ಸಮಾಜ ಕಲ್ಯಾಣ ಇಲಾಖೆ :- ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಇಲಾಖೆಯಡಿಯಲ್ಲಿ ಮತ್ತು ಮೂಲಕ ಲಂಬಾಣಿ ಸಮುದಾಯದವರಿಗೆ ಸಿಗುವ ಸೌಲತ್ತು ಮತ್ತು ಸೌಲಭ್ಯಗಳ ವಿವರ ಕೆಳಗಿನಂತಿದೆ. ರಾಜ್ಯ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಭಾರತ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಭಾರತ ಸರ್ಕಾರದ ಮ್ಯಾಟ್ರಿಕ್ ನಂತರದ ಮಾಸಿಕ ವಿದ್ಯಾರ್ಥಿ ವೇತನದ ಶಿಕ್ಷಣ ಇಲಾಖೆಯ ಕಾರ್ಯಕ್ರಮದಡಿ 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ರೂ.750.00 ಪದವಿ ತರಗತಿ ವಿದ್ಯಾರ್ಥಿಗಳಿಗೆ ರೂ.1000.00 ಸ್ನಾತಕ್ಕೋತ್ತರ ಪದವಿ ಎಂ.ಎ, ಎಂ.ಎಸ್ಸಿ, ಎಂ.ಕಾಂ ರೂ.1250.00 ತಾಂತ್ರಿಕ ಪದವಿ ರೂ.1500.00 ವೈದ್ಯಕೀಯ ಪದವಿ ರೂ.1500.00 ವ್ಯವಸಾಯ ಮತ್ತು ಪಶು ವೈದ್ಯ ರೂ.1500.00 ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಪಬ್ಲಿಕ್ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ರ್ತೀರ್ಣರಾಗಿರಬೇಕು. ವಿಧಾನ:- ನಗದು ಬಹುಮಾನಕ್ಕೆ ಅರ್ಜಿ ಕರೆದಾಗ ಸಂಸ್ಥೆಯ ಮುಖ್ಯಸ್ಥರ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಂಕಪಟ್ಟಿಯ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ತಾಲ್ಲೂಕು/ ಜಿಲ್ಲಾ ಸÀಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಕಳುಹಿಸಬೇಕು. ತಾಲ್ಲೂಕು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಕಾಲೇಜಿಗೆ ಬಹುಮಾನದ ಹಣದ ಚೆಕ್ನ್ನು ಕಳುಹಿಸುವುದು. ಎಂ.ಫಿಲ್/ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಧನ ಸಹಾಯ ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಜೊತೆಗೆ ಸಂಶೋಧನಾ ಚಟುವಟಿಕೆ ನಡೆಸಲು ಪರಿಶಿಷ್ಟ ಜಾತಿಯ ಎಂ.ಫಿಲ್. ವಿದ್ಯಾರ್ಥಿಗಳಿಗೆ ರೂ.8,000/- ಮತ್ತು ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ರೂ.10,000/- ಹೆಚ್ಚುವರಿ ಧನ ಸಹಾಯ ನೀಡಲಾಗುವುದು - ಸಂಪರ್ಕಾಧಿಕಾರಿಗಳು: ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :- ವ್ಯಾಸಂಗ ಮಾಡುತ್ತಿರುವ ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳಿಗೆ ರೂ. 50.000/- ಗಳನ್ನು ಒಂದು ಅವಧಿಗೆ ಮಾತ್ರ ಮಂಜೂರು ಮಾಡಲಾಗುವುದು. ಅರ್ಹತೆ:- ಐ.ಐ.ಟಿ/ ಐ.ಐ.ಎಂ/ ಐ.ಐ.ಎಸ್ಸಿ ಮುಂತಾದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಗಿರಬೇಕು. ವಿಧಾನ:- ಪ್ರತಿಷ್ಠಿತ ಸಂಸ್ಥೆಯ ಮುಖ್ಯಸ್ಥರ ಮೂಲಕ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ಅರ್ಜಿ ಸಲ್ಲಿಸಬೇಕು. ಪ್ರತಿಷ್ಠಿತ ಸಂಸ್ಥೆಗೆ ಸೇರಿದ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರÀ ಮತ್ತು ಹಿಂದಿನ ತರಗತಿಯ ಅಂಕಪಟ್ಟಿ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು. ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ