<div id="MiddleColumn_internal"> <h3 style="text-align: justify; ">ಅಂತ್ಯಸಂಸ್ಕಾರ ಯೋಜನೆ</h3> <span style="text-align: justify; ">ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ನೆರವು ನೀಡುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಸಂಖ್ಯೆ ಆರ್.ಡಿ 20 ಎಂಎಸ್ ಟಿ 2006</span><strong> ದಿನಾಂಕ: 08-06-2006</strong><span style="text-align: justify; "> ರಲ್ಲಿ ಹೊರಡಿಸಲಾಗಿದೆ. ಈ ಯೋಜನೆಯನ್ನು ಅಂತ್ಯ ಸಂಸ್ಕಾರ ಸಹಾಯ ನಿಧಿ ಎಂದು ಕರೆಯಲಾಗಿದೆ.</span><br style="text-align: justify; " /><br style="text-align: justify; " /><span style="text-align: justify; ">ಈ ನೆರವನ್ನು ಜೀವಂತ ವಾರಸುದಾರರಿಗೆ ಅಥವಾ ಕುಟುಂಬದ ಅವಲಂಬಿತ ಸದಸ್ಯರಿಗೆ ಅಥವಾ ಅವರ ಅಂತ್ಯ ಕ್ರಿಯೆ ನೆರವೇರಿಸುವ ಜವಾಬ್ದಾರಿ ಇರುವ ಸದಸ್ಯರಿಗೆ ಅಂತ್ಯ ಕ್ರಿಯೆ ನೆರವೇರಿಸುತ್ತಾರೆಂದು ಖಚಿತಪಡಿಸಿಕೊಂಡು ತಾಲ್ಲೂಕು ತಹಸೀಲ್ದಾರರು ರೂ</span><strong>.1000/</strong><span style="text-align: justify; ">-ಗಳನ್ನು ಬಿಡುಗಡೆ ಮಾಡಬಹುದು.</span><br style="text-align: justify; " /><br style="text-align: justify; " /><span class="subheading" style="text-align: justify; ">ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.</span><br style="text-align: justify; " /><br style="text-align: justify; " /> <ul style="text-align: justify; "> <li> ಮರಣ ಪ್ರಮಾಣ ಪತ್ರ</li> <li>ಜವಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಸಾಕ್ಷಿದಾರರ ಸಹಿ</li> </ul> <h3 style="text-align: justify; ">ಜನಶ್ರೀ ಬೀಮಾ ಯೋಜನೆ</h3> <br />ಜನಶ್ರೀ ಬೀಮಾ ಯೋಜನೆಯನ್ನು ಸರ್ಕಾರಿ ಆದೇಶ ಸಂಖ್ಯೆ: <strong>ಕಂ.ಇ.25 ಡಿಎಸ್ಪಿ 2008</strong>, <strong>ದಿನಾಂಕ: 31-03-2008</strong> ರಂತೆ ರಾಜ್ಯದಲ್ಲಿ ಜಾರಿಗೆ ತಂದಿದ್ದು, ಇದರ ವಿವರಗಳನ್ನು ಕೆಳಕಂಡಂತೆ ತಿಳಿಸಲಾಗಿದೆ.<br /><br /> <ul style="text-align: justify; "> <li>ಅರ್ಹತೆ : ಗ್ರಾಮೀಂ ಭೂರಹಿತ ಕುಟುಂಬಗಳು.</li> <li> ವಯೋಮಿತಿ : 18ರಿಂದ 59ವರ್ಷ.</li> <li>ಕಾರ್ಯನಿರ್ವಹಣೆ: ರಾಜ್ಯ ಸರ್ಕಾರ.</li> </ul> <ul style="text-align: justify; "> <li> ವಿಮಾ ಕಂತು </li> </ul> <strong>ರೂ.200-00 </strong>ಪ್ರತಿ ಕುಟುಂಬದ <br />ರ<strong>ೂ. 100-00 </strong>ಕೇಂದ್ರ ಸರ್ಕಾರ ಮತ್ತು ಉಳಿದ <br /><strong>ರೂ. 100-00 </strong>ಕೇಂದ್ರ ಸರ್ಕಾರ ಭರಿಸುತ್ತದೆ<br /><br /> <ul style="text-align: justify; "> <li> ಲಾಭಗಳು</li> </ul> <ul style="text-align: justify; "> <li> ನೈಸರ್ಗಿಕ ಸಾವು ರೂ. 30,000-00</li> <li>ಆಕಸ್ಮಿಕ ಸಾವು ರೂ.75,000-00</li> <li> ಶಾಶ್ವತ ಅಂಗವಿಕಲತೆ ರೂ. 75,000-00</li> <li>ಭಾಗಶಃ ಅಂಗವಿಕಲತೆ ರೂ. 37,500-00</li> <li>ವಿದ್ಯಾರ್ಥಿ ವೇತನ ಎರಡು ಮಕ್ಕಳಿಗೆ ಸೀಮಿತ 9 ರಿಂದ 12ನೇ ತರಗತಿವರೆಗೆ ಮಾತ್ರ</li> <li> ಪ್ರತಿ ತ್ರೈಮಾಸಿಕಕ್ಕೆ ರು.300-00 ಪ್ರತಿ ವಿದ್ಯಾರ್ಥಿಗೆ. (10) ದೇವದಾಸಿಯರಿಗೆ ಮಾಸಾಶನ ಯೋಜನೆ</li> </ul> <p style="text-align: justify; "><br /><strong>1993-94 ನೇ</strong> ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಾಗೂ ಪುನರ್ ಖಾತರೀಕರಣದಲ್ಲಿ ಗುರುತಿಸಲ್ಪಟ್ಟ ದೇವದಾಸಿಯರು ಮಾತ್ರ ಮಾಸಾಶನಕ್ಕೆ ಅರ್ಹರಿರುತ್ತಾರೆ.</p> <h3 style="text-align: justify; "><span class="subheading">ನಿಬಂಧನೆಗಳು </span></h3> <ul style="text-align: justify; "> <li> ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು.</li> <li>ಅರ್ಜಿದಾರರ ವಯಸ್ಸು 45 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.</li> <li> ಮಾಸಾಶನದ ಮೊಬಲಗು ರೂ.400/- ಗಳಾಗಿರುತ್ತದೆ.</li> <li> ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು ಈ ಮಾಸಾಶನದ ಮಂಜೂರಾತಿ ಅಧಿಕಾರಿಯಾಗಿರುತ್ತಾರೆ.</li> <li> ತಾಲೂಕಿನ ತಹಸೀಲ್ದಾರರು ಈ ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ.</li> <li> ಭಾರತದ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿದೆ.</li> </ul> <p style="text-align: justify; "><i><strong>ಮೂಲ : </strong></i> <a class="external-link ext-link-icon" href="http://dssp.kar.nic.in/devadasi.html" target="_blank" title="Ext link title">ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ </a></p> </div>