ಕೇಂದ್ರಸರ್ಕಾರವು ಶೆಖಡಾ 75 ವೆಚ್ಚವನ್ನು ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ( ಹಣ ಕಾಸನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳಬೇಕಾದಲ್ಲಿ) ಎಲ್ಲ ರಾಜ್ಯಗಳಿಗೆ /ಕೇಂದ್ರ ಆಡಳಿತ ಪ್ರದೇಶ ಗಳಿಗೆ 11ನೇ ಯೋಜನೆಯ ಅವಧಿಯಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತು ಪಡಿಸಿ ನೀಡುವುದು. ಈಶಾನ್ಯ ರಾಜ್ಯಗಳಿಗೆ ಶೆಖಡಾ 90 ಭಾಗವನ್ನು ಕೇಂದ್ರವೇ ನೀಡುವುದು. ಎಲ್ಲ ರಾಜ್ಯಗಳು / ಕೇಂದ್ರ ಆಡಳಿತ ಪ್ರದೇಶ ಎಲ್ಲವುಗಳ ಅನುಷ್ಠಾನ ವೆಚ್ಚದ 25% ಅನ್ನು ಮೊದಲು ( ಹಣ ಕಾಸನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳಬೇಕಾದಲ್ಲಿ) 11ನೆ ಯೋಜನಾ ಅವಧಿಯಲ್ಲಿ ಭರಿಸಬೇಕು. ಈಶಾನ್ಯ ರಾಜ್ಯಗಳು 10% ವೆಚ್ಚವನ್ನು ಮಾತ್ರ ಕೊಡಬೇಕಾಗುವುದು. ರಾಜ್ಯ ಸರ್ಕಾರವು –ವ್ಯಾಪಕ ಆರ್ಥಿಕ ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸಿ ಹಣಕಾಸಿನ ವರ್ಗಾವಣೆ ಮತ್ತು ಬಳಕೆಗಳನ್ನು ಈಗಿರುವ ಸರ್ವ ಶಿಕ್ಷಣ ಅಭಿಯಾನ (ಎಸ್ ಎಸ್ ಎ) ಸೊಸೈಟಿಗಳ ಮೂಲಕ ಮಾಡುವುದು. ಇದರಿಂದ ಪಾರದರ್ಶಕತೆ, ಕಾರ್ಯಕ್ಷಮತೆ, ಉತ್ತರದಾಯಿತ್ವ ಮತ್ತು ಅಂತಿಮ ಫಲಿತದ ವರೆಗಿನ ನಿಧಿಯ ಬಳಕೆಯಲ್ಲಿ ಹಾದು ಹೋದ ಹಾದಿಯನ್ನು ಗುರುತಿಸಬಹುದು. ರಾಜ್ಯ, ಜಿಲ್ಲೆ, ಶಾಲಾ ಮಟ್ಟದಲ್ಲಿ ನಿಧಿಗಾಗಿ ಪ್ರತ್ಯೇಕ ಖಾತೆಯನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತೆರೆಯಬೇಕು. ಮುಖ್ಯೋಪಧ್ಯಾಯರು ಅಥವ ಪ್ರಾಂಶುಪಾಲರು ,ಶಾಲಾ ಶಿಕ್ಷಣ ಸಮಿತಿಯ ಉಪ ಪ್ರಾಂಶುಪಾಲರು ಶಾಲಾ ಮಟ್ಟದಲ್ಲಿ ಜಂಟಿ ಖಾತೆ ಹೊಂದಿರುವರು..ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಯು ಜಿಲ್ಲಾ ಮಟ್ಟದಲ್ಲಿ ಜಂಟಿ ಖಾತೆಯನ್ನು ಹೊಂದಿರುವರು. 12ನೆ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಹಂಚಿಕೆ ಪ್ರಮಾಣವು 50:50. ಪ್ರಮಾಣಕ್ಕೆ ಬದಲಾಗುವುದು. ಈಶಾನ್ಯ ರಾಜ್ಯಗಳಿಗೆ ಹಂಚಿಕೆ ಪ್ರಮಾಣವು ಎರಡೂ, 11ನೆ ಮತ್ತು 12ನೆ ಪಂಚವಾರ್ಷಿಕ ಯೋಜನೆಗಳೀಗೆ 90:10 ಪ್ರಮಾಣದಲ್ಲಿರುವುದು. ಮೂಲ: ಪೋರ್ಟಲ್ ತಂಡ |
ಕೊನೆಯ ಮಾರ್ಪಾಟು : 8/25/2019