ರಾಷ್ಟೀಯ ಜನಸಂಖ್ಯಾ ಶಿಕ್ಷಣ ಯೋಜನೆ (ಎನ್.ಪಿ.ಇ.ಪಿ.) :
ಈ ಯೋಜನೆಯಡಿಯಲ್ಲಿ ದೆಹಲಿಯ ಎನ್.ಸಿ.ಇ.ಆರ್.ಟಿ.ಯಿಂದ ಅನುಮೋದಿತ ಕ್ರಿಯಾ ಯೋಜನೆಯಲ್ಲಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 2012-13 ನೇ ಸಾಲಿಗೆ ರೂ. 4.00 ಲಕ್ಷ ಬಿಡುಗಡೆಯಾಗಿರುತ್ತದೆ. ಇದಲ್ಲದೆ ಕಳೆದ ವರ್ಷದ ಉಳಿಕೆ ಹಣವನ್ನು ಸೇರಿಸಿ ಸದರಿ ವರ್ಷಕ್ಕೆ ಸುಮಾರು ರೂ.7.78 ಲಕ್ಷಗಳ ಅನುದಾನ ಈ ಕಾರ್ಯಕ್ರಮಗಳಿಗೆ ಲಭ್ಯವಾಗಿದ್ದು, 2012-13 ನೇ ಸಾಲಿಗೆ ಒಟ್ಟು ರೂ.5,41,745/- ಗಳನ್ನು ಎನ್.ಪಿ.ಇ.ಪಿ. ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗಿದೆ.
ಹದಿ ಹರೆಯ ವಯಸ್ಸಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಪಡದೆ ಹಾಗೂ ಅಂಥವುಗಳಿಂದ ಹೊರಬಂದು ಬೌಧ್ಧಿಕ, ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದಿಕ್ಕಿನಲ್ಲಿ ಶಾಲಾ ಮಟ್ಟ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಪಾತ್ರಾಭಿನಯ ಮತ್ತು ಜನಪದ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ರೂ.5,41,745/- ಗಳ ವೆಚ್ಚದಲ್ಲಿ ನಡೆಸಲಾಗಿದೆ. ಶಾಲಾ ಮಟ್ಟ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಪಾತ್ರಾಭಿನಯ ಸ್ಪರ್ಧೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳಿಗೆ ದಿನಾಂಕ 09.11.2011 ರಂದು ಆರ್. ವಿ. ಟೀಚರ್ಸ್ ಕಾಲೇಜ್, ಜಯನಗರ, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ , ಮಂಡ್ಯ ರಾಜ್ಯ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತದೆ.
ಕೊನೆಯ ಮಾರ್ಪಾಟು : 4/22/2020