ಭಾರತದ ಸಂವಿಧಾನವೂ ಮಕ್ಕಳ ಅಭಿವೃದ್ಧಿಗಾಗಿನ ಬದ್ಧತೆಯನ್ನು ಅನುಚ್ಛೇದ 21 ಎ, 24 ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳ 39 ರಲ್ಲಿ ವ್ಯಕ್ತಪಡಿಸಿದೆ. ಅನುಚ್ಛೇದ 21 ಎ ಶಿಕ್ಷಣದ ಹಕ್ಕು ರಾಜ್ಯವು ಎಲ್ಲಾ 6-14 ವಯೋಮಾನದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನಿರ್ದೇಶಿತ ಮಾದರಿಯಲ್ಲಿ ನೀಡಬೇಕು. ಅನುಚ್ಛೇದ 39 ರಾಜ್ಯವು ವೀಶೇಷವಾಗಿ ಈ ಕೆಳಗಿನವುಗಳನ್ನು ಪಡೆಯಲು ತನ್ನ ನೀತಿಯನ್ನು ಗುರಿಯಾಗಿರಿಸಿದೆಮುಖ್ಯವಾಗಿ ನಿದರ್ಶಿಸಿಸುವುದು:- (ಇ) ಕಾರ್ಮಿಕರ ಆರೋಗ್ಯ ಮತ್ತು ಸಾಮರ್ಥ್ಯ, ಪುರುಷರು ಮತ್ತು ಮಹಿಳೆಯರು, ಮತ್ತು ಎಳೆಯಮಕ್ಕಳ ದುರ್ಬಳಕೆ ಪಡಿಸಿಕೊಂಡು ಮತ್ತು ನಾಗರೀಕರು ಹಣ ಕಾಸಿನ ಕೊರತೆಯೀಂದ ತಮ್ಮ ವಯಸ್ಸು ಮತ್ತು ಶಮರ್ಥ್ಯಕ್ಕೆ ಅನುಗುಣವಲ್ಲದ ಉದ್ಯೋಗಕ್ಕೆ ಸೇರಲು ಒತ್ತಾಯಿಸಬಾರದು. ಅನುಚ್ಛೇದ 24 ಕಾರ್ಖಾನೆ, ಇತ್ಯಾದಿಗಳಲ್ಲಿ ಮಕ್ಕಳ ಉದ್ಯೋಗದ ನಿಷೇಧ ಯಾವುದೇ ಹದಿನಾಲ್ಕು ವರ್ಷ ವಯಸ್ಸಿಗಿಂತ ಕಡಿಮೆಇರುವ ಮಗವನ್ನು ಕಾರ್ಖಾನೆಯಲ್ಲಿ, ಅಥವ ಗಣಿಯಲ್ಲಿ ಅಥವ ಇತರೆ ಅಪಾಯಕರ ಉದ್ಯೋಗದಲ್ಲಿ ತೊಡಗಿಸಬಾರದು.