ತಂಬಾಕಿಗೆ ಸಂಬಂಧಿಸಿದ ಕೆಲವು ಸತ್ಯಗಳು
ಬೇರೆಯವರು ಸೇದಿ ಬಿಟ್ಟ ಸಿಗರೇಟು ಅಥವಾ ಬೀಡಿಯ ಹೊಗೆಯನ್ನು ಸೇವಿಸುವವರಿಗೂ ಮೊದಲು ಸೇದಿದವರಿಗೆ ಇರುವ ಅಪಾಯಗಳೇ ಇವೆ ಇದರಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ರೋಗಗಳು ಹಾಗೂ ಅಕಾಲಿಕ ಮರಣಗಳು ಸಂಭವಿಸುತ್ತವೆ.
ತಂಬಾಕು ಸೇವನೆಯಿಂದ ದೇಹದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀಋತ್ತದಾದರೂ ಪ್ರಮುಖವಾಗಿ ಹೃದಯ ಸಂಬಂಧಿ, ಶ್ವಾಸಕೋಶ ತೊಂದರೆ ಹಾಗೂ ಕ್ಯಾನ್ಸರ್ ಕಾಯಿಲೆಗಳು ಕಾಡುತ್ತದೆ. ಬಹಳ ಹಿಂದೆಯೇ ಅಂದರೆ 1999ರಲ್ಲಿ ರಥ್ ಮತ್ತು ಚೌದರಿ ಅವರು ನಡೆಸಿದ ಐ.ಸಿ.ಎಂ.ಆರ್. ಅಧ್ಯನದಲ್ಲಿ ಈ ಮೂರು ಕಾಯಿಲೆಗಳ ಚಿಕಿತ್ಸೆಗಳಿಗೆ ಅನುಕ್ರಮವಾಗಿ 3,50,000. 29,000 ಹಾಗೂ 23,300 ರೂಪಾಯಿ ವೆಚ್ಚವಾಗುತ್ತದೆ. ಎಂದು ತಿಳಿಸಿರುತ್ತಾರೆ. ಇದು ದೇಶದ ದೃಷ್ಟಿಯಿಂದ ತೀವ್ರ ಆತಂಕಕಾರಿ ಕಾರಣ ಭಾರತದಲ್ಲಿ ಶೇಕಡ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ದೇಶದ ಪ್ರತಿಶತ 75ರಷ್ಟು ಜನತೆಗೆ ಪ್ರತಿ ದಿನ 100 ರೂಪಾಯಿ ಖರೀದಿ ಮಾಡುವ ಸಾಮರ್ಥ್ಯವೂ ಇಲ್ಲ ವಸ್ತುಸ್ಥಿತಿ ಹೀಗಿರುವಾಗ ಜನರು ಏಕೆ ಇಂಥ ಅನಗತ್ಯ ವೆಚ್ಚ ಭರಿಸಬೇಕು. ಶ್ರೀಸಾಮಾನ್ಯ ಏಕೆ ಸಂಕಷ್ಟಕ್ಕೆ ಒಳಗಾಗಬೇಕು. ಒಬ್ಬ ವೈದ್ಯನಾಗಿ ನಾನು ಗಮನಿಸಿದಂತೆ ಇದು ಕೇವಲ ಚಿಕಿತ್ಸೆಗೆ ಒಳಪಡುವ ರೋಗಿಯ ಮೇಲೆ ಪರಿಣಾಮ ಬೀರುವುದಿಲ್ಲ.ಬದಲಾಗಿ ಅವನ ಇಡಿ ಕುಟುಂಬದ ಅರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. .
ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೊನೆಯ ಮಾರ್ಪಾಟು : 2/17/2020