ಜಿಲ್ಲಾ ಮಟ್ಟದ ತಜ್ಞರ ಸಮಿತಿ
1 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಅಧ್ಯಕ್ಷರು
2 ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸದಸ್ಯರು
3 ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್ ಸದಸ್ಯರು
4 ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಸ್ಯರು
5 ಜಿಲ್ಲೆಯ ಪ್ರಮುಖ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಸದಸ್ಯರು
6 ಜಿಲ್ಲಾ ರೂಡಸೆಟಿಯ ಪ್ರತಿನಿಧಿ ಸದಸ್ಯರು
7 ಜಿಲ್ಲೆಯ ಕೃಷಿವಿಜ್ಞಾನ ಕೇಂದ್ರದ ಪ್ರತಿನಿಧಿ ಸದಸ್ಯರು
8 ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರು
9 ಜಿಲ್ಲಾ ಮಟ್ಟದ ಯೋಜನಾ ಅನುಷ್ಠಾನ ಮತ್ತು ಸಲಹಾ ಸಮಿತಿಯಿಂದ ನಾಮ ನಿರ್ದೇಶನಗೊಂಡ ಇಬ್ಬರು ತಾಂತ್ರಿಕ ತಜ್ಞರು. ಸದಸ್ಯರು
10 ಕಾರ್ಯರ್ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಸದಸ್ಯರು
11 ಯೋಜನಾ ನಿರ್ದೇಶಕರು (ಡಿಆರ್ಡಿಎ) ಸದಸ್ಯ ಕಾರ್ಯದರ್ಶಿ
ಜಿಲ್ಲಾ ಮಟ್ಟದ ಯೋಜನಾ ಅನುಷ್ಠಾನ ಸಮಿತಿ ಸಮಿತಿಯ ಕಾರ್ಯಗಳು:
ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸುವ ಯುವ ಮೇಳಗಳಿಗೆ ಸಹಕಾರ ನೀಡುವುದು.
ಯೋಜನಾ ಬೆಂಬಲ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಲಹೆ ನೀಡುವುದು.
ಜಿಲ್ಲೆಯಲ್ಲಿರುವ ಉತ್ತಮ ತರಬೇತಿ ಸಂಸ್ಥೆಗಳನ್ನು ಗುರುತಿಸುವುದು.
• ಉದ್ಯಮ ಶೀಲತಾ ತರಬೇತಿ/ಕೌಶಲ್ಯಾಧಾರಿತ ಉದ್ಯಮ ಶೀಲತಾ ತರಬೇತಿಯ ಪಠ್ಯಕ್ರಮವನ್ನು ರೂಡ್ಸೆಟಿ/ಆರ್ ಸೆಟಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಇವರ ಮಾರ್ಗದರ್ಶನದಂತೆ ರೂಪಿಸುವುದು. ತರಬೇತಿ ಸಮಯದಲ್ಲಿ ನೀಡಬೇಕಾದ ಊಟದ (ಈooಜ ಒeಟಿu) ಬಗ್ಗೆಯೂ ಅಂತಿಮಗೊಳಿಸುವುದು.
ಯುವಜನರು ಕೈಗೊಳ್ಳುವ ಚಟುವಟಿಕೆಗಳಿಗೆ ಪೂರಕವಾಗಿ ಯೋಜನಾ ತಯಾರಿಕೆ, ಮಾರುಕಟ್ಟೆ ಸೌಲಭ್ಯ ಕುರಿತು ಮಾರ್ಗದರ್ಶನ ನೀಡುವುದು.
ಜಿಲ್ಲಾ / ತಾಲ್ಲೂಕು / ಹೋಬಳಿ / ಗ್ರಾಮಗಳ ಹಂತಗಳಲ್ಲಿ ಯುವಜನತೆ ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ಪೂರಕವಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾ ಪಂಚಾಯತಿಗಳಲ್ಲಿ ಬೇರೆ ಯೋಜನೆಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಸಲಹೆ ನೀಡುವುದು.
ತಜ್ಞರ ಸಮಿತಿಯು ಯೋಜನೆಯ ಆರಂಭದಲ್ಲಿ 6 ತಿಂಗಳುಗಳವರೆಗೆ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸುವುದು.
ನಂತರದ ಅವಧಿಯಲ್ಲಿ 3 ತಿಂಗಳಿಗೊಮ್ಮೆ ಅಥವಾ ಅಗತ್ಯಕ್ಕನುಗುಣವಾಗಿ ಸಭೆ ನಡೆಸುವುದು.
ಯೋಜನೆ ಮಾರ್ಗಸೂಚಿಗೆ ವಿರುದ್ಧವಾಗಿ ಯೋಜನಾ ಬೆಂಬಲ ಸಂಸ್ಥೆಯ ನಡೆದುಕೊಳ್ಳುತ್ತಿದ್ದಲ್ಲಿ, ವಿಷಯಗಳನ್ನು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದು.
ಮೂಲ: ಅರ್.ಜಿ.ಸಿ.ವೈ
ಕೊನೆಯ ಮಾರ್ಪಾಟು : 10/17/2019