬ್ದಾರಿಯ ಮೌಲ್ಯ</h3> <p style="text-align: justify; ">ನಿಮ್ಮ ನಡತೆಯು ಜವಾಬ್ದಾರಿಯುತವಾಗಿರಲಿ. ನೀವು ನಿಮ್ಮ ಕುಟುಂಬದ ಹಾಗೂ ಸಮುದಾಯಕ್ಕೆ ಒಳ್ಳೆಯ ಆರೋಗ್ಯ ದೊರಕುವಂತೆ ಮಾಡಬೇಕು. ನಿಮ್ಮ ಸ್ವಂತ ಮನೆಯನ್ನು ನೀವು ಶುಚಿಯಾಗಿಟ್ಟು ಕಸವನ್ನು ಬೀದಿಯಲ್ಲಿ ಎಸೆಯುವುದು. ಜವಾಬ್ದಾರಿವುಳ್ಳ ನಡತೆ ಅಲ್ಲ. ಸಮಾಜದ ವ್ಯಕ್ತಿಯಾಗಿ ನೀವು ಕಸವನ್ನು ಕಸಚ ಡಬ್ಬಿಯಲ್ಲೇ ಹಾಕಿ ಸೋಂಕು ಬರದಂತೆ ತಡೆಯಬೇಕು.</p> <p style="text-align: justify; ">ಹಳ್ಳಿಯನ್ನು ಅಭಿವೃದ್ಧಿಪಡಿಸಲು ಊರ ಸರಪಂಚರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ. ಹೆಚ್ಚಿನ ಸಂದರ್ಭದಲ್ಲಿ ಈ ಅಧೀಕಾರದ ದುರುಪಯೋಗವಾಗುತ್ತದೆ. ಅವರು ತಮ್ಮ ಮತ್ತು ಗೆಳೆಯರ, ಸಬಂಧಿಗಳ ಅಘವಾ ಜಾತಿಯವರಿಗೆ ಪ್ರಯೋಜನ ನೀಡುತ್ತಾರೆ. ನಿಮಗೆ ವಹಿಸಿರುವ ಅಧಿಕಾರದ ಜವಾಬ್ದಾರಿಯನ್ನು ನೀವೇ ನಿಭಾಯಿಸುವುದು ತುಂಬಾ ಮುಖ್ಯವಾಗಿದೆ. ಸಂಬಂಧಪಟ್ಟ ನೇಮಿಸಿದ ಸದಸ್ಯರು ಅವರ ಕೆಲಸಗಳನ್ನು ಪರಿಣಾಮಕಾರಿಯಾಗಿ ಹಾಗೂ ಸಮನ್ವಯದಿಂದ ಮಾಡದಿದ್ದರೆ ಯಾವುದೇ ಕೆಲಸ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿಲ್ಲ.</p> <p style="text-align: justify; ">3. ಜನರ ಜ್ಞಾನ ಮತ್ತು ಅನುಭವದಲ್ಲಿ ವಿಶ್ವಾಸವಿರಬೇಕು :</p> <p style="text-align: justify; ">ಎಲ್ಲ ಜನರೂ ಅನುಭವ ಮತ್ತು ಜ್ಞಾನವನ್ನು ಹೊಂದಿರುತ್ತಾರೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದಾಗ ಅದನ್ನು ಗೌರವಿಸಬೇಕು. ಜನರನ್ನು ಯಾವಾಗಲೂ ಖಾಲಿ ಪಾತ್ರಯೆಂದು ತಿಳಿದು ಜ್ಞಾನತುಂಬಬಹುದೆಂದು ಭಾವಿಸಬೇಡಿ. ಅವರನ್ನು ನಿರುತ್ಸಾಹದ ವಸ್ತುಗಳೆಂದು ಭಾವಿಸಬೇಡಿ. ನಿರ್ಧಾರವನ್ನು ತೆಗೆದುಕೊಳ್ಳುವಾಗ ಅವರು ಚಟುವಟಿಕೆಯಿಂದ ಕೂಡಿದ್ದು ಅವರ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು. ಉದಾಹರಣೆಗೆ ಗರ್ಭಿಣಿ ಮಹಿಳೆಯರು ನೊಂದಾಯಿಸಿಕೊಳ್ಳಲು ಮುಂದೆ ಬರದೇ ಇದ್ದಾಗ, ಅವರು ಯಾವ ಕಾರಣಕ್ಕೆ ನೊಂದಾವಣೆಗೆ ಬರುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.</p> <p style="text-align: justify; ">ಹೆಚ್ಚು ಹೆಚ್ಚು ಗರ್ಭಿಣಿ ಮಹಿಳೆಯರನ್ನು ನೊಂದಾಯಿಸಲು ಯಾವ ಉಪಾಯಗಳನ್ನು ಪಾಲಿಸಬೇಕೆಂದು ಕೇಳಿ ಹಾಗೂ ಈ ಉಪಾಯಗಳು ಫಲಿಸಲು ಅವರು ಹೇಗೆ ಸಹಕರಿಸುವರು ಎನ್ನುವುದನ್ನು ಕೇಳಿ.</p> <h3 style="float: left; text-align: justify; ">ಸಮಾನತೆಯ ಮೌಲ್ಯಗಳು</h3> <p style="text-align: justify; ">ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ವಿಧೇಯರಾಗಿ, ದುರ್ಬಲರಾಗಿ ಮತ್ತು ಮೃದುಸ್ವಭಾವವರಾಗಿ ಹಾಗೂ ಪುರುಷರನ್ನು ಶಕ್ತಿಯುತ ಹಾಗೂ ಪ್ರಭಾವಶಾಲಿಗಳಾಗಿ ಬಿಂಬಿಸಿದೆ. ಇಂತಹ ಯೋಜನಾ ಲಹರಿಯಿಂದ ಮನೆಯಲ್ಲಿ ಹಾಗೂ ಸಮಾಜದಲ್ಲಿ ಪುರುಷರಿಗೆ ಹೆಚ್ಚಿನ ಗಮನ, ಶಕ್ತಿ ಹಾಗೂ ಮರ್ಯಾದೆಯನ್ನು ನೀಡುತ್ತಾರೆ. ಆದರೆ ಮಹಿಳೆಯರನ್ನು ಅವರಿಗೆ ಸಹಕಾರ ಕೊಡುವವರನ್ನಾಗಿ ನೋಡುತ್ತಾರೆ. ಇದರ ಪರಿಣಾಮವಾಗಿ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮೂಲ ಸಂಪತ್ತು ದೂರವಾಗಿರುತ್ತದೆ. ಉದಾಹರಣೆಗೆ ಕುಟುಂಬದಲ್ಲಿ ಹೆಣ್ಣು ಮಗು ಮತ್ತು ಮಹಿಳೆಗೆ ಗಂಡು ಮಕ್ಕಳಿಗೆ ಮತ್ತು ಗಂಡಸರಿಗಿಂತ ಕಡಿಮೆ ಆಹಾರ ಕೊಡಲಾಗುತ್ತದೆ.</p> <p style="text-align: justify; ">ಗಂಡಸರಿಗೆ ಹಾಗೂ ಗಂಡು ಮಕ್ಕಳಿಗೆ ಮುಂದೆ ಬರಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಉದಾಹರಣೆಗೆ ಗಂಡು ಮಕ್ಕಳಿಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಮಾಡುತ್ತಾರೆ. ಸಾಮಾನ್ಯವಾಗಿ ಪುರುಷರು ವಂಶಪಾರಂಪರೆಯಾಗಿ ಬಂದಿರುವ ಆಸ್ತಿಯನ್ನು ಹೊಂದುತ್ತಾರೆ. ಆದರೆ ಮಹಿಳೆಯರಿಗೆ ಇದರಲ್ಲಿ ಪಾಲು ಇರುವುದಿಲ್ಲ.</p> <p style="text-align: justify; ">ಪುರುಷ ಪ್ರಧಾನ ಸಾಮಾಜಿಕ ಮೌಲ್ಯದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಅಗೌರವದಿಂದ ಕಂಡಾಗ ನಿಮಗೆ ಯಾವ ತಪ್ಪೂ ಕಾಣುವುದಿಲ್ಲ. ನೀವು ಸಮಾನತೆಯಲ್ಲಿ ನಂಬಿಕೆ ಇಟ್ಟಿರುವುದಾದರೆ ನೀವು ಮಹಿಳೆಗೆ ಒಂದು ವ್ಯಕ್ತಿಯನ್ನಾಗಿ ಗೌರವಿಸುತ್ತೀರಿ.</p> <p style="text-align: justify; ">ನಮ್ಮ ಸಮಾಜದಲ್ಲಿ ಜಾತಿವಾರು ಸ್ವರೂಪವೂ ಬಹಳ ಗಟ್ಟಿಯಾಗಿದೆ ಹಾಗೂ ಸಾಮಾಜಿಕವಾಗಿ ಪ್ರಯೋಜನ ಪಡೆಯುತ್ತಿರುವ ವರ್ಗದ ಜನರು ತಮ್ಮ ಯಥಾಸ್ಥಿತಿ ಕಾಯ್ದುಕೊಳ್ಳಲು ಇಚ್ಛಿಸುತ್ತಾರೆ. ಜಾತಿಯ ರಚನಾ ಕ್ರಮದಿಂದಾಗಿ ನಮ್ಮ ಸಮಾಜದ ಕೆಲವು ಜನರಿಗೆ ಮುಂದುವರಿಯಲು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಹಾಗೂ ಕೆಲವು ಸಹಾಯವನ್ನು ಮಾತ್ರ ಪಡೆಯುತ್ತಾರೆ. ಆಶಾ ಆಗಿ, ನಾವು ಮೊದಲು ಬಡಜನರ ಹಾಗೂ ಬಡತನ ರೇಖೆಯ ಕೆಳಗಿನ ಸಮುದಾಯದವರ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅವರ ಹಕ್ಕುಗಳು ಹಾಗೂ ದೊರಕಬೇಕಾದ (ಇಟಿಣiಣಟemeಟಿಣ) ವಿಷಯದ ಬಗ್ಗೆ ಶಿಕ್ಷಣ ನೀಡುವಿಕೆಯಿಂದ ಶಕ್ತಿಯುತರನ್ನಾಗಿ ಮಾಡಿ, ತಮ್ಮ ಅನಿಸಿಕೆಗಳನ್ನು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲು ಅವರಿಗೆ ಉತ್ತೇಜನ ನೀಡಬೇಕು. ಅವರು ಯಾವುದೇ ವರ್ಗ, ಜಾತಿ, ಲಿಂಗ ಅಥವಾ ಧರ್ಮದವರಾಗಲಿ ಪ್ರತಿಯೊಬ್ಬರನ್ನು ಒಂದೇ ತೆರನಾಗಿ ಕಾಣಬೇಕು.</p> <h3 style="float: left; text-align: justify; ">ಕಾರ್ಯಕರ್ತೆಯ ಮೌಲ್ಯಗಳು</h3> <p style="text-align: justify; ">ಪ್ರತಿಯೊಬ್ಬ ವ್ಯಕ್ತಿಗೂ ಅವರ ಎಲ್ಲ ವರ್ತನೆಗೆ ಹಾಗೂ ಭಾವಕ್ಕೆ ಮೌಲ್ಯಗಳು ಅವರಿಗೆ ಮಾರ್ಗದರ್ಂನ ನೀಡುತ್ತವೆ. ಮೌಲ್ಯಗಳ ಮೇಲೆ ಸಂಸ್ಕಾರ, ಅನುಭವ, ಶಿಕ್ಷಣ ಮತ್ತು ಕಾಯ್ದೆಗಳು, ಭಾಷೆ ಹಾಗೂ ಮಾಧ್ಯಮಗಳು ಪ್ರಭಾವ ಬೀರುತ್ತವೆ. ಮೌಲ್ಯಗಳು ಬದಲಾಗುತ್ತವೆ ಎಂದು ತಿಳಿಯುವುದು ಅತಿ ಅವಶ್ಯಕ ಸಾಮಾಜಿಕ ವಿಷಯಗಳು ಸಂಬಂಧಪಟ್ಟ ಕೆಲಸ ಮಾಡುವಾಗ ನಾವು ಪ್ರಧಾನವಾಗಿ ಸಮುದಾಯದವರ ನಡೆತೆ ಮತ್ತು ಭಾವನೆಗಳ ಜೊತೆಗೆ ಕೆಲಸ ಮಾಡುತ್ತೇವೆ. ಹಾಗೂ ಈ ಕಾರ್ಯಕ್ರಮ ಅನುಷ್ಠಾನಗೊಳಿಸುವವರು ಗುಣನಾತ್ಮಕ ಹಾಗೂ ಇಚ್ಛಿಸಿದ ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಸಾಮಾಜಿಕ ಬದಲಾವಣೆ ತರಲು ವೈಯುಕ್ತಿಕ ಮೌಲ್ಯಗಳನ ನು ತಿಳಿಸುವುದು ಬಹುಮುಖ್ಯವಾಗುತ್ತದೆ.</p> <p style="text-align: justify; ">ಪ್ರತಿಯೊಬ್ಬ ಬ್ಯಕ್ತಿಗೂ ಅವನ/ಅವರದೇ ಆದ ಮೌಲ್ಯಗಳಿರುತ್ತವೆ. ಇದರಲ್ಲಿ ಸರಿ ಅಥವಾ ತಪ್ಪು ಎನ್ನುವುದಿಲ್ಲ. ಸಾಮಾನ್ಯವಾಗಿ ಮೌಲ್ಯಗಳು ನಮ್ಮ ತಂದೆ ತಾಯರಿಂದ, ನಮ್ಮ ಸಮಾಜದಿಂದ ಹಾಗೂ ಪರಿಸರ ಬರುತ್ತವೆ. ಮೌಲ್ಯಗಳು ನಿಮ್ಮ ವ್ಯಕ್ತಿತ್ವವಾಗಿ ರೂಪಿಸಿರುತ್ತವೆ ಮತ್ತು ಪರಿಚಯಿಸುತ್ತವೆ ಹಾಗೂ ಇವು ನಮ್ಮ ದೃಷ್ಟಿಕೋನದ ಮೇಲೆ ಅವಲಂಭಿಸಿವೆ. ಮೌಲ್ಯಗಳು ನಮ್ಮನ್ನು ಗುರಿ ತಲುಪಲು ಮಾರ್ಗದರ್ಶನ ನೀಡುತ್ತವೆ ಹಾಗೂ ಇದನ್ನು ಸಾಧಿಸಲು ಸಹಾಯವಾಗುತ್ತದೆ. ಉದಾ : ನನಗೆ ಹೋಗಿ ತಲುಪಬೇಕಾದ ಸ್ಥಳ ತಿಳಿದಿದ್ದರೆ, ಅಡ್ಡ ರಸ್ತೆಗಳು ಎದುರಾದಾಗ ನಾನು ಯಾವಾಗಲೂ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದ್ದೇಶ ಹಾಗೂ ಮೌಲ್ಯಗಳ ಸ್ಪಷ್ಟ ಅರಿವಿಲ್ಲದಿದ್ದರೆ, ನಾವು ಕಳೆದುಹೋಗಿ ಹಾಗೂ ಗೊಂದಲವುಂಟಾಗುತ್ತದೆ. ಉದಾ:ನಾನು ಸಮಯವನ್ನು ಗೂಡ್ಡು ಹರಟೆಯಲ್ಲಿ ಕಳೆಯುವುದು ಅಥವಾ ನನ್ನ ಕೆಲಸ ಮಾಡಿಕೊಳ್ಳುವುದೂ ಎನ್ನುವುದು ನನ್ನ ಮೌಲ್ಯಗಳ ಮೇಲೆ ಅವಲಂಭಿಸಿದೆ.</p> <p style="text-align: justify; ">ಮೌಲ್ಯಗಳು ಸೂಪ್ತ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ವಾಹನ ಸಂಚಾರದ ಕೆಂಪು ಮತ್ತು ಹಸಿರು ಬಣ್ಣದ ದೀಪಗಳಂತೆ ಇರುತ್ತವೆ. ಅವು ನಮಗೆ ಏನು ಮಾಡಬೇಕು ಹಾಗೂ ಮಾಡಬಾರದೆಂದು ತಿಳಿಸಿಕೊಡುತ್ತೇವೆ. ಮೌಲ್ಯಗಳಿಂದ ಯಾವುದು ಒಳ್ಳೆಯದು ಹಾಗೂ ಯೋಗ್ಯವಾಗಿವೆ ಎಂದು ನಿರ್ಧರಿಸಬಹುದು. ಜಗತ್ತಿನ ಆಗುಹೋಗುಗಳು ಹೇಗೆ ಎನ್ನುವ ಕಾಲ್ಪನಿಕ ಬುನಾದಿಯ ಮೇಲೆ ಮೌಲ್ಯಗಳು ನಿಂತಿವೆ. ಈ ಮೌಲ್ಯಗಳ ಕೆಲವು ಸಂದರ್ಭಗಳಲ್ಲಿ ಯಾವುದು ಸರಿಯೆಂದು ಯೋಚಿಸಲು ಸಹಾಯವಾಗುತ್ತವೆ.</p> <h3 style="float: left; text-align: justify; ">ಪ್ರಮುಖ ನಿಯಮಗಳು</h3> <p style="text-align: justify; ">ಆಶಾ ಕಾರ್ಯಕರ್ತೆಯಾಗಿ ನೀವು ಅನುಸರಿಸಬೇಕಾದ ಪ್ರಮುಖ ನಿಯಮಗಳಿವೆ. ಅವುಗಳಿಗನುಸಾರ ಕ್ರಿಯಾಶೀಲತೆಯಿಂದ ಹೇಗೆ ಬದಲಾವಣೆ ತರಬಹುದೆಂದು ನೋಡಬಹುದು.</p> <p style="text-align: justify; ">1. ಸಮುದಾಯವನ್ನು ಪ್ರಮುಖ ಹಾಗೂ ತುರ್ತಾಗಿ ಭಾದಿಸುತ್ತಿರುವ ವಿಚಾರವನ್ನು ಗುರುತಿಸಿ ಆ ಬಗ್ಗೆ ತಿಳಿದುಕೊಳ್ಳುವುದು.</p> <p style="text-align: justify; ">2. ತೊಂದರೆಗೊಳಗಾದ ಜನರನ್ನು ಜೊತೆಗೂಡಿಸಿಕೊಳ್ಳುವುದು ಮತ್ತು ಅವರ ಸಹಕಾರ ದೊರಕುವಂತೆ ನೋಡಿಕೊಳ್ಳುವುದು.</p> <p style="text-align: justify; ">3. ವೈಯಕ್ತಿಕವಾದ ಚಳುವಳಿಯಾಗಿರದೇ ಸಾಮೂಹಿಕ ಚಳುವಳಿಯಾಗಿ ಮಾರ್ಪಡಲಿ.</p> <p style="text-align: justify; ">4. ಜನರನ್ನು ಒಟ್ಟುಗೂಡಿಸುವುದಕ್ಕೆ ಸಮಯ ಬೇಕು ಹಾಗೂ ಅದು ಕ್ರಿಯಾಶಕ್ತಿಯಾಗಬೇಕು. ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳಬೇಡಿ.</p> <h3 style="float: left; text-align: justify; ">ಆರೋಗ್ಯ ಕಾರ್ಯಕರ್ತೆ</h3> <p style="text-align: justify; ">ಆರೋಗ್ಯ ಸೌಲಭ್ಯಗಳಿಂದ ವಂಚಿತವಾದ ಹಿಂದುಳಿದ ವರ್ಗದ ಸಮುದಾಯದ ಜನರಿಗೆ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸಿಕೊಡುವಲ್ಲಿ "ಆಶಾ" ಪಾತ್ರ ಪ್ರಮುಖವಾಗಿದೆ. ನಿಮ್ಮ ಪಾತ್ರದ ಕಾರ್ಯವನ್ನು ಚರ್ಚಿಸುವುದಕ್ಕಿಂತ ಮೊದಲು ಒಣದು ಸನ್ನಿವೇಶವನ್ನು ಕಲ್ಪಿಸಿಕೊಳ್ಳೋಣ></p> <p style="text-align: justify; ">ನಿಮ್ಮ ಪಕ್ಕದ ಮನೆಯಲ್ಲಿ ರಾಮಿ ಎನ್ನುವವರು ವಾಸವಿದ್ದಾರೆ. ಆಕೆ 5 ಗಿಂಗಳ ಗರ್ಭಿಣಿಯಾಗದ್ದು ತುಂಬಾ ನಿಶ್ಯಕ್ತಿಯಿಂದ ಹಾಗೂ ಸ್ಥಳೀಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹತ್ತಿರ ನೊಂದಣಿ ಮಾಡಿಸಿಲ್ಲ. ರಾಮಿಗೆ ಆರೋಗ್ಯ ರಕ್ಷಣೆಯ ಸೇವೆಗಳು ದೊರೆಯುತ್ತಿಲ್ಲ. ರಾಂಇಯ ಗಂಡನು ಕುಡುಕನಾಗಿದ್ದು ದಿನಾ ಕುಡಿದು ಬಂದು ರಾಮಿಯ ಜೊತೆ ಜಗಳ ಮಾಡುತ್ತಾನೆ ಹಾಗೂ ಕೆಲವೊಮ್ಮೆ ಹೊಡೆಯುತ್ತಾನೆ.</p> <p style="text-align: justify; ">ನಿಮಗೆ ಇದರಿಂದ ಕಿರಿ ಕಿರಿಯಾಗಿ ಅದನ್ನು ತಡೆಯಬೇಕೆಂಬ ಇಚ್ಛೆ ಉಂಟಾಗುತ್ತದೆ. ಇದನ್ನು ನೀವು ಇನ್ನೊಬ್ಬ ನೆರೆಮನೆಯವರೊಡನೆ ಚರ್ಚಿಸುತ್ತೀರಿ ಅವರಿಗೆ ನಿಮ್ಮ ಉದೀಶ್ಯ ಏನೆಂದು ಅರಿವಾಗುವುದು ಇನ್ನು ಮುಂದೆ ರಾಮಿ ಗಂಡ ಗಲಾಟೆ ಮಾಡಿದರೆ ನೀವೆಲ್ಲಾ ಒಗ್ಗಟ್ಟಾಗಿ ಹೋಗಿ ಅದನ್ನು ತಡೆಯಬೇಕೆಂದು ನಿರ್ಧರಿಸುತ್ತೀರಿ.</p> <p style="text-align: justify; ">ನೀವೆಲ್ಲಾ ಅದನ್ನು ತಡೆಯುವಂತೆ ಸಾಧಿಸುತ್ತೀರಿ. ನೀವು ರಾಮಿಯ ಗಂಡನಿಗೆ ಮತ್ತೆ ಕುಡಿದು ಬಂದು ಜಗಳ ಮಾಡಿದರೆ ಈ ವಿಷಯವನ್ನು ಪೊಲೀಸರಿಗೆ ತಿಳಿಸುತ್ತೇವೆಂದು ತಿಳಿಸಿ.</p> <p style="text-align: justify; ">ಮಾರನೇ ದಿನ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಭೇಟಿ ನೀಡಿದಾಗ ನೀವು ರಾಮಿಯನ್ನು ಜೊತೆಗೆ ಕರೆದುಕೊಂಡು ಹೋಗಿ ಅವರ ಹೆಸರನ್ನು ನೋಂದಾಯಿಸಿ.</p> <p style="text-align: justify; ">ಈ ಸಂದರ್ಭವು ಇಷ್ಟು ಸಲೀಸಾಗಿ ಬಗೆ ಹರಿಸುವುದು ಸಾಧ್ಯವಾಗುವುದಿಲ್ಲ. ಆದರೆ ನೀವು ಪ್ರಯತ್ನ ಪಟ್ಟರೆ ಮಾತ್ರ ಹೇಗೆ ಬಗೆ ಹರಿಯುವುದೆಂದು ತಿಳಿಯುತ್ತದೆ. ನೀವು ಬದಲಾವಣೆಯನ್ನು ತರಲು ಮೊದಲು ಹೆಜ್ಜೆ ಇಡಬೇಕು. ಮೊದಮೊದಲು ಈ ಕರಲಸ ಮಾಸಲು ನೀವೊಬ್ಬರೆ ಇರುತ್ತೀರಿ. ಆದರೆ ಸಮುದಾಯದಲ್ಲಿ ತಿಳಿವಳಿಕೆ ಹೆಚ್ಚಿದಂತೆ ಅಂದರೆ ಒಬ್ಬರಿಂದ ಒಬ್ಬರಿಗೆ ಅಥವಾ ಹಳ್ಳಿಯಲ್ಲಿ ಸಭೆಗಳನ್ನು ನಡೆದಿ ಈ ವಿಷಯವನ್ನು ತಿಳಿಸುವುದರಿಂದ ನಿಮ್ಮ ಉದ್ದೇಶ ಈಡೇರಿಸುವಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ.</p> <p style="text-align: justify; ">ನೀವು ಕ್ರಿಯಾಧೀಲರಾಗಿ ಕೆಲಸ ಮಾಡಲು ಮೇಲಿನದು ಒಂದು ಉದಾಹರಣೆ. ಆಶಾ ಆರೋಗ್ಯ ಕಾರ್ಯ ಕರ್ತೆಯಾದ ನೀವು ಕ್ರಿಯಾಶಕ್ತಿಯಾಗಿ ಪಾತ್ರ ವಹಿಸಬೇಕು. ಆದ್ದರಿಂದ ಇದನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ.</p> <p style="text-align: justify; ">ಕೆಳಗೆ ಕಾಣಿಸಿದ ಉದಾಹರಣೆಗಳಿಂದ ನಿಜ ಜೀವನದಲ್ಲಿ ಕ್ರಿಯಾಶಕ್ತಿಯ ಉಪಯೋಗ ಹೇಗೆ ಆಗುತ್ತದೆ ಎಂದು ತಿಳಿಯಬಹುದು.</p> <h3 style="float: left; text-align: justify; ">ಕೆಲವು ಸಲಹೆಗಳು</h3> <p style="text-align: justify; ">ಸ್ವಯಂ ಬೆಳವಣಿಗೆಯನ್ನು / ಗಮನಿಸಲು / ಉಸ್ತುವಾರಿ ಮಾಡಲು ಕೆಲವು ಸಲಹೆಗಳು</p> <p style="text-align: justify; ">ನೀವು ಪ್ರತಿ ದಿನವೂ ನಿಮ್ಮ ಕೆಲಸವನ್ನು ಮುಗಿಸಿದ ನಂತರ ಅವುಗಳನ್ನು ವಿಮರ್ಶೆ ಮಾಡಿ ನಿಮ್ಮ ಯೋಜನೆಯ ಪ್ರಕಾರ ನಿಮ್ಮ ಸವಯಂ ಬೆಳವಣಿಗೆಗೆ ನಿಮ್ಮ ಪ್ರಯತ್ನ ಏನು ಎನ್ನುವುದನ್ನು ಗಮನಿಸಿ. ನೀವು ಏನು ಸಾಧಿಸಲಾಗದಿದ್ದರೆ ಅದರ ಕಾರಣಗಳೇನು ? ಎನ್ನುವುದನ್ನು ಯಫಚಿಸಿ. ಇಂತಹ ವಿಷಯಗಳು ಪುನರಾವರ್ತನೆಯಾಗದಂತೆ ಭಿನ್ನವಾಗಿ ಯೋಚಿಸಿ.</p> <p style="text-align: justify; ">ನಿಮ್ಮ ದಿನಚರಿಯನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಸ್ವಯಂ ಬೆಳವಣಿಗೆಯಲ್ಲಿ ನೀವು ಮಾಡಿರುವ ಪ್ರಯತ್ನವನ್ನು ಬರೆಯಿರಿ, ನಿಮ್ಮ ಪ್ರಯತ್ನದಲ್ಲಿ ಬಂದ ತೊಂದರೆಗಳನ್ನು ಮತ್ತು ಅವುಗಳನ್ನು ನಿವಾರಿಸಿದ ಬತೆಯನ್ನು ಗುರುತು ಹಾಕಿಕೊಳ್ಳಿ.</p> <p style="text-align: justify; ">ನಿಮ್ಮ ಆತ್ಮೇಯರಲ್ಲಿ ನೀವು ಹಾಕಿಕೊಂಡಿರುವ ಸ್ವಯಂ ಬೆಳವಣಿಗೆಯ ಯೋಜನೆಯನ್ನು ಚರ್ಚಿಸಿ ನಿಮ್ಮ ವ್ಯಕ್ತಿತ್ವದಲ್ಲಿ ಆಗಿರಬಹುದಾದ ಬದಲಾವಣೆಯ ಬಗ್ಗೆ ಅವರಿಂದ ಮಾಹಿತಿ ಪಡೆಯಿರಿ.</p> <p style="text-align: justify; ">ಸೂಚನೆ : ನೀವು ಹಾಕಿಕೊಂಡಿರುವ ಯೋಜನೆಯನ್ನು ಸಾಧಿಸಿದ ನಂತರ ಮತ್ತೊಂದು ಯೋಜನೆಯನ್ನು ಹಾಖಿಕೊಂಡು ಅದನ್ನು ಸಾಧಿಸಲು ಇದೇ ದಾರಿಯಲ್ಲಿ ನಡೆಯಿರಿ.</p> <p style="text-align: justify; "> </p> <p style="text-align: justify; ">ನೀವು ನಿಮ್ಮ ಗುರಿಯನ್ನು ಮುಟ್ಟಲು ಕೆಲವು ಸಲಹೆಗಳು :</p> <p style="text-align: justify; ">ನಿಮ್ಮ ಗುರಿಯ ಬಗ್ಗೆ ಉತ್ಸಾಹವಿರಲಿ. ಉತ್ಸಾಹವು ಗುರಿಯನ್ನು ತಲುಪಲು ಸಹಾಯಕವಾಗುತ್ತದೆ. ನಿಮ್ಮ ಉತ್ಸಾಹವು ನಿಮ್ಮ ಗುರಿಯನ್ನು ತಲುಪಲು ಸಹಾಯಕವಾಗಲು ಏನೇ ಬಂದರೂ ನಿಮ್ಮ ಪ್ರಯತ್ನವನ್ನು ಬಿಡಬೇಡಿ.</p> <p style="text-align: justify; ">ನೀವು ಹಲವಾರು ಅಡ್ಡಿ ಆತಂಕಗಳನ್ನು ಚೀರಿ ಮೇಲೆ ಹೋದಾಗ ಒಂದು ಸುಂದರ ದೃಶ್ಯವನ್ನು ನೋಡಿ ಆನಂದಿಸಬಲ್ಲಿರಿ. ನೀವು ಅಡ್ಡಿ ಏತಂಕಗಳನ್ನು ಎದುರಿಸದಿದ್ದರೆ ನೀವು ಕೆಳಗಡೆ ಉಳಿಯಬೇಕಾಗುತ್ತಿತ್ತು. ಮತ್ತು ಸುಂದರ ದೃಶ್ಯವನ್ನು ನೋಡಲು ವಂಚಿತರಾಗುತ್ತಿದ್ದೀರಿ.</p> <p style="text-align: justify; ">ಅವರನ್ನು ಪ್ರೀತಿಸಿ, ಅವರಿಗೆ ಶ್ರದ್ಧೆ ಮತ್ತು ಗೌರವದಿಂದ ಸೇವೆ ಸಲ್ಲಿಸಿ. ಇವುಗಳಿಲ್ಲದೆ ನಿಮ್ಮ ಸವಯಂ ಬೆಳವಣಿಗೆ ಅಸಾದಯ ಮನೋಸ್ಥೈರ್ಯ, ಉತ್ಸಾಹ ಮತ್ತು ದೃಢ ಸಂಕಲ್ಪದ ಜೊತೆಗೆ ನೀವು ಧಕ್ಷರು ಎನ್ನುವ ಭಾವನೆಯೂ ಮುಖ್ಯ ನೀವು ಅತ್ಯುತ್ತಮ ನೈಪುಣ್ಯತೆಯನ್ನು ಗಳಿಸಿರಿ. ಸಾಧಾರಣ ನೈಪುಣ್ಯತೆ, ಸಾಧಾರಣದೆಡೆಗೆ ನಿಮ್ಮನ್ನು ಕರೆದೊಯ್ಯುತ್ತದೆ. ನೀವು ಅತ್ಯುತ್ತಮ ಗುರಿಯನ್ನು ತಲುಪಬೇಕಾದರೆ ಅತ್ಯುತ್ತಮ ನೈಪುಣ್ಯತೆಯನ್ನು ಹೊಂದಿರಬೇಕು. ನೀವು ದಿನದಿಂದ ದಿನಕ್ಕೆ ತಿಂಗಳಿಂದ ತಿಂಗಳಿಗೆ ನೀವು ಬೆಳೆಯುತ್ತಿರುವುದನ್ನು ಖಚಿತಪಡಿಇಕೊಳ್ಳಿ. ನೀವು ಹೊಸ ಹೊಸ ವಿಚಾರಗಳನ್ನು ಕಲಿಯಬಹುದು. ಶುಣ್ಯದಿಂದ ಆರಂಭವಾದ ಕಲಿಕೆ ನಂತರ ಜ್ಞಾನಬಂಢಾರವಾಗಿ ಬೆಳೆಯಬಲದಲದು.</p> <p style="text-align: justify; ">ಆಶಾಳಾಗಿ ನಿಮ್ಮಿಂದ ಮತ್ತು ಇತರರಿಂದ ಅತ್ಯುತ್ತಮವಾದುದನ್ನು ನಿರೀಕ್ಷಿಸಿ. ಅಸಾಧಾರಣ ವ್ಯಕ್ತಿಗಳು ಅಸಾಧಾರಣವಾದವುಗಳನ್ನು ನಿರೀಕ್ಷಿಸುತ್ತಾರೆ. ಆಶಾಳಾಗಿ ನೀವು ವಿಶೇಷ ಸ್ಥಾನವನ್ನು ಹೊಂದಿರುತ್ತೀರಿ. ನಿಮ್ಮಲ್ಲಿ ಅದ್ಭುತವಾದ ಸಾಮಥ್ರ್ಯ ಮತ್ತು ಕೌಶಲ್ಯವಿದೆ. ಆದುದರಿಂದ, ನಿಮ್ಮನ್ನು ಸಮಾಜ ಸೇವೆ ಮಾಡಲು ಆಯ್ಕೆ ಮಾಡಿದೆ. ನಿಮ್ಮಯ ಸಾಮಥ್ರ್ಯವನ್ನು ಬಳಸಿಕೊಂಡು ನಿಮ್ಮ ಗುರಿಯನ್ನು ತಲುಪಿರಿ. ನೀವು ದೃಢ ನಿರ್ಧಾರವನ್ನು ಮಾಡಬೇಕು. ದೃಢ ನಿರ್ಧಾರದಿಂದ ನಾವು ಏನನ್ನಾದರೂ ಸಾಧಿಸಬಹುದು. ದೃಢ ಸಂಕಲ್ಪದಿಂದ ನಾವು ಬೆಟ್ಟ ಗುಡ್ಡಗಳನ್ನು ಸಹ ಬೇರೆಡೆ ಸಾಗಿಸಬಹುದು.</p> <h3 style="float: left; text-align: justify; ">ಸ್ವಯಂ ಪ್ರೆಶ್ನೆ ಗಳು</h3> <p style="text-align: justify; ">ಈ ಕೆಳಗಿನ ಪ್ರಶ್ನೆಯನ್ನು ಗಮನಿಸಿ. ಇದನ್ನು ಉತ್ತರಿಸುವ ಮೂಲಕ ನಿಮ್ಮತನವನ್ನು ಕಂಡುಹಿಡಿದುಕೊಳ್ಳುವುದು ಅಂದರೆ ನಿರಂತರ ಕ್ರಿಯೆ ಮತ್ತು ಇದನ್ನು ನಿಯೋಜಿತ ರೀತಿಯಲ್ಲಿ ಅಚ್ಚುಕಟ್ಟಾಗಿ ಮಾಡಬೇಕು.</p> <p style="text-align: justify; ">ಈ ಕೆಳಗಿನ ಪ್ರಶ್ನೆಯನ್ನು ಗಮನಿಸಿ. ಇದನ್ನು ಉತ್ತರಿಸುವ ಮೂಲಕ ನಿಮ್ಮತನವನ್ನು ಕಂಡು ಹಿಡಿದುಕೊಳ್ಳಬಹುದು. ಇವುಗಳಿಗೆ ಮತ್ತಷ್ಟು ಪ್ರಶ್ನೆಗಳನ್ನು ಸಹ ಸೇರಿಸಬಹುದು.</p> <p style="text-align: justify; ">ನಾನು ನನ್ನ ಕೆಲಸ ಕಾರ್ಯಗಳನ್ನು ಮಾಡಿ ಪೂರ್ಣಗೊಳಿಸುವಾಗ ನಾನು ಯಾವ ತರಹದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.</p> <p style="text-align: justify; ">ಇಂತಹ ಸಂದರ್ಭಗಳು ಮತ್ತೆ ಮರುಕಳಿಸಿದರೆ ನಾನು ಯಾವ ರೀತೆ ಬದಲಾವಣೆ ತಂದುಕೊಳ್ಳಬೇಕು (ಕೆಲಸದ ರೀತಿಯಲ್ಲಾಗಲೀ ಮತ್ತು ಮನೋಭಾವದಲ್ಲಾಗಲೀ)</p> <p style="text-align: justify; ">ನನಗೆ ಸಂತೋಷ ತಂದ ಕೆಲಸ ಯಾವುದು</p> <p style="text-align: justify; ">ನನಗೆ ಬೇಸರ ತಂದ ಕೆಲಸ ಯಾವುದು - ಜ್ಞಾಪಕವಿರಲಿ</p> <p style="text-align: justify; ">ಪ್ರತಿಯೊಂದು ದಿನವೂ ನನ್ನ ಗುರಿಯನ್ನು ತಲುಪಲು ಸಹಾಯಕವಾಗಬೇಕು. ಪ್ರತಿಯೊಂದು ದಿನದ ಕೆಲಸವೂ ನಿನ್ನ ಮುಂದಿನ ಜೀವನಕ್ಕೆ ಸಂಪರ್ಕ ಸೇತುಬೆಯಾಗಬೇಕು. ಪ್ರತಿಯೊಂದು ದಿನವೂ ನಿನ್ನ ಮತ್ತು ಸಬಲೀಕರಣಕ್ಕೆ ನೇರವಾಗಬೇಕು. ಇದು ಸಮುದಾಯದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗಬೇಕು.</p> <p style="text-align: justify; ">ದಿನದ 24 ಘಂಟೆಯಲ್ಲಿ 7 ಘಂಟೆಯನ್ನು ನಿದ್ದೆಯಲ್ಲಿ ಕಳಡಯುತ್ತೇವೆ. ಉಳಿದ ಘಂಟೆಗಳಲ್ಲಿ ನಾವು ಎಷ್ಟು ಸಮಯವನ್ನು ಸ್ವಂತ ಬೆಳವಣಿಗೆಗೆ ವ್ಯಯಮಾಡುತ್ತೇವೆ. ಆಶಾಳಾಗಿ ನೀನು ಪ್ರತಿಯೊಂದು ಅರ್ಧ ಘಂಟೆ ವೇಳೆಯನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಮೀಸಲಿಡಬೇಕು ಎಂದು ನಾವು ಇಚ್ಛಿಸುತ್ತೇವೆ. ಇದನ್ನು ನೀವು ಕ್ರಮೇಣ ವೃದ್ಧಿಕೊಳಿಸಬಹುದು. ನೀವು ಇಂದಿನಿಂದ ನಿಮ್ಮ ಸ್ವಯಂ ಬೆಳಬಣಿಗೆಯ ಕಾರ್ಯಯೋಜನೆಯನ್ನು ರಚಿಸಿ ಸಾಧಿಸಲು ಕಾರ್ಯೋನ್ಮುಖರಾಗಬೇಕು.</p> <p style="text-align: justify; ">ನೀವು ಇಲ್ಲಿರುವ ಕೆಲವು ಸಾಧನಗಳ ಉಪಯೋಗ ಪಡೆಯಬಹುದು.</p> <p style="text-align: justify; "> </p> <p style="text-align: justify; ">ಸ್ವಯಂ ಬೆಳವಣಿಗೆ ಯೋಜನೆ :</p> <p style="text-align: justify; ">ಹೆಸರು :</p> <p style="text-align: justify; ">ನನ್ನ ಸಾಮಥ್ರ್ಯಗಳು :</p> <p style="text-align: justify; ">ನನ್ನ ದೌರ್ಬಲ್ಯಗಳು :</p> <p style="text-align: justify; ">ನಾನು ಈ ಕೆಳಗಿನ ನೈಪುಣ್ಯತೆ / ಕಾಲಮಿತಿ</p> <p style="text-align: justify; ">ಗುಣಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತೇನೆ</p> <p style="text-align: justify; ">ಆದ್ಯತೆಯ ಮೇಲೆ ಗುರುತು ಹಾಕಿ</p> <p style="text-align: justify; ">1</p> <p style="text-align: justify; ">2</p> <p style="text-align: justify; ">3</p> <p style="text-align: justify; ">ನಾನು ಹೇಗೆ ಉತ್ತಮಗೊಳ್ಳಬಲದಲೆನು ?</p> <p style="text-align: justify; ">ನಾನು ಕ್ರಿಯಾ ಯಫಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಾವ ಯಾವ ತೊಂದರೆಗಳನ್ನು ಎದುರಿಸಬೇಕಾಗಬಹುದು ?</p> <p style="text-align: justify; ">ಅವುಗಳನ್ನು ಹೇಗೆ ಎದುರಿಸಬಲ್ಲೆನು ?</p> <p style="text-align: justify; ">ನನಗೆ ಯಾರ ಬೆಂಬಲ/ನೆರವು ಬೇಕಾಗಬಹುದು.</p> <p style="text-align: justify; ">ನಾನು ನನ್ನ ಬೆಳವಣಿತೆಯ ಯೋಜನೆಯನ್ನು ಹೇಗೆ ಗಮನಿಸಬಲ್ಲೆನು.</p> <h3 style="float: left; text-align: justify; ">ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ</h3> <p style="text-align: justify; ">ಆತ್ಮಾಭಿಮಾನದ ಬಗ್ಗೆ ತಿಳಿಯೋಣ</p> <p style="text-align: justify; ">ಆತ್ಮಾಭಿಮಾನ ಎಂದೆ ನೀನು ನಿನ್ನ ಬಗೆಗಿರುವ ಭಾವನೆ, ನೀನು ನಿನಗೆ ಕೊಡುವ ಬೆಲೆ. ನಿನಗೆ ನೀನು ಎಷ್ಟು ಪ್ರಾಮುಖ್ಯತೆ ಕೊಡುತ್ತೀಯಾ ಎನ್ನುವುದು ನೀನು ಆತ್ಮ ವಿಶ್ವಾಸದಿಂದಿರುವುದು ಮತ್ತು ಸಂತೃಪ್ತಿಯಿಂದ ಇರುವುದು ನಿನ್ನ ಬಗ್ಗೆ ನೀನು ಮಹತ್ವ ಕೊಡುತ್ತೀಯಾ ಎನ್ನುವುದು ನಿನ್ನಲ್ಲಿರುವ ಸಾಮಥ್ರ್ಯದ ಬಗ್ಗೆ ವಿಶ್ವಾಸ, ನಿನ್ನ ಮತ್ತು ನಿನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡುವುದು.</p> <p style="text-align: justify; "> </p> <p style="text-align: justify; ">ಜ್ಞಾಪಕವಿರಲಿ :</p> <p style="text-align: justify; ">ನೀನು ಅತಿ ಅಮೂಲ್ಯ ಎಂದು ಬೇರೊಬ್ಬರಿಗೆ ಮನನ ಮಾಡಿಕೊಡುವುದದಿಲ್ಲ. ಬೇರೋಬ್ಬರು ನಿನ್ನನ್ನು ಹೊಗಳಿದಾಗ ಹೆಮ್ಮೆ ಪಡುವುದಿಲ್ಲ. ಅತಿ ಸುಂದರವಾಗಿ ಕಾಣಿಸುವುದಲ್ಲ. ಆರೋಗ್ಯಕರವಾದ ಆತ್ಮಾಭಿಮಾನ ಹೊಂದಿರುವ ಲಕ್ಷಣಗಳನ್ನು ಗಮನಿಸೊಣ.</p> <p style="text-align: justify; ">ಆತ್ಮವಿಶ್ವಾಸ :</p> <p style="text-align: justify; ">ತಮ್ಮ ನೈಜವಾದ ಭಾವನೆಯನ್ನು ವ್ಯಕ್ತಪಡಿಸುವುದು</p> <p style="text-align: justify; ">ತನ್ನ ಸಾಧನೆಯ ಬಗ್ಗೆ ಹೆಮ್ಮೆ ಮತ್ತು ಮಾನ್ಯತೆ ಮಾಡುವ ಸಾಮಥ್ರ್ಯ</p> <p style="text-align: justify; ">ತನ್ನನ್ನು ಮತ್ತು ಇತರರನ್ನು ಕ್ಷಮಿಸುವ ಶಕ್ತಿ</p> <p style="text-align: justify; ">ಪರಿವರ್ತನೆಯನ್ನು ಸ್ವಾಗತಿಸುವ ಸಾಮಥ್ರ್ಯ</p> <p style="text-align: justify; ">ನೀನು ನಿನ್ನನ್ನು ರಕ್ಷಿಸಿಕೊಳ್ಳದಿದ್ದರೆ, ನಿನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದಿದ್ದರೆ ನಿನ್ನನ್ನು ನೀನು ಗೌರವಿಸಿಕೊಳ್ಳಲಾಗದಿದ್ದರೆ ನೀನು ಬೇರೊಬ್ಬರನ್ನು ರಕ್ಷಿಸಲಾರೆ ಮತ್ತು ಗೌರವಿಸಲಾರೆ ಮತ್ತು ಅವರ ಅವಶ್ಯಕತೆಗಳನ್ನು ಪೂರಡಸಲಾರೆ.</p> <p style="text-align: justify; ">ನಿನ್ನನ್ನು ನೀನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದಿಡು. ನೀನು ನಿನ್ನನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯ ಅವಶ್ಯಕವಾಗಿದೆ. ಇದು ನಿಮ್ಮ ಆತ್ಮಾಭಿಮಾನವನ್ನು ಹೆಚ್ಚಿಸುತ್ತದೆ.</p> <p style="text-align: justify; ">ನೀವು ನಿರ್ವಹಿಸುವ ಪ್ರತಿಯೊಂದು ಕೆಲಸಕಾರ್ಯಗಳ ಬಗ್ಗೆ ದಿನದರಿಯಲ್ಲಿ ಬರೆಯಿರಿ. ತನ್ನನ್ನು ತಾನು ಅರಿತುಕೊಳ್ಳುವುದು ಅಂದರೆ ನಿರಂತರ ಕ್ರಿಯೆ ಮತ್ತು ಇದನ್ನು ನಿಯೋಜಿತ ರೀತಿಯಲ್ಲಿ ಅದ್ದುಕಟ್ಟಾಗಿ ಮಾಡಬೇಕು.</p> <h3 style="float: left; text-align: justify; ">ನನ್ನ ಬಗ್ಗೆ ತಿಳಿದುಕೊಳ್ಳುವುದು</h3> <p style="text-align: justify; ">ನನ್ನ ಬಗ್ಗೆ ತಿಳಿದುಕೊಳ್ಳುವುದು ಎಂದರೆ ನನ್ನ ದೌರ್ಬಲ್ಯ, ಸಾಮಥ್ರ್ಯ ಮತ್ತು ನಡಳಿಕೆಗಳನ್ನು ತಿಳಿದುಕೊಳ್ಳುವುದು ಮತ್ತು ನಾವು ಬೆಳೆಯಬಹುದಾದ ವಿಭಾಗಗಳ ಬಗ್ಗೆ ಅರಿತುಕೊಳ್ಳುವುದೇ ಆಗಿದೆ. ನಾವು ನಮ್ಮ ಬಗ್ಗೆ ತಿಳಿದುಕೊಳ್ಳುವುದು ನಿರಂತರ ಕ್ರಿಯೆ, ಕಾಲ Áಲಕ್ಕೆ ನಮ್ಮ ಸಾಮಥ್ರ್ಯದ ಮತ್ತು ದೌರ್ಬಲ್ಯವನ್ನು ವಿಮರ್ಶೆ ಮಾಡುವುದರ ಮೂಲಕ ನಾವು ಬದಲಾಗಬಹುದು. ನಾವು ನಿರಂತರವಾಗಿ ಬೆಳೆಯಬೇಕು, ಬೆಳೆಯುವುದರ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸಬಹುದು. ನಾವು ಸಮುದಾಯವನ್ನು ಸಬಲೀಕರಣಗೊಳಿಸುವ ಮೊದಲು ನಾವು ಸಬಲರೇ ? ಎನ್ನುವುದನ್ನು ಅರಿಯುವದುದು ಸೂಕ್ತ.</p> <p style="text-align: justify; ">ದೇಹ, ಮನಸ್ಸು ಮತ್ತು ಆತ್ಮವುಳ್ಳ ನಾವು ಪ್ರಕೃತಿಯ ವಿಶೇಷ ಸೃಷ್ಟಿ. ಎಲ್ಲಾ ಮನುಷ್ಯರು ತಮ್ಮದೇ ಆದ ವ್ಯಕ್ತಿತ್ವ ಹಾಗೂ ಗುಣಗಳನ್ನು ಹೊಂದಿರುತ್ತಾರೆ. ಪರಿಸರವು ಮಾನವನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ</p> <p style="text-align: justify; ">ಮಹಿಳೆಯರಾಗಿ ನಾವು ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಇನ್ನೊಬ್ಬರ ಅಧೀನದಲ್ಲಿದ್ದು ಅವರು ಹೇಳೊದ ಹಾಗೆ ಕೇಳಿಕೊಂಡು ಬದುಕಲು ಉಪದೇಶಿಸಲ್ಪಟ್ಟಿದ್ದೇವೆ. ಇಂತಹ ಮನೋಭಾವವನ್ನು ಪ್ರಶ್ನಿಸುವಂತಿಲ್ಲ. ನಾವು ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಸಮಾನತೆ ಪ್ರಶ್ನಿಸುವಂತಹ ಮನೋಭಾವವನ್ನು ಬೆಳೆಸಿಕೊಂಡಿರುವುದಿಲ್ಲ. ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸಿದೆ ಎಲ್ಲವನ್ನು ಒಪ್ಪಿಕೊಳ್ಳುತ್ತೇವೆ. ಇಂತಹ ಅಸಮಾನತೆಯನ್ನು ಅಥವಾ ಎಲ್ಲಾ ವಿಚಾರಗಳನ್ನು ಪ್ರಶ್ನೆ ಮಾಡುವ ಮಹಿಳೆಯನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ.</p> <p style="text-align: justify; ">ಇಂತಹ ಮನೋಭಾವವು ನಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೋಡೋಣ.</p> <p style="text-align: justify; ">ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಅವರು ವಹಿಸುವ ಪಾತ್ರದ ಮೇಲೆ ಅವರನ್ನು ಗುರುತಿಸುತ್ತಾರೆ. ಮಗಳು, ಹೆಂಡತಿ, ತಾಯಿಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಬೆಳೆದ ಹೆಣ್ಣು ಮಗಳು ಇಂತಹ ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ತನ್ನಲ್ಲಿ ಕೀಳರಿಮೆಯನ್ನು ಬೆಳೆಸಿಕೊಂಡು vನು ನಿಷ್ಪ್ರಯೋಜಕಳೆನ್ನುವ ಭವನೆ ಬೆಳೆಸಿಕೊಂಡು ತನ್ನ ಎಲ್ಲಾ ಕೋರಿಕೆಗಳಿಗೆ ತಾನು ಗಮನಕೊಡುವುದಿಲ್ಲ ಇವುಗಳೆಲ್ಲವೂ ಅವಳ ವ್ಯಕ್ತಿತ್ವದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅವಳತನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.</p> <p style="text-align: justify; ">ನೀವು ಹೆಣ್ಣಾದುದರಿಂದ ನಿಮಗೆ ಯಾವಾಗಲೂ ವಿನಯಶೀಲರಂತೆ ನಡೆಯುವುದು ನಿಮಗೆ ಅಭ್ಯಾಸವಾಗಿರಬಹುದು. ನಿಮ್ಮ ಆಶೋತ್ತರಗಳಿಗಿಂತಲೂ ಇತರರ ಬೇಕು ಬೇಡಗಳನ್ನು ಪೂರೈಸುವುದೇ ನಿಮ್ಮ ಧ್ಯೇಯವಾಗಿರಬಹುದು. ಬೇರೊಬ್ಬರು ಹೇಳುವ ಎಲ್ಲಾ ಕೆಲಸಗಳಿಗೆ ಹೌದು ಎನ್ನುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಎಲ್ಲರನ್ನು ಸಂತೋಷಗೊಳಿಸುವುದು ಪ್ರತಿಯೊಂದಕ್ಕೂ ಇನ್ನೊಬ್ಬರ ಅಪ್ಪಣೆಯನ್ನು ಪಡೆದು ಕಾರ್ಯ ನಿರ್ವಹಿಸುವ ಸಂದರ್ಭಗಳು ಜೀವನವನ್ನು ಅನುಭವಿಸಿರಬಹುದು.</p> <p style="text-align: justify; ">ಇಂತಹ ಪದ್ಧತಿಯನ್ನು ತೊಡೆದುಹಾಕುವುದು ಸುಲಭವಲ್ಲ. ಆದರೆ ನೀವು ಆಶಾ ಕಾರ್ಯಕರ್ತಳಾಗಿ ನಿಜ ಜೀವನ ಪ್ರಾರಂಭಿಸಿರುತ್ತೀರಿ. ಆದುದರಿಂದ ನೀವು ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಂಡು ಪೂರೈಸಲು ಸಾಧ್ಯ.</p> <p style="text-align: justify; "><i><strong>ಮೂಲ: </strong></i>ಆಶಾ ಕೈಪಿಡಿ</p> </div>