অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನುದಾನ ಬಿಡುಗಡೆ

ಅನುದಾನ ಬಿಡುಗಡೆ

ಯೋಜನಾ ಅನುಷ್ಠಾನ ಸಂಸ್ಥೆಗಳು ನೀಡುವ ವೃತ್ತಿ ತರಬೇತಿಗಳಿಗೆ ಫಲಾನುಭವಿಗಳ ಆಯ್ಕೆಯ ನಂತರ, ಅನುಷ್ಠಾನ ಸಂಸ್ಥೆಗಳು ಹೊಂದಿರುವ ತರಬೇತಿ ಸಂಸ್ಥೆಗಳ ಸಾಮಥ್ರ್ಯದ ಆಧಾರದ ಮೇಲೆ ನಿಗದಿಪಡಿಸುವ ಅರ್ಧ ವಾರ್ಷಿಕ ಗುರಿಯ ಶೇ.25 ರಷ್ಟು  ಅವಶ್ಯಕವಿರುವ ಅನುದಾನವನ್ನು ಬ್ಯಾಂಕ್ ಗ್ಯಾರೆಂಟಿ ಆಧಾರದ ಮೇಲೆ ಮುಂಗಡವಾಗಿ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಯೋಜನಾ ಅನುಷ್ಠಾನ ಸಂಸ್ಥೆಗಳು ಕಡಿಮೆ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡಿದ್ದಲ್ಲಿ ಅದಕ್ಕನುಗುಣವಾಗಿ ಮುಂಗಡ ಅನುದಾನವನ್ನು ಬಿಡುಗಡೆ ಮಾಡಲಾಗುವುದು.

 

ಯೋಜನಾ ಅನುಷ್ಠಾನ ಸಂಸ್ಥೆಗಳು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಖ್ಯೆಯ ಆಧಾರದ ಮೇಲೆ ಕಂತುಗಳಲ್ಲಿ ನಿಯಮಾನುಸಾರ ಮುಂದಿನ ಅನುದಾನ ಬಿಡುಗಡೆ ಮಾಡಲಾಗುವುದು.

ಫಲಾನುಭವಿಗಳ ಆಯ್ಕೆಯ ವಿಧಾನ

•             ಯೋಜನೆಯ ಬಗ್ಗೆ ವೃತ್ತ ಪತ್ರಿಕೆ ಹಾಗೂ ವಿದ್ಯುನ್ಮಾನ್ಯ ಮಾಧ್ಯಮಗಳ ಮೂಲಕ ಪ್ರಚಾರ ನೀಡುವುದು.

•             ಪ್ರತಿ ಗ್ರಾಮ ಪಂಚಾಯತಿಗೆ 40 ಯುವಜನರಂತೆ 18 ರಿಂದ 35 ವರ್ಷ ವಯೋಮಾನದ 1 ಲಕ್ಷ ನಿರುದ್ಯೋಗ ಯುವಜನರನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವುದು.

•             ಅಭ್ಯರ್ಥಿಗಳ ಆಯ್ಕೆಯಲ್ಲಿ ಸರ್ಕಾರದ ಮೀಸಲಾತಿ ನಿಯಮಾವಳಿಗಳಂತೆ ಕನಿಷ್ಠ ಶೇ.20 ರಷ್ಟು ಪರಿಶಿಷ್ಠ ಜಾತಿ ಹಾಗೂ ಶೇ.9 ರಷ್ಟು ಪರಿಶಿಷ್ಠ ಪಂಗಡದ ಯುವಜನರನ್ನು ಆಯ್ಕೆ ಮಾಡಿಕೊಳ್ಳಬೇಕು.  (ಜಾತಿ ಪ್ರಮಾಣ ಪತ್ರ ಒದಗಿಸುವುದು).

•             ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು.  (ಸೂಕ್ತ ದಾಖಲೆಗಳನ್ನು ಒದಗಿಸುವುದು).

•             ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಸಭೆ ನಡೆಸಲು ವ್ಯವಸ್ಥೆ ಮಾಡುವುದು.

•             ಗ್ರಾಮಸಭೆಗಳ ಮೂಲಕ ಆಯ್ಕೆಯಾದ 40 ಯುವಜನರ ಪೈಕಿ ವೃತ್ತಿ ತರಬೇತಿಯೊಂದಿಗೆ ಉದ್ಯೋಗ ಮಾಡಬಯಸುವ ಯುವಜನರ ಆಯ್ಕೆ ಮಾಡುವುದು.

ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ:

•             ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಅಸ್ಥಿತ್ವದಲ್ಲಿರುವ ಎನ್.ಆರ್.ಎಲ್.ಎಂ. ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಿತಿಯು ಯೋಜನೆ ಅನುಷ್ಠಾನದ ನೀತಿಗೆ ಮಾರ್ಗದರ್ಶನ ಮತ್ತು ಯೋಜನಾ ಪ್ರಗತಿ ಪರಿಶೀಲನೆ ಮಾಡುವುದು.

•             ಜಿಲ್ಲಾ ಮಟ್ಟದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ತಜ್ಞರ ಯೋಜನಾ ಅನುಷ್ಠಾನ ಸಮಿತಿಗಳು ಯೋಜನೆಗಳ ಅನುಷ್ಠಾನದ ಹಂತದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸುವುದು ಅಥವಾ ಸಲಹೆಗಳನ್ನು ನೀಡುವುದು.

•             ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಯೋಜನಾ ಅನುಷ್ಠಾನದ ಹಂತದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸುವುದು ಅಥವಾ ಸಲಹೆಗಳನ್ನು ನೀಡುವುದು.

•             ಜಿಲ್ಲಾ / ತಾಲ್ಲೂಕು ಮಟ್ಟದ ಸಮಿತಿಗಳು ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಲ್ಲಾ ಜಿಲ್ಲೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವರದಿಯನ್ನು ಅಭಿಯಾನ ನಿರ್ದೇಶಕರು, ಕೆಎಸ್‍ಆರ್‍ಎಲ್‍ಪಿಎಸ್, ಇವರಿಗೆ ಕಳುಹಿಸುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 5/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate