<div id="MiddleColumn_internal"> <p style="text-align: justify; ">ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿಯ ಬಾಲಕ, ಬಾಲಕಿಯರು ದೂರದ ಪ್ರದೇಶಗಳಲ್ಲಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹೋಗಲು ಈ ಕಾರ್ಯಕ್ರಮ ರೂಪಿಸಿದೆ. 5 ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಪರಿಶಿಷ್ಟ ಜಾತಿಯ ಬಾಲಕರು ಮತ್ತು ಬಾಲಕಿಯರು ವಿದ್ಯಾರ್ಥಿ ನಿಲಯಗಳ ಪ್ರಯೋಜನ ಪಡೆಯುವರು.<br /> ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ದೂರದ ಹಳ್ಳಿಗಳಿಂದ ಬಂದು ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಿಲ್ಲದಂತಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯಗಳಲ್ಲಿ ವಸತಿ ಅವಕಾಶವನ್ನು ಒದಗಿಸಲಾಗುತ್ತಿದೆ. <br /> 2015-16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು -------- ವಿದ್ಯಾರ್ಥಿನಿಲಯಗಳಿದ್ದು, ಅವುಗಳಲ್ಲಿ -------- ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಸ್ಥಳಾವಕಾಶವನ್ನು ಪಡೆಯಲಿದ್ದಾರೆ.</p> <p style="text-align: justify; ">ಈ ವಿದ್ಯಾರ್ಥಿ ನಿಲಯಗಳಿಗೆ ಸೇರ ಬಯಸುವ 5 ರಿಂದ 10ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 5 ಕಿ.ಮೀ ದೂರದಿಂದ ಬರುವವರಿಗೆ ಹಾಗೂ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಶಾಲಾ ವರ್ಷಗಳಲ್ಲಿ ಜೂನ್ 1 ರಿಂದ ಈ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುತ್ತದೆ. ಹಳೆಯ ಪಾಸಾದ ವಿದ್ಯಾರ್ಥಿಗಳನ್ನು ಮುಂದುವರೆಸಲಾಗುತ್ತದೆ.<br /> ಹೊಸದಾಗಿ ಖಾಲಿ ಇದ್ದ ಸ್ಥಳಗಳನ್ನು ತುಂಬಲು ಆ ಶಾಲಾ ವರ್ಷದ ಮೇ 15 ರಂದು ಅರ್ಜಿಗಳನ್ನು ಕರೆಯಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರಿಂದ ಅರ್ಜಿಗಳನ್ನು ಪಡೆದು ಜೂನ್ 15ರ ಒಳಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು/ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮುಖ್ಯೋಪಾಧ್ಯಾಯರ ಮುಖಾಂತರ ಸಲ್ಲಿಸಬೇಕು. ಈ ಅರ್ಜಿಗಳನ್ನು ಕ್ರೋಢೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳು ಜೂನ್ 30ರೊಳಗೆ ಸಲ್ಲಿಸಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಆಯ್ಕೆ ಸಮಿತಿಗಳ ಮುಖಾಂತರ ಆಯ್ಕೆ ಮಾಡಲಾಗುವುದು.<br /> ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಾವಕಾಶ ದೊರಕಿರುವ ಪ್ರತಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ತಿಂಗಳೊಂದಕ್ಕೆ ರೂ. 1100.00 ಗಳನ್ನು ಭೋಜನ ವೆಚ್ಚಕ್ಕಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಪುಸ್ತಕ, ಲೇಖನ ಸಾಮಾಗ್ರಿ, ಸಮವಸ್ತ್ರ, ಹಾಸಿಗೆ, ಹೊದಿಕೆ ಮತ್ತು ಇತರ ವೆಚ್ಚಗಳನ್ನು ಸಹ ಪೂರೈಸಲಾಗುತ್ತಿದೆ.</p> <p style="text-align: justify; "><i><strong> ಮೂಲ : </strong></i> <a class="external-link ext-link-icon" href="http://www.socialwelfaredk.com/single-scheme/-18" target="_blank" title="Ext link title"> ಸಮಾಜ ಕಲ್ಯಾಣ ಇಲಾಖೆ,ಮಂಗಳೂರು </a></p> </div>