ಯಾವುದೆ ವಸ್ತು ಅಥವ ಅನಿಲವು ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿ ಸೇರಿದಾಗ ಅದರಿಂದ ಹಾನಿ ಅಥವಾ ಜೀವ ನಷ್ಟವಾದರೆ ಅವುಗಳನ್ನು ವಿಷಗಳು ಎನ್ನುವರು. ಅವು ದೇಹವನ್ನು ಮೂರು ವಿಧಾನ ದಲ್ಲಿ ಸೇರಬಹುದು:
- ಶ್ವಾಸಕೋಶಗಳ ಮೂಲಕ
- ಚರ್ಮದ ಮೂಲಕ
- ಬಾಯಿಯ ಮೂಲಕ
ಶ್ವಾಸಕೋಶಗಳ ಮೂಲಕ
ಶ್ವಾಸಕೋಶಗಳ ಮೂಲಕ ವಿಷಸೇರುವುದನ್ನು ಉಸಿರಾಟದ ಅಡಿಯಲ್ಲಿ ಪರಿಶೀಲಿಸಬಹುದು. ಇಲ್ಲಿ ನಾವು ಚರ್ಮದ ಮತ್ತು ಬಾಯಿಯಮೂಲಕ ದೇಹವನ್ನು ಸೇರುವ ವಿಷದ ಬಗ್ಗೆ ಮಾತ್ರ ಪರಿಶೀಲಿಸೋಣ. ಆಕಸ್ಮಿಕವಾಗಿ ಅಥವ ಉದ್ದೇಶ ಪೂರ್ವಕವಾಗಿ ಆಗುವ ವಿಷಸೇವನೆಯು , ಕೆಲವು ಕೃಷಿ ಮತ್ತು ತೋಟಗಾರಿಕೆ ಕೀಟನಾಶಕಗಳೀಂದಲೇ ಅಗಿರುತ್ತವೆ. ಆ ಸಂದರ್ಭದಲ್ಲಿ ನೀಡಬೇಕಾದ ಚಿಕಿತ್ಸೆಯನ್ನು ಸೇರಿಸಲಾಗಿದೆ. ಬಹುತೇಕ ವಿಷಪ್ರಾಶನವು ಆಕಸ್ಮಿಕವಾಗಿರುತ್ತವೆ. ಈ ರೀತಿಯ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ತೆಗೆದು ಕೊಳ್ಳುವುದು ಬಹು ಮುಖ್ಯ.
ಇವುಗಳನ್ನು ಮಾಡಲೇಬೇಡಿ
- ಎಂದೂ ಮಾತ್ರೆಗಳನ್ನು ಮತ್ತು ಔಷಧಿಗಳನ್ನು ಮಕ್ಕಳಿಗೆ ಸಿಗುವಂತೆ ಇಡಬೇಡಿ. ಅವುಗಳನ್ನು ಬೀಗ ಹಾಕಿದ ಕ್ಯಾಬಿನೆಟ್ ನಲ್ಲಿ ಮಕ್ಕಳ ಕೈಗೆ ಎಟುಕದಂತೆ ಇರಿಸಿ.( ವಾರ್ಡರೋಬ್ ನ ಮೇಲಿನ ಖಾನೆಯಲ್ಲಿ)
- ಯಾವತ್ತೂ ಮಾತ್ರೆಗಳನ್ನು ಅಥವ ಔಷಧಿಗಳನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಬೇಡಿ . ಅದರಿಂದ ಅವು ಹಾಳಾಗುತ್ತವೆ. ಚಿಕೆತ್ಸೆ ಮುಗಿದ ಮೇಲೂ ಹೆಚ್ಚಿದ್ದ ಔಷಧಿಯನ್ನು ಪೂರೈಕೆದಾರರಿಗೆ ಅಥವಾ ವೈದ್ಯರಿಗೆ ಹಿಂದಿರುಗಿಸಿ. ಇಲ್ಲವಾದರೆ ಕಕ್ಕಸಿನಲ್ಲಿ ಹಾಕಿ ಫ್ಲಷ್ ಮಾಡಿ.
- ಕತ್ತಲಲ್ಲಿ ಔಷಧ ತೆಗೆದು ಕೊಳ್ಳಬೇಡಿ. ಔಷಧ ತೆಗೆದು ಕೊಳ್ಳುವಾಗ ಇಲ್ಲವೆ ಕೊಡುವಾಗ ತಪ್ಪದೆ ಲೇಬಲ್ ಮೇಲಿನ ಸೂಚನೆ ನೋಡಿ.
- ಕತ್ತಲಲ್ಲಿ ಔಷಧ ತೆಗೆದು ಕೊಳ್ಳಬೇಡಿ. ಔಷಧ ತೆಗೆದು ಕೊಳ್ಳುವಾಗ ಇಲ್ಲವೆ ಕೊಡುವಾಗ ತಪ್ಪದೆ ಲೇಬಲ್ ಮೇಲಿನ ಸೂಚನೆ ನೋಡಿ.
- ಅಪಾಯಕಾರಿ ದ್ರವಗಳನ್ನು ತಂಪು ಪಾನೀಯದ ಬಾಟಲಿಯಲ್ಲಿ ಹಾಕಬೇಡಿ. ಮಕ್ಕಳು ಬಾಟಲಿ ನೋಡಿ ಪಾನೀಯ ಎಂದು ಭಾವಿಸಿ ಕುಡಿಯಬಹುದು.
- ಮನೆ ಶುಚಿಮಾಡುವ ದ್ರವ ಮತ್ತು ಡಿಟರ್ಜೆಂಟ್ ಗಳನ್ನು ಮಕ್ಕಳಿಗೆ ಸಿಗುವಹಾಗೆ ಇಡಬೇಡಿ (ಅಂದ ಹಾಗೆ ಬ್ಲೀಚಿಂಗ ಪೌಡರ್ ಮತ್ತು ಟಾಯಿಲೆಟ್ ಕ್ಲೀನರ್ ಗಳನ್ನು ಸೇರಿಸಿ ಬಳಸಬೇಡಿ . ಅವು ವಿಷಾನಿಲವನ್ನು ಹೊರ ಸೂಸಬಹುದು)
- ಬಾಧಿತನಿಗೆ ಹೆಚ್ಚು ನೀರು ಕೊಡಬೇಡಿ ಅವನು ವಾಂತಿ ಮಾಡಬಾರದು
- ಬಾಧಿತನಿಗೆ ಬಾಯಿ ಮೂಲಕ ಏನ್ನನು ನೀಡದಿರಿ (ಬಾಯಿ ಸುಟ್ಟು ಹೋದಲ್ಲಿ ಮತ್ತು ಬಾಧಿತನು ಪ್ರಜ್ಞವಂತನಾಗಿದ್ದಲ್ಲಿ)
- ಅವನು ಪ್ರಜ್ಞಾಹೀನನಾಗಿದ್ದರೆ ಬಲವಂತವಾಗಿ ಆಹಾರ ನೀಡಬೇಡಿ
- ಬಾಧಿತನು ಪೆಟ್ರೋಲಿಯಂ ಉತ್ಪನ್ನ ಸೆವಿಸಿದ್ದರೆ, ವಾಂತಿ ಮಾಡಿಕೊಳ್ಳಲು ಕಾಯುವ ಅಗತ್ಯವಿಲ್ಲ. ಅವನನ್ನು ಸುಧಾರಿತ ಭಂಗಿಯಲ್ಲಿ ಕೂಡಿಸಿ. ತಲೆಯು ಹೃದಯಕ್ಕಿಂತ ಕೆಳ ಮಟ್ಟದಲ್ಲಿ ಇರಲಿ
ಸಾಮಾನ್ಯ ವಿಷಗಳು
ದೈನಂದಿನ ಜೀವನದಲ್ಲಿ ನಾವು ಕಾಣುವ ಸಾಮಾನ್ಯ ವಿಷಕಾರಿ ವಸ್ತುಗಳು ಹೀಗಿವೆ:
- ಬೆರ್ರೀಗಳು ಮತ್ತು ಬೀಜಗಳು
- ಫಂಗೈಗಳು
- ಹಳಸಿದ ಆಹಾರ
- ಪ್ರಬಲ ರಸಾಯನಿಕಗಳು : ಪ್ಯಾರಾಫಿನ್, ಪೆಟ್ರೋಲ್ ಬ್ಲೀಚುಗಳು, ಕೀಟ ನಾಶಕಗಳು, ರಸಾಯನಿಕ ಗೊಬ್ಬರಗಳು
- ಔಷಧಗಳು: ಆಸ್ಪಿರಿನ್, ನಿದ್ರಾಮಾತ್ರೆಗಳು, ಕಬ್ಬಿಣಾಂಶದ ಮಾತ್ರೆಗಳು, ಶಮನಕಾರಿಗಳು
- ಪ್ರಾಣಿಗಳ ನಾಶಕ್ಕೆ ಬಳಸುಯವ ಇಲಿಪಷಾಣ
- ಮದ್ಯ
- ಹಸಿರು ಆಲೂ ಗಡ್ಡೆ. ( ಇದು ವಾಂತಿ ,ವಿರೇಚನ, ಸುಸ್ತು ಉಂಟು ಮಾಡುವುದು)
ಸಾಮಾನ್ಯ ಚಿಕಿತ್ಸೆ
ಬಾಧಿತ ಎಚ್ಚರವಿರಬಹುದು ಇಲ್ಲವೆ ಪ್ರಜ್ಞೆ ತಪ್ಪಿರಬಹುದು ಅವನಿಗೆ ಎಚ್ಚರವಿದ್ದರೆ ನಿಮ್ಮಕೆಲಸ ತುಸು ಹಗುರ.
- ಬಾಧಿತನಿಗೆ ಎಚ್ಚರವಿದ್ದರೆ ಏನು ನುಂಗಿದ , ಎಷ್ಟು ನುಂಗಿದ , ಯಾವಾಗ ನುಂಗಿದ ಎಂಬುದನ್ನು ಅವನಿಂದ ಕೇಳಿ ತಿಳಿಯಿರಿ.
- ಅವನ ಹತ್ತಿರದಲ್ಲಿರುವ ಖಾಲಿ ಶೀಸೆ, ಡಬ್ಬಿ, ಇದ್ದರೆ ಅವುಗಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಡಿ. ಅದು ಸೇವಿಸಿದ ವಿಷ ಯಾವುದು ಎಂದು ಪತ್ತೆ ಹಚ್ಚಲು ಸಹಾಯ ಮಾಡುವುದು.
- ಬಾಧಿತನ ಬಾಯಿಯನ್ನು ಗಮನಿಸಿ. ಸುಟ್ಟ ಗಾಯವಿದ್ದರೆ ಅವನು ಕುಡಿದಷ್ಟು ಹಾಲು ನೀರು ಕೊಡಿ
- ಅವನು ವಾಂತಿ ಮಾಡಿದರೆ ಅದನ್ನು ಪಾತ್ರೆಯಲ್ಲಿ ಇಲ್ಲವೆ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ. ಆಸ್ಪತ್ರೆಯಲ್ಲಿ ಏನು ಕುಡಿದ ಎಂದು ಪತ್ತೆ ಮಾಡಬಹುದು.
- ಬಾಧಿತನು ಎಚ್ಚರ ತಪ್ಪಿದ್ದರೆ ತಕ್ಷಣ ಆಸ್ಪತ್ರೆಗೆ ಸೇರಿಸಿ
- ಮೊದಲು ಅವನ ಉಸಿರಾಟವನ್ನು ಗಮನಿಸಿ. ಹೃದಯ ಬಡಿತ ನಿಂತಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ
- ಅವನು ಉಸಿರಾಡುತ್ತಿದ್ದರೆ ಸುಧಾರಿಸುವ ಭಂಗಿಯಲ್ಲಿ ಮಲಗಿಸಿ.ಅವನ ತಲೆ ತುಸು ಕೆಳಗಿರಲಿ (ಮಗುವಾಗಿದ್ದರೆ ನಿಮ್ಮ ಮೊಣಕಾಲ ಮೇಲೆ ಹಗುರವಾಗಿ ತಲೆ ಕೆಳಗಾಗಿ ಮಲಗಿಸಿ ಕೊಂಡು) ಆಸ್ಪತ್ರೆಗೆ ಕರೆದು ಕೊಂಡು ಹೋಗಿ
- ಬಾಧಿತನ ಉಸಿರಾಟವನ್ನು ಗಮನಿಸುತ್ತಿರಿ. ಅನೇಕ ವಿಷಗಳು ಉಸಿರಾಟವನ್ನು ನಿಲ್ಲಿಸುತ್ತವೆ
- ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ
- ಅವನ ದೇಹವನ್ನು ತಂಪಾಗಿ ಇಡಿ. ಹಣೆ, ಬೆನ್ನು ಹುರಿ, ಕತ್ತು, ದೇಹವನ್ನು ತಣ್ಣೀರು ಬಟ್ಟೆ ಯಿಂದ ಒರಸಿ
- ಅವನಿಗೆ ಹೆಚ್ಚು ತಂಪು ಪಾನೀಯ ಕುಡಿಯಲು ಉತ್ತೇಜಿಸಿ
- ಸೆಳೆತ ಮತ್ತು ಅಪಸ್ಮಾರದ ಲಕ್ಷಣ ಗಮನಿಸಿ
- ಅವನು ಎಚ್ಚರ ತಪ್ಪಿದರೆ ಸುಧಾರಿತ ಭಂಗಿಯಲ್ಲಿ ಕೂಡಿಸಿ.
- ವಿಷದ ಪಾತ್ರೆಯನ್ನು , ಬಾಟಲಿಯನ್ನು ಜೊತೆಯಲ್ಲಿ ಕೊಂಡು ಹೋಗಿ. ವೈದ್ಯರು ಅದನ್ನು ನೋಡಿದರೆ ಚಕಿತ್ಸೆ ನೀಡಲು ಅದು ಸಹಾಯಕವಾಗುವುದು.
ಚರ್ಮದ ಮೂಲಕ ವಿಷ
ಇತ್ತೀಚಿನ ದಿನಗಳಲ್ಲಿ ಅನೇಕ ಕೀಟನಾಶಕಗಳ, ವಿಶೇಷವಾಗಿ ನರ್ಸರಿಗಳಲ್ಲಿನ ಕೃಷಿಕರು ಮತ್ತು ಕೆಲಸ ಗಾರರು ಬಳಸುವ ರಸಾಯನಿಕಗಳ( ಮೆಲಾಥೀನ್), ಸಂಪರ್ಕಕ್ಕೆ ಚರ್ಮ ಬಂದರೆ , ಅದು ದೇಹದಲ್ಲಿ ಪ್ರವೇಶಿಸಿ ಅಪಾಯ ಉಂಟು ಮಾಡುವುದು.
ಸುಳಿವುಗಳು
- ಕೀಟನಾಶಕದ ಅಥವ ಕಲಬೆರಕೆಯ ನೇರ ಸಂಪರ್ಕ
- ಚಳಿ ,ಕೈಕಾಲುನಡುಕ , ಅಪಸ್ಮಾರ
- ಬಾಧಿತನು ಕ್ರಮೇಣ ಪ್ರಜ್ಞಾಹೀನನಾಗುವನು
ಆರೈಕೆ
- ಕಲುಷಿತವಾದ ಜಾಗವನ್ನು ತಣ್ಣೀರಿನಿಂದ ತೊಳೆಯಿರಿ
- ಕಲುಷಿತವಾದ ಉಡುಪನ್ನು, ರಸಾಯನಿಕವು ನಿಮಗೆ ತಗುಲದಂತೆ ಎಚ್ಚರಿಕೆಯಿಂದ ತೆಗೆಯಿರಿ
- ಅವನಲ್ಲಿ ಭರವಸೆ ಮೂಡಿಸಿ. ಕೆಳಗೆ ಮಲಗಿಸಿ. ಅಲುಗಾಡದಂತೆ ಸುಮ್ಮನೆ ಇರಲಿ
- ಆಸ್ಪತ್ರೆಗೆ ಆದಷ್ಟು ಬೇಗ ಸಾಗಿಸಲು ವ್ಯವಸ್ಥೆಮಾಡಿ
- ಅವನನ್ನು ತಂಪಾಗಿ ಇಡಿ. ಹಣೆಯ ಮೇಲೆ ತಂಪಿನ ಚೀಲ ಇಡಿ, ಕತ್ತಿನ ಹಿಂಭಾಗ ಬೆನ್ನು ಮೂಳೆಗೆ ಒದ್ದೆ ಬಟ್ಟೆಯಿಂದ ಒರಸಿ.
- ಹೆಚ್ಚು ಹೆಚ್ಚು ತಂಪಾದ ಪಾನಿಯ ಕುಡಿಯಲು ಉತ್ತೇಜಿಸಿ
- ಕೈಕಾಲು ನಡುಕ, ಅಪಸ್ಮಾರದ ಬರುವಿಕೆಯನ್ನು ಗಮನಿಸಿ
- ಅವನು ಎಚ್ಚರ ತಪ್ಪಿದರೆ ಸುಧಾರಿತ ಭಂಗಿಯಲ್ಲಿ ಕೂಡಿಸಿ.
- ವಿಷದ ಪಾತ್ರೆ, ಬಾಟಲಿಯನ್ನು ಜೊತೆಯಲ್ಲಿ ಕೊಂಡು ಹೋಗಿ. ವೈದ್ಯರು ಅದನ್ನು ನೋಡಿದರೆ, ಚಕಿತ್ಸೆ ನೀಡಲು ಅದು ಸಹಕಾರಿಯಾಗುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/23/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.